Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ


Team Udayavani, Apr 21, 2024, 2:00 PM IST

7-uv-fusion

ಮಾನವರಾದ ನಾವು ದಿನನಿತ್ಯ ಜೀವನದಲ್ಲಿ ನಮಗೆ ಯಾವ ಅಗತ್ಯಗಳು ಬೇಕಿವೆಯೋ ಅವುಗಳನ್ನು ನಾವೇ ಈಡೇರಿಸಿಕೊಳ್ಳುತ್ತೇವೆ. ನಮಗೆ ಹೇಗೆ ಬೇಕೋ ಹಾಗೆ ಜೀವನ ನಡೆಸುತ್ತೇವೆ. ಚಳಿಯಾದಾಗ ಬೆಚ್ಚಗಿನ ಧಿರಿಸು ಧರಿಸಿ, ಬಿಸಿ ಬಿಸಿ ಆಹಾರ ತಿಂಡಿ ಪದಾರ್ಥಗಳನ್ನು ತಿಂದು ತೇಗುತ್ತೇವೆ.

ಹಾಗೇ ಬೇಸಗೆಯಲ್ಲಿ ಕಾಟನ್‌ ಉಡುಪುಗಳನ್ನು ಧರಿಸಿ, ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಹಣ್ಣುಗಳನ್ನು ತಿನ್ನುವುದು, ನೀರನ್ನು ಹೆಚ್ಚಾಗಿ ಕುಡಿಯುವುದು, ಬಿಸಿಲಿಗೆ ಬಾಡದ ಹಾಗೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು, ಸೆಕೆಯಾದಾಗ ಫ್ಯಾನ್‌, ಎ.ಸಿ ಹೀಗೆ ಎಲ್ಲ ರೀತಿಯಲ್ಲೂ  ನಮ್ಮ ಕುಟುಂಬ, ಸಮಾಜ ಬೇಸಗೆ ಕಾಲವನ್ನು ಎದುರಿಸುತ್ತದೆ.

ಆದರೆ ಈ ವರ್ಷದ ಬಿಸಿಲಿನ ತಾಪಕ್ಕೆ ಕೆರೆ, ಬಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಸಾಕಷ್ಟು ಅನುಕೂಲಗಳಿದ್ದ ಮನುಷ್ಯನಿಗೇ ಈ ತಾಪವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಪ್ರಾಣಿ-ಪಕ್ಷಿಗಳ ಗೋಳು ಯಾವ ರೀತಿಯಾಗಿರಬಹುದು ? ಈಗ ಅದೆಷ್ಟೋ ಪ್ರಾಣಿ, ಪಕ್ಷಿಗಳು ಉರಿಬಿಸಿಲಿನ ತಾಪ ತಾಳಲಾರದೆ, ಕುಡಿಯುವ ನೀರಿಲ್ಲದೆ ಸಾಯುತ್ತಿವೆ.

ಹಳ್ಳಿಗಳ ಲ್ಲಾದರೂ ಕೆರೆ, ಬಾವಿಗಳಾದರೂ ಇವೆ. ಆದರೆ ಕಾಂಕ್ರೀಟ್‌ ಕಾಡುಗಳಲ್ಲಿ ಅದೂ ಇಲ್ಲ.  ಇಲ್ಲಿ ಹೇಗೆ ಪ್ರಾಣಿ-ಪಕ್ಷಿಗಳು ತಮ್ಮ ದಾಹವನ್ನು ತೀರಿಸಿಕೊಂಡಾವು? ಆದ್ದರಿಂದ ಕಾಂಕ್ರೀಟ್‌ ಕಾಡಿನಲ್ಲಿರುವ ನಾವು ಒಂದು ಸಣ್ಣ ಕೆಲಸ ಮಾಡಬೇಕಿದೆ. ಅದೇನೆಂದರೆ ನಮ್ಮ ಮನೆಯ ಮುಂಭಾಗ ಅಥವಾ ಮನೆಯ ಮೇಲಿನ ಗಾರ್ಡನ್‌ನಲ್ಲಿ ಒಂದು ಪಾತ್ರೆಯಲ್ಲಿ ನೀರು ತುಂಬಿಟ್ಟರೆ ಪಕ್ಷಿಗಳು ಬಂದು ನೀರು ಕುಡಿದು ತಮ್ಮ ದಾಹ ಇಂಗಿಸಿಕೊಳ್ಳುತ್ತವೆ.  ಹಾಗೆಯೇ ಒಂದು ಬಟ್ಟಲಿನಲ್ಲಿ ಧಾನ್ಯ, ಕಾಳುಗಳನ್ನು ಅಳತೆ ಮೀರದಂತೆ ತುಂಬಿಸಿಟ್ಟರೆ ಪಕ್ಷಿಗಳು ತಿಂದು ತಮ್ಮ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳುತ್ತವೆ.

ಇದು ನಾವು ಮಾಡುವ ಸಣ್ಣ ಕಾರ್ಯ ಎನಿಸಬಹುದು ಆದರೆ ಪ್ರತೀ ದಿನ ಬಿಡದೆ ಈ ಪ್ರಯತ್ನವನ್ನು ಮುಂದುವರಿಸಿದರೆ ನಮ್ಮ ಸಣ್ಣ ಕಾರ್ಯದಿಂದಾಗಿ ಒಂದು ಪಕ್ಷಿಯಾದರೂ ತನ್ನ ದಾಹವನ್ನು ತಣಿಸಿಕೊಂಡು ಜೀವ ಉಳಿಸಿಕೊಂಡೀತು.

ಮಾನವರಾದ ನಾವು ದಿನನಿತ್ಯ ಅಗತ್ಯಗಳನ್ನು ಈಡೇರಿಸಿಕೊಂಡು ನಮ್ಮಿಚ್ಛೆ ಬಂದಂತೆ ಬದುಕು ಸಾಗಿಸುತ್ತಿದ್ದೇವೆ. ಎಲ್ಲವನ್ನೂ ನಾವೇ ತಿಂದು ತೇಗುವ ಬದಲು ಸ್ವಲ್ಪವಾದರೂ ಸಮಾಜಮುಖೀಯಾಗಿ ಬಾಳ್ಳೋಣ. ಸಮಾಜದಲ್ಲಿನ ಜೀವಿಗಳಿಗೆ ಅಲ್ಪವಾದರೂ ಸಹಾಯ ಮಾಡುತ್ತಾ ಅವುಗಳನ್ನೂ ಬದುಕಿಸುತ್ತಾ ನಾವೂ ಬದುಕೋಣ. ಏನಂತೀರಾ…?

-ಭಾಗ್ಯ ಜೆ.

ಮೈಸೂರು

ಟಾಪ್ ನ್ಯೂಸ್

Russiya-Modi

Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-father

Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

15-

Father: ಅಪ್ಪನೆಂಬ ಆಕಾಶ

13-uv-fusion

Terrace Garden: ಮನೆಗೊಂದು ತಾರಸಿ ತೋಟ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Russiya-Modi

Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-weewq

Hindus ಹೇಳಿಕೆ ;ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.