ಬೇಸಿಕ್‌ನಲ್ಲಿ ಯುಪಿಐ; ಇಂಟರ್ನೆಟ್‌ ಇಲ್ಲದೆಯೂ ವಹಿವಾಟು ನಡೆಸುವ ವ್ಯವಸ್ಥೆ


Team Udayavani, Mar 9, 2022, 11:35 AM IST

ಬೇಸಿಕ್‌ನಲ್ಲಿ ಯುಪಿಐ; ಇಂಟರ್ನೆಟ್‌ ಇಲ್ಲದೆಯೂ ವಹಿವಾಟು ನಡೆಸುವ ವ್ಯವಸ್ಥೆ

ಮುಂಬಯಿ: ಸ್ಮಾರ್ಟ್‌ಫೋನ್‌ ಇರುವವರು ಕಣ್ಣು ಮಿಟುಕಿಸುವಷ್ಟರಲ್ಲಿ ಬಿಲ್‌ ಕಟ್ಟುತ್ತಾರೆ, ಒಬ್ಬರಿಂದೊ ಬ್ಬರಿಗೆ ಹಣ ಪಾವತಿಸುತ್ತಾರೆ. ಆದರೆ ನಮ್ಮಂಥ ಬೇಸಿಕ್‌ ಫೋನ್‌ ಬಳಸುವ ವರಿಗೆ ಇಂಥ ಸೌಲಭ್ಯ ಇಲ್ಲ ವಲ್ಲಾ ಎಂದು ಕೊರಗುತ್ತಿ ದ್ದೀರಾ? ಇನ್ನು ಮುಂದೆ ಬೇಸಿಕ್‌ ಫೋನ್‌ ಬಳಕೆದಾ ರರು ಕೂಡ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ)ಯ ಅನು ಕೂಲತೆಯನ್ನು ಪಡೆಯಬಹುದು.

ಇಂಟರ್ನೆಟ್‌ನ ಅಗತ್ಯವಿಲ್ಲದೇ ಕ್ಷಣ ಮಾತ್ರದಲ್ಲಿ ಹಣ ಪಾವತಿಸುವ “ಯುಪಿಐ 123 ಪೇ’ ಎಂಬ ವ್ಯವಸ್ಥೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಮಂಗಳವಾರ ಲೋಕಾರ್ಪಣೆ ಮಾಡಿದ್ದಾರೆ. ಇದರಿಂದ ದೇಶದ 40 ಕೋಟಿ ಬೇಸಿಕ್‌ ಫೋನ್‌ ಬಳಕೆ ದಾರರಿಗೆ ನೆರವಾಗಲಿದೆ ಎಂದೂ ಅವರು ಹೇಳಿದ್ದಾರೆ. ಈವರೆಗೆ ಕೇವಲ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಯುಪಿಐ ಮೂಲಕ ಹಣವನ್ನು ಸ್ವೀಕರಿಸುವ ಮತ್ತು ಪಾವತಿ ಸುವ ಅವಕಾಶ ಲಭ್ಯವಿತ್ತು.

ಡಿಜಿ ಸಾಥಿಗೂ ಚಾಲನೆ: ಡಿಜಿಟಲ್‌ ಪಾವತಿಗೆ ನೆರವಾ ಗುವ 24/7 ಸಹಾಯವಾಣಿ “ಡಿಜಿ ಸಾಥಿ’ಗೂ ಚಾಲನೆ ನೀಡಲಾಗಿದೆ. ಇದರ ಮೂಲಕ ಗ್ರಾಹಕರು ಡಿಜಿಟಲ್‌ ಪಾವತಿಗೆ ಸಂಬಂಧಿಸಿದ ಎಲ್ಲ ಸಂದೇಹ ಗಳಿಗೂ ಪರಿಹಾರ ಪಡೆಯಬಹುದು.

www.digisaathi.infoಗೆ ಭೇಟಿ ನೀಡಬಹುದು ಅಥವಾ 14431 ಮತ್ತು 1800 891 3333 ಗೆ ಕರೆ ಮಾಡಬಹುದು.

ಗ್ರಾಹಕರು ಏನು ಮಾಡಬೇಕು? ಆರಂಭದಲ್ಲಿ ಇಂಗ್ಲಿಷ್‌, ಹಿಂದಿಯಲ್ಲಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಯುಪಿಐ 123 ಪೇ ಸೌಲಭ್ಯವನ್ನು ಪಡೆಯಬೇ ಕೆಂದರೆ ಮೊದಲು ಬಳಕೆದಾರರು ತಮ್ಮ ಬೇಸಿಕ್‌ ಫೋನ್‌ಗಳಿಗೆ ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡ ಬೇಕು. ಬಳಿಕ ತಮ್ಮ ಡೆಬಿಟ್‌ ಕಾರ್ಡ್‌ ಬಳಸಿ ಕೊಂಡು ಯುಪಿಐ ಪಿನ್‌ ಸೆಟ್‌ ಮಾಡಬೇಕು. ಒಮ್ಮೆ ಯುಪಿಐ ಪಿನ್‌ ರಚನೆಯಾದರೆ ನಿಮ್ಮ ಬೇಸಿಕ್‌ ಫೋನ್‌ನಿಂದಲೇ ಯಾವುದೇ ವಹಿವಾಟು ನಡೆಸಬಹುದು.

ಬಳಕೆ ಹೇಗೆ?
ಬೇಸಿಕ್‌ ಫೋನ್‌ ಬಳಕೆದಾರರು ನಾಲ್ಕು ಪರ್ಯಾಯ ತಂತ್ರಜ್ಞಾನಗಳನ್ನು ಆಧರಿಸಿ ವಹಿವಾಟುಗಳನ್ನು ನಡೆಸಬಹುದು. ಅವೆಂದರೆ ಐವಿಆರ್‌(ಇಂಟರ್ಯಾಕ್ಟಿವ್‌ ವಾಯ್ಸ ರೆಸ್ಪಾನ್ಸ್‌) ಸಂಖ್ಯೆಗೆ ಕರೆ ಮಾಡುವ ಮೂಲಕ ಹಣ ಪಾವತಿಸುವುದು. ಹಣ ರವಾನೆ ಮಾಡಬೇಕೆಂದರೆ ಅದು ಯಾರಿಗೆ ತಲುಪಬೇಕೋ ಅವರ ಫೋನ್‌ ನಂಬರ್‌ ನಮೂದಿಸಿ, ಎಷ್ಟು ಮೊತ್ತ ಎಂದು ಬರೆದು, ಯುಪಿಐ ಪಿನ್‌ ಅನ್ನು ನಮೂದಿಸಬೇಕು.

ಬೇಸಿಕ್‌ ಫೋನ್‌ಗಳಲ್ಲಿ ಆ್ಯಪ್‌ಗ್ಳನ್ನು ಬಳಸಿಕೊಂಡು ವ್ಯವಹರಿಸುವುದು: ಇದರಲ್ಲಿ “ಸ್ಕ್ಯಾನ್‌ ಮಾಡಿ ಪಾವತಿಸುವ ಆಯ್ಕೆ’ ಹೊರತುಪಡಿಸಿ ಉಳಿದೆಲ್ಲ ಯುಪಿಐ ಫೀಚರ್‌ಗಳೂ ಇರುತ್ತವೆ.

ಮಿಸ್ಡ್ ಕಾಲ್‌ ಕೊಟ್ಟು ಸೇವೆ ಪಡೆಯು ವುದು: ಯಾವುದಾದರೂ ಮಳಿಗೆಗೆ ಹಣ ಪಾವತಿಸಬೇಕೆಂದಿದ್ದರೆ, ಆ ಮಳಿಗೆಯ ಹೊರಗೆ ಪ್ರಕಟಿಸಲಾದ ಸಂಖ್ಯೆಗೆ ನೀವು ಮಿಸ್ಡ್ ಕಾಲ್‌ ಕೊಡಬೇಕು. ತತ್‌ಕ್ಷಣ ಅತ್ತ ಕಡೆ ಯಿಂದ ಮರಳಿ ನಿಮಗೆ ಕರೆ ಬರುತ್ತದೆ. ಹಣ ಪಾವತಿಯ ಕುರಿತು ದೃಢೀಕರಣ ಕೇಳಲಾಗುತ್ತದೆ ಮತ್ತು ಯುಪಿಐ ಪಿನ್‌ ನಮೂದಿಸುವಂತೆ ಸೂಚಿಸಲಾಗುತ್ತದೆ. ಪಿನ್‌ ಹಾಕಿದೊಡನೆ ಹಣ ಪಾವತಿಯಾಗುತ್ತದೆ.ಧ್ವನಿ-ಆಧರಿತ ಪಾವತಿ. ಇಲ್ಲಿ ಧ್ವನಿಯ ತರಂಗಗಳ ಬಳಸಿ ಇತರರಿಗೆ ಸಂಪರ್ಕ ರಹಿತ ಪಾವತಿಯನ್ನು ಮಾಡಬಹುದು.

ಯಾವುದಕ್ಕೆ ಬಳಸಬಹುದು?
ಈ ವ್ಯವಸ್ಥೆ ಮೂಲಕ ಯಾರಿಗೇ ಆದರೂ ಹಣ ರವಾನೆ ಮಾಡಬಹುದು, ನೀರು, ವಿದ್ಯುತ್‌ ಸೇರಿ ಇತರ ಬಿಲ್‌ಗ‌ಳ ಪಾವತಿ, ಫಾಸ್ಟ್‌ಟ್ಯಾಗ್‌ ರೀಚಾರ್ಜ್‌, ಮೊಬೈಲ್‌ ಬಿಲ್‌ ಪಾವತಿ ಮಾಡಬಹುದು. ಖಾತೆಯಲ್ಲಿರುವ ಬ್ಯಾಲೆನ್ಸ್‌ ಎಷ್ಟೆಂದು ನೋಡಬಹುದು. ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡುವುದು, ಯುಪಿಐ ಪಿನ್‌ಗಳನ್ನು ಸೆಟ್‌ ಮಾಡುವುದು ಅಥವಾ ಬದಲಾಯಿಸುವ ಕೆಲಸವನ್ನೂ ಮಾಡಬಹುದು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.