Mobile; ಮೊದಲ ದಿವಸ ಮೂರೇ ಗಂಟೆಯಲ್ಲಿ 1 ಲಕ್ಷ ಮಾರಾಟವಾದ ಮೊಬೈಲ್ ಫೋನ್: ಏನಿದರ ವಿಶೇಷತೆ?


Team Udayavani, Jul 12, 2024, 9:24 PM IST

Mobile; ಮೊದಲ ದಿವಸ ಮೂರೇ ಗಂಟೆಯಲ್ಲಿ 1 ಲಕ್ಷ ಮಾರಾಟವಾದ ಮೊಬೈಲ್ ಫೋನ್: ಏನಿದರ ವಿಶೇಷತೆ?

ನವದೆಹಲಿ: ಇದೀಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿರುವ ಬ್ರಾಂಡ್ ನ  ಮೊದಲ ಮೊಬೈಲ್ ಫೋನ್ ಭಾರತದಲ್ಲಿ ಮೊದಲ ದಿನವೇ ಮೂರೇ ಗಂಟೆ ಅವಧಿಯಲ್ಲಿ 1 ಲಕ್ಷ ಯೂನಿಟ್ ಗಳ ಮಾರಾಟ ಕಂಡಿದೆ!

ಲಂಡನ್ ಮೂಲದ ತಂತ್ರಜ್ಞಾನ ಕಂಪನಿ ನಥಿಂಗ್ ನ ಉಪ-ಬ್ರಾಂಡ್ ಆದ CMF ತನ್ನ ಚೊಚ್ಚಲ ಸ್ಮಾರ್ಟ್  ಫೋನ್ ಮಾರಾಟದ ಮೊದಲ ದಿನವೇ ಭರ್ಜರಿ ಸೇಲ್ ಮಾಡಿದೆ!

CMF ಫೋನ್ 1, ಆನ್ ಲೈನ್ ಮತ್ತು ಆಫ್ ಲೈನ್ ಸೇರಿ ವಿವಿಧ ಚಾನಲ್ ಗಳಲ್ಲಿ ಕೇವಲ ಮೂರು ಗಂಟೆಗಳಲ್ಲಿ 100,000 ಯುನಿಟ್ ಗಳನ್ನು ಮಾರಾಟ ಮಾಡುವ ಗಮನಾರ್ಹ ಸಾಧನೆ ಮಾಡಿದೆ ಎಂದು ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಒನ್ ಪ್ಲಸ್ ಕಂಪೆನಿಯ ಸಹಸ್ಥಾಪಕರಾಗಿದ್ದ ಕಾರ್ಲ್ ಪೇ ಸ್ಥಾಪಿಸಿದ ನೂತನ ಬ್ರಾಂಡ್ ನಥಿಂಗ್. ಅಲ್ಪ ಕಾಲದಲ್ಲೇ ಈ ಬ್ರಾಂಡ್, ಬಜೆಟ್ ದರದಲ್ಲಿ ತನ್ನ ಉತ್ತಮ ಗುಣಮಟ್ಟದ ಫೋನ್, ಇಯರ್ ಬಡ್ ಗಳಿಂದ ಹೆಸರು ಮಾಡಿದೆ.

ನಥಿಂಗ್ ತನ್ನ ಇನ್ನೊಂದು ಉಪಬ್ರಾಂಡ್ ಸಿಎಂಎಫ್ ಅನ್ನು ಹೊರ ತಂದಿದ್ದು, ಈ ಬ್ರಾಂಡ್ ನಡಿ ಸಿಎಂಎಫ್ ಫೋನ್, ಇಯರ್ ಬಡ್, ವಾಚ್, ಪವರ್ ಬ್ಯಾಂಕ್ ಗಳನ್ನು ಉತ್ಪಾದಿಸುತ್ತಿದೆ. ಇವು ಬಜೆಟ್ ಸ್ನೇಹಿಯಾಗಿವೆ. ಸಿಎಂಎಫ್ ನ ಮೊದಲ ಫೋನ್ ಸಿಎಂಎಫ್ ಫೋನ್ 1 ಅನ್ನು ಮೊನ್ನೆಯಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇಂದು ಅದರ ಮೊದಲ ಮಾರಾಟವಿದ್ದು, ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ 1 ಲಕ್ಷ ಯೂನಿಟ್ ಗಳು ಮಾರಾಟವಾಗಿವೆ.

ನಥಿಂಗ್ ಫೋನ್ (2ಎ) ಬಿಡುಗಡೆಯಾಗಿದ್ದಾಗ 24 ಗಂಟೆ ಅವಧಿಯಲ್ಲಿ 1 ಲಕ್ಷ ಫೋನ್ ಮಾರಾಟವಾಗಿದ್ದವು. ಈ ಫೋನು ಆ ಸಾಧನೆಯನ್ನು ಮೂರೇ ಗಂಟೆಯಲ್ಲಿ ಮಾಡಿರುವುದು ವಿಶೇಷ.

ಈ ಪರಿಯ ವೇಗದ ಮಾರಾಟಕ್ಕೆ ಕಾರಣ, ಅದರ ಸ್ಪೆಸಿಫಿಕೇಷನ್ ಗೆ ಹೋಲಿಸಿದರೆ ಅದರ ದರ ಕೈಗೆಟುಕುವಂತಿರುವುದು. ಇದರ ದರ 6 ಜಿಬಿ 128 ಜಿಬಿಗೆ 15999 ರೂ. 8 ಜಿಬಿ 128 ಜಿಬಿಗೆ 17,999 ರೂ. ಇದೆ. ಮೊದಲ ದಿನ 1 ಸಾವಿರ ರೂ. ರಿಯಾಯಿತಿ ಸಹ ಇತ್ತು.

ಈ ದರಕ್ಕೆ ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್ಇದ್ದು, ಈ ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. 16 GB ವರೆಗಿನ RAM ವಿಸ್ತರಿಸಬಹುದು. ಈ ಪ್ರೊಸೆಸರ್ ನಥಿಂಗ್ನೊಂದಿಗೆ ಸಹ-ಇಂಜಿನಿಯರಿಂಗ್ ಆಗಿದೆ. 5000 mAh ಬ್ಯಾಟರಿ ಹೊಂದಿದ್ದು, 33 ವಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ಇದೆ.

ಸೋನಿ 50 MP ಮುಖ್ಯ ಕ್ಯಾಮೆರಾ ಹೊಂದಿದ್ದು,2 ಮೆಪಿ ಡೆಪ್ತ್ ಸೆನ್ಸರ್ ಇದೆ.16 ಮೆ.ಪಿ. ಮುಂಭಾಗದ ಕ್ಯಾಮರಾ ಒಳಗೊಂಡಿದೆ. 15 ಸಾವಿರ ರೂ. ರೇಂಜಿನಲ್ಲಿ 6.67 ಇಂಚಿನ LTPS ಸೂಪರ್ AMOLED ಪರದೆ ಹಾಕಿರುವುದು ವಿಶೇಷ. ಅಲ್ಟ್ರಾ-ಸ್ಮೂತ್ 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ ಸಹ ಹೊಂದಿದೆ. ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ಆಕರ್ಷಕ ವಿನ್ಯಾಸ ಹೊಂದಿದ್ದು, ಈ ಕೇಸ್ ಗಳನ್ನು ಬದಲಾಯಿಸುವ ಆಯ್ಕೆಯನ್ನೂ ನೀಡಲಾಗಿದೆ.

 

ಟಾಪ್ ನ್ಯೂಸ್

13-mng-e-auto

Mangaluru: ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ದ.ಕ. ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

Mudhol ಶ್ರೀಗಂಧ ಕಳ್ಳರ ಬಂಧನ: 107 ಕೆ.ಜಿ. ಗಂಧದ ತುಂಡುಗಳು ವಶಕ್ಕೆ

Mudhol ಶ್ರೀಗಂಧ ಕಳ್ಳರ ಬಂಧನ: 107 ಕೆ.ಜಿ. ಗಂಧದ ತುಂಡುಗಳು ವಶಕ್ಕೆ

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ

Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ

Mangaluru home stay attack case: All accused acquitted

Mangaluru ಹೋಂ ಸ್ಟೇ ದಾಳಿ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

Gadag; ಶಾಲಾ‌‌ ಮಕ್ಕಳ ಕೂದಲು ಕಟ್ ಮಾಡಿದ‌ ಶಿಕ್ಷಕನಿಗೆ ಬಿತ್ತು ಧರ್ಮದೇಟು!

Gadag; ಶಾಲಾ‌‌ ಮಕ್ಕಳ ಕೂದಲು ಕಟ್ ಮಾಡಿದ‌ ಶಿಕ್ಷಕನಿಗೆ ಬಿತ್ತು ಧರ್ಮದೇಟು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Apple products; ಐಫೋನ್‌, ಐಪ್ಯಾಡ್‌ಗಳಲ್ಲಿ ದೋಷಗಳನ್ನು ಫ್ಲ್ಯಾಗ್‌ ಮಾಡಿದ ಕೇಂದ್ರ ಸರ್ಕಾರ

Apple products; ಐಫೋನ್‌, ಐಪ್ಯಾಡ್‌ಗಳಲ್ಲಿ ದೋಷಗಳನ್ನು ಫ್ಲ್ಯಾಗ್‌ ಮಾಡಿದ ಕೇಂದ್ರ ಸರ್ಕಾರ

gadget3

Gadget Review: ಒನ್ ಪ್ಲಸ್ ಪ್ಯಾಡ್ 2… ಲ್ಯಾಪ್ ಟಾಪ್ ಅನುಭವ ನೀಡುವ ಟ್ಯಾಬ್

Intel: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ನ 18,000 ನೌಕರರ ವಜಾ, 20 ಬಿಲಿಯನ್‌ ವೆಚ್ಚ ಕಡಿತ!

Intel: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ನ 18,000 ನೌಕರರ ವಜಾ, 20 ಬಿಲಿಯನ್‌ ವೆಚ್ಚ ಕಡಿತ!

Ransomware Attack; 300 ಬ್ಯಾಂಕ್‌ ಕಂಪ್ಯೂಟರ್‌ ವ್ಯವಸ್ಥೆ ಮೇಲೆ ಸೈಬರ್‌ ದಾಳಿ

Ransomware Attack; 300 ಬ್ಯಾಂಕ್‌ ಕಂಪ್ಯೂಟರ್‌ ವ್ಯವಸ್ಥೆ ಮೇಲೆ ಸೈಬರ್‌ ದಾಳಿ

ಭಾರತದಲ್ಲಿ Whatsapp Service ಸ್ಥಗಿತಗೊಳ್ಳಲಿದೆಯೇ?ಸಚಿವ ಅಶ್ವಿನ್‌ ವೈಷ್ಣವ್ ಹೇಳಿದ್ದೇನು…

ಭಾರತದಲ್ಲಿ Whatsapp Service ಸ್ಥಗಿತಗೊಳ್ಳಲಿದೆಯೇ?ಸಚಿವ ಅಶ್ವಿನ್‌ ವೈಷ್ಣವ್ ಹೇಳಿದ್ದೇನು…

MUST WATCH

udayavani youtube

ಶಿರೂರಿಗೆ ಬಂದ ಈಶ್ವರ್‌ ಮಲ್ಪೆ ತಂಡಕ್ಕೆ ಕಾರ್ಯಾಚರಣೆಗೆ ಸಿಗದ ಅನುಮತಿ

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

ಹೊಸ ಸೇರ್ಪಡೆ

kalla

Uppunda: ಹಲ್ಲೆ, ಚಿನ್ನಾಭರಣ ಕಳವು ಪ್ರಕರಣ ದಾಖಲು

13-mng-e-auto

Mangaluru: ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ದ.ಕ. ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

complaint

Hiliyana: ಮಗನಿಗೆ ಕೊಲೆ ಬೆದರಿಕೆ; ತಾಯಿ ದೂರು

Mudhol ಶ್ರೀಗಂಧ ಕಳ್ಳರ ಬಂಧನ: 107 ಕೆ.ಜಿ. ಗಂಧದ ತುಂಡುಗಳು ವಶಕ್ಕೆ

Mudhol ಶ್ರೀಗಂಧ ಕಳ್ಳರ ಬಂಧನ: 107 ಕೆ.ಜಿ. ಗಂಧದ ತುಂಡುಗಳು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.