ಮತ್ಸ ಕ್ಷಾಮ: ನಾಡದೋಣಿ ಮೀನುಗಾರಿಕೆಗೆ ಹೊಡೆತ
ಎರಡು ತಿಂಗಳುಗಳಿಂದ ನಾಡದೋಣಿ ಮೀನುಗಾರಿಕೆ ಸ್ಥಗಿತ
Team Udayavani, Mar 31, 2019, 6:30 AM IST
ಗಂಗೊಳ್ಳಿ: ಮತ್ಸಕ್ಷಾಮದಿಂದಾಗಿ ಗಂಗೊಳ್ಳಿ, ಕೋಡಿ, ಮರವಂತೆ, ಕೊಡೇರಿ ಸಹಿತ ಹೆಚ್ಚಿನ ಎಲ್ಲ ಕಡೆಗಳಲ್ಲಿ ಕಳೆದ 2 ತಿಂಗಳಿನಿಂದ ನಾಡದೋಣಿಗಳಿಗೆ ಸರಿಯಾಗಿ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮರವಂತೆ, ಶಿರೂರು, ಗಂಗೊಳ್ಳಿ, ಕೋಡಿ, ಕೊಡೇರಿ ಭಾಗದ ಸುಮಾರು 600 ನಾಡದೋಣಿಗಳಿದ್ದು, ಸಾವಿರಾರು ಮಂದಿ ಮೀನುಗಾರರು ಸಾಂಪ್ರದಾಯಿಕ ಮೀನು ಗಾರಿಕೆಯನ್ನೇ ಆಶ್ರಯಿಸಿದ್ದಾರೆ. ಈಗ ಹಲವು ದಿನ ಗಳಿಂದ ಮೀನುಗಾರಿಕೆಯಿಲ್ಲದೆ ಮೀನುಗಾರರು ಕಂಗಾಲಾಗಿದ್ದಾರೆ.
ನಾಡದೋಣಿಯಲ್ಲಿ 1 ಜೋಡು ಅಂದರೆ (3 ದೋಣಿ) ತಲಾ 10 ಮಂದಿಯಂತೆ 30 ಜನ ಇರುತ್ತಾರೆ. ಒಮ್ಮೆ ಮೀನುಗಾರಿಕೆಗೆ ತೆರಳಿದರೆ ಕನಿಷ್ಠ 15 ಸಾವಿರ ರೂ. ಖರ್ಚಾಗುತ್ತದೆ. ಆದರೆ ಈಗ ಸಿಗುವ ಮೀನು 10 ಸಾವಿರ ರೂ. ಕೂಡ ಆದಾಯ ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು.
ಮುಂಗಾರಿನಲ್ಲೂ ಹೊಡೆತ
ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವ ಜೂನ್ನಿಂದ ಆಗಸ್ಟ್ವರೆಗೆ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಈ ಬಾರಿ ಮುಂಗಾರಿನ ಮೀನುಗಾರಿಕೆಯು ಕೂಡ ನಾಡದೋಣಿಗಳಿಗೆ ಅಷ್ಟೇನೂ ಆಶಾ ದಾಯಕವಾಗಿರಲಿಲ್ಲ. ಮೀನುಗಾರಿಕೆಗೆ ತೆರಳಿದ್ದರೂ ಸಹ ಉತ್ತಮ ಪ್ರಮಾಣದಲ್ಲಿ ಮೀನುಗಳು ಸಿಗದೇ ಹೆಚ್ಚಿನ ಸಂದರ್ಭ ಬರಿಗೈಯಲ್ಲಿ ವಾಪಸು ಬಂದಂತಹ ನಿದರ್ಶನ ಸಹ ಇದೆ.
ಯಾಂತ್ರೀಕೃತ ಮೀನುಗಾರಿಕೆಯೂ ಇಲ್ಲ
ನಾಡದೋಣಿ ಮೀನುಗಾರಿಕೆ ಮಾತ್ರವಲ್ಲ, ಈ ಬಾರಿ ಯಾಂತ್ರೀಕೃತ ಮೀನುಗಾರಿಕೆಗೂ ಹೊಡೆತ ಬಿದ್ದಿದೆ. ಮತ್ಸ ಕ್ಷಾಮದಿಂದಾಗಿ ಬೋಟ್ಗಳಿಗೂ ಉತ್ತಮ ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ. ಇದರಿಂದ ಗಂಗೊಳ್ಳಿ ಸಹಿತ ಎಲ್ಲ ಕಡೆಗಳ ಬಂದರಿನಲ್ಲಿಯೂ ಕೂಡ ಹೆಚ್ಚಿನ ಬೋಟ್ಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲಿಯೇ ಲಂಗರು ಹಾಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.