
ಪ್ರಿಯತಮ ಕರುಣೆಯ ತೋರೆಯ !
Team Udayavani, Jul 14, 2017, 3:25 AM IST

ಹಸಿರು ಜರತಾರಿ ಸೀರೆ, ರವಿಕೆ, ಹಸಿರು ಗಾಜಿನ ಬಳೆಗಳನ್ನು ಧರಿಸಿ ಪಚ್ಚೆ ಹಾರ, ಕಿವಿಯೋಲೆಯ ಹಾಕಿಕೊಂಡು ಗೆಳತಿ ಗಾನಕೋಗಿಲೆಯ ಬಳಿ ಸಂದೇಶ ಕಳಿಸಿಹಳು, “ಪ್ರಿಯತಮ ಕರುಣೆಯ ತೋರೆಯ…’
ಚೈತ್ರಾಳ ಪಾರ್ಲರಿನಲ್ಲಿ ಸಕಲ ಸೌಂದರ್ಯವರ್ಧಕ ಧಾರಣೆ ನಡೆದಿದೆ. ಹುಬ್ಬು ತೀಡಿದಷ್ಟು ಸಮಾಧಾನವಿಲ್ಲ ಅವಳಿಗೆ. ವಿಶೇಷ ಪಪ್ಪಾಯ, ಅರಸಿನ, ಲೋಳೆಸರ, ಮುಲ್ತಾನಿ ಮಿಟ್ಟಿ ಪ್ಯಾಕ್ಗಳನ್ನು ಹಾಕಿ ಮಾಲಿಶ್ ಮಾಡಿ ಮುಖವೆಲ್ಲ ಪಳಪಳ ಹೊಳೆಯುತ್ತಿದೆ.ಅವಳಿಗೇನು ಕಡಿಮೆ ಅವಳದೇ ಎಕರೆಗಟ್ಟಲೆ ತೋಟ. ಇನ್ನೂ ಬಿಡದೇ ಎಳನೀರು, ಜೇನು, ಕೆನೆ, ಎಣ್ಣೆಯ ಮಾಲಿಶ್ ಮಾಡಿ ಮೈಯೆಲ್ಲ ಚೈತನ್ಯಯುತವಾಯಿತು.ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿ ಕೈಕಾಲುಗಳು ಲಕಲಕನೆ ಹೊಳೆಯುತ್ತಿವೆ. ಬೀಟ್ರೂಟ್, ತಾಜಾ ಚಹಾದ ಎಲೆಗಳು, ಮೆಹೆಂದಿಗಳನ್ನು ಕಲಸಿ ಕೂದಲಿಗೆ ಹಚ್ಚಿ, ಇನ್ನೂ ಆಕೆಯ ಸ್ನಾನಕ್ಕೋ ಹಾಲಿನ ಹೊಳೆಯೇ ಹರಿದಿದೆ.
ಲೋಳೆಸರದ ಶಾಂಪೂವಿನಿಂದ ಕೂದಲನ್ನು ತೊಳೆದು, ಗುಲಾಬಿ ಸಾಬೂನಿನಿಂದ ಮೈತೊಳೆದು, ಬಿಸಿನೀರ ಶಾಖ, ಲೋಬಾನದ ಹೊಗೆಯನ್ನು ನೀಡಿ ಅವಳ ನೆಚ್ಚಿನ ಹಸಿರು ರೇಷ್ಮೆ ಸೀರೆಯ ಉಟ್ಟು, ಬೆಂಡೋಲೆ, ನೆಕ್ಲೇಸು, ಮೂಗುತಿ, ಬಳೆ, ಸೊಂಟಕ್ಕೆ ಡಾಬು, ಕೈಗೆ ವಂಕಿಯನ್ನು ಧರಿಸಿ ಮದುಮಗಳಂತೆ ಕಂಗೊಳಿಸುತ್ತ, ನಿಂತಿಹಳು ಮಹಾರಾಣಿ ಭೂಮಿಕಾದೇವಿ.
ಇಷ್ಟು ದಿನಗಳ ವಿರಹವನ್ನು ತಾಳಲಾರದೇ ಕೋಗಿಲೆಯ ಬಳಿ ಆತನಿಗೆ ಕಳುಹಿಸಿದ ಸಂದೇಶ ಆತನಿಗೆ ತಲುಪಿತೇ ಎನ್ನುವ ಅನುಮಾನ. ಕೋಗಿಲೆಯ ಬಳಿ ಕೇಳಲು, ಕುಹೂ ಕುಹೂ ಎಂದು ಹೂಂಕಾರ ಸೂಚಿಸಿದರೂ, ಆಕೆಗೆ ಸಮಾಧಾನವಿಲ್ಲ. ತನ್ನ ಕೆಲಸ ಕಾರ್ಯದ ನಡುವೆ ನನ್ನ ಸಂದೇಶ ಮರೆತನೇನೋ, ಅವನ ಸ್ವಾಗತಕ್ಕಾಗಿ ತಾನು ನಡೆಸಿದ ತಯಾರಿ ಕಡಿಮೆಯಾಯಿತೇ ಎನ್ನುವ ಅನುಮಾನ ಬೇರೆ.ಅವನ ಸ್ವಾಗತಕ್ಕಾಗಿ ಪನ್ನೀರು ಸಿದ್ಧವಿದೆಯೇ ಎಂದು ಇನ್ನೊಮ್ಮೆ ಖಚಿತಪಡಿಸಿಕೊಂಡಳು. ಅವನಿಗಾಗಿ ಮಾಡಿಟ್ಟ ಅವನಿಷ್ಟದ ಖಾದ್ಯಗಳ ಬೆಂಡೆಹುಳಿ, ಬದನೆ ಎಣ್ಣೆಗಾಯಿ, ಮೆಣಸಿನಕಾಯಿ ಬಜೆ, ಪಲ್ಯಗಳು, ಬೇಳೆಸಾರು, ಪ್ಯಾರಿಶ್ ಚಿತ್ರಾನ್ನ , ಗೋಧಿ ಹುಗ್ಗಿಯಂತೂ ಆತನಿಗೆ ಪಂಚಪ್ರಾಣ, ಕೇಸರಿಬಾತು ಅಬ್ಟಾ ಎಷ್ಟು ಘಮಘಮ ಪರಿಮಳ ಸೋಕಿ ಅವನು ಏಳು ಸಮುದ್ರದ ದೂರದಲ್ಲಿದ್ದರೂ ಓಡಿ ಬರುವುದು ಖಚಿತ! ಮತ್ತೂಮ್ಮೆ ಬಿಸಿಯಾಗಿವೆಯೇ ಎಂದು ಖಚಿತ ಪಡಿಸಿಕೊಂಡಳು.
ಅನ್ನವನ್ನಂತೂ ಬಿಸಿಯಾಗಿಯೇ ಬಡಿಸಬೇಕೆಂದು ಹಾಲಲ್ಲಿ ಬೇಯಿಸಲಿಟ್ಟಿದ್ದಳು.ಅಷ್ಟು ಪ್ರೀತಿಸುವವಳು ಅವನ ಎಲ್ಲ ಸೀಕ್ರೆಟುಗಳನ್ನು ಬಲ್ಲವಳು, ಅವನ ಗೆಳೆಯ ಚಾತಕನನ್ನೇ ಕರೆದಳು. ಚಾತಕನು ಕರೆದರೆ ಅವನು ಎಲ್ಲಿದ್ದರೂ ಓಡಿ ಬರುವನೆಂದು ಅರಿತವಳು. ಚಾತಕನು ಕರೆದನು. ವರುಣನು ಬಂದನು. ಪ್ರಿಯಕರನ ಭವ್ಯ ಸ್ವಾಗತವ ಕಣ್ಣು ತುಂಬಿಕೊಳ್ಳಲು ಜೀವರಾಶಿಗಳೆಲ್ಲ ನೆರೆದು, ಪ್ರೀತಿಯ ವಾಲಗ ಊದಿ ಅವರ ಏಕಾಂತಕ್ಕೆ ಭಂಗಬಂದಿತೆಂದು ತಮ್ಮ ತಮ್ಮ ಗೂಡನ್ನು ಸೇರಿದವು.
– ಸಾವಿತ್ರಿ ಶ್ಯಾನಭಾಗ್
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.