ಮೊಬೈಲ್‌ ಎಂಬ ಸಂಗಾತಿ ಇಲ್ಲದ ಆ ಒಂದು ವಾರ!

ಕೋವಿಡ್ ಕಾಲದ ಊರಿನ ಕಥೆಯಿದು..!

Team Udayavani, Jun 27, 2020, 1:00 PM IST

ಮೊಬೈಲ್‌ ಎಂಬ ಸಂಗಾತಿ ಇಲ್ಲದ ಆ ಒಂದು ವಾರ!

ಸಾಂದರ್ಭಿಕ ಚಿತ್ರ

ನಾನಿರೋದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ. ಪೇರೆಂಟ್‌ ಕಂಪೆನಿಯಿಂದ ಕ್ಲೈಂಟ್‌ ಆಫೀಸ್‌ಗೆ ಕೆಲಸ ಮಾಡುತ್ತಿರುವುದು. ಮನೆಯಿಂದ ಆಫೀಸ್‌ ದೂರ, ಹೀಗಾಗಿ ಆಫೀಸ್‌ ಬಸ್‌ ಒದಗಿಸಿಕೊಟ್ಟಿರುವುದರಿಂದ ಆರಾಮವಾಗಿ ಹೋಗಿ ಬರುತ್ತೇನೆ. ಹುಟ್ಟಿ ಬೆಳೆದ ಊರಿಗೂ ಬೆಂಗಳೂರಿಗೂ ಅಜಗಜಾಂತರ ವ್ಯತ್ಯಾಸ. ಇಲ್ಲಿಯ ಚಾಲಕರು ಮಾತಾಡೋದು ಕೂಡ ಬೈತಿದ್ದಾರೆ ಅಂತಾನೆ ಅನಿಸುತ್ತಿತ್ತು. ಹಾಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವುದರಿಂದ ಸ್ವಲ್ಪ ದೂರವೇ ಇದ್ದೆ.

ಆದರೆ ಅದೊಂದು ದಿನ ಬಸ್‌ನಲ್ಲಿ ಹೋಗಬೇಕಾಗಿ ಬಂತು. ಯಾವುದೋ ತರಬೇತಿ ಸಲುವಾಗಿ ಪೇರೆಂಟ್‌ ಕಂಪೆನಿಗೆ ಹೊರಟೆ. ಬೆಳಗ್ಗೆ ಸಲೀಸಾಗಿ ತಲುಪಿ, ಮಾಡಬೇಕಿದ್ದ ಕೆಲಸಗಳನ್ನೆಲ್ಲ ಚೆನ್ನಾಗಿ ಮುಗಿಸಿ ವಾಪಸ್‌ ಹೊರಟೆ. ಜನರಿಂದ ತುಂಬಿದ್ದ ಹಲವು ಬಸ್‌ಗಳನ್ನು ಬಿಟ್ಟು, ಜನರಿಲ್ಲದೇ ಭಣಗುಟ್ಟುತ್ತಿದ್ದ ಬಸ್‌ ಹತ್ತಿದೆ. ಆಗಾಗ ಮೊಬೈಲ್‌ ನೋಡಿ ಮೆಸೇಜುಗಳನ್ನು ಪರೀಕ್ಷಿಸಿ, ಬ್ಯಾಗ್‌ ಒಳಗೆ ಇಡುತ್ತಿದ್ದೆ. ಅವಳೊಬ್ಬಳು ನನ್ನನ್ನು ಗಮನಿಸುತ್ತಿದ್ದಳು, ನನಗದು ಅರಿವಾಗಲೇ ಇಲ್ಲ!

ಸರಿ. ಇನ್ನೇನು ನನ್ನ ಸ್ಟಾಪ್‌ ಬಂತು ಇಳಿಯಬೇಕೆಂದು ಮುಂದೆ ಬಂದು ನಿಂತೆ, ಅವಳು ನನ್ನ ಹಿಂದೆ ಸ್ವಲ್ಪ ದೂರಕ್ಕೆ ನಿಂತಳು. ಹಂಪ್‌ ಬಂತೆಂದು ಬಸ್‌ ಡ್ರೈವರ್‌ ಬ್ರೇಕ್‌ ಒತ್ತಲೂ, ತನ್ನ ಕೆಲಸ ಚಕಚಕಾಂತ ಮುಗಿಸಿಬಿಡೋಣವೆಂದು ಅವಳು. ನನ್ನ ಚೀಲಕ್ಕೆ ಏನೋ ಭಾರದ್ದು ಬಿತ್ತೆಂದು ಸುಮ್ಮನೆ ತಿರುಗಿ ನೋಡಿದೆ, ಅವಳು ನನ್ನೆಡೆಗೆ ಅಮಾಯಕಳಂತೆ ನೋಡಿದಳು. ಗಮ್ಯ ತಲುಪಿದಾಗ ಇಳಿದೆ, ಅವಳು ಇಳಿದು ಇನ್ನೊಂದೆಡೆ ಸಾಗಿದಳು. ಐಡಿ ಕಾರ್ಡ್‌ ತೆಗೆಯಬೇಕೆಂದು ಹೊರಟವಳಿಗೆ ಸಣ್ಣಕೆ ಹೃದಯಾಘಾತವಾಗುವಂತಹ ಕ್ಷಣ! ಲ್ಯಾಪ್‌ ಟಾಪ್‌ ಬ್ಯಾಗ್‌ ಝಿಪ್‌ ಸ್ವಲ್ಪ ತೆರೆದಿತ್ತು, ನೋಡಿದ್ರೆ ನನ್ನ ಮೊಬೈಲ್‌ ಅನ್ನು ಅವಳು ಕದ್ದುಬಿಟ್ಟಿದ್ದಳು!

ಅದಾದ ಅನಂತರ ಒಂದು ವಾರದ ಕಾಲ ಹಳೆಯ ಬೇಸಿಕ್‌ ಮೊಬೈಲೇ ನನ್ನ ಪಾಲಾಯಿತು. ಹೊಸತು ಕೊಂಡರೆ ಪುನಃ ಅದೆಲ್ಲಿ ಕಳೆದು ಹೋಗುವುದೋ ಎಂಬ ವಿಚಿತ್ರ ಭಯ ಆವರಿಸಿತ್ತು. ವಾಟ್ಸ್‌ಆ್ಯಪ್‌ ಇಲ್ಲ, ಫೇಸ್‌ಬುಕ್‌ ಇಲ್ಲ ಅಂತೂ ವನವಾಸ ತರವಿತ್ತು ಆ ಏಳು ದಿನಗಳು. ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್‌ ಅಭ್ಯಾಸವಾಗಿ ಈ ಬೇಸಿಕ್‌ ಫೋನ್‌ ಅಲ್ಲಿ ಏನೂ ಮಾಡೋಕಾಗದ ಸ್ಥಿತಿ! ಮೊಬೈಲ್‌ ಎಂಬ ಮಾಯೆಯಲ್ಲಿ ನಾನೆಷ್ಟು ಬಂಧಿಯೆಂದು ಮನವರಿಕೆಯಾಯಿತು.


ಸುಪ್ರೀತಾ ವೆಂಕಟ್‌ ಸಾಫ್ಟ್ವೇರ್‌ ಎಂಜಿನಿಯರ್‌, ಬೆಂಗಳೂರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.