![ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ನಾಳೆ ಬೆಂಗಳೂರಲ್ಲಿ ಗುತ್ತಿಗೆದಾರ ಸಂಘದ ಮಹತ್ವದ ಸಭೆ](https://www.udayavani.com/wp-content/uploads/2024/12/kalaburagi-415x250.jpg)
ಕೋವಿಡ್ ವಾರಿಯರ್ ಗೆ ಸಕಾಲಕ್ಕೆ ಸಂಬಳ ನೀಡದೆ ಶಿಕ್ಷೆ
ಮನೆ ಬಾಡಿಗೆ, ಇಎಂಐ ಕಟ್ಟಲು ಹಣವಿಲ್ಲದೆ ಪರದಾಟ
Team Udayavani, Oct 6, 2020, 2:56 AM IST
![ಕೋವಿಡ್ ವಾರಿಯರ್ಗೆ ಸಕಾಲಕ್ಕೆ ಸಂಬಳ ನೀಡದೆ ಶಿಕ್ಷೆ](https://www.udayavani.com/wp-content/uploads/2020/10/Covid-6-620x387.jpg)
ಸಾಂದರ್ಭಿಕ ಚಿತ್ರ
ಮಹಾನಗರ: ಒಂದು ದಿನವೂ ರಜೆ ಪಡೆದುಕೊಳ್ಳದೆ, ಆರು ತಿಂಗಳುಗಳಿಂದ ನಿರಂತರ ಕೊರೊನಾ ಸಂಬಂಧಿ ಸೇವೆ ಯಲ್ಲಿದ್ದ ಕೊರೊನಾ ವಾರಿಯರ್ಗಳಿಗೆ ಸರಕಾರ ಸಕಾಲಕ್ಕೆ ಸಂಬಳವನ್ನೇ ನೀಡುತ್ತಿಲ್ಲ. ಇದರಿಂದ ತಿಂಗಳಾರಂಭದಿಂದಲೇ ಮನೆ ಬಾಡಿಗೆ, ಇಎಂಐ ಸಹಿತ ಹಲವು ಆವಶ್ಯಕತೆಗಳಿಗೆ ಹಣವಿಲ್ಲದೆ ಪರದಾಟ ನಡೆಸುವ ಸ್ಥಿತಿ ಬಂದೊದಗಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಸಂಬಂಧಿ ಸೇವೆಗಾಗಿ 6 ತಿಂಗಳುಗಳ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಸಿಬಂದಿ, ಮಂಗಳೂರು ತಾಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬಂದಿ, ಹಿರಿಯ, ಕಿರಿಯ ಆರೋಗ್ಯ ಸಹಾಯಕರು ಸರಿಯಾಗಿ ಸಂಬಳ ಸಿಗದಿರುವುದರಿಂದ ಸಂಕಷ್ಟಕ್ಕೊಳಗಾಗಿದ್ದಾರೆ.
ಕೋವಿಡ್-19 ಸೋಂಕು ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಕಳೆದೈದು ತಿಂಗಳುಗಳ ಹಿಂದೆ ಸೋಂಕಿತರ ಸೇವೆಗಾಗಿ ಗುತ್ತಿಗೆ ಆಧಾರದಲ್ಲಿ ಸಿಬಂದಿ ನೇಮಿಸಿಕೊಳ್ಳಲಾಗಿತ್ತು. ಐದು ತಿಂಗಳುಗಳ ಹಿಂದೆ ಏಳು ಮಂದಿ ಮತ್ತು ಅನಂತರದಲ್ಲಿ 23 ಮಂದಿ ಸೇರಿ ಸದ್ಯ ಒಟ್ಟು 30 ಮಂದಿ ಸಿಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸೇವೆಗೆ ತಕ್ಕಂತೆ ಸಂಬಳ ನೀಡಬೇಕಾದ ಆಸ್ಪತ್ರೆ, ತೀರಾ ತಡವಾಗಿ ನೀಡುವುದರಿಂದ ಸಿಬಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ತಿಂಗಳ ಸಂಬಳವನ್ನೇ ನಂಬಿ ಜೀವನ ಸಾಗಿಸುತ್ತಿರುವ ಹಿರಿಯ, ಕಿರಿಯ ಆರೋಗ್ಯ ಸಹಾಯಕಿಯರಿಗೆ ಕಳೆದ ಏಳು ತಿಂಗಳುಗಳಲ್ಲಿ ಎರಡು ಬಾರಿ ಮಾತ್ರ ಸಂಬಳ ಜಮೆ ಮಾಡಲಾಗಿದೆ. ಈ ಬಾರಿ ವಿಚಾರಿಸಿದಾಗ ಸೆಪ್ಟಂಬರ್ ತಿಂಗಳದ್ದು ಸೇರಿ ಮುಂದಿನ ಮೂರು ತಿಂಗಳುಗಳ ಸಂಬಳ ಸದ್ಯ ಸಿಗುವುದು ಅನುಮಾನ. ಬಜೆಟ್ ಬಿಡುಗಡೆಯಾಗುವುದು ಇನ್ನೂ ತಡವಾಗಲಿದೆ ಎಂಬ ಉತ್ತರ ಬಂದಿದೆ.
ಯಾಕೆ ಈ ಶಿಕ್ಷೆ ?
ಮನೆ ಬಾಡಿಗೆ, ಕರೆಂಟ್ ಬಿಲ್, ಸಾಲ ಮರುಪಾವತಿ, ವಿವಿಧ ಇಎಂಐ ಸಹಿತ ತಿಂಗಳಾರಂಭದಲ್ಲೇ ದುಡ್ಡಿನ ಆವಶ್ಯಕತೆ ಇದ್ದು, ಸಂಬಳ ಸಕಾಲಕ್ಕೆ ನೀಡದೇ ಇರುವುದರಿಂದ ಒತ್ತಡದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾ ಗಿದೆ ಎಂದು ಕೆಲವು ಸಿಬಂದಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಇದ್ದ ಮೂರು ಡಿಎಯನ್ನು ತೆಗೆದು ಹಾಕಲಾಗಿದೆ. 15 ಇಎಲ್ಗಳ ಸಂಬಳವನ್ನೂ ನೀಡಲಾಗುವುದಿಲ್ಲ ಎಂದಿದ್ದಾರೆ. ರಜೆಯನ್ನೂ ತೆಗೆದುಕೊಳ್ಳದೆ ಕೆಲಸ ಮಾಡುವವರಿಗೆ ಈ ಶಿಕ್ಷೆ ಯಾಕೆ ಎಂದು ಪ್ರಶ್ನಿಸುತ್ತಾರೆ ಸಿಬಂದಿ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬಂದಿಗೆ ಎರಡು ತಿಂಗಳುಗಳಿಂದ ಸಂಬಳವೇ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸರಿಯಾದ ಮಾಹಿತಿ ನೀಡುವುದಿಲ್ಲ
ಎಪ್ರಿಲ್, ಮೇ, ಜೂನ್ ತಿಂಗಳ ಸಂಬಳವನ್ನು ಜೂನ್ನಲ್ಲಿ ನೀಡಲಾಗಿದೆ. ಜುಲೈ ತಿಂಗಳ ಸಂಬಳ ಆಗಸ್ಟ್ ಮಧ್ಯಭಾಗದಲ್ಲಿ ನೀಡಲಾಗಿದೆ. ಆಗಸ್ಟ್ ಸಂಬಳವನ್ನು ಸೆಪ್ಟಂಬರ್ ತಿಂಗಳಾಂತ್ಯವಾದರೂ ನೀಡಿಲ್ಲ. ಇನ್ನು ಸೆಪ್ಟಂಬರ್ ಸಂಬಳ ಯಾವಾಗ ಬರುತ್ತದೆ ಎನ್ನುವುದೂ ಗೊತ್ತಿಲ್ಲ ಎನ್ನುತ್ತಾರೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬಂದಿ. ಸಂಬಳ ಬಗ್ಗೆ ಚರ್ಚಿಸಿದರೆ ಮೈಸೂರು ವಿಭಾಗೀಯ ಕಚೇರಿಗೆ ಬರೆದು ಕಳುಹಿಸಿದ ಅನಂತರ ಪ್ರಕ್ರಿಯೆಗಳು ಶುರುವಾಗುತ್ತವೆ. ಅಲ್ಲಿಂದ ಆದೇಶ ಬರಲು ತಡವಾಗುತ್ತದೆ ಎಂಬ ಉತ್ತರವನ್ನು ಆಸ್ಪತ್ರೆ ಸಂಬಂಧಿಸಿದ ಕೆಲವು ಅಧಿಕಾರಿಗಳು ನೀಡುತ್ತಾರೆ. ಅಲ್ಲದೆ ಕೆಲವರು ಸರಿಯಾಗಿ ಮಾಹಿತಿಯನ್ನೇ ನೀಡುವುದಿಲ್ಲ ಎಂಬುದು ಸಿಬಂದಿ ಆಪಾದನೆ.
ಧೃತಿಗೆಡಬಾರದು
ಸರಕಾರಿ ವ್ಯವಸ್ಥೆಯಲ್ಲಿ ಸಂಬಳ ಎಲ್ಲರಿಗೂ ನೀಡಲಾಗುತ್ತದೆ. ಆದರೆ ಕೆಲವೊಂದು ಕಾರಣಗಳಿಂದಾಗಿ ಸ್ವಲ್ಪ ತಡವಾಗುತ್ತದೆ. ಅದಕ್ಕೆ ಯಾರೂ ಧೃತಿಗೆಡಬಾರದು. ಒಂದೆರಡು ತಿಂಗಳು ಮುಂದ ಕ್ಕೆ ಹೋದರೂ ಬಳಿಕ ಎಲ್ಲ ತಿಂಗಳಿನದ್ದು ಒಟ್ಟಿಗೇ ನೀಡಲಾಗುತ್ತದೆ. ದುಡಿತಕ್ಕೆ ಸರಿಯಾಗಿ ಸಂಬಳ ನೀಡದೇ ಇರುವುದಿಲ್ಲ.
-ಡಾ| ರಾಮಚಂದ್ರ ಬಾಯರಿ,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
![ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ನಾಳೆ ಬೆಂಗಳೂರಲ್ಲಿ ಗುತ್ತಿಗೆದಾರ ಸಂಘದ ಮಹತ್ವದ ಸಭೆ](https://www.udayavani.com/wp-content/uploads/2024/12/kalaburagi-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![7](https://www.udayavani.com/wp-content/uploads/2024/12/7-46-150x80.jpg)
ಉಡುಪಿ: ನಿಟ್ಟೂರು ಎಸ್ಟಿಪಿ; ರೋಗಗಳ ಹುಟ್ಟೂರು!
![ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ನಾಳೆ ಬೆಂಗಳೂರಲ್ಲಿ ಗುತ್ತಿಗೆದಾರ ಸಂಘದ ಮಹತ್ವದ ಸಭೆ](https://www.udayavani.com/wp-content/uploads/2024/12/kalaburagi-150x90.jpg)
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ನಾಳೆ ಬೆಂಗಳೂರಲ್ಲಿ ಗುತ್ತಿಗೆದಾರ ಸಂಘದ ಮಹತ್ವದ ಸಭೆ
![6](https://www.udayavani.com/wp-content/uploads/2024/12/6-58-150x80.jpg)
Mangaluru: ನೆಲೆ ಕಳೆದುಕೊಳ್ಳುವ ಆತಂಕದಲ್ಲಿ ಶ್ರೀನಿವಾಸ ಮಲ್ಯರ ಪ್ರತಿಮೆ
![Mumbai-Nagpur ಹೆದ್ದಾರಿಯಲ್ಲಿ ಒಂದೇ ದಿನ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…](https://www.udayavani.com/wp-content/uploads/2024/12/truck-1-150x101.jpg)
Mumbai-Nagpur: ಸಮೃದ್ಧಿ ಹೆದ್ದಾರಿಯಲ್ಲಿ ಏಕಾಏಕಿ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…
![4-bidar](https://www.udayavani.com/wp-content/uploads/2024/12/4-bidar-150x90.jpg)
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![7](https://www.udayavani.com/wp-content/uploads/2024/12/7-46-150x80.jpg)
ಉಡುಪಿ: ನಿಟ್ಟೂರು ಎಸ್ಟಿಪಿ; ರೋಗಗಳ ಹುಟ್ಟೂರು!
![ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ನಾಳೆ ಬೆಂಗಳೂರಲ್ಲಿ ಗುತ್ತಿಗೆದಾರ ಸಂಘದ ಮಹತ್ವದ ಸಭೆ](https://www.udayavani.com/wp-content/uploads/2024/12/kalaburagi-150x90.jpg)
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ನಾಳೆ ಬೆಂಗಳೂರಲ್ಲಿ ಗುತ್ತಿಗೆದಾರ ಸಂಘದ ಮಹತ್ವದ ಸಭೆ
![6](https://www.udayavani.com/wp-content/uploads/2024/12/6-58-150x80.jpg)
Mangaluru: ನೆಲೆ ಕಳೆದುಕೊಳ್ಳುವ ಆತಂಕದಲ್ಲಿ ಶ್ರೀನಿವಾಸ ಮಲ್ಯರ ಪ್ರತಿಮೆ
![Mumbai-Nagpur ಹೆದ್ದಾರಿಯಲ್ಲಿ ಒಂದೇ ದಿನ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…](https://www.udayavani.com/wp-content/uploads/2024/12/truck-1-150x101.jpg)
Mumbai-Nagpur: ಸಮೃದ್ಧಿ ಹೆದ್ದಾರಿಯಲ್ಲಿ ಏಕಾಏಕಿ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…
![4-bidar](https://www.udayavani.com/wp-content/uploads/2024/12/4-bidar-150x90.jpg)
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.