ಕಾಲೇಜು ಮೆಟ್ಟಿಲು ಹತ್ತುವ ಭಾಗ್ಯವಿದೆಯಾ?


Team Udayavani, Jun 21, 2021, 12:24 PM IST

ಕಾಲೇಜು ಮೆಟ್ಟಿಲು ಹತ್ತುವ ಭಾಗ್ಯವಿದೆಯಾ?

ಸುಂದರ ಪ್ರಪಂಚದಲ್ಲಿ ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡುತ್ತಾ ಇದ್ದ ನಾವುಗಳು ಕೊರೊನಾ ಮಹಾಮಾರಿಗೆ ಸಿಲುಕಿ ನೆಲೆ ಇಲ್ಲದ ಹುಡುಕಾಟದ ಜೀವನಕ್ಕೆ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ. ಅತ್ತ ಕಾಲೇಜಿನ ಸವಿ, ಸಡಗರ ಇಲ್ಲ. ಇತ್ತ ಮುಂದಿನ ಜೀವನದ ಸ್ಪಷ್ಟತೆ ಕಣ್ಣೆದುರಿಗಿಲ್ಲ. ಎಲ್ಲವೂ ಸರಿ ಇದ್ದಿದ್ದರೆ ಅಂತಿಮ ವರ್ಷದ ಪದವಿ ಮುಗಿಸಿ ಎಲ್ಲೋ ಒಂದು ಕಡೆ ನೆಲೆ ಕಂಡು ಕೊಳ್ತಾ ಇದ್ವಿ. ಆದರೆ ಈ ಕಾಣದ ಕೊರೊನಾ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿದೆ. ತರಗತಿ ಗೋಡೆಯ ಮಧ್ಯೆ ಇದ್ದ ವಿದ್ಯಾರ್ಥಿ ಉಪನ್ಯಾಸಕರ ಅವಿನಾಭಾವ ಸಂಬಂಧ ಈಗ ಅಂತರ್ಜಾಲದ ಮಡುವಿಗೆ ಸಿಲುಕಿ ಒಬ್ಬರನ್ನೊಬ್ಬರು ನೋಡುವಂತಹ ದಿನಮಾನಕ್ಕೆ ಬಂದಿದೆ. ಮಕ್ಕಳೇ ಎಲ್ಲರೂ ಸುಮ್ಮನೆ ಪಾಠ ಕೇಳಿ ಎನ್ನುವ ಕಾಲಘಟ್ಟ ಹೋಗಿ ಮಾತಾಡಿ ಮಕ್ಕಳೇ ಎನ್ನುವ ಉಪನ್ಯಾಸಕರ ಮಾತು, ಕೋಪ ಬಂದಾಗ ಮುಖ ತೋರಿಸಬೇಡಿ ಅಂತ ಗದರುತ್ತಿದ್ದ ಉಪನ್ಯಾಸಕರು ಇಂದು ಒಮ್ಮೆ ವೀಡಿಯೋ ಆನ್‌ ಮಾಡಿ ಅಂತಾ ಇದ್ದಾರೆ.

ಇದನ್ನೂ ಓದಿ: ಮತ್ತೆ ಹುಟ್ಟಲಿ ಸೂರ್ಯ ವಿದ್ಯಾರ್ಥಿಗಳ ಬಾಳಲಿ…

ಎಲ್ಲವೂ ಬದಲಾಗಿವೆ. ಕಾರಿಡಾರ್‌ನಲ್ಲಿ ನಿಂತು ಹರಟೆ ಹೊಡೆಯೋ ಹಾಗೆ ಇಲ್ಲ, ಫ್ರೆಂಡ್ಸ್‌ ಜತೆ ಗಲಾಟೆ ಇಲ್ಲ, ಗೆಳೆಯರೊಂದಿಗೆ ತಮಾಷೆ ಇಲ್ಲ, ಕ್ಲಾಸ್‌ನಲ್ಲಿ ತರ್ಲೆ ಮಾಡೋ ಹಾಗಿಲ್ಲ, ಡೌಟ್‌ ಇದೆ ಮೇಡಂ ಅಂತ ಉಪನ್ಯಾಸಕರ ಬಳಿ ಓಡೋ ಹಾಗಿಲ್ಲ, ಕ್ಯಾಂಟೀನ್‌ನಲ್ಲಿ ಕುಳಿತು ಹರಟೆ ಹೊಡೆಯೋ ಹಾಗೆ ಇಲ್ಲ, ಗ್ರೌಂಡ್‌ನ‌ಲ್ಲಿ ಆಟವಂತೂ ಮೊದಲೇ ಇಲ್ಲ, ಗೇಲಿ ಮಾತುಗಳಿಲ್ಲ, ಶಿಸ್ತಿನಿಂದ ನಡಿಯೋ ಕಾರ್ಯಕ್ರಮ ಇಲ್ಲ, ಕಾಲೇಜ್‌ ಡೇ ತಯಾರಿ, ಟ್ಯಾಲೆಂಟ್‌ ಡೇ ತರಾತುರಿ ಯಾವುದು ಇಲ್ಲ. ಸಂಭ್ರಮ, ಸಡಗರ, ಕಣ್ಣೀರು, ಹತಾಶೆ, ತಮಾಷೆ ಕಾಲೇಜು ಜೀವನದ ಅತೀ ಸುಂದರ ಕ್ಷಣಗಳಾವುದೂ ನಮ್ಮ ಪಾಲಿಗೆ ಇಲ್ಲ. ಕೇವಲ ನನ್ನ ಮಾತು ಕೇಳ್ತಾ ಇದ್ಯ ಮಕ್ಕಳೇ, ಹೇಳಿದ್ದು ಅರ್ಥ ಆಯ್ತಾ ಮಕ್ಕಳೇ ಅನ್ನೋದ್ರಲ್ಲೇ ಎಲ್ಲಿ ಕಾಲೇಜು ಜೀವನ ಕೊನೆಯಾಗುತ್ತೋ ಎನ್ನುವ ಭಯ ಕಾಡ್ತಾ ಇದೆ. ನೆಟ್‌ವರ್ಕ್‌ ಇಲ್ಲದೆ ಊರೆಲ್ಲ ಅಲೆದಾಡೋ ವಿದ್ಯಾರ್ಥಿಗಳು ಒಂದೆಡೆಯಾದರೆ ಕೇವಲ ಅರ್ಧ ಗಂಟೆಯ ತರಗತಿಗಾಗಿ ದಿನವಿಡೀ ಚಿಂತಿಸಿ ಏನೇ ಆದರೂ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಲೇಬೇಕು ಎಂದು ಒದ್ದಾಡೋ ಉಪನ್ಯಾಸಕರು ಇನ್ನೊಂದೆಡೆ. ಕಾಲೇಜಿನ ಸಡಗರ ಮಿಸ್‌ ಮಾಡಿಕೊಳ್ತಾ ಇರೋ ವಿದ್ಯಾರ್ಥಿಗಳು ಒಂದೆಡೆಯಾದರೆ ವಿದ್ಯಾರ್ಥಿಗಳನ್ನ ನೋಡದೆ ಹಂಬಲಿಸುತ್ತಿರುವ ಉಪನ್ಯಾಸಕರು ಮತ್ತೂಂದೆಡೆ. ದಿನ ಕ್ಲಾಸ್‌ ಮುಗಿಸುವಾಗಲೂ stay home stay safe  ಮಕ್ಕಳೇ ಅನ್ನೋವಾಗ ಅವರಲ್ಲಿನ ಕಾಳಜಿ ಅರ್ಥವಾಗುತ್ತಿದೆ. ಅದೇ ಕಾಲೇಜಿನಲ್ಲಿ ಇರಬೇಕಾದರೆ ಎಲ್ಲೋ ಹಾಸ್ಯಾಸ್ಪದ ಅನ್ನಿಸ್ತಾ ಇತ್ತು.

ಈಗ ನಾವು ವಿದ್ಯಾರ್ಥಿಗಳ ಕಷ್ಟ ಹೇಳ್ತಾ ಇದ್ದೇವೆಯೇ ಹೊರತು ಉಪನ್ಯಾಸಕರ ಬಗ್ಗೆ ಸ್ವಲ್ಪವೂ ಯೋಚನೆ ಕೂಡ ಮಾಡ್ತಾ ಇಲ್ಲ. ಆನ್‌ಲೈನ್‌ ಕ್ಲಾಸ್‌ ಆದರೂ ಸಮೇತ ಅಂತಿಮ ವರ್ಷದವರನ್ನ ದಡ ಸೇರಿಸಲು ಒದ್ದಾಡ್ತಾ ಇರೋದನ್ನ ನೋಡಿದ್ರೆ ಎಲ್ಲೋ ಒಂದು ಕಡೆ ನಮ್ಮ ಉಪನ್ಯಾಸಕರ ಬಗ್ಗೆ ಹೆಮ್ಮೆ ಅನಿಸುತ್ತೆ. ಪರದಾಟದ ಜೀವನದಲ್ಲಿ ನಮ್ಮನ್ನ ನಾವು ಕಳೆದುಕೊಂಡರು ಸಮೇತ ಮರಳಿ ಗೂಡಿಗೆ ಸೇರಿದ ಹಾಗೆ ಪುನಃ ಕಾಲೇಜು ದಿನಗಳನ್ನು ಸಂಭ್ರಮಿಸುವ ಆಸೆ.

ಇದನ್ನೂ ಓದಿ: ವೀರ ಪಥ: ನುರಾನಂಗ್‌ನ ವೀರ ಮಣಿ

ನಮ್ಮತನವನ್ನು ಅರಿವಾಗಿಸಿದವರ ಜತೆ ಸಮಯ ಕಳೆಯೋ ಆಸೆ. ಉಪನ್ಯಾಸಕರ ಜತೆ ಜೀವನದ ಹಾದಿ ಚರ್ಚಿಸೋ ಆಸೆ. ಯಾವಾಗ ಆ ಕ್ಷಣ ಸಮೀಪಿಸಿ ಕಾಲೇಜು ಮೆಟ್ಟಿಲು ಹತ್ತುತ್ತೇವೋ ನಾ ಅರಿಯೆ. ಆದರೆ ಆದಷ್ಟು ಬೇಗ ಆ ದಿನ ಬರಲಿ ಎನ್ನುವುದೇ ನನ್ನ ಹಂಬಲ.

 

 ಸುಪ್ರೀತಾ ಶೆಟ್ಟಿ
ಡಾ| ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.