Congress ವಕ್ತಾರರಂತೆ ಎಸ್‌ಪಿ ಹೇಳಿಕೆ : ಹರೀಶ್‌ ಪೂಂಜ


Team Udayavani, Jun 3, 2024, 11:55 PM IST

Congress ವಕ್ತಾರರಂತೆ ಎಸ್‌ಪಿ ಹೇಳಿಕೆ : ಹರೀಶ್‌ ಪೂಂಜ

ಮಂಗಳೂರು: ಇತ್ತೀಚೆಗೆ ಪೊಲೀಸರು ನನ್ನ ಬಂಧನಕ್ಕೆ ಆಗಮಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾ ಎಸ್‌ಪಿ ರಿಷ್ಯಂತ್‌ ಸಿ.ಬಿ. ಕಾಂಗ್ರೆಸ್‌ ವಕ್ತಾರರಂತೆ ಹೇಳಿಕೆ ನೀಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಆರೋಪಿಸಿದ್ದಾರೆ.

ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿಯವರು ಕಾಂಗ್ರೆಸ್ಸಿಗರು ಮತ್ತು ಮುಖ್ಯಮಂತ್ರಿಯವರನ್ನು ಮೆಚ್ಚಿಸಲು ಸತ್ಯವನ್ನು ತಿರುಚಿ ಹೇಳಿಕೆ ನೀಡಿದ್ದಾರೆ. ಬಂಧಿಸಲು 3 ವಾಹನಗಳಲ್ಲಿ 15ಕ್ಕೂ ಅಧಿಕ ಪೊಲೀಸರು ಬಂದಿದ್ದರೂ ಎಸ್‌ಪಿ ಕೇವಲ ಮೂವರು ಬಂದಿದ್ದರು ಎಂದಿದ್ದಾರೆ. ಎಷ್ಟು ಪೊಲೀಸರು ಬಂದಿದ್ದರು ಎಂಬುದಕ್ಕೆ ಸಿಸಿ ಕೆಮರಾ ದಾಖಲೆಗಳಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮನೆಯಲ್ಲಿ ಜನ ಸೇರಿಸಿದ್ದಕ್ಕೆ ಹೆಚ್ಚು ಪೊಲೀಸರನ್ನು ನಿಯೋಜಿಸಲಾಯಿತು ಎಂದು ಎಸ್‌ಪಿ ಹೇಳಿದ್ದಾರೆ. ನನ್ನ ಮನೆಯಲ್ಲಿ ಸಂಸದರು., ಜಿ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು, ಇತರ ಸಾರ್ವಜನಿಕರಿದ್ದರು. ಎಲ್ಲ ಜನಪ್ರತಿನಿಧಿಗಳ ಮನೆಗಳಲ್ಲಿಯೂ ಜನ ಸೇರುತ್ತಾರೆ. ಹಾಗಾದರೆ ಎಲ್ಲರ ಮನೆಗೂ ಇದೇ ರೀತಿ ಪೊಲೀಸರನ್ನು ನಿಯೋಜಿಸಲಾಗುತ್ತದೆಯೇ? ಯಾವುದೇ ನೋಟಿಸ್‌ ನೀಡದೆ ಬಂಧಿಸಲು ಬಂದ ಪೊಲೀಸರು ರಾತ್ರಿ ಯವರೆಗೂ ದೌರ್ಜನ್ಯ ನಡೆಸಿದ್ದರು. ಎಸ್‌ಪಿ ನಡೆ ಅಕ್ಷಮ್ಯ ಎಂದರು.

ದೇಶದ ಎಲ್ಲಿಯೂ ಪೊಲೀಸ್‌ ಠಾಣೆಯ ಎದುರು ಜನತೆ ಪ್ರತಿಭ ಟನೆ ನಡೆಸಿಲ್ಲವೆ? ಪ್ರತಿಭಟನೆ ಪ್ರಜಾಪ್ರ ಭುತ್ವದಲ್ಲಿ ಸಾರ್ವಜನಿಕರ ಹಕ್ಕು. ಅಮಾಯಕ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದಾಗ ಪ್ರತಿಭಟಿಸಿ ದ್ದೇವೆ. ಕಾನೂನು ಬಾಹಿರ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಹೇಳಿದರು.

ಯುವಮೋರ್ಚಾದ ಅಧ್ಯಕ್ಷ ಶಶಿರಾಜ್‌ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ಆರು ತಿಂಗಳ ಹಿಂದೆ ಒಂದು ಸುಳ್ಳು ಕೇಸು ಹಾಕಿ ಅವರ ವಿರುದ್ಧ ರೌಡಿಶೀಟ್‌ ತೆರೆಯಲಾಗಿತ್ತು. ನಾವು ಕಾನೂನಿನ ಮೇಲೆ ಗೌರವ ಇಟ್ಟಿರುವಂತೆ ದೈವ ದೇವರ ಮೇಲೂ ನಂಬಿಕೆ ಇಟ್ಟಿದ್ದೇವೆ. ಶಶಿರಾಜ್‌ ಬಿಡು ಗಡೆಯಾದ ಮೇಲೆ ದೇವಸ್ಥಾ ನದಲ್ಲೇ ಪ್ರಮಾಣ ಮಾಡಿಸುತ್ತೇನೆ. ಅವರನ್ನು ರಾಜಕೀಯ ಷಡ್ಯಂತ್ರದಿಂದ ಬಂಧಿಸ ಲಾಗಿದೆ. ಕಾಂಗ್ರೆಸ್‌ ದ್ವೇಷದ ರಾಜಕಾ ರಣ ಮಾಡುತ್ತಿದ್ದು, ತನ್ನ ವಿರುದ್ಧದ ಎರಡೂ ಪ್ರಕರಣಕ್ಕೂ ಮೊದಲ ಬಾರಿಗೆ ಎಂಬಂತೆ ಮೂರೇ ದಿನಗಳಲ್ಲಿ ಚಾರ್ಜ್‌ ಶೀಟ್‌ ಹಾಕಲಾಗಿದೆ ಎಂದರು.

ನ್ಯಾಯವಾದಿ ಕೆ. ಶಂಭು ಶರ್ಮ ಮಾತನಾಡಿ, ಪೊಲೀಸರು ಯಾವುದೇ ನೋಟಿಸ್‌ ನೀಡಿಲ್ಲ. ಸಂಜೆಯವರೆಗೂ ಠಾಣೆಗೆ ಬರಲು ಒತ್ತಾಯಿಸುತ್ತಿದ್ದರು. ಶಾಸಕರಿಗೆ ದಿಗ್ಬಂಧನ ಹಾಕಿದ್ದರು. ಎಸ್‌ಪಿ ಜತೆ ಪೋನ್‌ನಲ್ಲಿ ಮಾತನಾಡುವಾಗಲೂ ಏರಿದ ಸ್ವರದಲ್ಲೇ ಮಾತನಾಡಿದರು. ಅನಂತರ ಠಾಣೆಗೆ ಬರುವಂತೆ ಮನವಿ ಮಾಡಿದರು. ಅದರಂತೆ ಠಾಣೆಗೆ ಹೋಗಿ ಹೇಳಿಕೆ ನೀಡಿ ಬಂದಿದ್ದಾರೆ. ಬಂಧಿಸಿ ಜಾಮೀನಿನಲ್ಲಿ ಬಿಟ್ಟದ್ದು ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಈ ಪ್ರಕರಣ ದಲ್ಲಿ ಠಾಣೆಯಲ್ಲಿ ಜಾಮೀನು ನೀಡಲು ಬಾರದು. ಪೊಲೀಸರು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದರು.

ಶಾಸಕರಾದ ಡಾ| ಭರತ್‌ ಶೆಟ್ಟಿ ವೈ., ವೇದವ್ಯಾಸ ಕಾಮತ್‌, ಭಾಗೀ ರಥಿ ಮುರುಳ್ಯ, ಪ್ರತಾಪ ಸಿಂಹ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಕ್ಯಾ| ಬ್ರಿಜೇಶ್‌ ಚೌಟ ಉಪಸ್ಥಿತರಿದ್ದರು.

ದ್ವೇಷದ ರಾಜಕಾರಣ: ನಳಿನ್‌ ಕುಮಾರ್‌
ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದೆ. ಪೂಂಜಾ ಅವರ ಮೇಲೆ ಕೇಸ್‌ ಹಾಕಿದಾಗ ಅವರ ಮನೆಗೆ ಹೋಗಿದ್ದೆವು. ಆಗ ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರೂ ಶಾಂತಿ ಯುತವಾಗಿತ್ತು. ಶಾಸಕರು ಹೇಳಿಕೆ ಕೊಡುವಂತೆ ಪೊಲೀಸರು ಕೇಳಿದರು. ಅದನ್ನು ಅಲ್ಲಿಯೇ ತೆಗೆದುಕೊಳ್ಳುವಂತೆ ಹೇಳಿದೆವು. ಆದರೆ ಠಾಣೆಗೆ ಬರಬೇಕು ಎಂದರು. ಅನಂತರ ಠಾಣೆಗೆ ಹೋಗಿ ಹೇಳಿಕೆ ನೀಡಲಾಗಿದೆ. ಶಾಸಕರನ್ನು ಬಂಧಿಸಿದ್ದಲ್ಲ, ಕಾನೂನಿಗೆ ಗೌರವ ಕೊಟ್ಟು ಹೇಳಿಕೆ ಕೊಟ್ಟು ಬಂದಿದ್ದಾರೆ. ಒಬ್ಬೊಬ್ಬರೇ ಶಾಸಕರನ್ನು ಗುರಿಯಾಗಿಸಿ ದ್ವೇಷ ಸಾಧಿಸುವುದು ಕಾಂಗ್ರೆಸ್‌ನ ತಂತ್ರಗಾರಿಕೆ. ಅದನ್ನು ಈಗ ಪೂಂಜಾ ಅವರ ಮುಖಾಂತರ ಆರಂಭಿಸಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಟಾಪ್ ನ್ಯೂಸ್

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

rain 3

Red Alert; ನಾಳೆ ದಕ್ಷಿಣ ಕನ್ನಡದ ಶಾಲೆಗಳಿಗೆ, ಪಿಯು ಕಾಲೇಜುಗಳಿಗೆ ರಜೆ

ಜನರ ಸುರಕ್ಷಗೆ ಮೊದಲ ಆದ್ಯತೆ ನೀಡಿ: ಮೆಸ್ಕಾಂ ಎಂ.ಡಿ. ಪದ್ಮಾವತಿ

ಜನರ ಸುರಕ್ಷಗೆ ಮೊದಲ ಆದ್ಯತೆ ನೀಡಿ: ಮೆಸ್ಕಾಂ ಎಂ.ಡಿ. ಪದ್ಮಾವತಿ

ವೈದ್ಯಕೀಯ ಶಿಕಣ ಪಡೆದವರೇ ಡ್ರಗ್ಸ್‌ ಗೆ ಬಲಿ: ಸಿವಿಲ್‌ ನ್ಯಾಯಾಧೀಶೆ ಶೋಭಾ

ವೈದ್ಯಕೀಯ ಶಿಕಣ ಪಡೆದವರೇ ಡ್ರಗ್ಸ್‌ ಗೆ ಬಲಿ: ಸಿವಿಲ್‌ ನ್ಯಾಯಾಧೀಶೆ ಶೋಭಾ

Mangaluru: ರಿಕ್ಷಾ ತೊಳೆಯುತ್ತಿದ್ದವರ ಮೇಲೆ ಬಿದ್ದ ವಿದ್ಯುತ್ ತಂತಿ… ಇಬ್ಬರು ಮೃತ್ಯು

Mangaluru: ವಿದ್ಯುತ್ ತಂತಿ ತಗುಲಿ ಇಬ್ಬರು ರಿಕ್ಷಾ ಚಾಲಕರ ದುರಂತ ಅಂತ್ಯ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

9

Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

priyanka gandhi (2)

Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ

1-wtr

Moving ರೈಲಿಗೆ ನೀರು ಚಿಮ್ಮಿಸಿದ ಯುವಕರಿಗೆ ಪ್ರಯಾಣಿಕರಿಂದ ಗೂಸಾ!

1-wwewwewewe

BJP ಹಿರಿಯ ನಾಯಕ ಆಡ್ವಾಣಿ ಆರೋಗ್ಯದಲ್ಲಿ ಚೇತರಿಕೆ: ಡಿಸ್ಚಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.