ಚೌಕಾಶಿಯೇ ಜೀವನ


Team Udayavani, Mar 22, 2019, 12:30 AM IST

life.jpg

ಬೆಳೆಯುತ್ತಿರುವ ಜಗತ್ತಿನಲ್ಲಿ ಜೀವನ ಎಂಬುವ ಅಮೂಲ್ಯವಾದ ವಸ್ತು ಬಹಳಷ್ಟು ದುಬಾರಿಯಾಗಿಬಿಟ್ಟಿದೆ. ಜನರು ಅದನ್ನು ಸ್ವಪ್ರೇರಣೆಯಿಂದ, ಸ್ವಂತಿಕೆಯಿಂದ ನಡೆಸಲಾಗದೆ ಇತರರಿಂದ ಇಂತಿಷ್ಟೇ ಬೆಲೆಯನ್ನು ನಿಗದಿಗೊಳಿಸಿ ಸಾಧ್ಯವಾದಷ್ಟು ಅದನ್ನು ಕಡಿತಗೊಳಿಸುವುದರ ಮೂಲಕ ಅದರ ಸಾಕ್ಷಾತ್ಕಾರತೆಯ ಸವಿಯನ್ನು ಸವಿಯುತ್ತಿದ್ದಾರೆ. 

ಹೌದು, ಹೇಗೆ ಜಗತ್ತು ಋತು ಕಳೆದಂತೆಲ್ಲ ತನ್ನೆಲ್ಲ ನೈಸರ್ಗಿಕ ಮೂಲಗಳನ್ನು , ಇಂಧನಗಳನ್ನು ಕಡಿಮೆಗೊಳಿಸುತ್ತ ಚೌಕಾಸಿತನವನ್ನು ನಡೆಸುತ್ತಿದೆಯೋ ಅಂತೆಯೇ ಇವೆಲ್ಲದರ ಉಪಯೋಗವನ್ನಾಗಲಿ ಅಥವಾ ಪ್ರಯೋಜನವನ್ನಾಗಲಿ ಪಡೆಯುತ್ತಿರುವಂತಹ ಬುದ್ಧಿಜೀವಿಯಾದ ಮಾನವನು ಕೂಡ ತನ್ನ ಜೀವನವನ್ನು ಚೌಕಾಸಿತನದಲ್ಲಿಯೇ ಕಳೆಯುತ್ತಿದ್ದಾನೆ. ಮೊತ್ತಮೊದಲಾಗಿ ಈ ಚೌಕಾಸಿ ಜೀವನವು ಕಾಲದಿಂದ ಕಾಲಕ್ಕೆ, ಜನಾಂಗದಿಂದ ಜನಾಂಗಕ್ಕೆ ಮರುಕಳಿಸುತ್ತ ಬರುತ್ತಿದೆ. ಲಾಭದ ಉದ್ದೇಶವನ್ನು ಇಟ್ಟುಕೊಂಡಿರುವಂತಹ ಈ ಚೌಕಾಸಿ ಜೀವನ ಆಧುನಿಕ ಯುಗದಲ್ಲಿ ಬಂದದ್ದಲ್ಲ. ಅಂದಿನ ದೇವತೆಗಳ ಕಾಲದಲ್ಲಿಯೂ ವೀರಪುರುಷರ ಕಾಲದಿಂದಲೂ ರೂಢಿಯಲ್ಲಿದೆ.
 
ಹೌದು, ದೇವತೆಗಳ ಕಾಲದಲ್ಲಿ ಅದೆಷ್ಟೋ ಅನ್ಯಾಯ, ಅಧರ್ಮಗಳನ್ನು ಮಾಡಿದ ರಾಕ್ಷಸರು ತಮ್ಮ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಪ್ರಾಣಭಿಕ್ಷೆಯನ್ನು ಬೇಡುವುದೇ ದೊಡ್ಡ ಚೌಕಾಸಿ ಜೀವನವಾಗಿತ್ತು. ಅದು ಕೂಡ ವಿಧ ವಿಧವಾದ ವ್ರತಗಳನ್ನು , ತಪಸ್ಸನ್ನು , ಪೂಜೆ-ಪುನಸ್ಕಾರಗಳನ್ನು ಮಾಡುವುದರ ಮೂಲಕ ತಮ್ಮ ಸ್ವಾರ್ಥದ ಸಾರ್ಥಕತೆಯನ್ನು ಕಾಣುತ್ತಿದ್ದರು. ಆದರೆ ಈ ಚೌಕಾಸಿ ಜೀವನ ದೇವಯುಗದಲ್ಲೇ ಕೊನೆ ಕಾಣಲಿಲ್ಲ. ಕ್ರಿ.ಶ.ದ ನಂತರ ಬಂದ ವೀರಪುರುಷರ ಕಾಲಕ್ಕೂ ತನ್ನ ಒಂದು ಕಾಲನ್ನು ಚಾಚಿಬಿಟ್ಟಿತ್ತು. ರಾಜ್ಯಪಟ್ಟದ ಆಸೆಗಾಗಿ ಬಾಳುತ್ತಿದ್ದ ವೀರರೆಲ್ಲರೂ ತಮ್ಮ ರಾಜ್ಯದ ಉಳಿವಿಗಾಗಿ, ರಾಜ್ಯಭಾರದ ಆಸೆಗಾಗಿ ರಾಜ್ಯವನ್ನು ಬಿಟ್ಟರೆ ಮಡದಿ ಮಕ್ಕಳನ್ನು ನೀಡುವುದಾಗಿ, ಪ್ರಾಣತ್ಯಾಗ ಮಾಡಿದರೆ ಕುಟುಂಬಕ್ಕೆ ಸಹಾಯ ಮಾಡುವುದಾಗಿ, ನಿಧಿಯನ್ನು ಹುಡುಕಿದರೆ ಅರ್ಧ ಪಾಲು ನೀಡುವುದಾಗಿ ಚೌಕಾಸಿತನವನ್ನು ನಡೆಸುತ್ತ ಬಂದರು. ಆದರೆ, ವಿಚಿತ್ರ ಸಂಶಯಾಸ್ಪದ ವಿಷಯವೆಂದರೆ, ಇಂದು ಜಗತ್ತು ತನ್ನ ಅಸ್ತಿತ್ವವನ್ನು ಮೆರೆದು ನಿಂತಿದೆ. 

ಜನರೆಲ್ಲ ತಮ್ಮ ದೈನಂದಿನ ಜೀವನದ ಸಾರ್ಥಕತೆಯನ್ನು ಕಾಣುವ ರೀತಿ ಬದಲಾಗಿದೆ. ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳು ರಾಕೆಟಿನಂತೆ ಬಾನೆತ್ತರಕ್ಕೆ ಜಿಗಿಯುತ್ತಿದ್ದರೂ ಕೂಡ ಈ ಚೌಕಾಸಿ ಜೀವನದ ಗೋಳು ಇನ್ನೂ ನಿಂತಿಲ್ಲ. ಯಾವಾಗಿನಿಂದಲೂ ಆಚರಿಸಿಕೊಂಡ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳು ನಶಿಸಿಹೋದರೂ ಈ ಚೌಕಾಸಿ ಪದ್ಧತಿ ಇನ್ನೂ ಮುಂದುವರಿಯುತ್ತ ಬಂದಿದೆ. ಅದು ಕೂಡ ಅಂದಿಗಿಂತ ಅಧಿಕ ಪ್ರಮಾಣದಲ್ಲಿ. ಹೌದು ಸಾಮಾನ್ಯವಾಗಿ ಆಧುನಿಕ ಜೀವನ ಅಧಿಕ ಚೌಕಾಸಿಯಾಗಿ ಹೋಗಿಬಿಟ್ಟಿದೆ. ಅದು ಹೇಗೆಂದರೆ, ದೊಡ್ಡ ವಿಷಯಗಳಿಂದ ಹಿಡಿದು ಚಿಕ್ಕ ವಿಷಯಗಳವರೆಗೂ ಅಂದರೆ ಎರಡು ರಾಷ್ಟ್ರಗಳ ನಡುವಿನ ಒಪ್ಪಂದದಲ್ಲಿ ಚೌಕಾಸಿ, ವಾಹನ, ಅಂಗಡಿಗಳ ಖರೀದಿಯಲ್ಲಿ, ನಿವೇಶನ, ಖಾಲಿ ಜಾಗ ಖರೀದಿಯಲ್ಲಿ ಚೌಕಾಸಿ ಒಂದು ರೀತಿಯಾದರೆ ಇನ್ನು ವಸ್ತುಗಳ ಮಾರಾಟದಲ್ಲಿ ರಖಂ ವ್ಯಾಪಾರಸ್ಥರು ತಯಾರಕರ ಬಳಿ, ಚಿಲ್ಲರೆ ವ್ಯಾಪಾರಸ್ಥರು ರಖಂ ವ್ಯಾಪಾರಸ್ಥರ ಬಳಿ, ಗ್ರಾಹಕರು ಚಿಲ್ಲರೆ ವ್ಯಾಪಾರಸ್ಥರ ಬಳಿ ಚೌಕಾಸಿ ಮಾಡಿಯೇ ವಸ್ತುಗಳನ್ನು ಖರೀದಿಸುತ್ತಾರೆ. ಈ ಚೌಕಾಸಿ ಜೀವನ ಕೆಲವೊಮ್ಮೆ ನೇರವಾಗಿ ಆಗದಿದ್ದರೂ ಕೆಲವೊಮ್ಮೆ ದೊಡ್ಡ ವ್ಯಕ್ತಿಗಳ ಹೆಸರನ್ನು ಬಳಸಿಯಾದರೂ ಆಗುವುದಂತೂ ಖಂಡಿತ. 

ಕೆಲವೊಂದು ವಿಚಿತ್ರ ಸನ್ನಿವೇಶವೆಂದರೆ ಜನರು ಆಲೋಚಿಸದೆ ಒಂದು ರೂಪಾಯಿ ಬೆಲೆಬಾಳುವ ವಸ್ತುವಾದರೂ ಅದನ್ನು ಐವತ್ತು ಪೈಸೆಗೆ ಮುಲಾಜಿಲ್ಲದೆ ಇಳಿಸಿಯೇ ಬಿಡುತ್ತಾರೆ. ಹಾಸ್ಯಾಸ್ಪದವೆಂದರೆ ಭಾರತ ಕೂಡ ಚೌಕಾಸಿ. ಯಾಕೆಂದರೆ, ಭಾರತ ವಿಶಾಲವಾದ ದೇಶವಾದರೂ ಪಾರ್ಕಿಂಗ್‌ ಜಗತ್ತಿನಲ್ಲಿ ನಿಂತಾಗ ಹಾಗನಿಸುವುದಿಲ್ಲ.

– ಪ್ರಾಣೇಶ್‌
ಸಹ್ಯಾದ್ರಿ ಕಾಲೇಜ್‌ ಆಫ್ ಇಂಜಿನಿಯರಿಂಗ್‌, ಮಂಗಳೂರು

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.