Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

ಕ್ಯಾಚ್ ಬಿಟ್ಟಿದ್ದರೆ ಸೂರ್ಯನನ್ನು ತಂಡದಿಂದ ಹೊರ ಹಾಕುತ್ತಿದ್ದೆ ಎಂದ ರೋಹಿತ್.. ನಗುವಿನ ಅಲೆ

Team Udayavani, Jul 5, 2024, 7:54 PM IST

1-asdsdasdas

ಮುಂಬಯಿ: ಟಿ 20 ವಿಶ್ವಕಪ್ ವಿಜೇತ ತಂಡದ ರಾಜ್ಯದ ನಾಲ್ವರು ಆಟಗಾರರಾದ ಕಪ್ತಾನ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಶುಕ್ರವಾರ ಮಾಹಾರಾಷ್ಟ್ರ ವಿಧಾನ ಭವನದಲ್ಲಿ ಅಭಿನಂದಿಸಲಾಯಿತು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮ್ಯಾಚ್ ಡಿಫೈನಿಂಗ್ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಅವರು ಮಾತನಾಡಲು ಎದ್ದು ನಿಂತಾಗ ಸಚಿವರು, ಶಾಸಕರು ಸೇರಿದಂತೆ ಸೆಂಟ್ರಲ್ ಹಾಲ್‌ನಲ್ಲಿದ್ದವರು ಕ್ಯಾಚ್‌ ಕುರಿತು ಮಾತನಾಡಬೇಕು ಎಂದು ಕೂಗಿದರು.

“ಕ್ಯಾಚ್ ಬಸ್ಲಾ ಹತಾತ್ (ಕ್ಯಾಚ್ ನನ್ನ ಕೈಗೆ ಬಂದು ಕೂತಿತು)” ಎಂದು ಸೂರ್ಯಕುಮಾರ್ ಮರಾಠಿಯಲ್ಲಿ ಹೇಳಿದರು, ಎಲ್ಲರೂ ಜೋರಾಗಿ ಹರ್ಷೋದ್ಗಾರ ಮಾಡಿದರು. ನಂತರ ಅವರು ಕ್ಯಾಚ್ ಅನ್ನು ಹೇಗೆ ತೆಗೆದುಕೊಂಡರು ಎಂದು ತಮ್ಮ ಕೈಗಳಿಂದ ಸನ್ನೆ ಮಾಡುತ್ತಾ ಮರು ಸೃಷ್ಟಿ ಮಾಡಿ ಭರ್ಜರಿ ಮನರಂಜನೆ ನೀಡಿದರು.

ಸೂರ್ಯಕುಮಾರ್ ನಂತರ ಮಾತನಾಡಿದ ತಂಡದ ನಾಯಕ ರೋಹಿತ್ ಶರ್ಮ, “ಬಾಲ್ ತನ್ನ ಕೈಯಲ್ಲಿ “ಕುಳಿತಿದೆ” ಎಂದು ಸೂರ್ಯ ಈಗ ಹೇಳಿದ್ದಾರೆ. ಚೆಂಡು ಅವರ ಕೈಯಲ್ಲಿ ಕುಳಿತಿರುವುದು ಒಳ್ಳೆಯದಾಯಿತು ಇಲ್ಲದಿದ್ದರೆ ನಾನು ಅವರನ್ನು ‘ತಂಡದಿಂದ ಹೊರಗೆ ಕೂರಿಸುತ್ತಿದ್ದೆ’ ಎಂದು ಹೇಳಿದಾಗ ಸಂಪೂರ್ಣ ಸದನ ನಗೆಗಡಲಲ್ಲಿ ತೇಲಿತು.

ರೋಹಿತ್ ತಮ್ಮ ಮರಾಠಿ ಭಾಷಣದಲ್ಲಿ, “ಭಾರತದಲ್ಲಿ ವಿಶ್ವಕಪ್ ಅನ್ನು ಮರಳಿ ತರುವುದು ಕನಸಾಗಿತ್ತು. ಇದಕ್ಕಾಗಿ ನಾವು 11 ವರ್ಷದಿಂದ ಕಾಯುತ್ತಿದ್ದೆವು. 2013ರಲ್ಲಿ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೆವು. ನನ್ನ ಸಹ ಆಟಗಾರರಾದ ಶಿವಂ ದುಬೆ, ಸೂರ್ಯ ಮತ್ತು ಯಶಸ್ವಿ ಜೈಸ್ವಾಲ್ ಮಾತ್ರವಲ್ಲದೆ ಭಾರತದ ಯಶಸ್ಸಿಗೆ ಕೊಡುಗೆ ನೀಡಿದ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂತಹ ತಂಡ ಸಿಕ್ಕಿದ್ದು ನನ್ನ ಅದೃಷ್ಟ. ಎಲ್ಲರೂ ತಮ್ಮ ಪ್ರಯತ್ನದಲ್ಲಿ ಗಟ್ಟಿಯಾಗಿದ್ದರು. ಅವಕಾಶ ಬಂದಾಗ ಎಲ್ಲರೂ ಹೆಜ್ಜೆ ಹಾಕಿದರು ಎಂದರು.

ಶುಕ್ರವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಅಧಿಕೃತ ನಿವಾಸ ವರ್ಷಾದಲ್ಲಿ ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸನ್ಮಾನಿಸಿದರು.

ಟಾಪ್ ನ್ಯೂಸ್

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್

Militants opened fire on an army vehicle at Kathua

Kathua; ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

1-qewqewqe

Udupi; ನೆರೆ ನೀರಲ್ಲಿ ಕೊಚ್ಚಿಹೋದ ಕಾರು: ಮೂವರು ಪ್ರಾಣಾಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Why did he ignore the BCCI instruction to play Ranji? Ishaan replied

IshanKishan; ರಣಜಿ ಆಡಬೇಕೆಂಬ ಬಿಸಿಸಿಐ ಸೂಚನೆ ನಿರ್ಲಕ್ಷ್ಯ ಮಾಡಿದ್ದೇಕೆ? ಉತ್ತರಿಸಿದ ಇಶಾನ್

Team India: How much money is given to whom by BCCI in ₹125 crore?

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

1-paris

Paris Olympics; ಅಲ್ಡ್ರಿನ್‌, ಅಂಕಿತಾ ಧ್ಯಾನಿಗೆ ಒಲಿಂಪಿಕ್ಸ್‌ ಟಿಕೆಟ್‌

1-eweweqw

Wrestling; ವಿನೇಶ್‌ ಫೋಗಾಟ್‌ ಗೆ ಸ್ವರ್ಣ ಪದಕ

1-a-chinna

Asian ಪೆಸಿಫಿಕ್‌ ಬೆಂಚ್‌ ಪ್ರಸ್‌ ಚಾಂಪಿಯನ್‌ಶಿಪ್‌: ವಿಜಯ ಕಾಂಚನ್‌ಗೆ 2 ಚಿನ್ನ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-weewq

Hindus ಹೇಳಿಕೆ ;ರಾಹುಲ್ ಹೇಳಿಕೆಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.