ಜಾನಪದ ಆಟಗಳನ್ನು ಮುನ್ನೆಲೆಗೆ ತಂದ ಲಾಕ್‌ ಡೌನ್‌


Team Udayavani, Jun 13, 2020, 2:39 PM IST

ಜಾನಪದ ಆಟಗಳನ್ನು ಮುನ್ನೆಲೆಗೆ ತಂದ ಲಾಕ್‌ ಡೌನ್‌

ಕೋವಿಡ್‌ ತಡೆಗಟ್ಟಲು ಜಾರಿಗೊಳಿಸಲಾದ ಲಾಕ್‌ಡೌನ್‌ ಕ್ರಮಗಳು ಹಲವು ಬದಲಾವಣೆಗಳಿಗೆ ಕಾರಣವಾಗಿವೆ. ಮನೆಯಲ್ಲಿಯೇ ಕುಳಿತು ಸುಸ್ತಾಗಿರುವ ಜನರು ಆಟಗಳ ಮೊರೆ ಹೋಗುತ್ತಿದ್ದಾರೆ. ಜಾನಪದ ಆಟಗಳು ಜನರ ನಡುವೆ ಹಾಸುಹೊಕ್ಕಾಗಿರುವ ಆಟಗಳು. ಗ್ರಾಮೀಣ ಜನರು ಮನೋರಂಜನೆಗಾಗಿ ಹಾಗೂ ದೈಹಿಕ ವ್ಯಾಯಾಮಕ್ಕಾಗಿ ಕಂಡುಕೊಂಡ ಆಟಗಳಾಗಿವೆ. ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿ-ವಸ್ತುಗಳನ್ನು ಬಳಸಿಕೊಂಡು ಆಟವಾಡಬಹುದು. ಈ ಮೂಲಕ ತಾವು ಮತ್ತು ತಮ್ಮ ಕುಟುಂಬದವರನ್ನು ರಂಜಿಸಿಕೊಳ್ಳಲು ಬಹಳ ಹಿಂದಿನಿಂದಲೂ ಇದರ ಮೊರೆ ಹೋಗಿದ್ದಾರೆ. ಈಗ ಅದೇ ಕ್ರೀಡೆಯನ್ನೇ ನಮ್ಮ ನಗರ ವಾಸಿಗಳು ಸಹ ಅಳವಡಿಸಿಕೊಂಡಿದ್ದಾರೆ.
ನಗರವಾಸಿಗಳು ಆರಿಸಿಕೊಂಡ ಆಟಗಳು ಒಳಾಂಗಣ ಕ್ರೀಡೆಗಳು. ನಮ್ಮ ಜನರು ಈ ಆಟಗಳನ್ನು ಮನೆಯ ಮಂದಿಯ ಜತೆ ಆಟವಾಡುತ್ತಾ, ಮಾನಸಿಕವಾದ ನೆಮ್ಮದಿ ಹಾಗೂ ಸಂತಸವನ್ನು ಪಡೆಯುತ್ತಿದ್ದಾರೆ. ಒಬ್ಬರನೊಬ್ಬರು ಅರ್ಥೈಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಎಲ್ಲಾ ಹಳ್ಳಿಗಳಿಗೆ ಸೀಮಿತವಾಗಿದ್ದ ಆಟಗಳು ಇಂದು ನಗರ ಪ್ರದೇಶಗಳ ಮಕ್ಕಳಲ್ಲಿ ಕಂಡುಬರುತ್ತಿವೆ.

ನಮ್ಮ ನಗರ ವಾಸಿ ಮಕ್ಕಳಿಗೆ ಈ ಆಟ ಪರಿಚಯವಾಗುತ್ತಿದೆ ಎಂಬ ಖುಷಿ ಇದೆ. ಮಕ್ಕಳಿಗೆ ನೀಡುತ್ತಿದ್ದ ದುಬಾರಿ ವಸ್ತುಗಳು ಮನೆಯ ಮೂಲೆ ಸೇರಿವೆ. ಮೂಲೆಯಲ್ಲಿದ್ದ ಸಾಮಾನ್ಯ ವಸ್ತುಗಳು ಮಕ್ಕಳ ಆಟಿಕೆಯಾಗಿವೆ. ಜನರಿಗೆ ಇಷ್ಟು ದಿನಗಳ ಕಾಲ ಅವರದೇ ಕೆಲಸದ ಜವಾಬ್ದಾರಿಗಳಿಂದ ಮನೆಯವರ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಅದೇ ಈಗ ಲಾಕ್‌ಡೌನ್‌ ಮೂಲಕ ಜನರು ತಮ್ಮ ಮನೆಯವರನ್ನು , ತಮ್ಮ ಮಕ್ಕಳನ್ನು ಸಂತೋಷದಿಂದ ಅರ್ಥಮಾಡಿಕೊಂಡು ಆಡುತ್ತಿದ್ದಾರೆ. ಲಾಕ್‌ಡೌನ್‌ ಅನಂತರವೇ ಈ ಜನಪದ ಆಟಗಳು ನೆನಪಾಗಿವೆ. ಮಕ್ಕಳಿಗೆ ಒಂದು ರೀತಿಯ ಹೊಸ ಅನುಭವ ಮನೆಯಲ್ಲೇ ಇದ್ದು ಇಷ್ಟು ರೀತಿಯ ಆಟಗಳನ್ನು ಆಡಬಹುದು ಎಂಬುವುದನ್ನು ಅರಿತುಕೊಂಡಿದ್ದಾರೆ. ಮಕ್ಕಳನ್ನು ಚುರುಕಾಗಿಡಲು ಅಳಿಗುಳಿ, ಚೌಕಾಬಾರದಂತಹ ಕೆಲವು ಆಟಗಳಿವೆ. ಇವುಗಳು ಮನೋರಂಜನೆಯ ಜತೆಗೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ.


ಐಶ್ವರ್ಯ ಕೆ.ಆರ್‌. ಸಂತ ಫಿಲೋಮಿನಾ ಕಾಲೇಜ್‌, ಮೈಸೂರು

ಟಾಪ್ ನ್ಯೂಸ್

Social–media-Stars

Social Media Virals: ಸೋಶಿಯಲ್‌ ಮೀಡಿಯಾ ತಂದುಕೊಟ್ಟ “ಸ್ಟಾರ್‌ ಪಟ್ಟ’

Rajanna-CM-DCM

Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್‌.ರಾಜಣ್ಣ ಸಡ್ಡು!

Madhu-Bangarappa1

ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Chikki

Govt School: ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ!

Sathish-jarakhoili

Udupi: ಗ್ರಾಮೀಣ ಭಾಗದ ಕಾಲುಸಂಕ 3 ವರ್ಷಗಳಲ್ಲಿ ಪೂರ್ಣ: ಸಚಿವ ಸತೀಶ್‌ ಜಾರಕಿಹೊಳಿ

Chalavadi1

ಗ್ಯಾರಂಟಿ ಯೋಜನೆಗೆ ಮೀಸಲಿಟ್ಟ 52,000 ಕೋಟಿ ರೂ.ಎಲ್ಲಿ ಹೋಗುತ್ತೆ?: ಛಲವಾದಿ ನಾರಾಯಣಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Social–media-Stars

Social Media Virals: ಸೋಶಿಯಲ್‌ ಮೀಡಿಯಾ ತಂದುಕೊಟ್ಟ “ಸ್ಟಾರ್‌ ಪಟ್ಟ’

Rajanna-CM-DCM

Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್‌.ರಾಜಣ್ಣ ಸಡ್ಡು!

Madhu-Bangarappa1

ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Chikki

Govt School: ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.