UV Fusion: ಕೊನೆಯಿಲ್ಲದ ಕನಸು ಅದೆಷ್ಟು ಸುಂದರ!


Team Udayavani, Nov 21, 2023, 7:45 AM IST

7-uv-fusion

ಈ ಜೀವನದ ಸತ್ಯ-ಅಸತ್ಯತೆಗಳಿಗಿಂತ ಕೆಲವೊಂದು ಕನಸೇ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ?!

ನಂಗೆ ಈ ತರ ಸಾವಿರ ಸಲ ಅನ್ಸಿದೆ. ನಿಮಗೂ ಅನಿಸಿರಬಹುದು. ತಾಯಿ ತನ್ನ ಮಗುವಿಗೆ ಚಂದಮಾಮ ತೋರಿಸಿ ಮಗು ಊಟ ಮಾಡ್ಲಿ ಅಂತ ಸತ್ಯವಲ್ಲದಿದ್ದರೂ ಏನೇನೊ ಕತೆ ಹೇಳ್ತಾರಲ್ಲ ಹಾಗೇ. ಅಂತದ್ದು ಯಾವುದೂ ಕೂಡ ನಿಜ ಆಗಲ್ಲ ಅಂತಾ ಗೊತ್ತಿದ್ರೂ ಕೂಡ ಆ ತರ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಅನಿಸೋದಿದೆ!

ಕಂಡ ಕನಸುಗಳು ಸಾವಿರಾರು ಆದ್ರೆ, ಅದರಲ್ಲಿ ನೆನಪಿರೋದೆಷ್ಟು ಅರ್ಧದಷ್ಟು ಕೂಡ ಇಲ್ಲ. ಕೆಲವೊಂದು ಕನಸುಗಳು ತುಂಬಾ ಚೆನ್ನಾಗಿರುತ್ತೆ, ಆದ್ರೆ ಯಾವುದೂ ಕೂಡ ನೆನಪಿರೋದಿಲ್ಲ. ಅದೇನೋ ಹೇಳ್ತಾರಲ್ಲಾ ಕಂಡ ಕನಸುಗಳು ಮರೆತು ಹೋದ್ರೆ ಅದು ನಿಜ ಆಗುತ್ತೆ ಅಂತಾ ಒಮ್ಮೆಮ್ಮೆ ಅಂತಹ ಒಳ್ಳೆ ಕನಸುಗಳು ಮರೆತೇ ಹೋಗ್ಲಿ, ಹಾಗಾದರೂ ನಿಜವಾಗಲಿ ಅನ್ನೋ ಹುಚ್ಚು ಆಸೆ ನಮಗೆ!

ಈ ಬದುಕಿನ ಕೆಲವು ಘಟನೆಗಳು ಕೂಡ ಹಾಗೆ ಅಲ್ವಾ. ಮರೆಯಬೇಕಾಗಿರೋದನ್ನ ಮರೆಯೋಕಾಗಲ್ಲ ಮರೆಯಬಾರದು ಅಂತ ಅನ್ಕೊಂಡ್ರೆ ಬೇಗ ಮರೆತು ಬಿಡುತ್ತೇವೆ. ಒಂದೊಂದು ಸಲ ನಿದ್ದೆ ಮಾಡೋವಾಗ ಒಳ್ಳೆ ಕನಸುಗಳು ಬೀಳಲಿ ಅಂತ ಅಂದುಕೊಳ್ಳುತೇವೆ. ಆದ್ರೆ ಕನಸೇ ಬೀಳ್ಳೋದಿಲ್ಲ… ಯಾವಾಗ ಕನಸುಗಳು ಕಾಣೋ ಗುಂಗಲ್ಲೇ ನಾವು ಇರೋದಿಲ್ವೋ ಆವಾಗ್ಲೇ ಕನಸುಗಳು ಬೀಳುತ್ತವೆ…

ಜೀವನ ವಿಚಿತ್ರ ಅಲ್ವಾ?

ಕೆಲವೊಂದು ಕೆಟ್ಟ ಕನಸುಗಳು ನಮ್ಮ ನಿದ್ದೆಯನ್ನೇ ಹಾಳುಗೆಡುತ್ತವೆ. ಕೆಲವೊಂದು ಕನಸು ಬರಲಿ ಅಂತ ನಿದ್ದೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಕನಸಿಗಿಂತ ವಾಸ್ತವವೇ ತುಂಬಾ ಕರಾಳವಾಗಿರುತ್ತೆ ಅಲ್ವಾ? ನಾವು ಅಂದುಕೊಳ್ಳೋ ರೀತಿ ಜೀವನ ಇರಲ್ಲ ಅಂತ ಗೊತ್ತಿದ್ದರೂ ಕೂಡ ಹೀಗೆ ಇಬೇìಕು ಅಂತ ಅಂದುಕೊಳ್ಳುತ್ತೇವೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವೆಂಬಂತೆ ಇಲ್ಲದನ್ನು ಬಯಸುವುದು, ಆಗದೇ ಇರುವುದನ್ನು ಕಲ್ಪಿಸಿಕೊಳ್ಳುವುದೇ ಮಾನವನ ಸಹಜ ಗುಣ.

ಕನಸಿಗೂ ಜೀವನದ ವಾಸ್ತವಕ್ಕೂ ಸಾಮ್ಯತೆಗಳಿವೆ. ಕನಸುಗಳಂತೆ ಕೆಲವೊಂದು ಘಟನೆಗಳೂ ಕೂಡ ನಮಗರಿವಿಲ್ಲದಂತೆ ಬಂದು ಬಿಡುತ್ತವೆ. ಕೆಲವೊಂದು ಘಟನೆಗಳನ್ನು ಮರೆಯಬೇಕೆಂದೆನಿಸಿದರೂ ಮರೆಯಲಾಗದೆ ಮರಳಿ ಮರಳಿ ಕಾಡುತಿರುತ್ತವೆ. ಎಲ್ಲವೂ ಅನಿಶ್ಚಿತವಾಗಿಯೇ ಇರುತ್ತವೆ.

ಕಣ್ಣು ಮುಚ್ಚಿ ಕಣೋ ಕನಸುಗಳು ಸಾವಿರ. ಆದ್ರೆ ಕಣ್ಣು ತೆರೆದು ಕಾಣೋ ಕನಸೊಂದೆ. ಆ ಒಂದು ಕನಸಿಗೋಸ್ಕರ ಇಡೀ ಜೀವನದುದ್ದಗಲಕ್ಕೂ ಓಡುತ್ತಾ ಓಡುತ್ತಾ ಕೆಲವೊಬ್ಬರ ಕನಸುಗಳು ನನಸಾದರೆ, ಕನಸಿನ ಜತೆ ಮನಸುಗಳೂ ಚೂರಾಗುವುದು ಸಹಜ.

ಕನಸುಗಳು ಚೂರಾದಷ್ಟು ಬಾರಿ ಪುನಃ ಚಿಗುರೊಡೆಯುತ್ತವೆ. ಜೀವನದಲ್ಲಿ ಕನಸುಗಳಿಗೆಂದೂ ಕೊನೆಯಿಲ್ಲ ಹಾಗೆಯೇ ಅವುಗಳು ಕೊಡುವ ಉಲ್ಲಾಸ, ಚಡಪಡಿಕೆ, ನಿರೀಕ್ಷೆ, ಭರವಸೆ, ಹತಾಶೆ,ಹಾಗೂ ಕಣ್ಣೀರ ಧಾರೆಗೂ ಕೂಡ!

-ಪ್ರೇರಣಾ ಸುವರ್ಣ

ವಿ.ವಿ.ಕಾಲೇಜು ಮಂಗಳೂರು

ಟಾಪ್ ನ್ಯೂಸ್

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Varun tej starrer matka movie releasing on Nov 14

Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ

nidradevi next door Kannada Movie

Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್‌ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ನತ್ತ..

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.