ಶ್ರಮದ ಫ‌ಲ ಎಂದಿಗೂ ಸಿಹಿಯೇ!


Team Udayavani, Mar 9, 2020, 5:59 AM IST

ಶ್ರಮದ ಫ‌ಲ ಎಂದಿಗೂ ಸಿಹಿಯೇ!

ತಾಳ್ಮೆ,ಪರಿಶ್ರಮ ಇವು ಜೀವನದ ಯಶಸ್ಸಿನ ಕೀಲಿ ಕೈಗಳು. ನಮ್ಮಲ್ಲಿನ ಆತ್ಮಪ್ರಜ್ಞೆಯಿಂದಾಗಿ ನಮ್ಮೊಲ್ಲೊಂದು ಹೊಸ ಚಿಂತನೆ ಮೂಡುತ್ತದೆ. ಹೀಗಾಗಿ ಜೀವನವೂ ನವೋಲ್ಲಾಸದಿಂದ ಇರಲು ಸಾಧ್ಯ. ಜೀವನದ ಯಶಸ್ಸಿನ ಕೆಲವು ಸೂತ್ರಗಳನ್ನು ಲೇಖನದಲ್ಲಿ ತಿಳಿಸಲಾಗಿದೆ 

ತಾವು ತುಂಬ ದೊಡ್ಡವರು, ಮಹತ್ಸಾಧನೆ ಮಾಡಿದವರೆಂದು ಭಾವಿಸುವವರು ಸಮುದ್ರದ ಕಿನಾರೆಯಲ್ಲಿ ಹೋಗಿ ಸ್ವಲ್ಪ ಕಾಲ ಕಳೆಯಿರಿ. ಅಲೆಗಳ ಹೊಡೆತಕ್ಕೆ ನಮ್ಮ ಅಹಂಕಾರವೆಲ್ಲ ಕೊಚ್ಚಿ ಹೋಗದಿದ್ದರೆ ಕೇಳಿ. ಎಲ್ಲವನ್ನೂ ತನ್ನೊಡಲೊಳಗೆ ತುಂಬಿಕೊಳ್ಳುವ ಸಮುದ್ರದ ವಿಸ್ತಾರ, ಗಾಂಭೀರ್ಯ, ಭೋರ್ಗರೆತ ಹಾಗೂ ಅದೇ ಮಟ್ಟಿನ ಶಾಂತ ಸ್ಥಿತಿ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಈ ಸೃಷ್ಟಿಯ ಮುಂದೆ ನಾವೆಷ್ಟು ಚಿಕ್ಕವರು ಎಂದು ಮನವರಿಕೆ ಆಗುತ್ತದೆ.

ಒಂದು ದೊಡ್ಡ ಮರ, ತಲೆ ಎತ್ತಿ ನಿಂತಿರುವ ಹಿಮಪರ್ವತ – ಎಲ್ಲವೂ ನಮಗೆ ನಿತ್ಯ ಪಾಠಗಳೇ. ನೋಡುವ ಕಣ್ಣು, ಕೇಳುವ ಕಿವಿ, ಅರಿಯುವ ಮನಸ್ಸಿದ್ದರೆ ಸಾಕು. ಕಳೆದ ವರ್ಷ ಮಹಾ ಮಳೆಯಿಂದಾಗಿ ಕರ್ನಾಟಕ ಎರಡೆರಡು ಬಾರಿ ಜಲಪ್ರಳಯವನ್ನು ಕಂಡಿತು! ಹಲವು ರಸ್ತೆ, ಸೇತುವೆಗಳು ಮುಳುಗಿ ಹತ್ತಾರು ಊರುಗಳು ದ್ವೀಪದಂತಾದವು. ಧಾರವಾಡದಿಂದ ಸವದತ್ತಿಗೆ ಹೋಗುವ ಹೆದ್ದಾರಿಯಲ್ಲಿ ಹೊಸ ಸೇತುವೆಯೇ ಕೊಚ್ಚಿ ಹೋಗಿದೆ. ಪ್ರವಾಹ ತನ್ನ ರುದ್ರ ರೂಪವನ್ನು ತೋರಿ, ನಮ್ಮ ಅಭಿವೃದ್ಧಿ ಕಾಮಗಾರಿಗಳ ಲೋಪಗಳನ್ನೆಲ್ಲ ಎತ್ತಿ ತೋರಿಸಿದೆ. ಕರಾವಳಿಯಂತೂ ಘಟ್ಟದ ಮೇಲಿನ ಎಲ್ಲ ಪ್ರದೇಶಗಳ ಸಂಪರ್ಕ ಕಡಿದುಕೊಂಡಿತ್ತು. ಚಾರ್ಮಾಡಿ ಘಾಟಿಯಲ್ಲಿ ಕೊಟ್ಟಿಗೆಹಾರದ ತನಕವೂ ಹಲವು ಕಡೆಗಳಲ್ಲಿ ರಸ್ತೆಯ ಕುರುಹೂ ಇಲ್ಲದಂತಾಗಿ ಇಂದಿಗೂ ದೊಡ್ಡ ವಾಹನಗಳ ಸಂಚಾರ ಅಸಾಧ್ಯವೇ ಆಗಿದೆ. ಲಘು ವಾಹನಗಳ ಸಂಚಾರಕ್ಕಾದರೂ ವ್ಯವಸ್ಥೆ ಮಾಡಿಕೊಳ್ಳಲು ನಾಲ್ಕೈದು ತಿಂಗಳುಗಳೇ ಬೇಕಾದವು. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೋಗುವ ದಾರಿ, ಕಳಸದಿಂದ ಕುದುರೆಮುಖ ರಸ್ತೆಯ ಹಲವು ಕಡೆಗಳಲ್ಲಿ ಗುಡ್ಡಗಳೇ ಕುಸಿದು ತಿಂಗಳ ಕಾಲ ಜನಜೀವನವೇ ಅಸ್ತವ್ಯಸ್ತವಾಗಿತ್ತು. ಶಿರಾಡಿ ಘಾಟಿಯಲ್ಲಿ ಕಳೆದ ಮಳೆಗಾಲದಷ್ಟು ತೊಂದರೆ ಈ ಬಾರಿ ಆಗಲಿಲ್ಲ ಎನ್ನುವುದೊಂದೇ ಸಮಾಧಾನ.

ಪ್ರಕೃತಿಗೆ ಪೂರಕವಾಗಿರಲಿ
ಅಭಿವೃದ್ಧಿಯ ಹೆಸರಿನಲ್ಲಿ ನಾವು ಎಷ್ಟು ದೊಡ್ಡ ರಸ್ತೆ, ಕಟ್ಟಡ, ಅಣೆಕಟ್ಟು, ಕಾರ್ಖಾನೆ ಇತ್ಯಾದಿಗಳನ್ನು ಕಟ್ಟುತ್ತೇವೋ ಅಷ್ಟು ದೊಡ್ಡ ಆಪತ್ತನ್ನೂ ತಂದುಕೊಳ್ಳುತ್ತೇವೆ ಎನ್ನುವುದು ಸತ್ಯ. ಅಭಿವೃದ್ಧಿ ಎನ್ನುವುದು ಪ್ರಕೃತಿಗೆ ಪೂರಕವಾಗಿರಬೇಕು. ಪ್ರಕೃತಿಗೆ ವಿರುದ್ಧವಾದ ಯಾವ ಅಭಿವೃದ್ಧಿಯೂ ಗಂಡಾಂತರಕಾರಿಯೇ ಆಗುತ್ತದೆ ಎನ್ನುವುದು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ.

ಪ್ರಕೃತಿಯ 84 ಲಕ್ಷ ಜೀವರಾಶಿಗಳಲ್ಲಿ ನಾವೂ ಒಂದು ಅಷ್ಟೇ. ಇಲ್ಲಿ ಬದುಕಲು ನಮಗಿರುವಷ್ಟೇ ಹಕ್ಕು ಇತರ ಜೀವಿಗಳಿಗೂ ಇದೆ. ಆದರೆ, ನಮ್ಮ ಆಕ್ರಮಣ ಶೀಲತೆಯಿಂದಾಗಿ ಕಾಡು ನಶಿಸುತ್ತಿದೆ, ನದಿ-ಕೆರೆಗಳು ಇಲ್ಲವಾಗುತ್ತಿವೆ. ಪ್ರಾಣಿಗಳು ನೀರು ಆಹಾರವನ್ನರಸಿ ನಾಡಿಗೆ ಬರುತ್ತಿವೆ. ಅವುಗಳ ಮನೆಯನ್ನು ನಾವು ಖಾಲಿ ಮಾಡಿದರೆ ಅವು ಮತ್ತೆಲ್ಲಿಗೆ ಹೋಗಬೇಕು? ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿತರಷ್ಟೇ ನಮಗೆ ಉಳಿಗಾಲ.

ಪ್ರಕೃತಿಗೆ ಅದರದ್ದೇ ಆದ ರೀತಿ- ರಿವಾಜುಗಳಿವೆ. ನಮ್ಮ ಕರುಣೆಯೂ ಒಮ್ಮೊಮ್ಮೆ ವಿಪತ್ತುಕಾರಕವೇ ಆಗುತ್ತದೆ ಎನ್ನುವುದನ್ನು ಸಾರುವ ಕಥೆಯೊಂದಿಗೆ.

ಚಿಟ್ಟೆಯ ವ್ಯಥೆ
ಚಿಟ್ಟೆಯೊಂದು ತನ್ನ ಕೋಶದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಚಿಕ್ಕ ರಂಧ್ರವೊಂದರಿಂದ ಹುಳು ರೂಪದ ಚಿಟ್ಟೆ ಹೊರಗೆ ಬರಲು ತಾಸುಗಟ್ಟಲೆ ತೆಗೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಅದು ಪ್ರಯತ್ನವನ್ನೇ ನಿಲ್ಲಿಸಿತೇನೋ ಎನ್ನುವಂತೆ ಪೂರ್ತಿಯಾಗಿ ಸ್ತಬ್ಧವಾಯಿತು. ಈ ಪ್ರಕ್ರಿಯೆಯನ್ನು ಗಮನಿಸುತ್ತ ಕುಳಿತಿದ್ದ ಯುವಕನಿಗೆ ಕರುಣೆ ಉಕ್ಕಿ ಬಂತು. ಪಾಪ, ಆ ಚಿಟ್ಟೆ ತುಂಬ ಕಷ್ಟಪಡುತ್ತಿದೆ. ಸ್ವಲ್ಪ ಸಹಾಯ. ಮಾಡೋಣ ಎಂದು ಹೇಳಿ, ಚಿಟ್ಟೆಯ ಕೋಶದ ರಂಧ್ರವನ್ನು ಕತ್ತರಿಯಿಂದ ಸ್ವಲ್ಪ ಬಿಡಿಸಿದ. ಚಿಟ್ಟೆಯೇನೋ ಸುಲಭವಾಗಿ ಹೊರಗೆ ಬಂತು. ಆದರೆ, ಅದರ ರೆಕ್ಕೆಗಳು ಬಲಿಷ್ಠವಾಗಿ ಬೆಳೆದಿರಲಿಲ್ಲ. ದೊಡ್ಡ ದೇಹವನ್ನು ಹೊತ್ತುಕೊಂಡು ಹಾರಲು ಅದಕ್ಕೆ ಕೊನೆಗೂ ಸಾಧ್ಯವಾಗಲಿಲ್ಲ.

ಆದರೆ, ಅದೇ ಚಿಟ್ಟೆ ಸ್ವಾಭಾವಿಕವಾಗಿ ಕೋಶದಿಂದ ಹೊರಗೆ ಬಂದಿದ್ದರೆ ಅದರ ರೆಕ್ಕೆಗಳು ಶಕ್ತಿ ಪಡೆದುಕೊಳ್ಳುತ್ತಿದ್ದವು. ಕೋಶದಿಂದ ಹೊರಬರುವ ಪ್ರಕ್ರಿಯೆಯಲ್ಲೇ ಈ ರಹಸ್ಯ ಅಡಗಿದೆ. ಹಾರಲಾರದ ಸ್ಥಿತಿಯಲ್ಲಿ ಚಿಟ್ಟೆ ಜೀವನ ಕಳೆಯಬೇಕಾಯಿತು.

ಸವಾಲನ್ನು ಎದುರಿಸುವ ಶಕ್ತಿ
ಕಷ್ಟಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ, ಬದುಕಿಗೆ ಸಜ್ಜಾಗಿಸುತ್ತವೆ. ಕಷ್ಟ ಪಡದೆ ಸಿಗುವ ಸುಖವೂ ಸಿಗುವುದಿಲ್ಲ, ಯಶಸ್ಸೂ ನಮ್ಮದಾಗುವುದಿಲ್ಲ. ಅಡ್ಡ ದಾರಿಯಲ್ಲಿ ಪಡೆದ ಯಶಸ್ಸು, ಗಳಿಸಿದ ಹಣ ಶಾಶ್ವತವೇ? ಅದಕ್ಕೊಂದು ಕೀರ್ತಿಯೇ?

ಸವಾಲುಗಳನ್ನು ಎದುರಿಸಿಯೇ ನಾವು ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು, ಸಾಧನೆ ಮಾಡಬೇಕು. ಉಳಿ ಪೆಟ್ಟು ತಿಂದ ಶಿಲೆ ಶಿಲ್ಪವಾಗುತ್ತದೆ, ಕುಂಬಾರನಿಂದ ತುಳಿಸಿಕೊಂಡ ಮಣ್ಣು ಮಡಕೆಯಾಗುತ್ತದೆ, ಕುಲುಮೆಯಲ್ಲಿ ಕಾದ ಕಬ್ಬಿಣ ಬೇಕಾದ ರೂಪ ಪಡೆಯುತ್ತದೆ.

ಕೆಲವು ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಗಳು ನಡೆಯುತ್ತಿವೆ, ಇನ್ನುಳಿದವರಿಗೆ ಕೆಲವೇ ದಿನಗಳಲ್ಲಿ ಆರಂಭವಾಗಲಿವೆ. ವರ್ಷವಿಡೀ ಕಷ್ಟಪಟ್ಟು ಓದಿದರೆ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರೆ ಮಾತ್ರ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಸಾಧ್ಯ. ಶ್ರಮದ ಫ‌ಲ ಯಾವಾಗಲೂ ಸಿಹಿಯಾಗಿಯೇ ಇರುತ್ತದೆ. ಅಂತಹ ಸಿಹಿಯ ಅನುಭವ ನಿಮಗಾಗಲಿ.

 -ಅನಂತ ಹುದೆಂಗಜೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.