ಭಾಲ್ಕಿ ಸಾರ್ವಜನಿಕ ಆಸ್ಪ ತ್ರೆಗೆ ವೈಕುಂಠ ರಥ ದೇಣಿಗೆ
Team Udayavani, Apr 29, 2021, 10:38 PM IST
ಭಾಲ್ಕಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ನೇತೃತ್ವದಲ್ಲಿ ಶಾಸಕ ಈಶ್ವರ ಖಂಡ್ರೆಯವರು ದೇಣಿಗೆ ರೂಪದಲ್ಲಿ ನೀಡಿದ ವೈಕುಂಠ ರಥದ ಬೀಗದ ಕೈ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿ ಕಾರಿ ಡಾ| ಅಬ್ದುಲ್ ಖಾದರ್ ಅವರಿಗೆ ನೀಡಲಾಯಿತು.
ಬಳಿಕ ಮಾತನಾಡಿದ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಶಾಸಕ ಈಶ್ವರ ಖಂಡ್ರೆ ಅವರು ಕ್ಷೇತ್ರದ ಜನ ಕಲ್ಯಾಣಕ್ಕಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಆರಂಭವಾದ ಮಹಾಮಾರಿ ಕೊರೊನಾದಿಂದ ಆರ್ಥಿಕವಾಗಿ ತೊಂದರೆಯಲ್ಲಿದ್ದವರಿಗೆ ಆಹಾರ ಕಿಟ್, ಹಣ್ಣು, ತರಕಾರಿ, ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಮಾನವೀಯತೆ ಮೆರೆದರು.
ಈಗಲೂ ಕೋವಿಡ್ಗೆ ಬಲಿಯಾದವರ ಮೃತ ದೇಹ ತೆಗೆದುಕೊಂಡು ಹೋಗಲು ವೈಕುಂಠ ರಥ ಆಸ್ಪತ್ರೆಗೆ ಶಾಶ್ವತವಾಗಿ ಸಮರ್ಪಣ ಮಾಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿಜಯಕುಮಾರ ರಾಜಭವನ, ಮುಖಂಡರಾದ ಪ್ರಕಾಶ ಮಾಶಟ್ಟೆ, ಅಶೋಕ ವಾಲೆ, ತಾಲೂಕು ಆರೋಗ್ಯಾಧಿ ಕಾರಿ ಡಾ| ಜ್ಞಾನೇಶ್ವರ ನಿರಗೂಡೆ, ವೈದ್ಯರಾದ ಡಾ| ವಿಲಾಸ ಕನಸೆ, ಡಾ| ರವಿ ಕಲಶೆಟ್ಟೆ, ಸಿಬ್ಬಂದಿ ಸುನೀಲ, ಸೋಮನಾಥ ತರನಳ್ಳಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.