Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ


Team Udayavani, Jun 29, 2024, 4:30 PM IST

14-uv-fusion

ಶಾಲೆಯ ಶಿಕ್ಷಣ ವ್ಯವಸ್ಥೆಯು ಉತ್ತಮ ಸಮಾಜವನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಇಂದು ನಾವು ಸಮಾಜದಲ್ಲಿ ವಿವಿಧ ರೀತಿಯ ಅಸಮಾನತೆ, ಶೋಷಣೆಯನ್ನು ಕಾಣುತ್ತಿದ್ದೇವೆ. ಇದರಲ್ಲಿ ಲಿಂಗ ತಾರಮ್ಯವು ಪ್ರಮುಖವಾದದ್ದು. ಶಾಲೆಯಿಂದ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಈ ತಾರತಮ್ಯವನ್ನು ನೀಗಿಸಲು ಸಾಧ್ಯ. ಇಲ್ಲಿ ಎಲ್ಲರೂ ಸಮಾನರು ಆದ್ದರಿಂದ ಸಹ – ಶಿಕ್ಷಣ ಪದ್ಧತಿಯ ಅಗತ್ಯವಿದೆ.

ಏಕೆಂದರೇ ಅವರಿಗೆ ಲಿಂಗ ತಾರತಮ್ಯದ ಅನುಭವವಾಗುವುದಿಲ್ಲ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಇಬ್ಬರೂ ಇದ್ದಾಗ, ಪರಸ್ಪರ ಇಬ್ಬರೂ ಗೌರವಿಸುವುದನ್ನು ಕಲಿಯುತ್ತಾರೆ. ಲಿಂಗ ವಿಭಿನ್ನತೆ ಸಹಜ ಪ್ರಕ್ರಿಯೆ ಎಂದೆನಿಸುತ್ತದೆ. ಒಬ್ಬರ ಅಭಿಪ್ರಾಯಗಳನ್ನು ಗೌರವಿಸುವುದನ್ನು ಕಲಿಯುತ್ತಾರೆ. ಅದು ಅವರಿಗೆ ಮುಂದೆ ವೃತ್ತಿಶೀಲರಾದಾಗ ವಿಭಿನ್ನ ವ್ಯಕ್ತಿಗಳ ನಡುವೆ, ವಿಭಿನ್ನ ಲಿಂಗಗಳ ನಡುವೆ ಸಂವಹನ ಸಹಜ ಸಾಧ್ಯವಾಗುತ್ತದೆ.

ಅಧ್ಯಯನದ ಪ್ರಕಾರ ಸಹಶಿಕ್ಷಣದ ಶಾಲೆಯಲ್ಲಿ ಮಕ್ಕಳು ಹದಿಹರೆಯಕ್ಕೆ ಬಂದಾಗ ಆ ಅವಸ್ಥೆಯನ್ನು ಸಹಜವಾಗಿ ನಿಭಾಯಿಸಲು ಕಲಿಯುತ್ತಾರೆ. ಅನ್ಯಲಿಂಗದ ಉಪಸ್ಥಿತಿ ಅವರನ್ನು ವ್ಯಕ್ತಿಗತವಾಗಿ ಜಾಗರೂಕರಾಗಿಯೂ ವೃತ್ತಿಪರರಾಗಿಯೂ ರೂಪಿಸುತ್ತದೆ. ಪರಸ್ಪರ ವಿಭಿನ್ನಲಿಂಗಗಳು ಇಲ್ಲಿ ಪೂರಕವಾಗಿಯೇ ಕೆಲಸ ಮಾಡುತ್ತದೆ.

ಇಲ್ಲಿಯ ಸ್ನೇಹ ಸಂಬಂಧಗಳು ಗಟ್ಟಿಗೊಂಡರೆ ದೇಹಾಕರ್ಷಣೆಯನ್ನು ಮೀರಿ ಎಲ್ಲರ ವ್ಯಕ್ತಿತ್ವಕ್ಕೆ ಪ್ರೌಢಿಮೆ ಪ್ರಾಪ್ತವಾಗುತ್ತದೆ. ಅದನ್ನು ಸಹಜ ರೀತಿಯಲ್ಲಿ ವರ್ತಿಸಿ ಅತಿರೇಕಕ್ಕೆ ಈಡಾಗದಂತೆ ಕಾಪಾಡುವ ಜವಾಬ್ದಾರಿ ಪೋಷಕರದು ಮತ್ತು ಶಿಕ್ಷಕರದು. ಇಲ್ಲಿ ಯಾವುದೇ ಲಿಂಗ ತಾರತಮ್ಯಕ್ಕೆ ಅವಕಾಶವಿರುವುದಿಲ್ಲ.  ಇದರಿಂದಾಗಿ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸಮಾಜದ ಸುಧಾರಣೆಗೆ ಸಹಾಯವಾಗುತ್ತದೆ.

ಸಹ – ಶಿಕ್ಷಣ ಪದ್ಧತಿಯಿಂದಾಗಿ ಹುಡುಗರು ಹುಡುಗಿಯರ ಬಳಿ ಸಭ್ಯವಾಗಿ ವರ್ತಿಸುತ್ತಾರೆ ಹಾಗೂ ಹುಡುಗಿಯರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹುಡುಗರನ್ನು ನೋಡಿದರೆ ಭಯಪಡುವುದು, ಅವರೊಡನೆ ಮಾತನಾಡಲು ಹಿಂಜರಿಕೆ ಇಂತಹ ಗೊಂದಲ ಇರಿಸು – ಮುರಿಸು ಪಡುವಂತೆ ಆಗುವುದಿಲ್ಲ.ಅವರಲ್ಲಿ   ಆರೋಗ್ಯಕರ ಸ್ಪರ್ಧೆ ಮತ್ತು ಸೌಹಾರ್ದ ಭಾವನೆ ಇರುತ್ತದೆ. ಇದು ಹುಡುಗ ಮತ್ತು ಹುಡುಗಿಯರ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ.

ಭವಿಷ್ಯದಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ಸ್ಥಳದಲ್ಲಿ ಉದ್ಯೋಗ ಮಾಡಬೇಕಾಗುತ್ತದೆ. ಒಟ್ಟಿಗೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಾಗುತ್ತದೆ ಈ ಸಹ – ಶಿಕ್ಷಣ ಪದ್ಧತಿಯು ಪರಸ್ಪರ ಹೇಗೆ ಬೆರೆಯಬೇಕು ಎನ್ನುವುದನ್ನು ಮೊದಲ ಹಂತದಲ್ಲಿಯೇ ತಿಳಿಸಿರುತ್ತದೆ. ಗಂಡು ಮತ್ತು ಹೆಣ್ಣು ಯಶಸ್ವಿಯಾಗಿ ಜೀವನವನ್ನು ನಡೆಸಲು  ಸಹಾಯವಾಗುತ್ತದೆ. ಸಮಾಜದಲ್ಲಿ ಆರ್ಥೀಕ, ಸಾಮಾಜಿಕ, ಶೈಕ್ಷಣಿಕ ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ವ್ಯವಸ್ಥೆ ಬಹಳ ಸಹಕಾರಿ ಎನ್ನಬಹುದು.

-ಚೇತನ ಭಾರ್ಗವ,

ಬೆಂಗಳೂರು

ಟಾಪ್ ನ್ಯೂಸ್

1-csaddasd

Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

1-INDI-M

Stop ‘misusing’; ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

1-patla

Yakshagana;ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಕಲಾವಿದರಿಂದ ಅಮೆರಿಕದಲ್ಲಿ ಅಭಿಯಾನ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

rape

Bidar; 9 ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

1-csaddasd

Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್

1-sagara

Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.