ಶಿಕ್ಷಕರ ದಿನಾಚರಣೆ: ‘ಶಾಲೆ -ಶಿಕ್ಷಕ – ವಿದ್ಯಾರ್ಥಿ’ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸಕಾಲ


Team Udayavani, Sep 4, 2020, 2:40 PM IST

ಶಿಕ್ಷಕರ ದಿನ: ‘ಶಾಲೆ -ಶಿಕ್ಷಕ – ವಿದ್ಯಾರ್ಥಿ’ ಇವುಗಳ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸಕಾಲ

‘ಹರ ಮುನಿಯೇ ಗುರು ಕಾಯ್ವ ಗುರು ಮುನಿಯೇ ಹರನಿಂದಲೂ ಕಾಯಲಸದಳವೂ’-ಎಂಬ ಪ್ರಾಜ್ಞರ ಉಕ್ತಿಯು ಗುರುವಿನ ಸ್ಥಾನಮಾನದ ಉಚ್ಛ್ರಾಯ ಸ್ಥಿತಿ ತಿಳಿಸುತ್ತದೆ. ಸರ್ವರೊಳು ಗುರು ಸರ್ವೋತ್ತಮ, ಆಚಾರ್ಯ ದೇವೋಭವ ಎಂಬಂತಹ ಲೋಕೋಕ್ತಿಯು ಗುರು ಸ್ಥಾನದ ಶ್ರೇಷ್ಠತೆಯನ್ನು ವಿವರಿಸುತ್ತದೆ. ಇತ್ತೀಚಿನ ಕಾಲಘಟ್ಟದಲ್ಲಿ ಸಾಮಾಜಿಕ ಅಸ್ಥಿರತೆ ಹಾಗೂ ಕಾಲದ ಪ್ರಭಾವದಿಂದಾಗಿ ಗುರುಸ್ಥಾನದ ಅಸ್ತಿತ್ವ ಜಾರುತ್ತಿದೆ. ಆದರೂ ಗುರಿ ಇರುವ ಶಿಕ್ಷಣಕ್ಕೆ ಗುರು ತಾನೇ ಬೇಕು? ಈ ಕಾಲಕ್ಕೆ ಶಿಕ್ಷಕನ ಸ್ಥಾನದಲ್ಲಿ  ‘ಅಂತರ್ಜಾಲ’ ಎಲ್ಲವನ್ನೂ ಒದಗಿಸುತ್ತದೆ ಎಂಬ ‘ಹುಂಬತನ’ ಭವಿಷ್ಯದಲ್ಲಿ ಶಿಕ್ಷಕನ ಅಸ್ತಿತ್ವಕ್ಕೆ ಧಕ್ಕೆ ತಂದರೂ ಆಶ್ಚರ್ಯವಿಲ್ಲ.

ಅಂತರ್ಜಾಲ ಕೇವಲ ಪರ್ಯಾಯವಷ್ಟೇ ಅದು ಗುರುವಿನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಮೂಡಿಸಲು ನಾವು ನಾಮಕಾವಸ್ಥೆ ಶಿಕ್ಷಕರಾಗದೇ ಮಗುವಿನ ಅಂತರಾತ್ಮಕ್ಕೆ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ಕೊಂಡೊಯ್ಯುವ ಸುಸಂಸ್ಕೃತ ಗುರು ಆಗಬೇಕು. ಹೀಗಾಗದಿದ್ದಲ್ಲಿ ಮುಂದೊಂದು ದಿನ ಮೊಬೈಲ್, ಅಂತರ್ಜಾಲ ಇತ್ಯಾದಿಗಳ ಮೇಲಾಟದ ಪ್ರಭಾವದಿಂದಾಗಿ ‘ಶಿಕ್ಷಕ’ ಕಳೆದು ಹೋಗುವುದಂತೂ ಶತಸಿದ್ಧ.

‘ಶಾಲೆ -ಶಿಕ್ಷಕ – ವಿದ್ಯಾರ್ಥಿ’ ಇವುಗಳ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸಕಾಲ. ಆರೇಳು ತಿಂಗಳುಗಳಿಂದ ಕೋವಿಡ್ ಕಾಯಿಲೆಯಿಂದಾಗಿ ಭಣ ಭಣಿಸುವ ಶಾಲೆಯು ಇಂದು ಒಣ ಮರದಂತಾಗಿದೆ. ಮಕ್ಕಳು ಅತಿ ಶೀಘ್ರ ಶಾಲೆಗೆ ಬರುವಂತಾಗಲಿ. ಮತ್ತೆ ಮಕ್ಕಳ  ಬಾಳಿನ ವಸಂತ ಬರಲಿ. ಶಾಲೆ ಹಸಿರಾಗಿ ಕಂಗೊಳಿಸಲಿ. ಗುರುವಿನ ಅನುಭವದ ಮೂಸೆಯಿಂದ ಹೊರಡುವ ಅಣಿಮುತ್ತುಗಳು ಅವರ ಕಿವಿಯನ್ನು ತುಂಬುವಂತಾಗಲಿ ಎಂಬುದೇ ನಮ್ಮ ಆಶಯ. ಎಲ್ಲರಿಗೂ ಮತ್ತೊಮ್ಮೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಇಂದು ಶಿಕ್ಷಕರಿಗೆ ಸುದಿನ

ರಾಧಾಕೃಷ್ಣನ್ ಅವರ ಜನ್ಮದಿನ

ಅವರಿಗೆ ನಮ್ಮೆಲ್ಲರ ನಮನ

ಮಕ್ಕಳಿಲ್ಲದ ಶಾಲೆ ಭಣ ಭಣ

ಎಲ್ಲದಕ್ಕೂ ಕಾರಣ ಕೊರೊನಾ

ಆದರೂ ನಮ್ಮ ನೆಚ್ಚಿನ ಚಂದನ

ಬಿತ್ತರಿಸುತ್ತಿವೆ ಪಾಠ ಪ್ರವಚನ

ಸಿಗುತಿದೆ ಮಕ್ಕಳ ಉತ್ತಮ ಸ್ಪಂದನ.

ಅಂದು ಗುರು ಮಠವೇ ಸದನ

ಇಂದು ಅಂತರ್ಜಾಲವೇ ಸಾಧನ

ಸದಾ ಚಿಮ್ಮಲಿ ನಮ್ಮ ತನು-ಮನ

ಹೆಗ್ಗುಂಜೆ ರಾಜೀವ ಶೆಟ್ಟಿ
ಸರಕಾರಿ ಪದವಿ ಪೂರ್ವ ಕಾಲೇಜು, ಹಾಲಾಡಿ. ಕುಂದಾಪುರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.