Hostel life: ಹಾಸ್ಟೆಲ್‌ ಜೀವನ ಮಧುರ ನೆನಪುಗಳ ಸಮ್ಮಿಲನ


Team Udayavani, May 14, 2024, 6:20 PM IST

8-hostel-life

ಅ ಬ್ಬಬ್ಟಾ! ಆ ದಿನ ಮರೆಯಲಾಗದ ದಿನ, ತಂದೆ – ತಾಯಿಯನ್ನು ತಬ್ಬಿಟ್ಟು ಕಣ್ಣಂಚಿನಲ್ಲಿ ನೀರು ತುಂಬಿಕೊಂಡ ದಿನ, ಅಪ್ಪ ,ಅಮ್ಮ, ಮನೆ ಎಲ್ಲಾ ಬಿಟ್ಟು ಇನ್ನೊಂದು ಸುಂದರ ಕುಟುಂಬವನ್ನ ಸೇರೋದು, ಆ ಸುಂದರ ಕುಟುಂಬವೇ ಹಾಸ್ಟೆಲ್‌ ಕಂಡ್ರಿ, ಮನೆಯೇ ಪ್ರಪಂಚ ಅಂತ ಬೆಳೆದ ನಮಗೆ ಹಾಸ್ಟೆಲ್‌ ಅನ್ನೋದು ಒಂದು ಹೊಸದಾದ ಜಗತ್ತು.

ಬಂದ ಮೊದಲ ದಿನ ಯಾರು ಪರಿಚಯವಿಲ್ಲವೇ, ಎಲ್ಲರೂ ಅಪರಿಚಿತರು ನಿಜವಾಗಿಯೂ ಆಗ ನೆನಪಾಗೋದು ಅಮ್ಮನ ಕೈ ರುಚಿ ಮತ್ತೆ ಅಪ್ಪನ ಕಾಳಜಿ. ಹಾಸ್ಟೆಲಿನ ಕೆಲವು ನಿಯಮ ಗೊತ್ತಿಲ್ಲದೇ ಮೊದಲ ದಿನವೇ ಮಾಡಿದ ಅನೇಕ ತಪ್ಪುಗಳು, ಈ ನಿಯಮಗಳಿಗೆ ಹೊಂದಿಕೊಂಡು ಹೋದರೆ ನಿಜವಾಗಿಯೂ ಹಾಸ್ಟೆಲ್‌ ಒಂದು ಅದ್ಬುತ ಜೀವನ. ನನ್ನ ಜೀವನದ ಪಠ್ಯದಲ್ಲಿ ಹಾಸ್ಟೆಲ್‌ ಅನುಭವ ಒಂದು ಹೊಸ ಅಧ್ಯಯವೇ ಸರಿ.

ಸೀನಿಯರ್‌ ನೋಡಿದ್ರೆ ಭಯ ಆದ್ರೆ ನಿಜವಾಗಿಯೂ ಕಳೆದುಕೊಂಡ ಅಪ್ಪ ಅಮ್ಮನ ಪ್ರೀತಿಯನ್ನ ತುಂಬೋದು ಅವರೇ. ಆದ್ರೆ ಏನು ಮಾಡೋದು ಇದೆಲ್ಲದರ ನಡುವೆ ಯಾರೋ ಒಬ್ರು ಸೀನಿಯರ್‌ ಮೇಲೆ ಕ್ರಶ್‌ ಆಗತ್ತೆ, ಅವ್ರು ಕೂಡ ಹುಡುಗಿನೇ ಆದ್ರೂ ನೀವು ತುಂಬಾ ಚೆನ್ನಾಗಿದೀರಾ ಅಂತ ಹೇಳ್ಳೋಕೆ ಒಂದು ತಿಂಗಳು ಬೇಕಾಗತ್ತೆ.

ಅವರ ಜತೆ ಹೊಂದಿಕೊಂಡ ಮೇಲೆ ಪ್ರತಿಯೊಂದು ಕ್ಷಣಗಳು ಬದುಕಿನ ಸವಿ ಸವಿ ನೆನಪುಗಳೇ, ಅವರ ಜತೆ ಮುಗಿಯದ ಮಾತುಗಳು, ಹಾಸ್ಯ ಪಟಾಕಿಗಳು, ಎಕ್ಸಾಂ ಎದುರಿಗೆ ಬಂದರೂ ತೆರೆಯದ ಪುಸ್ತಕಗಳು, ಗಂಟೆ ಏಳಾದರೂ ಹೊಡೆಯದ ಅಲಾರಾಂಗಳು.

ಈ ಹೊಸ ಅಧ್ಯಯದಲ್ಲಿ ಮೂಡಿದ ನೋವು ನಲಿವಿನ ಮಿಶ್ರಣ, ನಮ್ಮದೇ ಗ್ಯಾಂಗ್‌ಳು, ಸರ್ಪ್ರೈಸ್‌ ಬರ್ಥ್ಡ್‌ಗಳು, ಕ್ಯಾಂಡಲ್‌ ಅಲ್ಲಿ ಮಾಡಿದ ಮ್ಯಾಗಿ, ಕದ್ದಿಟ್ಟುಕೊಂಡ ಕ್ಯಾರೆಟ್, ಮುಗಿಯದ ಸೆಲ್ಫಿಗಳು, ವಾರ್ಡ್‌ನ್‌ ಬೈಗುಳಗಳು, ಇಷ್ಟ ಇಲ್ಲದೇ ಇದ್ದರೂ ಮಾಡಿದ ಊಟಗಳು, ಹುಷಾರಿಲ್ಲದೆ ಇ‌ದ್ದಾಗ ರೂಮಿನ ಜತೆಗಾರರು ಮಾಡಿದ ಆರೈಕೆಗಳು, ಮನೆಯ ನೆನಪನ್ನು ತಂದೋಡ್ಡುತ್ತದೆ.

ಅಷ್ಟೇ ಅಲ್ಲದೆ, ಹಾಸ್ಟೆಲ್‌ ನಲ್ಲಿ ಆಚರಿಸುವ ಕೆಲವೊಂದು ಹಬ್ಬಗಳು, ಅಲ್ಲಿ ನಾವು ಸೇರಿಕೊಂಡು ಮಾಡಿದ ಕಿತಾಪತಿಗಳು, ತರ್ಲೆಯಿಂದ ಮಾಡಿದ ಆಯೋಜನೆಗಳು ಎಲ್ಲವೂ ಒಂದು ರೀತಿಯ ಅವಿಸ್ಮರಣೀಯ ನೆನಪುಗಳು, ಸಿಹಿತಿಂಡಿ ಯನ್ನು ಹಂಚಿ ತಿಂದು ಕೊಂಡು ಖುಷಿಯಿಂದ ಕಳೆಯುತ್ತಿದ್ದ ದಿನ. ಮನೆಯೆಂಬ ಒಂದೇ ಸೂರಿನಡಿ ಎಲ್ಲಾ ಪಾತ್ರಗಳು ಮನಸ್ಸಿಗೆ ಸನಿಹ .

ಇದು ಹಾಸ್ಟೆಲ್‌ ಅಂತ ತಿಳಿದಿದ್ದರೂ ನಾವೆಲ್ಲರೂ ಒಂದೇ, ಎಲ್ಲರೂ ನಮ್ಮವರೇ ಎನ್ನುವ ಅರಿವು. ಕಷ್ಟನೋ, ಸುಖಾನೋ ದಿನ ಬೆಳಗಾದರೆ ಒಬ್ಬರನ್ನು ಒಬ್ಬರು ನೋಡಿಕೊಂಡು ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡು ತಾನು ಕಂಡಂತಹ ಹಾಗೂ ಮನೆಯವರು ಹೆಗಲೇರಿಸಿ ಕೊಟ್ಟಂತಹ ಕನಸಿಗೆ ಪ್ರತಿದಿನವೂ ಹಿಡಿಯಷ್ಟು ಪ್ರಯತ್ನ ಹಾಕಿ ಜೀವನದ ಗುರಿಯ ಮೆರೆಯನ್ನು ದಾಟುವ ತವಕ ಒಂದೆಡೆಯಾದರೆ ತನ್ನದಲ್ಲದ ಊರಿನಲ್ಲಿ ತನ್ನತನವನ್ನು ಕಾಪಾಡಿಕೊಂಡು ತನ್ನವರಿಗಾಗಿ ನಿತ್ಯವೂ ಹಂಬಲಿಸಿದೆ ಮನ.

ಹಾಗೆಂದ ಮಾತ್ರಕ್ಕೆ ಹಾಸ್ಟೆಲ್‌ ಜೀವನವೆಂದರೆ ಕೇವಲ ಭಾವನೆಯನ್ನ ವ್ಯಕ್ತಪಡಿಸುವುದಲ್ಲ ಬದಲಾಗಿ ಇಂಚಿಂಚು ಭಾವನೆಗಳನ್ನು ನಾಲ್ಕು ಗೋಡೆಯ ಮಧ್ಯದಲ್ಲಿ ಇದ್ದುಕೊಂಡು ಯಾರಿಗೂ ಗೊತ್ತಾಗದ ಹಾಗೇ ಅನುಭವಿಸುವುದು.

ಅಷ್ಟೇ ಅಲ್ಲದೇ ಹಾಸ್ಟೆಲ್‌ ಜೀವನ ಎಂದರೆ ಅಲ್ಲಿ ಬರುವುದು ಹೋಗುವುದು ಇದ್ದಿದ್ದೆ. ಏನು ಮಾಡುವುದು ಜೀವನವೆಂಬುವುದು ಮತ್ತು ಸಮಯವೆಂಬುವುದು ಯಾರಿಗಾಗಿಯೂ ಕಾಯುವುದಿಲ್ಲ.

ಜೀವನ ಎಂಬುದು ಒಂದು ಬಸ್‌ ಪ್ರಯಾಣ ಇದ್ದಂತೆ ನಾವು ತಲುಪುವ ನಿಲ್ದಾಣ ಬಂದಂತೆ ಯಾರಿಗೂ ಕಾಯದೇ ಇಳಿದು ಹೋಗುತ್ತಾ ಇರಬೇಕು ಹಾಗೆಯೇ ಹಾಸ್ಟೆಲ್‌ ಜೀವನ ಯಾರನ್ನೂ ಎಷ್ಟು ಹಚ್ಚಿಕೊಂಡಿದ್ದರೂ, ಮುದ್ದು ಮಾಡಿ ನೋಡಿಕೊಂಡಿದ್ದರು ನಾವು ಹೋಗುವ ಸಮಯ ಬಂದಾಗ ಎದೆಯಲ್ಲಿ ನೋವಿನ ಬಾರವನ್ನು ಹೊತ್ತುಕೊಂಡು ಕಣ್ಣಲ್ಲಿ ನೀರನ್ನು ತುಂಬಿಕೊಂಡು ಭಾರವಾದ ಮನಸ್ಸಿನಿಂದ ಹೋಗಲೇಬೇಕು.

ಏಕೆಂದರೆ, ಅಗಲಿಕೆ ಎಂಬುದು ಅನಿವಾರ್ಯ ಹಾಗಾಗಿ ಯಾವ ವಿಶ್ವವಿದ್ಯಾನಿಲಯವು ಕಲಿಸಿಕೊಡದಂತಹ ಪಾಠ ಹಾಸ್ಟೆಲ್‌ ಕಲಿಸಿಕೊಡುತ್ತದೆ ಹೆಮ್ಮೆಯಿಂದ ಹೇಳುತ್ತೇನೆ ಗರ್ವದಿಂದ ಬೀಗುತ್ತೇನೆ.ಮತ್ತೂಮ್ಮೆ ಈ ಹಾಸ್ಟೆಲ್‌ ಜೀವನದ ಪಯಣಕ್ಕೆ ನಾನೆಂದೂ ಚಿರಋಣಿ.

-ನಾಗಮಣಿ ಈ.

 ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.