Cold storm; ಥಂಡಾಮಾರುತ ! ಅವುಗಳಿಗೆ ಮರುಜನ್ಮ


Team Udayavani, Jun 1, 2024, 11:46 AM IST

8-fusion

ಬಣ್ಣಗಳೆಲ್ಲ ಮರುಜನ್ಮ ಪಡೆಯಲು ನಿರ್ಧರಿಸಿದವು. ಎಲ್ಲರೂ ತಪಸ್ಸಿಗೆ ಕುಳಿತರೆ ಎಷ್ಟು ವರ್ಷಗಳು ಬೇಕೋ? ಕಷ್ಟ ಎಂದುಕೊಂಡವು. ಬೇರೆ ಉಪಾಯ ಹುಡುಕತೊಡಗಿದವು. ಹೇಮಂತ ಶಿಶಿರರು ಎದುರಿಗೆ ಹಾದು ಹೋಗುತ್ತಿದ್ದರು. ಆವರಲ್ಲಿ ಸಲಹೆ ಕೇಳುವುದು ಉಚಿತ ಎನಿಸಿತು. ಎಲ್ಲರೂ ದೇವಲೋಕದತ್ತ ಹೊರಟರು. ಹೇಮಂತ ಶಿಶಿರರು ಇಡೀ ಪ್ರಕೃತಿಯನ್ನೇ ಆವರಿಸಿಕೊಂಡರು.

ಮಂಜು ಮುಸುಕತೊಡಗಿತು. ಇಡೀ ವಾತಾವರಣ ಥರಗುಟ್ಟುವಂಥದ್ದು. ಕೆಲವೇ ಗಂಟೆಗಳಲ್ಲಿ ಗಿಡ ಮರಗಳೆಲ್ಲಾ ಬೋಳಾಗತೊಡಗಿದವು. ಅಲ್ಲಿನ ಉದ್ಯಾನದಲ್ಲಿನ ಹೂವಿನ ಗಿಡಗಳೂ ಅಷ್ಟೇ. ಎಲ್ಲವೂ ಬಿಳಿಚಿಕೊಳ್ಳತೊಡಗಿದವು. ಇಡೀ ವಾತಾವರಣದಲ್ಲಿ ಉತ್ಸಾಹವೇ ಕಾಣುತ್ತಿರಲಿಲ್ಲ.

ಮನೆಯೊಳಗಿದ್ದ ದೇವರಿಗೂ ಯಾಕೋ ವಿಚಿತ್ರ ಎನಿಸತೊಡಗಿತು. ಮೇಜಿನ ಮೇಲೆ ಕಂಗೊಳಿಸುತ್ತಿದ್ದ ಹೂವೂ ಬಿಳಿಚಿಕೊಂಡಿದೆ. ಮೆಲ್ಲಗೆ ಬಾಗಿಲ ಬಳಿಗೆ ಬಂದು ನಿಂತ. ಹೊರಗೆ ಇಣುಕಿದ. ಎಲ್ಲವೂ ಬಿಳಿಚಿಕೊಂಡಿದೆ. ಯಾಕೆ ಹೀಗೆ ಎಂದು ಯೋಚಿಸುತ್ತಿದ್ದ ಕ್ಷಣಕ್ಕೆ ಬಣ್ಣಗಳೆಲ್ಲ ಹಾಜರಾದವು. ನಮಗೆ ಮರುಜನ್ಮ ಬೇಕು ಎಂದು ಕೇಳಿಕೊಂಡವು.

ಆಗ ದೇವರಿಗೆ ಆರ್ಥವಾಯಿತು. ತಥಾಸ್ತು ಎಂದ. ಹೇಮಂತ ಶಿಶಿರರು ಊರ ಹಾದಿ ಹಿಡಿದರು. ಬೆನ್ನಿಗೇ ಬಣ್ಣಗಳೂ ಸಹ. ಅವರೆಲ್ಲರ ಹಿಂದೆಯೇ ವಸಂತನೂ ಬಂದ. ಈ ಗುಂಪಿನ ಮಧ್ಯೆ ಗ್ರೀಷ್ಮ ಸೇರಿಕೊಂಡಿದ್ದು ತಿಳಿಯಲಿಲ್ಲ.

ಮರ ಗಿಡಗಳೆಲ್ಲ ಚಿಗುರಿಕೊಂಡವು. ಎಲೆ-ಹೂವು-ಹೀಗೆ ಬಣ್ಣವೋ ಬಣ್ಣ. ವಸಂತನ ಗಾನ ಆರಂಭವಾಯಿತು. ನೃತ್ಯ ಪ್ರಾರಂಭವಾಗುವಷ್ಟರಲ್ಲಿ ಗ್ರೀಷ್ಮ ಕಂಡಳು. ವಸಂತ ಮುರುಟತೊಡಗಿದ. ಏನು ಮಾಡುವುದು ತೋಚಲಿಲ್ಲ.  ಬಾಯಾರಿಕೆ..ಧಗೆ..ಎಲ್ಲವೂ. ಬಣ್ಣಗಳೂ ಒಣಗತೊಡಗಿದವು. ಮತ್ತೆ ದೇವಲೋಕದ ಹಾದಿಯೇ ಅನಿವಾರ್ಯ ಎನಿಸಿತು. ಹೊರಡಲು ಸಜ್ಜಾದರು. ದೇವರಿಗೆ ಬಣ್ಣಗಳ ಸ್ಥಿತಿ ಅರ್ಥವಾಯಿತು. ವರ್ಷಾಳಿಗೆ ಧರೆಗಿಳಿಯಲು ಸೂಚಿಸಿದ.

ಆಕಾಶದಲ್ಲಿ ಚದುರಿದ ಮೋಡಗಳೆಲ್ಲ ಸಭೆಗೆ ಹೊರಟವು. ಒಂದೆಡೆ ಕೂಡಿಕೊಂಡವು. ಬಹಳಷ್ಟು ಚರ್ಚೆ ನಡೆಯಿತು. ಅಂತಿಮವಾಗಿ ತೀರ್ಮಾನ ಹೊರಬಿತ್ತು. ಹನಿಗಳು ಉದುರತೊಡಗಿದವು. ಬಣ್ಣಗಳೆಲ್ಲ ಮತ್ತೆ ನಳನಳಿಸತೊಡಗಿದವು. ಹಸಿರು, ಹಳದಿ, ಕೆಂಪು, ಕೇಸರಿ, ನೀಲಿ, ನೇರಳೆ, ಕಡು ನೀಲಿ..ಹೀಗೆ ಸಾವಿರಾರು ಬಣ್ಣಗಳು !

ಬದುಕಿನ ಪೆಟ್ಟಿಗೆಯ ತುಂಬಾ ಅವುಗಳೇ !

ಸುವಿಧಾ,

ಮೈಸೂರು

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.