Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Team Udayavani, Sep 19, 2024, 7:16 AM IST
ಮೇಷ: ಕಾರ್ಯತತ್ಪರರಿಗೆ ಮೇಲಧಿಕಾರಿಗಳ ಮೆಚ್ಚುಗೆ. ಪರಿಚಿತರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ.ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ. ಸಂಸಾರದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಒಟ್ಟಿನಲ್ಲಿ ಎಲ್ಲ ಶುಭಫಲಗಳನ್ನು ಕಾಣಬಹುದು.
ವೃಷಭ: ಎಲ್ಲ ರಂಗಗಳಲ್ಲೂ ಪ್ರಭಾವ ಬೀರುವಿರಿ. ಅಧ್ಯಾಪಕ ವೃತ್ತಿಯವರಿಗೆ ಶ್ರಮದಿಂದ ಉತ್ತಮ ಪ್ರತಿಫಲ. ಹೊಸ ಅವಕಾಶಗಳ ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ಅವಶ್ಯ. ದೇವತಾರಾಧನೆಯಿಂದ ಶುಭಫಲ ನಿರೀಕ್ಷೆ.
ಮಿಥುನ: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ. ಅವಕಾಶಗಳು ತಾವಾಗಿ ಅರಸಿಕೊಂಡು ಬರುವ ಸಾಧ್ಯತೆ. ಹಿರಿಯರಿಗೆ ನೆಮ್ಮದಿ, ಮಕ್ಕಳಿಗೆ ಸಂಭ್ರಮ. ಸತ್ಕಾರ್ಯಕ್ಕೆ ದಾನ ಮಾಡಿ ಸಾರ್ಥಕ ಭಾವ ಹೊಂದುವಿರಿ.
ಕರ್ಕಾಟಕ: ಜವಾಬ್ದಾರಿಗಳನ್ನು ಹಿಂಜರಿ ಯದೆ ಒಪ್ಪಿಕೊಳ್ಳಿ. ನೊಂದವರಿಗೆ ಸಾಂತ್ವನ ಹೇಳಿ ಧನ್ಯರಾಗುವ ಯೋಗ. ಅಪರೂಪದ ನೆಂಟರ ಆಗಮನ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ಸಮಾಧಾನದ ಸನ್ನಿವೇಶ ಒದಗಲಿದೆ.
ಸಿಂಹ: ದ್ರೋಹ ಬಗೆದವರ ಬಗ್ಗೆ ಅನುಕಂಪದ ವರ್ತನೆಯಿಂದ ನೆಮ್ಮದಿ. ಉದ್ಯೋಗ, ವ್ಯವಹಾರದಲ್ಲಿ ತಾತ್ಕಾಲಿಕ ಅಡಚಣೆ. ಪತಿ- ಪತ್ನಿಯರಿಂದ ಪರಸ್ಪರರಿಗೆ ಸಕಾಲಿಕ ಸಹಾಯ. ಎಲ್ಲ ವ್ಯವಹಾರಗಳು ಪಾರದರ್ಶಕವಾಗಿರಲಿ.
ಕನ್ಯಾ: ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ.ವೃತ್ತಿಪರ ಉದ್ಯೋಗಸ್ಥರಿಗೆ ಮೇಲಾಧಿ ಕಾರಿಗಳ ಪ್ರೋತ್ಸಾಹ. ಸಹೋದರಿಗೆ ಸಹಾಯ ಮಾಡುವ ಸಂದರ್ಭ. ಉತ್ತರದ ಕಡೆಯಿಂದ ಶುಭ ಸಮಾಚಾರದ ನಿರೀಕ್ಷೆ.
ತುಲಾ: ವೃತ್ತಿಯಲ್ಲಿ ಸ್ಪರ್ಧಾ ಮನೋಭಾವ ದಿಂದ ಕಿರಿಕಿರಿ. ದೂರದ ಹಿರಿಯ ಬಂಧುವಿನ ಆಗಮನ. ಗೃಹೋದ್ಯಮಗಳಲ್ಲಿ ತೊಡಗಿರುವವರಿಗೆ ಅನುಕೂಲದ ವಾತಾವರಣ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನಗಳಿಗೆ ಸಮಯ ನೀಡಿಕೆ.
ವೃಶ್ಚಿಕ: ಬಂಧುಜನರ ಅನಿರೀಕ್ಷಿತ ಭೇಟಿಯಿಂದ ಹಷ. ಹತ್ತಿರದ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಉದ್ಯೋಗ ರಂಗದಲ್ಲಿ ಹರ್ಷ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಆಯ್ದ ಕಸುಬುಗಳಲ್ಲಿ ಆಸಕ್ತಿ.
ಧನು: ಪರಿಚಿತರಿಂದ ಅಯಾಚಿತ ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಿದ್ಧಿಯಿಂದ ಹರ್ಷಾಚರಣೆ.ಹಿರಿಯರ ಆವಶ್ಯಕತೆಗಳ ಕಡೆಗೆ ಗಮನ ಇರಲಿ.
ಮಕರ: ಮೃದು ಮಾತಿನಿಂದ ಸುಲಭದಲ್ಲಿ ಕಾರ್ಯಸಾಧನೆ. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ.ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತನೆ. ಮನೆಯ ಸದಸ್ಯರ ನಡುವೆ ಸೌಹಾರ್ದದ ವರ್ತನೆ.
ಕುಂಭ: ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು ನೀಡಿದ ಸಮಾಧಾನ. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ.ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ.
ಮೀನ: ನಿರೀಕ್ಷಿತ ನೆರವು ಬರುವುದು ವಿಳಂಬವಾಗಿ ಬೇಸರ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ.ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ಅಡಚಣೆ. ಉದ್ಯೋಗ ಬದಲಾವಣೆಯ ಸಾಧ್ಯತೆ ಇಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.