World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!


Team Udayavani, Sep 27, 2024, 1:50 PM IST

02002

ನಾನು ಮತ್ತು ಕಿರಣ್ ಅಣ್ಣ , ಇಬ್ಬರೂ ಪಶ್ಚಿಮ ಘಟ್ಟದ ದಟ್ಟ ಕಾಡಿನೊಳಗೆ Trekking ಮಾಡಲು ನಿರ್ಧರಿಸಿದ್ದೆವು, ನಾವು ಕಂಡುಹಿಡಿಯಬೇಕಾಗಿದ್ದದ್ದು ಆ ದಟ್ಟ ಕಾಡಿನಲ್ಲಿ ಅಡಗಿರುವ ಅದ್ಭುತ ಸಣ್ಣ ಜಲಪಾತ. ಈ ಬಾರಿಯ ಸಾಹಸಕ್ಕೆ ನಾವಿಬ್ಬರೇ ಹೊರಟಿದ್ದೇವೆ. ಸಾಹಸಪ್ರಿಯರಾಗಿರುವ ನಾವು, ಈ Trekking ಕೇವಲ ಒಂದು ಜಲಪಾತವನ್ನು ಹುಡುಕುವುದಲ್ಲ, ಅದನ್ನು ನಿಜವಾದ ಅಡವಿಯ ಅನುಭವವಾಗಿಸುವಂತೆ ಮಾಡಬೇಕೆಂಬ ಉತ್ಸಾಹವಿತ್ತು.

ಬೆಳಗಿನ ಹೊತ್ತಿಗೆ ಬಿಸಿಲಿನ ಕಿರಣಗಳು ಕಾಡಿನೊಳಗೆ ಹರಡಿದಾಗ, ನಾವು ಪಯಣವನ್ನು ಪ್ರಾರಂಭಿಸಿದೆವು. ಪಶ್ಚಿಮ ಘಟ್ಟದ ದಟ್ಟ ಕಾಡು, ಹಸಿರಾದ ಬೆಟ್ಟಗಳು, ಮತ್ತು ಹಸಿರು ಮರಗಳ ನಡುವೆ ಹರಿಯುವ ಸಣ್ಣ ನೀರಿನ ಧಾರೆಗಳು ನಮಗೆ ಹೊಸ ವಿಶ್ವದಂತೆ ಕಂಡವು. ಬಾನುಲಿಯ ಹಕ್ಕಿಗಳ ಕೂಗು, ಜಂಗಲ್‌ನ ನಿಸರ್ಗ ಶಬ್ದಗಳು ಮತ್ತು ದಾರಿ ಬಿಟ್ಟು ಹಾರಿದಲ್ಲೆಲ್ಲ ಹಚ್ಚಹಸಿರಾದ ನೋಟವು ನಮ್ಮನ್ನು ಮತ್ತಷ್ಟು ಪ್ರೇರೇಪಿಸುತ್ತಿದ್ದವು. ಹಾಗೆಯೇ ಕಾಡಿನ ಅಪಾಯಗಳ ಅರಿವು ನಮ್ಮಗಿತ್ತು.

ಮೊದಲ ಕೆಲವು ದೂರದ ಪಯಣ ಸುಲಭವಾಗಿತ್ತು. ಆದರೆ ಬೆಟ್ಟದ ಮೇಲೆ ಹತ್ತಿದಂತೆ, ಪಥವು ಹೆಚ್ಚು ಕಠಿಣವಾಗತೊಡಗಿತು. ನಾವಿಬ್ಬರೂ ಹೆಜ್ಜೆ ಇಡುವ ಪ್ರತಿಯೊಂದು ಹೆಜ್ಜೆಯೂ, ಸವಾಲುಗಳಿಂದ ತುಂಬಿದಂತಿತ್ತು—ಮೈಮೇಲೆ ಹತ್ತಿದ ಕೀಳು ಹಗ್ಗಗಳಂತೆ ಉಳಿಯುವ ಗಿಡಗಳು, ಬಿದ್ದುಹೋದ ಮರದ ಬಳ್ಳಿಗಳು, ಮತ್ತು ತೀರ ಕಂದಕದ ಮುಂದೆ ಇರುವ ಬಂಡೆಗಳ ನಡುವೆ ಸಾಗಬೇಕಾಗಿತ್ತು.

ಹೊಂದಿಕೊಳ್ಳಬೇಕಾದ ಪ್ರಥಮ ಸವಾಲುಗಳು ಮುಗಿದ ನಂತರ, ನಾವು ಕೊನೆಗೂ ಒಂದು ತೀರ ಹತ್ತಿರದ ನದಿಯ ತೀರಕ್ಕೆ ತಲುಪಿದೆವು. ಆ ನದಿಯು ಕೇವಲ ಸಣ್ಣ ಜರಿಯಂತೆ ಕಾಣಿಸಿದರೂ, ಅದರ ಹರಿವಿನಿಂದ ಮುಂದಿನ ದಾರಿ ಹೇಗಿರಬಹುದೆಂಬುದರ ಒಂದು ಸೂಚನೆ ತೋರಿಸುತ್ತಿತ್ತು. ನದಿಯ ತೀರದಲ್ಲಿ ಅಲ್ಪಾವಧಿಯ ವಿಶ್ರಾಂತಿ ತೆಗೆದುಕೊಂಡು, ನಮ್ಮ ಮುಂದೆ ಕಾಯುತ್ತಿದ್ದ ದಟ್ಟ ಕಾಡಿನ ಪಥಕ್ಕೆ ನಾವು ಪಾದಾರ್ಪಣೆ ಮಾಡಿದೆವು.

ಮುಂದಿನ ಕಾಡಿನ ಹಾದಿ ಇನ್ನಷ್ಟು ಅಪಾಯಕಾರಿ ಆಗಿತ್ತು. ಕೆಲವು ಸ್ಥಳಗಳಲ್ಲಿ ಜಾರಿ ಕಲ್ಲುಗಳ ನಡುವೆ, ನಾವು ಮಾರ್ಗ ಕಳೆದುಹೋಗಿದ್ದಂತೆ ಅನ್ನಿಸಿತು. ಪರ್ವತದ ತುದಿ ಹತ್ತುವಾಗ, ಎಡಗಡೆ ತೆರೆದ ಕಂದಕ ಮತ್ತು ಆಳವಾದ ಕಲ್ಲಿನ ಗುಹೆಗಳಲ್ಲಿ ಒಂದು ತಪ್ಪು ಹೆಜ್ಜೆ ನಮ್ಮ ಪಯಣವನ್ನು ಮುಗಿಸುವಂತಿತ್ತು.  ದಾರಿ ಕಳೆದುಹೋಗುವ ಭೀತಿ ನಮ್ಮನ್ನು ಜಗಿಲಾಗಿಸುತ್ತಿತ್ತು, ಏಕೆಂದರೆ ಈ ಜಾಗವನ್ನು ಅಷ್ಟು ಜನರು ನೋಡಿದವರಲ್ಲ. ಹೃದಯ ಬಡಿತ ಹೆಚ್ಚಿಸುತ್ತಿದ್ದ ಕಾಡಿನ ನಿಸರ್ಗ ಶಬ್ದಗಳು ಮತ್ತು ಕಾಡು ಪ್ರಾಣಿಗಳ ಚೀರಾಟ ನಮಲ್ಲಿ ಭಯ ಹುಟ್ಟಿಸುತಿತ್ತು ಆದರೂ ಜಲಪಾತ ನೋಡಬೇಕೆಂಬ ಅಸೆ ನಮಲ್ಲಿ ಹೊಸ ಉತ್ಸಾಹ ತಂದಿತು.

ಕೆಲ ಹೊತ್ತು ನಡೆದು , ಸ್ವಲ್ಪ ದೂರ ಬಂದ ನಾವು ಕಾಡಿನಲ್ಲಿ ಅನೇಕ ಶಬ್ದಗಳನ್ನು ಕೇಳುತ್ತಿದ್ದೆವು—ಕೂದಾಟದ ಹಕ್ಕಿಗಳು, ಮಾಯವಾಗುತ್ತಿರುವ ಸಣ್ಣಜೀವಿಗಳು, ಮತ್ತು ಎತ್ತರದ ಮರಗಳ ಮಧ್ಯೆ ಹರಿದುಹೋಗುತ್ತಿದ್ದ ಗಾಳಿಯ ಶಬ್ದ. ಈ ಶಬ್ದಗಳು ನಮಗೆ ಜಂಗಲ್‌ನ ಜೀವಂತಿಕೆಯ ಸೂಚನೆ ತೋರುತ್ತಿದ್ದವು.

ಅಲ್ಲಿಂದ ಸ್ವಲ್ಪ ಮುಂದೆ ಹೋದಾಗಲೇ, ನಾವು ಮತ್ತೊಂದು ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಯಿತು—ಕಾಡುಮರದ ಬೀಚಿನ ಬಳಿಯೇ ಕೆಲವು ಕಾಡುಜಿಂಕೆಗಳು. ತಮ್ಮ ಹೆಜ್ಜೆಗೆ ಸಾಕಷ್ಟು ಅಂತರದ ಮೇಲೆ ಓಡಿದಾಗ, ಅವು ಅದ್ಭುತ ಚಲನೆಯೊಂದಿಗೆ ಮರಗಳಲ್ಲಿ ಅಡಗಿದವು. ನಮ್ಮ ಅಚ್ಚರಿಗಿಂತ ಹೆಚ್ಚು, ಹತ್ತಿರದಲ್ಲೇ ಬೃಹತ್ ಗಾತ್ರದ ಕಾಡೆಮ್ಮೆ ತನ್ನ ಕುಟುಂಬದೊಂದಿಗೆ ಶಾಂತವಾಗಿ ಸಾಗುತ್ತಿದ್ದುದನ್ನು ನೋಡಿದೆವು.

ಆಂತರಿಕ ಶಕ್ತಿ ಮತ್ತು ನಿಸರ್ಗದ ಜೊತೆಗಿನ ಆವೇಶದ ಬಳಿಕ, ಕೊನೆಗೂ ನಾವು ಸವಾಲಿನ ಪಥವನ್ನು ದಾಟಿ, ದಟ್ಟ ಕಾಡಿನ ಮಧ್ಯೆ ಅಡಗಿದ್ದ ಆ ಅದ್ಭುತ ಸಣ್ಣ ಜಲಪಾತದ ಮುಂದೆ ತಲುಪಿದೆವು. ಜಲಪಾತವು ಭಾರೀ ಶಬ್ದದಿಂದ ಜಲವನ್ನು ನೆಲಕ್ಕೆ ಹರಿಯಿಸುತ್ತಿತ್ತು, ನೀರಿನ ಹನಿಗಳು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಹೊಳೆಯುತ್ತಿದ್ದರು.

ನಾವು ಇಬ್ಬರೂ ಜಲಪಾತದ ತುದಿಯಲ್ಲಿ ನಿಂತು, ನಮ್ಮ ಈ ಸಾಹಸವನ್ನು ಯಶಸ್ವಿಯಾಗಿ ಮುಗಿಸಿರುವ ಸಂತೋಷವನ್ನು ಹಂಚಿಕೊಂಡೆವು.ಅದಾಗಲೇ ಗಂಟೆ 2 ಆಗಿತ್ತು ಮತ್ತೆ ಸಮಯ ಕಳಯದೆ ನಾವು ಅಲ್ಲಿಂದ ಮನೆಗೆ ಹೊರಟೆವು, ಸರಿಸುಮಾರು 6ಗಂಟೆ ಸರಿಯಾಗಿ ನಾವು ಬೈಕ್ ನಿಲ್ಲಿಸಿದ ಜಾಗ ಬಂದು ತಲುಪಿದೆವು, ಅಲ್ಲೇ ಇದ್ದ ಮನೆಯವರಲ್ಲಿ ಮಾತಾಡಿ ಅಲ್ಲಿಂದ ಹೊರೆಟೆವು ಕಿರಣ್ ಅಣ್ಣ ಮತ್ತು ನಾನು ದಾರಿಯುದ್ದಕ್ಕೂ ಜಲಪಾತದ ಸೌಂದರ್ಯದ ಚರ್ಚೆ ಮಾಡುತ್ತಾ ಬಂದೆವು,ಇದು ಕೇವಲ Trekking ಅಲ್ಲ, ನಾವು ನಮ್ಮ ಸ್ನೇಹ, ಧೈರ್ಯ, ಮತ್ತು ಮನೋಬಲವನ್ನು ಪರೀಕ್ಷಿಸಿದ ಪಯಣವಾಗಿತ್ತು.

-ಭುವನ್ ವಿಸ್ (ಧರ್ಮಸ್ಥಳ)

ಟಾಪ್ ನ್ಯೂಸ್

0421472757

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

siddaramaiah

Lokayukta ತನಿಖೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲು:ಕುಟುಂಬಕ್ಕೂ ಸಂಕಷ್ಟ!

1-dddd

Forest; ನೆರೆ ರಾಜ್ಯಗಳ ನಡುವೆ ಸಹಕಾರವಿದ್ದರೆ ಎಲ್ಲ ಸಮಸ್ಯೆ ಪರಿಹಾರ: ಖಂಡ್ರೆ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

1-aane

Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

1-asasa

KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

000

World Tourism Day:ಚಾರಣ- ಇದು ಮಲೆಕುಡಿಯರ ಊರಿನ ನಡುವಿನ ನಿಗೂಢ ಜಲಪಾತ

World Tourism Day 2024: ಮಧ್ಯ ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಾ?

World Tourism Day 2024: ಮಧ್ಯ ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಾ?

1

World Tourism Day 2024: “ಕರ್ನಾಟಕ ಒಂದು ರಾಜ್ಯ…ಇಲ್ಲಿದೆ ವಿಸ್ಮಯದ ಹಲವು ಜಗತ್ತು”

Tour:ವಿಜಯನಗರ ಅರಸರ ಕಾಲದ ಪ್ರಮುಖ ವ್ಯಾಪಾರ ಕೇಂದ್ರ ಈ ಪ್ರಕೃತಿ ಸೌಂದರ್ಯದ ಮಿರ್ಜಾನ್ ಕೋಟೆ!

Tour:ವಿಜಯನಗರ ಅರಸರ ಕಾಲದ ಪ್ರಮುಖ ವ್ಯಾಪಾರ ಕೇಂದ್ರ ಈ ಪ್ರಕೃತಿ ಸೌಂದರ್ಯದ ಮಿರ್ಜಾನ್ ಕೋಟೆ!

World Tourism Day 2024: ಟ್ರಕ್ಕಿಂಗ್ ಪಾಯಿಂಟ್-ನಾ ಕಂಡ ‘ನ’ರಸಿಂಹಗ’ಡ’!

World Tourism Day 2024: ಟ್ರಕ್ಕಿಂಗ್ ಪಾಯಿಂಟ್-ನಾ ಕಂಡ ‘ನ’ರಸಿಂಹಗ’ಡ’!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

0421472757

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

siddaramaiah

Lokayukta ತನಿಖೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲು:ಕುಟುಂಬಕ್ಕೂ ಸಂಕಷ್ಟ!

1-dddd

Forest; ನೆರೆ ರಾಜ್ಯಗಳ ನಡುವೆ ಸಹಕಾರವಿದ್ದರೆ ಎಲ್ಲ ಸಮಸ್ಯೆ ಪರಿಹಾರ: ಖಂಡ್ರೆ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

crime (2)

Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.