Ganesh Chaturthi: ಗಜಮುಖನೆ ಗಣಪತಿಯೇ ನಿನಗೆ ವಂದನೆ


Team Udayavani, Sep 8, 2024, 9:45 AM IST

4-ganapathi

ವಂದಿಪೆ ನಿನಗೆ ಗಣನಾಥ ಎಂಬ ಸ್ತುತಿಯೊಂದಿಗೆ ನಮ್ಮ ಬಾಲ್ಯದ ದಿನಗಳ ಆರಂಭ. ಗಣಪತಿ ಯನ್ನು ಆರಾಧಿಸದೆ ಇರುವ ಮನೆಯಿಲ್ಲ. ಯಾವುದೇ ಒಂದು ಶುಭಕಾರ್ಯ ಆರಂಭಗೊಳ್ಳಬೇಕಾದರೆ ಮೊದಲು ವಿಘ್ನ ನಿವಾರಕ ಗಣಾಧಿಪತಿಗೆ ಮೊದಲು ಪೂಜಿಸುವರು.

ಸಣ್ಣವರಿದ್ದಾಗ ಗಣೇಶ ಚತುರ್ಥಿ ಬಂತು ಎಂದರೆ ಅದೇನೋ ರೀತಿಯ ಸಂಭ್ರಮ. ಊರಿನಲ್ಲಿ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಆರಂಭಗೊಂಡು, ಮೂರನೇ ದಿನ ವಿಶೇಷ ಶೋಭಯಾತ್ರೆಯೊಂದಿಗೆ ಗಣೇಶನ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಗುತ್ತದೆ.

ಡೊಳ್ಳು ಹೊಟ್ಟೆಯ, ಸಣ್ಣ ಕಣ್ಣಿನ ಕಿರೀಟ ತೊಟ್ಟು ಕೂತ ಸರ್ವಾಲಂಕಾರಭೂಷಿತ ಗಣೇಶನ ವಿಗ್ರಹವನ್ನು ನೋಡಿದಾಗ ಇದೇನು ದೇವರು ಕೂಡ ಇಷ್ಟೊಂದು ಮುದ್ದಾಗಿ ಸುಂದರವಾಗಿ ಇರುವನಲ್ಲಾ ಎಂದು ಅನಿಸುತ್ತಿತು.

ಅದೇನೋ ಗೊತ್ತಿಲ್ಲ ಕೊನೆಯ ದಿನ ಒಂದು ರೀತಿಯ ಬೇಸರದ ಭಾವನೆ ಮನದಲ್ಲಿ ಇರುತ್ತದೆ.

ನನಗಂತೂ ಸಣ್ಣವಳಿದ್ದಾಗ ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸುವ ದಿನದಂದು ಮನದಲ್ಲಿ ಒಂದು ರೀತಿಯ ಗೊಂದಲ ಮಿಶ್ರಿತ ಬೇಸರವು ಮನೆ ಮಾಡಿರುತ್ತಿತ್ತು. ಅಯ್ಯೋ… ಪಾಪ…ಗಣಪತಿಯನ್ನು ನೀರಿನಲ್ಲಿ ಬಿಟ್ಟರೆ ಮುಳುಗಿ ಆತನಿಗೆ ಉಸಿರು ಗಟ್ಟಿದಂತಾಗುವುದಿಲ್ಲವೇ…? ಆತನಿಗೆ ಒಬ್ಬನಿಗೆ ಅದೆಷ್ಟು ಭಯವಾಗಿರಬಹುದು ಎಂಬ ಬೇಸರ ಒಂದೆಡೆಯಾದರೆ, ಇನ್ನೊಂದೆಡೆ ಅಮ್ಮ ಹೇಳುತ್ತಿದ್ದ ಗೌರಿಯು ಗಣೇಶನ ತಾಯಿ ತನ್ನ ತಾಯಿಯ ಬಳಿಗೆ ಮಗನನ್ನು ಸೇರಿಸಲಾಗುತ್ತದೆ ಎಂದು ಹೇಳುತ್ತಿದ್ದುದ್ದನ್ನು ಕೇಳಿ ಏನೋ ಸಮಾಧಾನದ ಭಾವ. ಹೀಗೆ ಅರ್ಥವಿಲ್ಲದ ಅನೇಕ ಪ್ರಶ್ನೆಗಳು ಮನದಲ್ಲಿ ಸುಳಿದಾಡುತ್ತಿದ್ದವು.

ಆ ವಯಸ್ಸೇ ಅಂತಹುದು. ಮುಗ್ಧತೆ ಬಿಟ್ಟರೆ ಬೇರೇನೂ ಇಲ್ಲ. ಮನೆಯಲ್ಲಿ ಗಣಪತಿಗೆಂದು ಇಟ್ಟ ಹಾಲನ್ನು ಗಣಪ ಕುಡಿಯುವನೇನೋ ಎಂದು ಕುತೂಹಲದಿಂದ ಕಾದು, ಕೊನೆಗೆ ಸಾಕಾಗಿ ಅಮ್ಮನ ಕಣ್ಣು ತಪ್ಪಿಸಿ ಹಾಲೆಲ್ಲ ಕುಡಿದು, ಅಮ್ಮಾ ಗಣಪತಿ ಹಾಲು ಕುಡಿದ ಎಂದು ಹೇಳಿಬಿಡುತ್ತಿದ್ದೆ.

ಮನೆಯಲ್ಲಿ ಎಲ್ಲರೂ ಚೌತಿ ಪೂಜೆ ಮಾಡುವುದರಲ್ಲಿ ಮುಳುಗಿದ್ದರೆ, ನಾನು ಮಾತ್ರ ಗಣೇಶನ ಎದುರಿನಲ್ಲಿ ಇಟ್ಟ ಸಿಹಿ ತಿಂಡಿಗಳನ್ನು ಬಾಚಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ನನ್ನದೇ ಆದ ಯೋಚನೆಯಲ್ಲಿ ತಲ್ಲೀನನಾಗಿರುತ್ತಿದ್ದೆ.

ಅಂದು ಮನೆಯಲ್ಲಿ ಮಾಡುತ್ತಿದ್ದ ಆ ಸಣ್ಣ ಪೂಜೆಯಲ್ಲಿ ಇರುತ್ತಿದ್ದ ಸಂಭ್ರವವು ಇಂದು ನಮ್ಮಷ್ಟು ಎತ್ತರವಾದ ವಿಗ್ರಹವನ್ನು ಇಟ್ಟು ಪೂಜಿಸುವ ಗಣೇಶೋತ್ಸವದಲ್ಲಿ ಪಾಲ್ಗೊಂಡಾಗಲೂ ಕೂಡ ಸಿಗುವುದಿಲ್ಲ.

ಕಾಲ ಬದಲಾದಂತೆ ಆಚರಣೆಗಳ ರೀತಿಯು ಬದಲಾಗುತ್ತಾ ಹೋಗುತ್ತದೆ ಮಾತ್ರವಲ್ಲದೇ ಆಚರಿಸು ಆಚರಣೆಯಲ್ಲಿ ಭಾಗಿಗಳಾಗುವವರ ಮನಸ್ಥಿತಿಯಲ್ಲಿಯು ಕೂಡ ಅನೇಕ ವ್ಯತ್ಯಾಸಗಳು ಉಂಟಾಗಿರುತ್ತದೆ.

 -ಪ್ರಸಾದಿನಿ ಕೆ. ತಿಂಗಳಾಡಿ

ಪುತ್ತೂರು

ಟಾಪ್ ನ್ಯೂಸ್

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.