Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್ ಭಸ್ಮ
Team Udayavani, Jun 17, 2024, 7:38 PM IST
ಬಂಟ್ವಾಳ: ಫರಂಗಿಪೇಟೆ ಸಮೀಪದ ಕುಮ್ಡೆಲುವಿನಲ್ಲಿ ಸ್ನೇಹಿತರಿಬ್ಬರ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯೋರ್ವ ಅಮಾಯಕ ಯುವಕನೋರ್ವನ ಬೈಕನ್ನು ಸುಟ್ಟು ಭಸ್ಮಗೊಳಿಸಿದ ಘಟನೆ ನಡೆದಿದೆ.
ಕುಮ್ಡೆಲು ನಿವಾಸಿ ನಿತೇಶ್ ಪ್ರಕರಣ ಆರೋಪಿಯಾಗಿದ್ದು, ಆತ ತನಗೆ ದ್ವೇಷವಿರುವ ಕುಮ್ಡೆಲಿನ ಸುಜಿತ್ ಹಾಗೂ ಸುಮಂತ್ ಸಹೋದರರ ಬೈಕೆಂದು ತಿಳಿದು ಅಮ್ಮುಂಜೆ ಪಾಂಡೀಲು ನಿವಾಸಿ ಚಂದ್ರಹಾಸ ಅವರ ಬೈಕನ್ನು ಸುಟ್ಟು ಹಾಕಿದ್ದಾನೆ. ಚಂದ್ರಹಾಸ ಅವರು ಶಬರಿಮಲೆಗೆ ಹೋಗುವ ಹಿನ್ನೆಲೆಯಲ್ಲಿ ಬೈಕನ್ನು ಸ್ನೇಹಿತ ಸುಮಂತ್ ಅವರ ಮನೆಯಲ್ಲಿ ಇಟ್ಟು ಹೋಗಿದ್ದರು.
ಸುಮಂತ್ ಅವರು ತಮ್ಮ ಮನೆಯಲ್ಲೇ ಇದ್ದ ಚಂದ್ರಹಾಸರ ಬೈಕಿನಲ್ಲಿ ಒಂದೆರಡು ಬಾರಿ ಅಗತ್ಯ ಕೆಲಸಗಳಿಗೆ ತೆರಳಿದ್ದರು. ಸುಮಂತ್ ಅವರ ಸಹೋದರ ಸುಜಿತ್ ಹಾಗೂ ಆರೋಪಿ ನಿತೇಶ್ ಸ್ನೇಹಿತರಾಗಿದ್ದು, ಕೆಲ ದಿನಗಳ ಹಿಂದೆ ಗಲಾಟೆ ಮಾಡಿ ದ್ವೇಷ ಕಟ್ಟಿಕೊಂಡಿದ್ದರು.
ಹೀಗೆ ಚಂದ್ರಹಾಸರ ಬೈಕನ್ನು ಸುಜಿತ್ನ ಸಹೋದರನ ಸುಮಂತ್ನ ಬೈಕೆಂದು ಭಾವಿಸಿಕೊಂಡು ಸುಜಿತ್ನ ಮೇಲಿನ ದ್ವೇಷದಿಂದ ಆತನ ಮನೆಯಿಂದ ಕೊಂಚ ದೂರಕ್ಕೆ ದೂಡಿಕೊಂಡು ಹೋಗಿ ಸುಟ್ಟು ಹಾಕಿದ್ದಾನೆ. ಘಟನೆಯ ಕುರಿತು ಸುಮಂತ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.