Festivals: ಹಬ್ಬಗಳು ಮರೆಯಾಗುತ್ತಿವೆಯೇ?


Team Udayavani, Apr 19, 2024, 3:40 PM IST

18=

ದಿಮ್ಸಲ್, ದಿಮ್ಸಲ್‌ ಒಂದು ರಾತ್ರಿ ಪೂರ್ತಿ ಕೂಗ್ಲಿಕ್ಕೆ ಶಿವರಾತ್ರಿ, ಡಿಜೆಗೆ ಹುಚೆದ್ದು ಹೆಜ್ಜೆ ಹಾಕಲಿಕ್ಕೆ ಚೌತಿ, ಪಟಾಕಿ ಸೌಂಡ್‌ಗೆ ದೀಪಾವಳಿ, ದ್ವಾಸಿ ಕದುಕೆ ಹೊಸಲಜ್ಜಿ, ಕೂಗ್‌ ಹಾಕ್ಲಿಕ್ಕೆ ಬಲಿಂದ್ರ ಪೂಜೆ ಮನೆಯವರನ್ನೆಲ್ಲ ಒಟ್ಟಿಗೆ ಸೇರಿಸುವುದಕ್ಕೆ ಹೊಸ್ತ್ (ಕದಿರು ಹಬ್ಬ) ಇದೆಲ್ಲ ನಮ್ಮ ಆಚರಣೆಗಳು ಮತ್ತು ಹಬ್ಬಗಳು. ‌ಹಾಗೇ ಇವೆಲ್ಲ ಹಬ್ಬಗಳಿಗಿಂತ ಮಿಗಿಲಾಗಿ ಸಂತಸದ ಮನೋರಂಜನಾತ್ಮಕವಾದ ಕ್ಷಣಗಳಾಗಿವೆ ಮತ್ತು ನಾವು ಜೀವನದಲ್ಲಿ ಮುಂದೆ ಸಾಗಿದಂತೆ ಮುಂದೆ ನಾವು ನೆನೆಯುವ ಸವಿ ನೆನಪುಗಳಾಗಿವೆ.

ಹಬ್ಬ ಎಂದಾಗ ಮನೆಯ ಹಿರಿಯವರೆಲ್ಲ ಆಚರಣೆಗಳ ಕಡೆಗೆ ಗಮನ ಕೊಟ್ಟರೆ ನಾವು ಯುವಕರು ಹಬ್ಬಗಳಲ್ಲಿ ಸಿಗುವಂತಹ ಆ ಮಜವಾದ ಕ್ಷಣಗಳ ಕಡೆಗೆ ಗಮನವಹಿಸುತ್ತೇವೆ.

ನಾವು ಕರಾವಳಿಗರು ಎಲ್ಲ ರೀತಿಯ ಹಬ್ಬಗಳನ್ನ ಆಚರಿಸಿಕೊಂಡು ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಮರೆಯಾಗುತ್ತಿವೆ ಎಂಬುದು ಎಲ್ಲರಲ್ಲಿ ಕೇಳಿ ಬರುತ್ತಿರುವಂತಹ ಮಾತು. ಇದು ಒಂದು ರೀತಿಯಲ್ಲಿ ನಿಜ ಎಂದು ಹೇಳಬಹುದು. ಮಾನವನ ಮೂಲವನ್ನ ನೋಡ್ತಾ ಹೋದರೆ ಮಾನವ ಜಾತಿ ತನ್ನ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆಗಳಾದ ನಂತರ ಮನೋರಂಜನೆಯ ಕಡೆಗೆ ಮುಖ ಮಾಡುತ್ತಾನೆ. ಮೊದಲೆಲ್ಲ ಇವಾಗಿನ ತರ ಟಿವಿ ಮೊಬೈಲ್‌ ಹಾಗೆ ಇನ್ನಿತರ ಮನೋರಂಜನ ಮಾಧ್ಯಮಗಳು ಇರಲಿಲ್ಲ. ಹಾಗಾಗಿ ನಮ್ಮ ಪೂರ್ವಿಕರೆಲ್ಲರೂ ಹಬ್ಬಗಳ ಕಡೆಗೆ ಮುಖ ಮಾಡಿದರು.

ವರ್ಷವಿಡೀ ತಮ್ಮ ಕೆಲಸಗಳಲ್ಲಿ ವಿಲೀನರಾಗಿರುವಂತಹವರೆಲ್ಲರೂ ಹಬ್ಬದ ದಿನ ಒಟ್ಟಿಗೆ ಸೇರಿ ಆಚರಿಸುವ ಮೂಲಕ ತಮ್ಮೊಳಗಿನ ದುಃಖ ಉದ್ವೇಗ ಎಲ್ಲವನ್ನು ಹೋಗಲಾಡಿಸಿಕೊಳ್ಳುತ್ತ ಸಂತಸದ ಕ್ಷಣಗಳನ್ನು ತಮ್ಮದಾಗಿಸಿ ಕೊಳ್ಳುತ್ತಾರೆ. ಹೀಗೆ ಮನೋರಂಜನೆಗಾಗಿ ಹಬ್ಬಗಳು ಪ್ರಾರಂಭಗೊಂಡವು ಎಂದು ಕೂಡ ಹೇಳಬಹುದಾಗಿದೆ.

ಈ ಹಬ್ಬಗಳು ಮತ್ತೆ ಆಚರಣೆಗಳಾದ ಅನಂತರ ನಾವು ನಮ್ಮೂರಿನಲ್ಲಿ ಜಾತ್ರೆಗಳನ್ನು ಕೂಡ ನೋಡಬಹುದು. ಈ ಜಾತ್ರೆಗಳು ಭಕ್ತಿ ಹಾಗೂ ಭಾವನೆಗಳ ಸಮ್ಮಿಲನ ವಾಗಿದ್ದರೂ ಕೂಡ ಮನೋರಂಜನ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಹೀಗೆ ಕಾಲಕಾಲಕ್ಕೆ ದೇವಸ್ಥಾನಗಳು ನಿರ್ಮಾಣಗೊಂಡವು ಒಂದೊಂದು ಕುಟುಂಬದವರು ಒಂದೊಂದು ದೇವಸ್ಥಾನವನ್ನು ನಂಬತೊಡಗಿದರು. ಹೀಗೆ ಮುಂದೆ ವಾರ-ವಾರಕ್ಕೆ ಏನಾದರೂ ಒಂದು ಆಚರಣೆಗಳು, ಕಾರ್ಯಕ್ರಮಗಳು, ಹಬ್ಬಗಳು ಇದ್ದೇ ಇರುತ್ತಿದ್ದವು.

ಹಾಗಾದ್ರೆ ಈ ಹಬ್ಬಗಳೆಲ್ಲ ಯಾಕೆ ಈಗ ಮರೆಯಾಗುತ್ತಿವೆ. ಹೀಗೆ ಹಬ್ಬಗಳೆಲ್ಲ ಕಾಣೆಯಾಗುವುದು ಪ್ರಾರಂಭವಾಗಿದ್ದು ಸಿನೆಮಾಗಳು, ಮಾಲ್‌ಗ‌ಳು, ಗೇಮ್‌ಗಳು, ಸೋಶಿಯಲ್‌ ಮೀಡಿಯಾಗಳು ಹಾಗೆ ಆಧುನಿಕ ಜೀವನಶೈಲಿ ಹೀಗೆ ಮನೋರಂಜನೆಗಾಗಿ ನಾನಾ ಕ್ಷೇತ್ರ ಬೆಳೆಯಲಿಕ್ಕೆ ಪ್ರಾರಂಭವಾದಾಗ ಇಲ್ಲಿ ನಮ್ಮ ಆಚರಣಗಳಲ್ಲಿ ಸಿಗುವ ಮನೋರಂಜನೆ ಏನೂ ಅಲ್ಲ ಎಂಬಂತ ಭಾವನೆ ಯುವಕರ, ಮಕ್ಕಳ ಹಾಗೂ ಜನರ ಎಲ್ಲರ ಮನಸ್ಸನ್ನು ಮೋಡಿ ಮಾಡಿತು. ಹೀಗೆ ನಮ್ಮ ಆಚರಣೆ ಬರೀ ಮನೋರಂಜನೆ ಮಾತ್ರವಲ್ಲ ವೈಜ್ಞಾನಿಕವಾಗಿ ಹಾಗೂ ದೈವಿಕವಾಗಿ ನಮಗೆ ಹಿತೈಷಿಯಾಗಿದೆ ಎಂಬುದನ್ನು ನಾವು ಮರೆತುಬಿಟ್ಟೆವು. ಇದು ಒಂದು ರೀತಿಯಲ್ಲಿ ಹಬ್ಬಗಳು ಮರೆಯಾಗಲು ಕಾರಣವಾದರೆ ಬೆಳೆಯುತ್ತಿರುವ ಆಧುನಿಕ ಸಮಾಜದಲ್ಲಿ ಮನೆಯ ಬಾಗಿಲನ್ನು ಯಾವಾಗಲೂ ಮುಚ್ಚುವುದು ಇನ್ನೊಂದು ಕಾರಣವಾಗಿದೆ. ಇದು ಹೇಗೆಂದರೆ ಮೊದಲು ಪ್ರತಿಯೊಬ್ಬ ಮನುಷ್ಯನಲ್ಲೂ ನಂಬಿಕೆ,ವಿಶ್ವಾಸ ಇದ್ದವು. ಆಚೆ ಈಚೆ ಮನೆಯಲ್ಲಿ ಆತ್ಮೀಯತೆ ಮತ್ತು ಒಡನಾಟ ಇತ್ತು.

ಈಗ ಕಾಲ ಎಲ್ಲಿವರೆಗೆ ಬಂದಿದೆ ಎಂದರೆ ಈ ಖಾಸಗಿತನಕ್ಕೆ ಒತ್ತು ಕೊಡುತ್ತಾ ಪಕ್ಕದ ಮನೆಯವರ ಹೆಸರು ಕೂಡ ಗೊತ್ತಿರದಷ್ಟು ಮೂಢರಾಗಿಬಿಟ್ಟಿದ್ದೇವೆ ನಾವು. ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ಮೊಗ್ನರಾಗಿ ಮನುಷ್ಯರಿಗಿಂತ ನಾವು ಆಧುನಿಕ ರೋಬೋಟ್‌ ಗಳಾಗಿ ಜೀವನ ಮಾಡುತ್ತಿದ್ದೇವೆ. ಜೀವನವನ್ನು ಅನುಭವಿಸುವ ಬದಲು ಸವೆಸುತ್ತಿದ್ದೇವೆ.

ನವಯುಗದ ಭ್ರಮೆಯಿಂದ ಹೊರಬಂದು ಆತ್ಮೀಯತೆ ಹಾಗೂ ಒಡನಾಟವನ್ನು ಬೆಳೆಸಿಕೊಂಡಾಗ ನಮ್ಮ ಸಂಸ್ಕೃತಿ, ನಮ್ಮ ಆಚರಣೆ, ನಮ್ಮ ಸಂಬಂಧ ಹಾಗೂ ನಮ್ಮೂರು ವೈಭವಿಕೃತವಾಗಿರುತ್ತದೆ. ನಮ್ಮಲ್ಲಿನ ರೋಬೋಟ್‌ ಮನಸ್ಥಿತಿ ಒಡೆದು ಹೋಗಿ ನಮ್ಮ ಜೀವನವನ್ನು ನೋಡುವ ರೀತಿಯೂ ಬದಲಾಗುತ್ತದೆ. ಇವೆಲ್ಲದರ ಮೊದಲ ಹೆಜ್ಜೆ ಮತ್ತೆ ನಮ್ಮ ಆಚರಣೆ ಹಬ್ಬಗಳ ಕಡೆಗೆ ಮುಖ ಮಾಡುವಮೂಲಕ ನಮ್ಮ ಮನಸ್ಥಿತಿಗೆ ಅಂಟಿದ್ದ ಸಂಕುಚಿತ ಭಾವ ಮರೆಯಾಗಲಿದೆ.

-ರಿಶಿರಾಜ್‌

ಭಂಡಾರ್ಕಾರ್ಸ್‌ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.