Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ


Team Udayavani, Sep 8, 2024, 8:30 AM IST

21

ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗಣಪನ  ಆಗಮನಕ್ಕಾಗಿ  ಹಲವು ದಿನಗಳಿಂದ  ಕಾಯುತ್ತಿರುವ ದಿನ ಕೊನೆಗೂ ಬಂದೇ ಬಿಟ್ಟಿದೆ.ಹಿಂದೂ ಧರ್ಮೀಯರು ಒಂದೆಡೆ ಸೇರಿ ತಮ್ಮೂರಿನ ವಿನಾಯಕನನ್ನು ಬರಮಾಡಿಕೊಂಡು ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬವೆಂದರೆ ಅದು  ನಮ್ಮೆಲ್ಲರ ಊರಿನಲ್ಲಿ ನಡೆಯುವ ಹಬ್ಬ ಚೌತಿ.

ಆದರೆ ಹಬ್ಬದ ಪ್ರಾರಂಭದಲ್ಲಿ ಇರುವ ಹುಮ್ಮಸ್ಸು ಕೊನೆಯವರೆಗೆ ಇರುವಂತೆ ಕಾಣುವುದಿಲ್ಲ .ಆಚರಣೆಯ ಭರದಲ್ಲಿ ಅದೆಷ್ಟೋ ಪರಿಸರಕ್ಕೆ ಹಾನಿಯಾಗುವಂತಹ  ಕೆಲಸವನ್ನು ನಮಗೂ ಅರಿವಿಲ್ಲದಂತೆ ಮಾಡಿರುತ್ತೇವೆ.  ಅದರ ಜೊತೆಗೆ ಏನೂ ಕಮ್ಮಿ ಇಲ್ಲದಂತೆ ರಾಸಾಯನಿಕವನ್ನು ಬಳಸಿ ತಯಾರಿಸಿದ ಕಲಫ‌ುìಲ್‌ ಗಣಪತಿ ವಿಗ್ರಹಗಳು ಕೂಡಾ.

ಪರಿಸರ ಮಾಲಿನ್ಯವು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದ್ದು, ಅದ್ರಲ್ಲಿ ಹಬ್ಬಗಳ ಸಾಲಿಗೆ ಬಂದಾಗ ಗಣೇಶ ಚತುರ್ಥಿ ಸಂದರ್ಭದಲ್ಲಿ ಅತೀ ಹೆಚ್ಚು ಮಾಲಿನ್ಯವಾಗುವುದನ್ನು ಕಾಣುತ್ತೇವೆ. ಆದರೆ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಹೀಗೂ ಆಚರಿಸಬಹುದು..ಮಾರುಕಟ್ಟೆಯಲ್ಲಿ ವಿಧವಿಧ ಬಣ್ಣದ ಗಣೇಶ ವಿಗ್ರಹಗಳು ಇರುತ್ತವೆ.ಅದರ ಬದಲಾಗಿ ಮಣ್ಣಿನಿಂದ ತಯಾರಿಸಿದ,ಬಣ್ಣ ಬಳಸದಿರುವ ವಿಗ್ರಹಗಳನ್ನು ಪೂಜಿಸುವುದರಿಂದ ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ಆರೋಗ್ಯ ಹಾನಿಯಾಗುವಂತಹ ಸನ್ನಿವೇಶ ಇರುವುದಿಲ್ಲ. ಅದರಲ್ಲಿ ಬಳಸಿರುವ ಬೀಜದಿಂದ ಗಿಡ ಬೆಳೆಯುತ್ತದೆ.ರಂಗೋಲಿಯನ್ನು ಮಾಡುವಾಗ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಬಣ್ಣಗಳನ್ನು ಬಳಸುವ ಬದಲಾಗಿ ಗೋರಂಟಿ,ಅಕ್ಕಿ ,ಮೆಹೆಂದಿ ಅರಿಶಿಣ ಪುಡಿ ಇಂತಹ ವಿಘಟನೆ ಆಗುವಂತಹ ಬಣ್ಣಗಳನ್ನು ಬಳಸಿ ಋಣಾತ್ಮಕ ತೊಂದರೆಗಳನ್ನು ತಡೆಯಬಹುದಾಗಿದೆ. ನ್ಯೆವೇದ್ಯ, ಪ್ರಸಾದವನ್ನು ಪ್ಲಾಸ್ಟಿಕ್‌ ಚೀಲ ಗಳಲ್ಲಿ ನೀಡುವ ಬದಲಾಗಿ ಬಟ್ಟೆ  ಚೀಲ ಬಳಸುವುದರಿಂದ ಮರುಬಳಕೆ ಸಹ ಮಾಡಬಹುದಾಗಿದೆ.ನದಿ, ಸರೋವರ ಹೀಗೆ ನೈಸರ್ಗಿಕ ನೀರಿನ ಮೂಲಗಳಲ್ಲಿ ವಿನಾಯಕನ ವಿಗ್ರಹ ವಿಸರ್ಜನೆ ಮಾಡುವುದರಿಂದ ಅದನ್ನೇ ಅವಲಂಬಿಸಿ ಜೀವನ ನಡೆಸುವ ಜನರಿಗೆ ಆರೋಗ್ಯ ತೊಂದರೆ ಉಂಟಾಗುತ್ತದೆ.ಆದ್ದರಿಂದ ಕೃತಕ ಟ್ಯಾಂಕYಳನ್ನು ತಯಾರಿಸಿ ಅದರಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದರೆ ನಕಾರಾತ್ಮಕ ಪರಿಣಾಮವನ್ನು ತಡೆಯಬಹುದು.

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಯಾವುದೇ ಆಚರಣೆ,ಹಬ್ಬಗಳು ಇನ್ನೊಂದು ಜೀವಕ್ಕೆ ಸಂತೋಷ ನೀಡುವಂತಿರಬೇಕೇ ಹೊರತು ತೊಂದರೆ ನೀಡುವಂತಿರಬಾರದು.

- ಶೈನಿತಾ

ಸುಬ್ರಹ್ಮಣ್ಯ

ಟಾಪ್ ನ್ಯೂಸ್

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.