Festivals: ಹಬ್ಬಗಳು ಮರೆಯಾಗುತ್ತಿವೆಯೇ?


Team Udayavani, Apr 19, 2024, 3:40 PM IST

18=

ದಿಮ್ಸಲ್, ದಿಮ್ಸಲ್‌ ಒಂದು ರಾತ್ರಿ ಪೂರ್ತಿ ಕೂಗ್ಲಿಕ್ಕೆ ಶಿವರಾತ್ರಿ, ಡಿಜೆಗೆ ಹುಚೆದ್ದು ಹೆಜ್ಜೆ ಹಾಕಲಿಕ್ಕೆ ಚೌತಿ, ಪಟಾಕಿ ಸೌಂಡ್‌ಗೆ ದೀಪಾವಳಿ, ದ್ವಾಸಿ ಕದುಕೆ ಹೊಸಲಜ್ಜಿ, ಕೂಗ್‌ ಹಾಕ್ಲಿಕ್ಕೆ ಬಲಿಂದ್ರ ಪೂಜೆ ಮನೆಯವರನ್ನೆಲ್ಲ ಒಟ್ಟಿಗೆ ಸೇರಿಸುವುದಕ್ಕೆ ಹೊಸ್ತ್ (ಕದಿರು ಹಬ್ಬ) ಇದೆಲ್ಲ ನಮ್ಮ ಆಚರಣೆಗಳು ಮತ್ತು ಹಬ್ಬಗಳು. ‌ಹಾಗೇ ಇವೆಲ್ಲ ಹಬ್ಬಗಳಿಗಿಂತ ಮಿಗಿಲಾಗಿ ಸಂತಸದ ಮನೋರಂಜನಾತ್ಮಕವಾದ ಕ್ಷಣಗಳಾಗಿವೆ ಮತ್ತು ನಾವು ಜೀವನದಲ್ಲಿ ಮುಂದೆ ಸಾಗಿದಂತೆ ಮುಂದೆ ನಾವು ನೆನೆಯುವ ಸವಿ ನೆನಪುಗಳಾಗಿವೆ.

ಹಬ್ಬ ಎಂದಾಗ ಮನೆಯ ಹಿರಿಯವರೆಲ್ಲ ಆಚರಣೆಗಳ ಕಡೆಗೆ ಗಮನ ಕೊಟ್ಟರೆ ನಾವು ಯುವಕರು ಹಬ್ಬಗಳಲ್ಲಿ ಸಿಗುವಂತಹ ಆ ಮಜವಾದ ಕ್ಷಣಗಳ ಕಡೆಗೆ ಗಮನವಹಿಸುತ್ತೇವೆ.

ನಾವು ಕರಾವಳಿಗರು ಎಲ್ಲ ರೀತಿಯ ಹಬ್ಬಗಳನ್ನ ಆಚರಿಸಿಕೊಂಡು ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಮರೆಯಾಗುತ್ತಿವೆ ಎಂಬುದು ಎಲ್ಲರಲ್ಲಿ ಕೇಳಿ ಬರುತ್ತಿರುವಂತಹ ಮಾತು. ಇದು ಒಂದು ರೀತಿಯಲ್ಲಿ ನಿಜ ಎಂದು ಹೇಳಬಹುದು. ಮಾನವನ ಮೂಲವನ್ನ ನೋಡ್ತಾ ಹೋದರೆ ಮಾನವ ಜಾತಿ ತನ್ನ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆಗಳಾದ ನಂತರ ಮನೋರಂಜನೆಯ ಕಡೆಗೆ ಮುಖ ಮಾಡುತ್ತಾನೆ. ಮೊದಲೆಲ್ಲ ಇವಾಗಿನ ತರ ಟಿವಿ ಮೊಬೈಲ್‌ ಹಾಗೆ ಇನ್ನಿತರ ಮನೋರಂಜನ ಮಾಧ್ಯಮಗಳು ಇರಲಿಲ್ಲ. ಹಾಗಾಗಿ ನಮ್ಮ ಪೂರ್ವಿಕರೆಲ್ಲರೂ ಹಬ್ಬಗಳ ಕಡೆಗೆ ಮುಖ ಮಾಡಿದರು.

ವರ್ಷವಿಡೀ ತಮ್ಮ ಕೆಲಸಗಳಲ್ಲಿ ವಿಲೀನರಾಗಿರುವಂತಹವರೆಲ್ಲರೂ ಹಬ್ಬದ ದಿನ ಒಟ್ಟಿಗೆ ಸೇರಿ ಆಚರಿಸುವ ಮೂಲಕ ತಮ್ಮೊಳಗಿನ ದುಃಖ ಉದ್ವೇಗ ಎಲ್ಲವನ್ನು ಹೋಗಲಾಡಿಸಿಕೊಳ್ಳುತ್ತ ಸಂತಸದ ಕ್ಷಣಗಳನ್ನು ತಮ್ಮದಾಗಿಸಿ ಕೊಳ್ಳುತ್ತಾರೆ. ಹೀಗೆ ಮನೋರಂಜನೆಗಾಗಿ ಹಬ್ಬಗಳು ಪ್ರಾರಂಭಗೊಂಡವು ಎಂದು ಕೂಡ ಹೇಳಬಹುದಾಗಿದೆ.

ಈ ಹಬ್ಬಗಳು ಮತ್ತೆ ಆಚರಣೆಗಳಾದ ಅನಂತರ ನಾವು ನಮ್ಮೂರಿನಲ್ಲಿ ಜಾತ್ರೆಗಳನ್ನು ಕೂಡ ನೋಡಬಹುದು. ಈ ಜಾತ್ರೆಗಳು ಭಕ್ತಿ ಹಾಗೂ ಭಾವನೆಗಳ ಸಮ್ಮಿಲನ ವಾಗಿದ್ದರೂ ಕೂಡ ಮನೋರಂಜನ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಹೀಗೆ ಕಾಲಕಾಲಕ್ಕೆ ದೇವಸ್ಥಾನಗಳು ನಿರ್ಮಾಣಗೊಂಡವು ಒಂದೊಂದು ಕುಟುಂಬದವರು ಒಂದೊಂದು ದೇವಸ್ಥಾನವನ್ನು ನಂಬತೊಡಗಿದರು. ಹೀಗೆ ಮುಂದೆ ವಾರ-ವಾರಕ್ಕೆ ಏನಾದರೂ ಒಂದು ಆಚರಣೆಗಳು, ಕಾರ್ಯಕ್ರಮಗಳು, ಹಬ್ಬಗಳು ಇದ್ದೇ ಇರುತ್ತಿದ್ದವು.

ಹಾಗಾದ್ರೆ ಈ ಹಬ್ಬಗಳೆಲ್ಲ ಯಾಕೆ ಈಗ ಮರೆಯಾಗುತ್ತಿವೆ. ಹೀಗೆ ಹಬ್ಬಗಳೆಲ್ಲ ಕಾಣೆಯಾಗುವುದು ಪ್ರಾರಂಭವಾಗಿದ್ದು ಸಿನೆಮಾಗಳು, ಮಾಲ್‌ಗ‌ಳು, ಗೇಮ್‌ಗಳು, ಸೋಶಿಯಲ್‌ ಮೀಡಿಯಾಗಳು ಹಾಗೆ ಆಧುನಿಕ ಜೀವನಶೈಲಿ ಹೀಗೆ ಮನೋರಂಜನೆಗಾಗಿ ನಾನಾ ಕ್ಷೇತ್ರ ಬೆಳೆಯಲಿಕ್ಕೆ ಪ್ರಾರಂಭವಾದಾಗ ಇಲ್ಲಿ ನಮ್ಮ ಆಚರಣಗಳಲ್ಲಿ ಸಿಗುವ ಮನೋರಂಜನೆ ಏನೂ ಅಲ್ಲ ಎಂಬಂತ ಭಾವನೆ ಯುವಕರ, ಮಕ್ಕಳ ಹಾಗೂ ಜನರ ಎಲ್ಲರ ಮನಸ್ಸನ್ನು ಮೋಡಿ ಮಾಡಿತು. ಹೀಗೆ ನಮ್ಮ ಆಚರಣೆ ಬರೀ ಮನೋರಂಜನೆ ಮಾತ್ರವಲ್ಲ ವೈಜ್ಞಾನಿಕವಾಗಿ ಹಾಗೂ ದೈವಿಕವಾಗಿ ನಮಗೆ ಹಿತೈಷಿಯಾಗಿದೆ ಎಂಬುದನ್ನು ನಾವು ಮರೆತುಬಿಟ್ಟೆವು. ಇದು ಒಂದು ರೀತಿಯಲ್ಲಿ ಹಬ್ಬಗಳು ಮರೆಯಾಗಲು ಕಾರಣವಾದರೆ ಬೆಳೆಯುತ್ತಿರುವ ಆಧುನಿಕ ಸಮಾಜದಲ್ಲಿ ಮನೆಯ ಬಾಗಿಲನ್ನು ಯಾವಾಗಲೂ ಮುಚ್ಚುವುದು ಇನ್ನೊಂದು ಕಾರಣವಾಗಿದೆ. ಇದು ಹೇಗೆಂದರೆ ಮೊದಲು ಪ್ರತಿಯೊಬ್ಬ ಮನುಷ್ಯನಲ್ಲೂ ನಂಬಿಕೆ,ವಿಶ್ವಾಸ ಇದ್ದವು. ಆಚೆ ಈಚೆ ಮನೆಯಲ್ಲಿ ಆತ್ಮೀಯತೆ ಮತ್ತು ಒಡನಾಟ ಇತ್ತು.

ಈಗ ಕಾಲ ಎಲ್ಲಿವರೆಗೆ ಬಂದಿದೆ ಎಂದರೆ ಈ ಖಾಸಗಿತನಕ್ಕೆ ಒತ್ತು ಕೊಡುತ್ತಾ ಪಕ್ಕದ ಮನೆಯವರ ಹೆಸರು ಕೂಡ ಗೊತ್ತಿರದಷ್ಟು ಮೂಢರಾಗಿಬಿಟ್ಟಿದ್ದೇವೆ ನಾವು. ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ಮೊಗ್ನರಾಗಿ ಮನುಷ್ಯರಿಗಿಂತ ನಾವು ಆಧುನಿಕ ರೋಬೋಟ್‌ ಗಳಾಗಿ ಜೀವನ ಮಾಡುತ್ತಿದ್ದೇವೆ. ಜೀವನವನ್ನು ಅನುಭವಿಸುವ ಬದಲು ಸವೆಸುತ್ತಿದ್ದೇವೆ.

ನವಯುಗದ ಭ್ರಮೆಯಿಂದ ಹೊರಬಂದು ಆತ್ಮೀಯತೆ ಹಾಗೂ ಒಡನಾಟವನ್ನು ಬೆಳೆಸಿಕೊಂಡಾಗ ನಮ್ಮ ಸಂಸ್ಕೃತಿ, ನಮ್ಮ ಆಚರಣೆ, ನಮ್ಮ ಸಂಬಂಧ ಹಾಗೂ ನಮ್ಮೂರು ವೈಭವಿಕೃತವಾಗಿರುತ್ತದೆ. ನಮ್ಮಲ್ಲಿನ ರೋಬೋಟ್‌ ಮನಸ್ಥಿತಿ ಒಡೆದು ಹೋಗಿ ನಮ್ಮ ಜೀವನವನ್ನು ನೋಡುವ ರೀತಿಯೂ ಬದಲಾಗುತ್ತದೆ. ಇವೆಲ್ಲದರ ಮೊದಲ ಹೆಜ್ಜೆ ಮತ್ತೆ ನಮ್ಮ ಆಚರಣೆ ಹಬ್ಬಗಳ ಕಡೆಗೆ ಮುಖ ಮಾಡುವಮೂಲಕ ನಮ್ಮ ಮನಸ್ಥಿತಿಗೆ ಅಂಟಿದ್ದ ಸಂಕುಚಿತ ಭಾವ ಮರೆಯಾಗಲಿದೆ.

-ರಿಶಿರಾಜ್‌

ಭಂಡಾರ್ಕಾರ್ಸ್‌ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.