Karnataka ರಾಜ್ಯ ಸರಕಾರಿ ನೌಕರರ ಆಸ್ತಿ ಸಾರ್ವಜನಿಕ ಮಾಹಿತಿಗೆ

ಆಡಳಿತ ಸುಧಾರಣ ಆಯೋಗದಿಂದ ಸರಕಾರಕ್ಕೆ 527 ಶಿಫಾರಸು

Team Udayavani, Mar 2, 2024, 11:29 PM IST

Karnataka ರಾಜ್ಯ ಸರಕಾರಿ ನೌಕರರ ಆಸ್ತಿ ಸಾರ್ವಜನಿಕ ಮಾಹಿತಿಗೆ

ಬೆಂಗಳೂರು: ಸಚಿವಾಲಯ ಮತ್ತು ಪ್ರಮುಖ ಸರಕಾರಿ ಕಚೇರಿಗಳಲ್ಲಿ ಹೆಬ್ಬೆರಳು ಆಧಾರಿತ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಬದಲು ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ ಮಾಡಬಹುದು ಎಂದು ಕರ್ನಾಟಕ ಆಡಳಿತ ಸುಧಾರಣ ಆಯೋಗ-2 ಸರಕಾರಕ್ಕೆ ಶಿಫಾರಸು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತನ್ನ 7ನೇ ವರದಿಯನ್ನು ಸಲ್ಲಿಸಿದ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್‌, ಸಿಬಂದಿ ಮತ್ತು ಆಡಳಿತ ಸುಧಾರಣೆ, ಆರ್ಥಿಕ, ಕಾನೂನು, ಘಿಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಹಿತ 8 ಇಲಾಖೆಗಳಿಗೆ ಸಂಬಂಧಿಸಿದ 527 ಶಿಫಾರಸುಗಳನ್ನು ನೀಡಿದೆ. ಐಎಎಸ್‌ ಅಧಿಕಾರಿಗಳ ಸ್ಥಿರಾಸ್ತಿ ವಿವರಗಳನ್ನು ಕೇಂದ್ರ ಸರಕಾರವು ಸಾರ್ವಜನಿಕವಾಗಿ ಇಟ್ಟಂತೆ ಎ, ಬಿ ಮತ್ತು ಸಿ ಸಮೂಹದ ಸರಕಾರಿ ನೌಕರರು, ಮಂಡಳಿ, ನಿಗಮಗಳ ನೌಕರರ ಆಸ್ತಿ ಹಾಗೂ ಹೊಣೆಗಾರಿಕೆಗಳನ್ನು ಜಾಲತಾಣಗಳಲ್ಲಿ ಇಡಬಹುದು ಎಂದು ಸಲಹೆ ನೀಡಿದೆ.

ಒಂದೇ ಸಚಿವಾಲಯ, ಇಲಾಖೆಯ ಒಂದೇ ವಿಭಾಗದಲ್ಲಿ ಸರಕಾರಿ ನೌಕರರು ದೀರ್ಘ‌ಕಾಲ ಉಳಿಯುವುದರಿಂದ ಸಾಮರ್ಥ್ಯ ವರ್ಧನೆ ಆಗುತ್ತಿಲ್ಲ. ದೀರ್ಘ‌ಕಾಲದ ಉದ್ಯೋಗಿ ಗಳು ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳಬಹುದು. ಹೀಗಾಗಿ ಕನಿಷ್ಠ 1 ವರ್ಷದ ಕೂಲಿಂಗ್‌ ಆಫ್ ಅವಧಿ ಇರಬೇಕು.

ಹೊರಗುತ್ತಿಗೆ ನೌಕರರನ್ನು ಪ್ರತಿ 3-5 ವರ್ಷಗಳ ಸೇವೆ ಬಳಿಕ ಇಲಾಖೆಗಳ ನಡುವೆ ಬದಲಾಯಿಸಲು ಸಲಹೆ ನೀಡಲಾಗಿದೆ. ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರ ಹುದ್ದೆಗಳನ್ನು ರದ್ದುಪಡಿಸಿ ಬಹುನುರಿತ ಕೆಲಸಗಾರರು ಎಂದು ಮರುವಿನ್ಯಾಸ ಮಾಡಬಹುದು.

ಸಕಾಲ ಸೇವೆ ಕೊಡದಿದ್ದರೆ ಪರಿಹಾರ ಹೆಚ್ಚಳ
ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಹಾಗೂ ಎನ್‌ಒಸಿ ನೀಡಲು ಎಂಡ್‌-ಟು-ಎಂಡ್‌ ಆನ್‌ಲೈನ್‌ ವ್ಯವಸ್ಥೆಯನ್ನು ಸಿಇಜಿ ಅಥವಾ ಸೇವಾಸಿಂಧು ಅಭಿವೃದ್ಧಿಪಡಿಸಿ, ಕಾರ್ಯಗತ ಗೊಳಿಸಬಹುದು. ರಾಜ್ಯ ತಂತ್ರಾಂಶ ಕೇಂದ್ರವು ಎಲ್ಲ ಇಲಾಖೆ, ನಿಗಮ, ಮಂಡಳಿಗಳಲ್ಲಿ 6 ತಿಂಗಳಿಗೊಮ್ಮೆ ಸೈಬರ್‌ ಸುರಕ್ಷೆಯ ತಪಾಸಣೆ ಕೈಗೊಳ್ಳಬೇಕು. ಪ್ರತಿಯೊಂದು ಸರಕಾರಿ ಜಾಲತಾಣಕ್ಕೆ ಒಬ್ಬ ತಾಂತ್ರಿಕ ಸಲಹೆಗಾರರನ್ನು ನೇಮಿಸ ಬಹುದು. ಸಕಾಲ ಯೋಜನೆಯಡಿ ನಿಗದಿತ ಸಮಯದಲ್ಲಿ ಸೇವೆ ಒದಗಿಸದಿದ್ದರೆ, 1 ದಿನದ ವಿಳಂಬಕ್ಕೆ 250 ರೂ. ಪರಿಹಾರ ನೀಡುವಂತೆ ತಿದ್ದುಪಡಿ ಮಾಡಬಹುದು ಹಾಗೂ ಗರಿಷ್ಠ 25 ಸಾವಿರ ರೂ. ಪರಿಹಾರಕ್ಕೂ ಶಿಫಾರಸು ಮಾಡಿದೆ.

ಎಲ್ಲಕ್ಕೂ 4ಜಿ ವಿನಾಯಿತಿ ಬೇಡ
ಕೆಟಿಪಿಪಿ ಕಾಯ್ದೆ ಸೆಕ್ಷನ್‌ 4(ಜಿ)ಅಡಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತ ಕೇಂದ್ರ, ಕಿಯೋನಿಕ್ಸ್‌ ಮುಂತಾದ ಸಂಸ್ಥೆಗಳಿಗೆ ವಿನಾಯಿತಿ ನೀಡುತ್ತಿದ್ದು, ಯಾವುದೇ ಒಂದು ಆರ್ಥಿಕ ವರ್ಷದಲ್ಲಿ ರಾಜ್ಯ ಮಟ್ಟದ ಒಂದು ಸಂಸ್ಥೆಗೆ 50 ಅಥವಾ 100 ಕೋ. ರೂ. ಹಾಗೂ ಜಿಲ್ಲಾಮಟ್ಟದ ಸಂಸ್ಥೆಗೆ 25 ಕೋ. ರೂ. ಮೀರಿದ ಕಾಮಗಾರಿಗಳಿಗೆ ವಿನಾಯಿತಿ ನೀಡಬಾರದು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ.ಗಿಂತ ಕಡಿಮೆ ವೆಚ್ಚದ ಕಾಮಗಾರಿಗಳನ್ನು ಗ್ರಾ. ಪಂ. ಅಥವಾ ನಗರ ಸ್ಥಳೀಯ ಸಂಸ್ಥೆಯೇ ಅನುಷ್ಠಾನ ಮಾಡಬಹುದು.

ಪ್ರಮುಖ ಶಿಫಾರಸುಗಳು
– ಮರಳು, ಜೆಲ್ಲಿ, ಮುರ್ರಂ, ಗ್ರಾನೈಟ್‌ ಅನ್ನು ಜಿಎಸ್‌ಟಿ ಜಿಎಸ್‌ಟಿ ಕಾಯ್ದೆಯ ಸೆಕ್ಷನ್‌ 9(3) ಮತ್ತು 9 (4)ಅಡಿಯಲ್ಲಿ ಮಾರಾಟಗಾರರ ಬದಲು ಖರೀದಿದಾರರಿಂದ ತೆರಿಗೆ ಪಡೆಯುವ ರಿವರ್ಸ್‌ ಚಾರ್ಜ್‌ ಕಾರ್ಯವಿಧಾನದಡಿ ಅಧಿಸೂಚನೆ ಹೊರಡಿಸಬಹುದು.
– ನಿರ್ಮಾಣ ಕ್ಷೇತ್ರದಲ್ಲಿ ತೆರಿಗೆ ವಂಚಿಸಿದವರಿಗೆ ವಂಚಿಸಿದ ತೆರಿಗೆಯ ಐದು ಪಟ್ಟು ದಂಡ ವಿಧಿಸಬಹುದು.
– ಜಿಎಸ್‌ಟಿ ಇಲಾಖೆಯಂತೆ ರಾಜ್ಯದಲ್ಲೂ ತೆರಿಗೆ ವಂಚಕರನ್ನು ಹಿಡಿದು, ಕನಿಷ್ಠ 3 ಕೋ. ರೂ.ವರೆಗೆ ತೆರಿಗೆ, ದಂಡ, ಬಡ್ಡಿ ವಸೂಲಿ ಮಾಡುವ ಅಧಿಕಾರಿಗಳಿಗೆ ಬಹುಮಾನ ನೀಡಬಹುದು.
– ಅಕ್ರಮ ಮದ್ಯ ಮಾರಾಟ, ದಾಸ್ತಾನು, ಸಾಗಣೆ, ಕಲಬೆರಕೆದಾರರು, ಮಾದಕವಸ್ತು ಅಪರಾಧಿಗಳು, ಜೂಜುಕೋರರು, ಗೂಂಡಾಗಳು, ಅನೈತಿಕ ಸಂಚಾರ ಅಪರಾಧಿ, ಕೊಳೆಗೇರಿ ಕಬಳಿಕೆದಾರರು, ಕಳ್ಳಸಾಗಾಣಿಕೆದಾರರಿಗೆ ಪ್ರಸ್ತುತ ವಿಧಿಸುತ್ತಿರುವ ದಂಡದ ಪ್ರಮಾಣವನ್ನು ಪರಿಷ್ಕರಿಸಲೂ ಅಬಕಾರಿ ಇಲಾಖೆಗೆ ಶಿಫಾರಸು ಮಾಡಿದೆ.
– ಅನುದಾನಿತ ಶಿಕ್ಷಕರು, ವಿಶ್ವವಿದ್ಯಾನಿಲಯ, ನಿಗಮ, ಮಂಡಳಿ ಇತ್ಯಾದಿಗಳ ನೌಕರರಿಗೆ ಕುಟುಂಬ ಕಲ್ಯಾಣ ನಿಧಿಯ ವಂತಿಗೆ ದರವನ್ನು ಕನಿಷ್ಠ ಸಂಬಳದ ಶೇಕಡಾವಾರು ಹೆಚ್ಚಿಸಬೇಕು. ಮಾಸಿಕ ಕೊಡುಗೆಯನ್ನು 1,000 ರೂ.ಗೆ ಹೆಚ್ಚಿಸಬಹುದು. ಮರಣ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಬಹುದು.
– ಜನನ, ಮರಣ ಪ್ರಮಾಣಪತ್ರಕ್ಕಾಗಿ 1 ವರ್ಷದ ಬಳಿಕ ನೋಂದಣಿ ವಿಳಂಬವಾದರೆ ಆಸ್ಪತ್ರೆ ಅಧಿಕಾರಿಗಳೇ ಜವಾಬ್ದಾರಿ ವಹಿಸಿಕೊಂಡು ಇದಕ್ಕೆ ವಿಧಿಸುವ ದಂಡದ ಮೊತ್ತವನ್ನೂ ಹೆಚ್ಚಳ ಮಾಡಬಹುದು.

ಟಾಪ್ ನ್ಯೂಸ್

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.