Puttur: ಸಂಪಾಜೆ ಘಾಟಿ ಪರ್ಯಾಯ ರಸ್ತೆ ಸುಧಾರಿಸಲಿ
ಸುಳ್ಯ-ಆಲೆಟ್ಟಿ-ಬಡ್ಡಡ್ಕ -ಪಾಣತ್ತೂರು-ಕರಿಕೆ ಭಾಗಮಂಡಲ ರಸ್ತೆ ಅಭಿವೃದ್ಧಿ ಅಗತ್ಯ
Team Udayavani, Aug 5, 2024, 2:41 PM IST
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ-ಸಂಪಾಜೆ ನಡುವಿನ ರಸ್ತೆ ಆಗಾಗ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಚಾರ ಕಡಿತಗೊಳ್ಳುತ್ತದೆ. ಮಡಿಕೇರಿ-ಮಂಗಳೂರಿಗೆ ತಲುಪಲು ಪರ್ಯಾಯ ರಸ್ತೆಯಾಗಿಬಳಕೆಯಲ್ಲಿರುವ ಸುಳ್ಯ-ಆಲೆಟ್ಟಿ-ಬಡ್ಡಡ್ಕ -ಪಾಣತ್ತೂರು-ಕರಿಕೆ ಭಾಗಮಂಡಲ ರಸ್ತೆಯೇ ಇರುವ ಏಕೈಕ ದಾರಿ. ಆದರೆ ಈ ಮಳೆಗಾಲದಲ್ಲಂತೂ ರಸ್ತೆ ಅಪಾಯದ ಕರೆಗಂಟೆ ಬಾರಿಸುತ್ತಿದೆ.
ಕರ್ನಾಟಕ-ಕೇರಳದ ವ್ಯಾಪ್ತಿಯಲ್ಲಿಹಾದು ಹೋಗಿರುವ ರಸ್ತೆ ಇದು. ಸುಳ್ಯದ ಮುಂದಕ್ಕೆ ಆಲೆಟ್ಟಿ ,ಬಡ್ಡಡ್ಕ, ಪಾಣತ್ತೂರು, ಕರಿಕೆ ರಸ್ತೆಯ ಅಲ್ಲಲ್ಲಿ ಗುಡ್ಡ ಕುಸಿಯುವ ಸ್ಥಿತಿಯಲ್ಲಿದೆ. ಕೇರಳ ಭಾಗ ದಾಟಿ ಕೊಡಗು ಪ್ರವೇಶಿಸುವ ಹದಗೆಟ್ಟಿದ್ದು ಸಂಚಾರವೇ ಕಷ್ಟಕರ ಅನ್ನುವ ಸ್ಥಿತಿಯಲ್ಲಿದೆ. ಈ ಮಳೆಗಾಲದಲ್ಲಂತೂ ದುರ್ಗಮ ಹಾದಿಯಂತಿರುವ ಈ ರಸ್ತೆಯಲ್ಲಿ ಕೇರಳ, ಸುಳ್ಯ ಭಾಗದಿಂದ ನೂರಾರು ವಾಹನ ಸಂಚರಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಉರುಳುತ್ತಿರುವ ಮರ
ಕಳೆದ ಕೆಲವು ದಿನಗಳಿಂದ ಕರಿಕೆ-ಭಾಗಮಂಡಲದ ನಡುವಿನ ಕಾಡು ಮಧ್ಯೆ ರಸ್ತೆಯಲ್ಲಿ ಮರಗಳು ಅಲ್ಲಲ್ಲಿ ಉರುಳಿ ಬೀಳುತ್ತಿದೆ. ಸಣ್ಣ ಸಣ್ಣ ನೀರಿನ ತೊರೆಯೂ ಉಕ್ಕಿ ಹರಿಯುತ್ತಿದ್ದು ಗುಡ್ಡ ಕುಸಿತದ ಆತಂಕವೂ ಹೆಚ್ಚಾಗಿದೆ. ಹತ್ತಾರು ಮರಗಳು ರಸ್ತೆಯ ಅಂಚಿಗೆ ಬಾಗಿ ನಿಂತಿದೆ.
ಏಕೈಕ ದಾರಿ
ಸುಳ್ಯ-ಮಡಿಕೇರಿ ರಾ.ಹೆ.ಯ ಪರ್ಯಾಯ ರಸ್ತೆ ಇದು. ಸಂಪಾಜೆ -ಮಡಿಕೇರಿ ಮಧ್ಯೆ ರಸ್ತೆ ಮುಚ್ಚಿದಾಗ ಪರ್ಯಾಯ ರಸ್ತೆಯಾಗಿ ಸುಳ್ಯ-ಪಾಣತ್ತೂರು-ಕರಿಕೆ ರಸ್ತೆಯನ್ನು ಬಳಸಿಕೊಳ್ಳಲಾಗಿತ್ತು. ಆರು ವರ್ಷದ ಹಿಂದೆ ನಡೆದ ಜೋಡುಪಾಲ ದುರಂತದ ಸಂದರ್ಭದಲ್ಲಿ ಸುಳ್ಯದಿಂದ ಮಡಿಕೇರಿಗೆ ನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸಿದವು. ಮಡಿಕೇರಿಯಿಂದ ಸುಳ್ಯಕ್ಕೆ ಕೆಎಸ್ಆರ್ಟಿಸಿ ಬಸ್ ಸರ್ವಿಸ್ ಕೂಡ ನಡೆಸಿತ್ತು. ಮಂಗಳೂರು -ಮಡಿಕೇರಿಯನ್ನು ಬೆಸೆದದ್ದು ಇದೇ ರಸ್ತೆ. ಆಗ ರಸ್ತೆ ವಿಸ್ತರಣೆ, ಅಭಿವೃದ್ಧಿಯ ಕೂಗು ಕೇಳಿ ಬಂತಾದರೂ ಅದಿನ್ನೂ ಕೈಗೂಡಿಲ್ಲ. ಸುಳ್ಯದಿಂದ ಕರಿಕೆ ಮೂಲಕ ಮಡಿಕೇರಿಗೆ 90 ಕಿ.ಮೀ. ದೂರವಿದ್ದು ಪರ್ಯಾಯ ರಸ್ತೆಯಾಗಿ ಮಾತ್ರವಲ್ಲದೆ ಭಾಗಮಂಡಲ, ತಲಕಾವೇರಿಗೆ ಈ ರಸ್ತೆಯ ಮೂಲಕ ಜನರು ಸಂಚರಿಸುತ್ತಾರೆ.
ಕನಿಷ್ಠ ಸುರಕ್ಷೆಯೂ ಇಲ್ಲ
ಸುಳ್ಯ-ಆಲೆಟ್ಟಿ-ಪಾಣತ್ತೂರು-ಕರಿಕೆ ಮಾರ್ಗದ ಕಾಡಿನ ರಸ್ತೆಯಂತೂ ಸಂಪೂರ್ಣ ಹಾಳಾಗಿದೆ. ಅಲ್ಲಿ ಕನಿಷ್ಠ ಸುರಕ್ಷೆಯೂ ಇಲ್ಲ. ಮಳೆಗಾಲದಲ್ಲಿ ಸಂಚರಿಸುವುದು ತುಂಬಾ ಅಪಾಯಕಾರಿಯಾಗಿದೆ.
-ಮನೀಷಾ ರೈ , ಕೆಳಗಿನಪೇರಾಲು
ಸಂಪೂರ್ಣ ಹಾಳಾಗಿದೆ
ಕರಿಕೆ-ಭಾಗಮಂಡಲ ನಡುವಿನ ರಸ್ತೆ ದುರಸ್ತಿ ಆಗಿಲ್ಲ. ತೀರಾ ಕಿರಿದಾದ ರಸ್ತೆ ಇದು. ಜತೆಗೆ ಸಂಪೂರ್ಣ ಹಾಳಾಗಿದೆ. ನಮಗೆ ಬೇರೆ ರಸ್ತೆ ಇಲ್ಲ. ದುರಸ್ತಿ ಆಗಬೇಕು ಅನ್ನುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.
-ಮೇಘ ಶ್ಯಾಮ , ಕರಿಕೆ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.