ಜೀವನ-ಪರೀಕ್ಷೆ


Team Udayavani, Apr 7, 2017, 3:45 AM IST

exam-result759.jpg

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ’ ಆಹಾ…! ಬಾಲ್ಯದ ತುಂಟಾಟಗಳನ್ನು ನೆನಪು ಮಾಡಿಕೊಡುವಂತಹ ಎಷ್ಟೊಂದು ಸುಂದರ ಸಾಲುಗಳು.

ಇಂದಿನ ಜಂಜಾಟದ ಜೀವನದ ನಡುವೆ ಒಮ್ಮೆ ಬಿಡುವು ಮಾಡಿಕೊಂಡು ನಾವು ಸಾಗಿಬಂದ ಬಾಳ ಪಯಣವನ್ನೊಮ್ಮೆ ತಿರುಗಿ ನೋಡಿದರೆ ಎಷ್ಟೊಂದು ಸುಂದರ ಆ ಬಾಲ್ಯದ ನೆನಪುಗಳು.

ಮುಂಜಾನೆ ಬೇಗನೆ ಎಚ್ಚರವಾಗಿದ್ದರೂ, ಶಾಲೆಗೆ ಹೊರಡುವ ಸಮಯವಾಯಿತೆಂದು ತಿಳಿದಿದ್ದರೂ, ತಿಳಿಯದಂತೆ ನಟಿಸಿ, ಅಮ್ಮನ ಕರೆಗಾಗಿಯೇ ಕಾಯುತ್ತಾ ನಿದ್ರೆಯ ನಾಟಕವಾಡಿ ಹಾಸಿಗೆಯಲ್ಲೇ ಮಲಗಿಕೊಂಡಿರುತ್ತಿದ್ದ ಆ ಸುಂದರ ನೆನಪುಗಳ ಅನುಭವ ಎಷ್ಟೊಂದು ಮಧುರ. ಇಂದಿನ ಕಾರು-ಬಸ್ಸುಗಳಲ್ಲಿ ಮನೆಯಿಂದ ಎಲ್ಲೋ ದೂರ ಇರುವ ಶಾಲೆಗಳಿಗೆ ಪ್ರಯಾಣವಾಗಿರಲಿಲ್ಲ ಅಂದು. ಮನೆಯ ಅತೀ ಸಮೀಪವಿರುವ ಶಾಲೆಗಳಿಗೆ ಅಚ್ಚುಮೆಚ್ಚಿನ ಸ್ನೇಹಿತರೊಂದಿಗೆ ಕೂಡಿಕೊಂಡು ಒಂದಿಷ್ಟು ತರಲೆ ಮಾಡಿಕೊಂಡು, ಯಾರದೋ ತೋಟಕ್ಕೆ  ಕಲ್ಲೆಸೆದು ಅವರಿಂದ ಒಂದಷ್ಟು ಬೈಗುಳಗಳ ಸುರಿಮಳೆಯನ್ನೇ ಸುರಿಸಿಕೊಂಡರೂ ಅದನ್ನೆಲ್ಲ ಲೆಕ್ಕಿಸದೇ ಕದ್ದು ತಂದ ಹಣ್ಣುಗಳನ್ನು ಗೆಳೆಯರೆಲ್ಲಾ ಸೇರಿ ತಿನ್ನುವುದೇ ಏನೋ ಒಂದು ರೀತಿಯ ಖುಷಿಯ ಅನುಭವ. ಅಂತಹ ಅನುಭವಗಳಿಂದಲೇ ಸಿಕ್ಕಿದ್ದನ್ನು ಒಬ್ಬರಿಗೊಬ್ಬರು ಹಂಚಿ ತಿನ್ನುವ ಮತ್ತು ನಮ್ಮ ತುಂಟಾಟಗಳಿಂದ ಇನ್ನೊಬ್ಬರ ಮನಸ್ಸಿಗೆ ಆಗುವ ನೋವುಗಳನ್ನು ಅರಿತುಕೊಳ್ಳುವಂತಹ ಎಷ್ಟೋ ಜೀವನದ ಪಾಠಗಳನ್ನು ಕಲಿತುಕೊಂಡ ನಿದರ್ಶನಗಳೂ ಇವೆ.

ಅಂದು ನಮ್ಮ ಪಾಲಿಗೆ ಶಾಲೆಯ ಪರೀಕ್ಷೆಗಳೆಂದರೆ ಮೌಲ್ಯಾಧಾರಿತ ಜೀವನ ಶೈಲಿಯನ್ನು ಎಷ್ಟರಮಟ್ಟಿಗೆ ಬದುಕಲು ಕಲಿತಿದ್ದೇವೆ ಎಂಬುವುದನ್ನು ಅಳೆಯುವ ಒಂದು ಸಾಧನ ಮಾತ್ರವಾಗಿತ್ತು. ಹಾಗಾಗಿ ಅಂಕಗಳ ಕಡೆಗೆ ಅಷ್ಟೊಂದು ಗಮನಹರಿಸದೇ “ಉತ್ತೀರ್ಣ’ ಎಂಬ ಒಂದೇ ಪದದ ನಿರೀಕ್ಷೆಯೊಂದಿಗೆ ಪರೀಕ್ಷೆಯ ನಂತರದ ರಜೆಯ ಸವಿಯನ್ನು ಸವಿಯುವ ದಿನಗಳಿಗಾಗಿ ಮನಸ್ಸು ಕಾಯುತ್ತಿತ್ತು.

ಆದರೆ ಇಂದು…
ಶಾಲೆಯ ಪರೀಕ್ಷೆಗಳು ಶುರುವಾಗುವುದಕ್ಕಿಂತ ಮೊದಲೇ ಪರೀಕ್ಷೆಯ ಭೀತಿಯಲ್ಲಿ ಮಕ್ಕಳು ಅತ್ಯಮೂಲ್ಯವಾದ ಜೀವನವನ್ನೇ ಕೊನೆಗೊಳಿಸುವ ಆತ್ಮಹತ್ಯೆಯೆಂಬ ಹಾದಿಯನ್ನು ತುಳಿಯುತ್ತಾರೆಂದರೆ, ಇಂದಿನ ಮಕ್ಕಳ ಮನಃಸ್ಥಿತಿ ಎಲ್ಲಿಯವರೆಗೆ ಯಾಂತ್ರಿಕ ಮಟ್ಟವನ್ನು ಮುಟ್ಟಿದೆ ಎಂಬುದನ್ನು ಚಿಂತಿಸಲೇಬೇಕು.

ಇನ್ನೂ ಮನೆಯವರೊಂದಿಗೆ, ಸ್ನೇಹಿತರೊಂದಿಗೆ, ನೆರೆಹೊರೆಯವರೊಂದಿಗೆ ಬೆರೆತು, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಪಾಠಗಳನ್ನು ಕಲಿಯಬೇಕಾದ ಮುಗ್ಧ ಮನಸ್ಸುಗಳು ಯಾವುದೋ ಒಂದು ಸಣ್ಣ ಪರೀಕ್ಷೆಯ ನೆಪದಿಂದ ಇಡೀ ಜೀವನವನ್ನೇ ಕೊನೆಗೊಳಿಸುವ ಮಟ್ಟಕ್ಕೆ ಚಿಂತಿಸುತ್ತಿದೆಯೆಂದರೆ ಇದು ನಮ್ಮ ಇಂದಿನ ಪೀಳಿಗೆ ಎಷ್ಟು ದುರ್ಬಲ ಮನಃಸ್ಥಿತಿಯನ್ನು ಹೊಂದಿದೆ ಎಂಬುವುದಕ್ಕೆ ಒಂದು ಉದಾಹರಣೆಯಷ್ಟೇ. 

ಒಂದು ರೀತಿಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಷ್ಟಗಳ ಅರಿವೇ ಇಲ್ಲದಂತೆ ಬೆಳೆಸುವ ಇಂದಿನ ತಂದೆ-ತಾಯಿಯರ ಅತಿಯಾದ ಪ್ರೀತಿ ಮತ್ತು ಮಕ್ಕಳ ಬಗೆಗಿನ ಅತಿಯಾದ ನಿರೀಕ್ಷೆಗಳು, ಮಕ್ಕಳ ಮಾನಸಿಕ ಒತ್ತಡವನ್ನು ಅಧಿಕಗೊಳಿಸುತ್ತಿವೆಯೇ? ಇನ್ನೂ ಜೀವನವೆಂದರೆ ಏನೆಂದು ಅರಿಯದ ಮನಸ್ಸುಗಳು ಶಾಲೆಯ ಪರೀಕ್ಷೆಗಳನ್ನೇ ಮುಂದಿನ ಇಡೀ ಜೀವನವನ್ನು ನಿರ್ಧರಿಸುವ ಮಾಪಕಗಳೆಂದುಕೊಂಡಿರುವರೇ?- ಈ ಬಗ್ಗೆ ನಾವಿಂದು ಚಿಂತಿಸಲೇಬೇಕು. ಜೀವನವೆಂಬುದು ಪರೀಕ್ಷೆಯ ಅಂಕಗಳಿಗಷ್ಟೇ ಸೀಮಿತವಲ್ಲ ಅದರಾಚೆಗೂ ಸುಂದರವಾದ ಬದುಕಿದೆ ಎಂಬುದನ್ನು ಇಂದಿನ ಯುವ ಮನಸ್ಸುಗಳಿಗೆ ತಿಳಿಯಪಡಿಸಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿದೆ. ಇಲ್ಲವಾದಲ್ಲಿ ಮುಂದೊಂದು ದಿನ ದುರ್ಬಲ ಮನಃಸ್ಥಿತಿಯ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಶಮೀನಾ ಎಸ್‌., ಬೈಲೂರು

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.