Adjustment: ಹೊಂದಾಣಿಕೆಯೇ ಜೀವನ


Team Udayavani, May 31, 2024, 4:30 PM IST

20-uv-fusion

ಜೀವನವು ಸುಖಮಯವಾಗಿರಬೇಕಾದರೆ ಹೊಂದಾಣಿಕೆ ಅತ್ಯಗತ್ಯ. ಹೊಂದಾಣಿಕೆಯೇ ಜೀವನ ಎಂದು ಮನಶ್ಯಾಸ್ತ್ರಜ್ಞರು ಹೇಳುತ್ತಾರೆ.  ಮನುಷ್ಯ ಸಂಘಜೀವಿ, ಎಲ್ಲರೊಂದಿಗೆ ಬೆರೆತು ಬಾಳಬೇಕು. ಆದರೆ ಅದು ಯಾವಾಗಲೂ ಎಲ್ಲರೊಂದಿಗೂ ಸಾಧ್ಯವಾಗುವುದಿಲ್ಲ. ಮನುಷ್ಯನಿಗೆ ಅಹಂಕಾರ ಅಡ್ಡಿ ಬರುತ್ತದೆ. ನಾವೇ ಏಕೆ ಹೊಂದಿಕೊಂಡು ಹೋಗಬೇಕು? ನಮ್ಮಿಛೆಯಂತೆಯೇ ಆಗಬೇಕು ಎಂದೆನಿಸುತ್ತದೆ. ಆದರೆ ನಾವು ಹೊಂದುಕೊಂಡು ಹೋದರೆ ನಮ್ಮ ಅಕ್ಕ ಪಕ್ಕದವರೂ ಅನುಸರಿಸುತ್ತಾರೆ. ಆಗ ಸಾಮರಸ್ಯದ ಬದುಕು ನಮ್ಮದಾಗುತ್ತದೆ.

ಹೊಂದಾಣಿಕೆ ಮತ್ತು ಪರಸ್ಪರ ಸಹಕಾರಿ ಮನೋಭಾವನೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಇದರಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಹೊಂದಾಣಿಕೆಯ ಅವಶ್ಯಕತೆ ಇದೆ.

ಒಂದು ಕುಟುಂಬದಲ್ಲಿ ಹೊಂದಾಣಿಕೆ ಇದ್ದರೆ ಮದುವೆ, ಮುಂಜಿ ಮುಂತಾದ ಸಮಾರಂಭಗಳು ಸಂಭ್ರಮದಿಂದ ನೆರವೇರುತ್ತದೆ. ಸಂಸಾರದಲ್ಲಿ ಅತ್ತೆ-ಮಾವ, ಗಂಡ-ಹೆಂಡತಿ, ನಾದಿನಿ-ಮೈದುನ , ಮಕ್ಕಳು ಹೀಗೆ ಎಲ್ಲರೊಂದಿಗೆ ಹೊಂದಾಣಿಕೆ ಇದ್ದರೆ ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು. ವಯಸ್ಸಿನ ಅಂತರದಿಂದಾಗಿ ಭಿನ್ನಾಭಿಪ್ರಾಯಗಳು ಮೂಡಬಹುದು, ಅದು ಸಹಜವೂ ಹೌದು. ಆದರೆ ಕೂತು ಮಾತನಾಡಿ ಹೊಂದಾಣಿಕೆಯಿಂದ ಬಗೆಹರಿಸಿಕೊಂಡರೆ ಸುಖ ಸಂಸಾರಕ್ಕೆ ನಾಂದಿಯಾಗುತ್ತದೆ. ಸಮರಸದ ಹೊಂದಾಣಿಕೆಯ ಅವಶ್ಯಕತೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಇನ್ನೂ ಯಾವ ಕ್ಷೇತ್ರದಲ್ಲೆ ಆಗಲಿ, ಉದಾಹರಣೆಗೆ ಕ್ರೀಡೆಯನ್ನೇ ತೆಗೆದುಕೊಳ್ಳೋಣ, ಸಹ ಆಟಗಾರ ನಡುವೆ ಹೊಂದಾಣಿಕೆ ಇಲ್ಲದ್ದಿದ್ದಲ್ಲಿ ಒಂದು ತಂಡವಾಗಿ ಉಳಿಯುವುದು ಕಷ್ಟ ಸಾಧ್ಯ . ಆಗ ಯಶಸ್ಸು ಮರೀಚಿಕೆಯಾಗುತ್ತದೆ. ಹೊಂದಾಣಿಕೆ, ಪರಸ್ಪರ ಗೌರವ ಸಹಾರಗಳೇ ತಂಡವನ್ನು ಗೆಲುವಿನ ದಡ ಸೇರಿಸುತ್ತದೆ.

ನಮ್ಮ ಮನಸ್ಸನ್ನು ಸದಾ ನಿರ್ಲಿಪ್ತವಾಗಿ ಆರಾಮಾಗಿ ಇಟ್ಟುಕೊಳ್ಳಬೇಕು. ಆಗ ನಾವು ಬೇರೆಯವರೊಡನೆ ಶಾಂತಿಯಿಂದ, ಸಮಾಧಾನದಿಂದ ವ್ಯವಹಾರಿಸಲು ಸಾಧ್ಯವಾಗುತ್ತದೆ.

ಇತರರೊಡನೆ ಮುಕ್ತ ಮನಸ್ಸಿನಿಂದ ಆಸಕ್ತಿಯಿಂದ ಯಾವುದೇ ಚಂಚಲತೆ ಇಲ್ಲದೆ ಸಂಭಾಷಿಸಿದರೆ ಹೊಂದಾಣಿಕೆ ತಾನಾಗಿಯೇ ಮೂಡುವುದು. ಆಡಳಿತ ಕ್ಷೇತ್ರದಲ್ಲಂತೂ ಹೊಂದಾಣಿಕೆಯ ಕೊರತೆಯಿಂದ ಇಲಾಖೆಯಲ್ಲಿನ ಸಹದ್ಯೋಗಿಗಳು ಪರಸ್ಪರ ವಿಶ್ವಾಸದಿಂದ ವ್ಯವಹರಿಸುವುದಿಲ್ಲ. ಇದರಿಂದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಇನ್ನು ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ನಾವು ರಸ್ತೆ ಕಾಮಗಾರಿಯಲ್ಲೇ ಕಾಣಬಹುದು. ಇಂದು ಡಾಂಬರೀಕರಿಸಿದ ರಸ್ತೆಗೆ ಮರುದಿನವೇ ಜಲಮಂಡಲಿಯು ರಸ್ತೆ ಅಗೆಯುವ ಕಾರ್ಯವನ್ನು ಕೈಗೆತ್ತಿಕೊಂಡಿರುತ್ತದೆ.

ಹೊಂದಾಣಿಕೆಯನ್ನು ಕಾಣದ ಜೀವಸಂಕುಲಗಳು ಪ್ರಕೃತಿಯಲ್ಲಿ ಕಾಲಕ್ರಮೇಣ ನಶಿಸುತ್ತದೆ. ಇದು ಪ್ರಕೃತಿ ನಿಯಮ. ಆದ್ದರಿಂದ ಪ್ರಾಣಿಗಳು ನಿತ್ಯ ಹೊಂದಾಣಿಕೆಯಲ್ಲೇ ಬದುಕುತ್ತವೆ. ಇರುವೆಗಳು ಸೈನಿಕರಂತೆ ಪರಸ್ಪರ ಹೊಂದಾಣಿಕೆಯಿಂದ ಒಟ್ಟಿಗೆ ಆಹಾರ ಸಂಗ್ರಹಣೆಗೆ ಹೊರಡುತ್ತದೆ. ಪ್ರಾಣಿಗಳೆಲ್ಲವೂ ಗುಂಪು ಗುಂಪಾಗೆ ಸಹಚರಿಸುತ್ತವೆ. ಗುಂಪಿನಿಂದ ಬೇರ್ಪಟ್ಟ ಜಿಂಕೆ, ಮಂದೆಯನ್ನು ತೊರೆದ ಕುರಿ ಹುಲಿ ಸಿಂಹಗಳ ಬಾಯಿಗೆ ಸುಲಭವಾಗಿ ಆಹಾರವಾಗುದನ್ನು ನಾವು ಕಾಣಬಹುದು.

ಹೀಗೆ ಪ್ರಾಣಿಗಳಿಗಿರುವ ಹೊಂದಾಣಿಕೆ , ಅದರ ಮಹತ್ವದ ಅರಿವು ಪ್ರಾಣಿ ಕುಲದಲ್ಲೇ ಶ್ರೇಷ್ಠನಾದ ಮಾನವನಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸ ಹಾಗೂ ವಿಷಾದನೀಯ. ಆದ್ದರಿಂದ ಪರಸ್ಪರ ಹೊಂದಾಣಿಕೆಯನ್ನು ಮೈಗೂಡಿಸಿಕೊಂಡು ಸಹಬಾಳ್ವೆಯಿಂದ ಬಾಳಿದಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿ, ದ್ವೇಷ ಅಸೂಯೆ ಕ್ಷಯಿಸುತ್ತದೆ. ನಮ್ಮ ಬಾಳು ಹಾಗೂ ಬದುಕು ಬಂಗಾರವಾಗುತ್ತದೆ.ಆದರಿಂದ ಹೊಂದಾಣಿಕೆಯಿಂದ ಬಾಳೋಣ …ಬೆಳೆಯೋಣ….

-ಚೇತನ ಭಾರ್ಗವ

ಬೆಂಗಳೂರು

ಟಾಪ್ ನ್ಯೂಸ್

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.