ಬದುಕು ಬಯಕೆಗಳ ಬಯಲು ರಂಗಮಂದಿರ


Team Udayavani, Jun 27, 2020, 9:30 AM IST

ಬದುಕು ಬಯಕೆಗಳ ಬಯಲು ರಂಗಮಂದಿರ

ನಾನು ಹೈಸ್ಕೂಲ್‌ಗೆ ಹೋಗುವಾಗ ಪ್ರತಿನಿತ್ಯ ಮನೆಯಿಂದ ಒಂದು ಕಿ.ಮೀ . ದೂರದ ಬಸ್‌ ನಿಲ್ದಾಣದ ತನಕ ನಡೆದುಕೊಂಡು ಹೋಗಿ ಅನಂತರ ಅಲ್ಲಿ ಸಿಗುವ ಎಕ್ಸ್‌ಪ್ರೆಸ್‌ ಬಸ್‌ಗೆ ಕೈ ಚಾಚಿ, ಕಂಡಕ್ಟರ್‌ ಕೈಗೆ ಎರಡು ರೂ. ಇತ್ತವನು ಟಿಕೆಟ್‌ನ್ನು ಅಪೇಕ್ಷಿಸದೆ ಬಾಗಿಲಲ್ಲಿ ಜೋತುಬಿದ್ದಿದ್ದೆ. ಶಾಲೆಯನ್ನು ತಲುಪುವ ತವಕದಲ್ಲಿದ್ದ ನನಗೆ ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಸಂಭ್ರಮ ಕೂಡ.  ಅಂದೇ ಮೊಟ್ಟಮೊದಲ ಬಾರಿಗೆ ನನಗೆ ಬಸ್‌ನಲ್ಲಿ ಕೆಲಸಕ್ಕೆ ಸೇರಬೇಕೆಂಬ ಬಯಕೆ ಹುಟ್ಟಿತ್ತು. ಅದಕ್ಕೂ ಮೊದಲಿನ ಬಯಕೆಗಳೆಲ್ಲ ಇದರ ಮುಂದೆ ಕ್ಷುಲ್ಲಕವೆನಿಸುವಷ್ಟು ಅಗಾಧ ಸೆಳೆತವನ್ನು ಹುಟ್ಟುಹಾಕಿತ್ತು ಆ ಕೆಲಸ. ಬಸ್‌ನಲ್ಲಿದ್ದಷ್ಟು ಹೊತ್ತು ಕ್ಲೀನರ್‌- ಕಂಡಕ್ಟರ್‌- ಡ್ರೈವರ್‌ಗಳ ಹಾವ-ಭಾವಗಳನ್ನು ನೋಡುವುದರಲ್ಲಿ ತಲ್ಲೀನನಾಗುತ್ತಿದ್ದೆ. ಬರುಬರುತ್ತಾ ಬಸ್‌ನ ಸೆಳೆತವನ್ನು ಮೀರಿಸುವಂತೆ ಕಾಡಿದ್ದು ಸುದ್ದಿವಾಹಿನಿಗಳು.

ಆ ಕಾಲದಲ್ಲಿ ಸುದ್ದಿವಾಹಿನಿಗಳು ಹೇಳುವುದೆಲ್ಲವನ್ನೂ ನಂಬಲಾಗುತ್ತಿತ್ತು. ಮತ್ತು ಸಮಾಜದ ಅನ್ಯಾಯಗಳನ್ನೆಲ್ಲ ಒಧ್ದೋಡಿಸಲೆಂದೇ ಸುದ್ದಿವಾಹಿನಿಗಳು ಮತ್ತು ಅದರಲ್ಲಿ ಕಾರ್ಯನಿರ್ವಹಿಸುವ ನಿರೂಪಕರು ಅವತರಿಸಿದರೆಂದು ಭಾವಿಸಲಾಗಿತ್ತು. ಆದ್ದರಿಂದ ನನಗೆ ಹೈಸ್ಕೂಲು ಮುಗಿಸುವ ವೇಳೆಗಾಗಲೇ ಸುದ್ದಿವಾಹಿನಿಗಳೆಡೆಗೆ ಅತೀವ ಸೆಳೆತ ಉಂಟಾಗಿ ನಾನು ಪತ್ರಕರ್ತನಾಗಲೇಬೇಕೆಂದು ನಿರ್ಧರಿಸಿಬಿಟ್ಟಿದ್ದೆ. ಆದರೆ ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿದ ಘಟನೆಗಳು ಸಂಭವಿಸುತ್ತವೆ. ಅಂತೆಯೇ ಎಸೆ ಸೆಲ್ಸಿ ಫಲಿತಾಂಶ ಬರಲು ಕೆಲವೇ ದಿನಗಳು ಬಾಕಿಯಿರುವಾಗ ನಮ್ಮ ಮನೆಗೆ ಭೇಟಿಯಿತ್ತ ವೈದ್ಯರೊಬ್ಬರು ನಾನು ಪಶುವೈದ್ಯನಾಗಲು ಅರ್ಹ ಮತ್ತು ಆ ಕ್ಷೇತ್ರಕ್ಕೆ ಬಹುಬೇಡಿಕೆ ಇದೆಯೆಂದು ಹೊಸ ಆಸೆಯೊಂದನ್ನು ಬಿತ್ತಿ ಹೋದರು. ಅಲ್ಲಿಯ ತನಕ ನಾಯಿ, ಬೆಕ್ಕು, ದನ, ಕರುಗಳನ್ನು ಮುದ್ದಾಡುವುದರಲ್ಲಿ ಖುಷಿ ಕಾಣುತ್ತಿದ್ದ ನಾನು ಪಶುವೈದ್ಯನಾಗುವ ಮೂಲಕ ಅವುಗಳ ಸೇವೆಯನ್ನೂ ಮಾಡಿ ಸಾರ್ಥಕ್ಯ ಕಾಣಬೇಕೆಂದು ಬಯಸಿ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಪಾಠ ಪ್ರವಚನ ಶುರುವಾದ ಕೆಲವೇ ದಿನಗಳಲ್ಲಿ ವಿಜ್ಞಾನ ವಿಷಯದ ಆಳ, ಅಗಲ ನನ್ನನ್ನು ದಿಗ್ಭ್ರಾಂತನನ್ನಾಗಿಸಿತ್ತು. ಅಲ್ಲಿಗೆ ಪಶುವೈದ್ಯನಾಗುವ ಆಸೆಯೂ ಮಂಕಾಯಿತು. ಪತ್ರಕರ್ತನಾಗಬೇಕೆಂಬ ನನ್ನ ಆಸೆ ಮತ್ತೆ ಚಿಗುರೊಡೆದು ಡಿಗ್ರಿಯಲ್ಲಿ ಪತ್ರಿಕೋದ್ಯಮದ ಹಾದಿ ಹಿಡಿಯಲು ಕಾರಣವಾಯಿತು.

ಈಗ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇನ್ನೇನು ಕೆಲಸ ಹಿಡಿಯಬೇಕೆಂಬ ಹೊತ್ತಿನಲ್ಲಿ ಇಷ್ಟು ವರ್ಷಗಳ ಆಸೆಗೆ ಅಡ್ಡಗಾಲು ಎಂಬಂತೆ ಕೋವಿಡ್ ಎದುರಾಗಿ ಕೂತಿದೆ. ಇಷ್ಟು ವರ್ಷಗಳ ಕಾಲ ಓದು, ಶಾಲಾಕಾಲೇಜು ಎಂಬ ನೆಪದಲ್ಲಿ ಊರಿನಿಂದ ದೂರವಿದ್ದ ನಾನು ಮೂರು ತಿಂಗಳುಗಳಿಂದ ಸತತವಾಗಿ ಮನೆಯಲ್ಲಿರುವುದರಿಂದ ವಾತಾವರಣ ನಿಧಾನಕ್ಕೆ ನನ್ನನ್ನು ಮತ್ತೆ ಊರಿನವನನ್ನಾಗಿಸಿಕೊಳ್ಳುತ್ತಿದೆ ಎಂಬ ಭಾವ ಕಾಡಲಾರಂಭಿಸಿದೆ. ಇದೇ ಪರಿಸ್ಥಿತಿ ಇನ್ನೊಂದೆರೆಡು ತಿಂಗಳು ಮುಂದುವರಿದರೆ ಮತ್ತೆ ನನ್ನ ಬಯಕೆ ಬದಲಾಗಲಿದೆಯೇ? ಕೃಷಿ, ಊರ ಹಸುರು, ನೆಮ್ಮದಿ, ಖುಷಿ ನನ್ನನ್ನು ಇಲ್ಲೇ ಇರುವಂತೆ ಪ್ರೇರೇಪಿಸಲಿದೆಯೇ? ನನಗಂತೂ ತಿಳಿಯದು. ಬದುಕು ಬಯಕೆಗಳ ಬಯಲು ರಂಗಮಂದಿರ ವಿದ್ದಂತೆ. ಇಲ್ಲಿ ಎಲ್ಲವುಗಳಿಗೂ ಮುಕ್ತ ಅವಕಾಶ. ನೀವೇನಂತೀರಿ?


ಸ್ಕಂದ ಆಗುಂಬೆ , ಎಸ್ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.