Heritage Village: ಗತವೈಭವ ಸಾರುವ ಹೆರಿಟೇಜ್‌ ವಿಲೇಜ್‌


Team Udayavani, Jun 24, 2024, 11:09 AM IST

3-Heritage-Village-3

ಶ್ರೀಗಂಧದ ನಾಡಾದ ಕರ್ನಾಟಕವು ಸಂಸ್ಕೃತಿ, ಕಲೆಗಳ ಬೀಡು. ಶ್ರೀಮಂತ ಪರಂಪರೆಯುಳ್ಳ ನಮ್ಮ ನಾಡು ವಿವಿಧ ಸಾಹಿತ್ಯ, ಕಲೆ, ಸಂಸ್ಕೃತಿ, ಭಾಷೆ ಮತ್ತು ಜೀವನ ಶೈಲಿಯನ್ನು ಒಳಗೊಂಡಿದೆ. ಈ ಎಲ್ಲ ವಿವಿಧತೆಯನ್ನು ಒಂದೇ ಜಾಗದಲ್ಲಿ ಅದೂ ಮಣಿಪಾಲದಲ್ಲಿ ನೋಡಲು ಸಾಧ್ಯವಿದೆ. ಹೌದು ಶಿಕ್ಷಣ ಸಂಸ್ಥೆಯಿಂದಲೇ ಜಗತ್ತಪ್ರಸಿದ್ಧಿಯಾಗಿರುವ ಮಣಿಪಾಲದಲ್ಲಿರುವ ಹಸ್ತ ಶಿಲ್ಪ ಹೆರಿಟೇಜ್‌ ವಿಲೇಜ್‌ ಸಂಗ್ರಹಾಲಯದಲ್ಲಿ ವಿವಿಧ ರೀತಿಯ ವಾಸ್ತುಶಿಲ್ಪದ ಪರಂಪರೆಯನ್ನು ನೋಡಬಹುದು.

ಈ ಸಂಗ್ರಹಾಲಯವು ಆರು ಎಕ್ರೆ ಜಾಗದಲ್ಲಿ ಹರಡಿಕೊಂಡಿದ್ದು, ಹಲವಾರು ಶತಮಾನ ಹಿಂದಿನ ಕಾಲದ ಪುನರ್‌ನಿರ್ಮಿತ ಮನೆಗಳು ಮತ್ತು ದೇವಾಲಯಗಳನ್ನು ಇಲ್ಲಿ ನೋಡಬಹುದು. ಈ ಸಂಗ್ರಹಾಲಯವು ಉಡುಪಿಯವರಾದ  ದಿ| ವಿಜಯನಾಥ ಶೆಣೈ ಅವರ ಪ್ರೀತಿಯ ಕೊಡುಗೆಯಾಗಿದೆ. ಇವರ 20 ವರ್ಷಗಳ ಪರಿಶ್ರಮದ ಫ‌ಲವಾಗಿದೆ ಇದು ನಿರ್ಮಾಣಗೊಂಡಿದೆ. ಈ ಸಂಗ್ರಹಾಲಯದಲ್ಲಿ ಹಲವಾರು ಸಾಂಪ್ರದಾಯಿಕ ಮನೆ, ಐತಿಹಾಸಿಕ ಕಟ್ಟಡಗಳು ಮತ್ತು ಗುಡಿಗಳನ್ನು ಇರಸಲಾಗಿದ್ದು, ಕಲೆ, ಕರಕುಶಲ ವಸ್ತುಗಳು, ಜವುಳಿ, ಪಾತ್ರೆಗಳು, ಉಪಕರಣಗಳು, ಪೀಠೊಪಕರಣಗಳು ಮತ್ತು ಆಟಿಕೆಗಳ ಆನೇಕ ಗ್ಯಾಲರಿಗಳನ್ನು ಹೊಂದಿದೆ. ಶೆಣೈ ಅವರು ಭವಿಷ್ಯದ ಪೀಳಿಗೆಗಾಗಿ ಅಳಿವಿನಂಚಿನಲ್ಲಿರುವ ಅನೇಕ ಶಾಸ್ತ್ರೀಯ ಮತ್ತು ಜಾನಪದ ಸಂಪ್ರದಾಯಗಳನ್ನು ಇಲ್ಲಿ ಕಾಪಾಡುವ ಕೆಲಸವನ್ನು ಮಾಡಿದ್ದಾರೆ.

ಈ ವಸ್ತು ಸಂಗ್ರಹಾಲಯಕ್ಕೆ ನಾನು ನನ್ನ ಸ್ನೇಹಿತೆ ಅಂಕಿತಾ ಜತೆ ಹೋಗಿ, 4 ಗಂಟೆಗೂ ಹೆಚ್ಚು ಕಾಲ ಮ್ಯೂಸಿಯಂನ ನೋಟವನ್ನು ಸವಿದೆವು. ಇಲ್ಲಿರುವ ಒಂದೊಂದು ವಸ್ತು ಕೂಡ ಕಥೆಗಳನ್ನು ಹೊಂದಿದೆ, ಒಂದು ಮನೆಗಿಂತ ಇನ್ನೊಂದು ಮನೆ ಅದ್ಭುತವಾಗಿದೆ. ಈ ಮನೆಗಳನ್ನು ಒಮ್ಮೆ ಪ್ರವೇಶಿಸಿದರೆ ಹೊರ ಬರಲು ಮನಸ್ಸಾಗದು.

ದಕ್ಷಿಣ ಕನ್ನಡದ ವಿಶಿಷ್ಟವಾದ ಕೃಷಿಕ ಬ್ರಾಹ್ಮಣನ ಮಿಯಾರು ಮನೆಯನ್ನು ಪ್ರವೇಶ ದ್ವಾರದ ರೀತಿ ಬಳಸಿದ್ದಾರೆ. ಅನಂತರ ಮಲೆನಾಡು ಅರ್ಚಕರ ಮನೆಯಾದ ಶೃಂಗೇರಿ ಮನೆ, ಈಗ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಮರಾಠ ವಂಶದವರ ಮುಧೋಳ ಅರಮನೆ, ಮರಾಠ ವಾಸ್ತು ಶಿಲ್ಪ ಕಲೆಯನ್ನು ಸಾರುವ ಪೆಶ್ವವಾಡ, ಬಜಾರ್‌ ಸ್ಟ್ರೀಟ್, ಕುಕನೂರಿನ ಕಮಲ್‌ ಮಹಲ್‌, ನವಾಬರ ಕುಟುಂಬಕ್ಕೆ ಸೇರಿದ ಡೆಕ್ಕನಿ ನವಾಬ್‌ ಮಹಲ್‌, ಮಂಗಳೂರಿನ ಕ್ರಿಶ್ಚಿಯನ್‌ ಹೌಸ್‌, ಮ್ಯೂಸಿಯಂ ಆಫ್ ಟ್ರೆçಬಲ್‌ ಆರ್ಟ್ಸ್

ನಲ್ಲಿ ಬೃಹತ್‌ ಮರದ ಮುಖವಾಡಗಳು, ಧೋಕ್ರ ಲೋಹದ   ವಿಗ್ರಹಗಳನ್ನು ನೋಡಬಹುದಾಗಿದೆ. ನಂದಿಕೇಶ್ವರ ಗುಡಿ, ವಿಷ್ಣು ಮಂದಿರ, ವೀರ ಶೈವ ಜಂಗಮ ಮಠ, ರಾಮಚಂದ್ರಪುರ ಮಠ, ವಿದ್ಯಾ ಮಂದಿರ, ಕುಂಜೂರು ಚೌಕಿ ಮನೆ, ಭಟ್ಕಳ ನವಯತ್‌ ಮುಸ್ಲಿಂ ಮನೆ, ಗತಕಾಲದ ಮಾರುಕಟ್ಟೆಗಳು, ಬೀದಿಗಳು, ಅಂಗಡಿ ಮುಂಗಟ್ಟುಗಳು, ಸಂಪ್ರದಾಯಿಕ ಮತ್ತು ಸಂಸ್ಕೃತಿಕ ಕಲಾಕೃತಿಗಳು, ಹರಿಹರ ಮಂದಿರ ಹೀಗೆ ಸುಮಾರು 24 ಬಗೆಯ ಮನೆ, ಮಂದಿರ ಮತ್ತು ಐತಿಹಾಸಿಕ ಕಟ್ಟಡವನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಅಳಿಯುತ್ತಿರುವ ನಮ್ಮ ಪರಂಪರೆಯನ್ನು ರಕ್ಷಿಸಿ ಮುಂದಿನ ಪೀಳಿಗೆಗ ತಲುಪಿಸುವಲ್ಲಿ ಈ ಸಂಗ್ರಹಾಲಯ ಕಾರ್ಯ ನಿರತವಾಗಿದೆ ಎಂದರೆ ತಪ್ಪಾಗದು. ಬಿಡುವು ಮಾಡಿಕೊಂಡು ನೀವೂ ಒಮ್ಮೆ ಭೇಟಿ ನೀಡಿ ನಮ್ಮ ಸಂಸ್ಕೃತಿ, ಕಲೆಯ ಬಗ್ಗೆ ತಿಳಿದುಕೊಳ್ಳಿ.

-ಕೆ.ಎಂ. ಪವಿತ್ರಾ

ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

BJP-flag

Congress ಸರ್ಕಾರದಿಂದ ರಾಜ್ಯ ಬರ್ಬಾದ್‌ ; ಬಿಜೆಪಿ ಟೀಕೆ

ಸಿ.ಟಿ ರವಿ

Chikkamagaluru; ರಾಹುಲ್ ಗಾಂಧಿ ತನ್ನ ಅಯೋಗ್ಯತನ ಪ್ರದರ್ಶಿಸಿದ್ದಾರೆ: ಸಿ.ಟಿ ರವಿ

laxmi-hebbalkar

Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ

Vijayapura; ರಾಜ್ಯದ ಅಭಿವೃದ್ಧಿ ಆಗಬೇಕಾದರೆ ನಾನು ಸಿಎಂ ಆಗಬೇಕು: ಯುವಕನ ವಿಡಿಯೋ ವೈರಲ್

Vijayapura; ರಾಜ್ಯದ ಅಭಿವೃದ್ಧಿ ಆಗಬೇಕಾದರೆ ನಾನು ಸಿಎಂ ಆಗಬೇಕು: ಯುವಕನ ವಿಡಿಯೋ ವೈರಲ್

Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 27 ಮಂದಿ ದುರ್ಮರಣ

Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 50 ಮಂದಿ ದುರ್ಮರಣ

Miracle: ಈ ಊರಿನ ಮನೆ, ಅಂಗಡಿ, ಕಚೇರಿಗಳಿಗೆ ಬಾಗಿಲೇ ಇಲ್ವಂತೆ… ಶನಿಯೇ ಇದರ ರಕ್ಷಕನಂತೆ

Miracle: ಈ ಊರಿನ ಮನೆ, ಅಂಗಡಿ, ಕಚೇರಿಗಳಿಗೆ ಬಾಗಿಲೇ ಇಲ್ವಂತೆ… ಶನಿಯೇ ಇದರ ರಕ್ಷಕನಂತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

ಹೊಸ ಸೇರ್ಪಡೆ

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

BJP-flag

Congress ಸರ್ಕಾರದಿಂದ ರಾಜ್ಯ ಬರ್ಬಾದ್‌ ; ಬಿಜೆಪಿ ಟೀಕೆ

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

ಸಿ.ಟಿ ರವಿ

Chikkamagaluru; ರಾಹುಲ್ ಗಾಂಧಿ ತನ್ನ ಅಯೋಗ್ಯತನ ಪ್ರದರ್ಶಿಸಿದ್ದಾರೆ: ಸಿ.ಟಿ ರವಿ

laxmi-hebbalkar

Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.