Ganesh Chathurthi; ಗಣೇಶ ಚತುರ್ಥಿಯೆಂಬ ಸಂಭ್ರಮ


Team Udayavani, Sep 19, 2023, 10:00 AM IST

16-ganapathi-fusion

ಭಾದ್ರಪದ ಶುಕ್ಲ ಪಕ್ಷ ಚೌತಿಯ ಸಡಗರಕ್ಕೆ ಊರೇ ವೇದಿಕೆಯಾಗಿತ್ತು. ಹೌದು ಗಣೇಶ ಚತುರ್ಥಿ ಬಂತೆಂದರೆ ಸಾಕು. ಕೆಲಸದ ನಿಮಿತ್ತ ದೂರ ಹೋದ ಅಣ್ಣಂದಿರು ಮರಳಿ ಊರಿಗೆ ಬಂದು ಹಬ್ಬವನ್ನು ಜತೆ ಜತೆಯಲ್ಲಿ ಆಚರಿಸು ವಾಗ ಆ ಆಚರಣೆಗೆ ಇನಷ್ಟು ಮೆರಗು ಸಿಗುತ್ತಿತ್ತು. ಮೋದಕ ಪ್ರಿಯ, ಮುದ್ದು ವಿನಾಯಕ, ಜಗದ ನಾಯಕನನ್ನು ಇಷ್ಟಾರ್ಥ ಸಿದ್ಧಿಗಾಗಿ ಜಪಿಸುವುದು. ಕೊನೆಗೆ ಭಕ್ತಿಯ ಭಾವದಿ, ಶಕ್ತಿಯ ಮೂಲದ, ಯುಕ್ತಿಯ ಕರುಣಿಸೋ ಮುಕ್ತಿ ದೇವನನ್ನು ಮೆರವಣಿಗೆಯ ಮೂಲಕ ಹತ್ತೂರ ಸುತ್ತಿಸಿ ಕೊನೆಗೆ ಜಲ ಸ್ತಂಭನ ಮಾಡುವ ತನಕ ಆದಿ ದೇವನನ್ನು ಕೊಂಡಾಡಿ ಮುಂದಿನ ವರ್ಷ ಇನ್ನಷ್ಟು ಹರುಷ ತರುವ ಹಬ್ಬ ಬರಲೆಂದು ಆಸೆಯ ಭಾವ ಕಿರಣವನ್ನು ಹೊತ್ತ ಕಣ್ಣುಗಳಿಂದ ಮನೆಗೆ ಹಿಂತಿರುಗುವುದು.

ಪ್ರತೀ ಹಬ್ಬ ಬಂದಾಗಲೂ ಒಂದೊಂದು ಹಳೆ  ನೆನಪುಗಳು  ಹೆಜ್ಜೆ ಹಾಕಲು ತೊಡಗುತ್ತದೆ. ಹಬ್ಬ ಇನ್ನೇನು ಸಮೀಪಿಸುತ್ತಿದ್ದಂತೆ ಚಕ್ಕುಲಿಯ ಘಮ ಮನೆ ತುಂಬಾ ಘಮಘಮಿಸುತ್ತಿತ್ತು. ಚೌತಿಯ ದಿನ ಮನೆಯಲ್ಲಿ ಮಾಡುವ ಹಲಸಿನ ಎಲೆಯ ಕೊಟ್ಟಿಗೆ ಬಾಯಲ್ಲಿ ನೀರೂರಿಸುತ್ತಿತ್ತು. ಬಗೆ ಬಗೆಯ  ಪದಾರ್ಥಗಳು ಕೂಡ ಈ ಸಾಲಿನಲ್ಲಿದೆ. ಔತಣ ಕೂಟವ ಸವಿಯುವ ಭಾಗ್ಯದ ಜತೆಗೆ ಹಬ್ಬದ ಹಿನ್ನಲೆಯನ್ನು ಅಜ್ಜಿಯಿಂದ ಕೇಳುವ ಸೌಭಾಗ್ಯ ನನ್ನದು.

ಈ ಶಿವ ತನಯನನ್ನು ನಾನಾ ದಿನಗಳಲ್ಲಿ ನಾವುಗಳೆಲ್ಲವೂ ಕೊಂಡಾಡುತ್ತೇವೆ. ಅದರಲ್ಲೂ ಚತುರ್ಥಿ ದಿನ ಮುದ್ದು ಗಣಪನನ್ನು ಊರ ದೇವಾಲಯದಲ್ಲಿ ಪ್ರತಿಷ್ಠಿಸಿ, ಅವನ ಸ್ತುತಿಸಿ, ಜಪಿಸಿ, ಮಾಡಿದ ಪಾಪವ ಕಳೆದು ಅವನ ಶರಣಾಗಲು  ಭಕ್ತರ ದಂಡೇ ಹರಿದು ಬರುತ್ತದೆ.

ಚೌತಿಯ ಮರುದಿನ ಗಣಪನನ್ನು ವಿಸರ್ಜನೆ ಮಾಡುವುದು ವಾಡಿಕೆ. ಈ ಸಮಯದಲ್ಲಿ ಅಯ್ಯೋ ಗಣೇಶ ಮೂರ್ತಿ ಇನ್ನೆರಡು ದಿನ ಇದ್ದರೆ ಒಳಿತಿತ್ತು. ಹೊಟ್ಟೆ ತುಂಬಾ ಅಪ್ಪಕಜ್ಜಾಯ, ಚಕ್ಕುಲಿ, ಮೋದಕಕ್ಕೆ ಇನ್ನೂ ಒಂದು ವರ್ಷ ಕಾಯಬೇಕೆನ್ನುವ ಚಿಂತೆಯ ಜತೆ ನಿನ್ನ ಮಣ್ಣಿನ ಮೂರ್ತಿ ಪ್ರತ್ಯಕ್ಷವಾಗಿ ಕಾಣುವ ಭಾಗ್ಯ ಇಲ್ಲವಲ್ಲ ಎಂಬ ಬೇಸರ ಒಂದೆಡೆ.

ಬಾಲ್ಯದಿಂದಲೂ  ನಿನ್ನ  ವೈಭೋಗವನ್ನು ಕಂಡ ಸೌಭಾಗ್ಯ ನನ್ನದು. ಗಣಪತಿ ಬಪ್ಪ  ಮೋರೆಯ, ಮಂಗಳಮೂರ್ತಿ ಮೋರೆಯ, ಮೋರೆಯಾರೆ ಬಪ್ಪ ಮೋರೆಯಾರೇ ಪದವ ಪಠಿಸಿ, ಅಲ್ಲಿ ನೋಡು ಗಣೇಶ ಇಲ್ಲಿ ನೋಡು ಗಣೇಶ ಎನ್ನುವ ಗಣಪನ ಸ್ತುತಿಸಿ ಅವನನ್ನು ಬೀಳ್ಕೊಡುತ್ತಿದ್ದೆವು. ನಮ್ಮೂರ ವಿನಾಯಕನ ಮೂರ್ತಿಯನ್ನು ಹತ್ತಿರದ ಚಿತ್ತಾರಿ ನದಿಯಲ್ಲಿ ವಿಸರ್ಜಿಸುತ್ತಿದ್ದೆವು. ದಾರಿ ಉದ್ದಕ್ಕೂ ಮಂಗಳವಾದ್ಯ, ನಾಸಿಕ್‌ ಬ್ಯಾಂಡ್‌ ಸದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿ, ಕುಣಿದು ಕುಪ್ಪಳಿಸಿ ಅವನನ್ನು ಬೀಳ್ಕೊಡುತ್ತಿದ್ದೆವು.

ಗಣೇಶನ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವಾಗ ಏನೋ ಒಂಥಾರ ಖುಷಿ. ಮನದಲ್ಲಿ ಭಕ್ತಿಯ ಸಾರ ಮೂಡುತ್ತೆ. ಏ ಗಣಪ  ನಿನ್ನ ಗುಣಗಾನ ಎಲ್ಲೆಡೆ ಮೊಳಗಲು ಕ್ಷಣಗಣನೆ ಆರಂಭವಾಗಿದೆ.

-ಗಿರೀಶ್‌ ಪಿ.ಎಂ.

ವಿ.ವಿ. ಕಾಲೇಜು ಮಂಗಳೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.