Tree: ಮಾವು ಬಿತ್ತಿದರೆ ಮಾವು ಬೇವು ಬಿತ್ತಿದರೆ ಬೇವು


Team Udayavani, Feb 26, 2024, 10:03 AM IST

4-mango-tree

ಒಂದು ಕಥೆಯಲ್ಲಿ ಓದಿದ ನೆನಪು ತರುಣಿಯೊಬ್ಬಳು ಊಟಕ್ಕೆ ಕುಳಿತಿದ್ದಾಗ ಭಿಕ್ಷೆ ಬೇಡುತ್ತ ಬಂದ ಸನ್ಯಾಸಿಯೊಬ್ಬರು ಹಸಿವು ಎಂದು ಅವಳ ಮುಂದೆ ಕೈ ಒಡ್ಡಿದರಂತೆ. ಸಹೃದಯಿಯಾದ ಆ ತರುಣಿ ತನ್ನ ಪಾಲಿನ ಊಟವನ್ನು ಆ ಸನ್ಯಾಸಿಗೆ ನೀಡಿ ಅವರನ್ನ ಸತ್ಕರಿಸಿದಳಂತೆ. ಅಸಲಿಗೆ ಆ ಸನ್ಯಾಸಿ ಒಬ್ಬರು ದೈವೀ ಪುರುಷರಾಗಿದ್ದರು.ಅವಳ ಉಪಚಾರಕ್ಕೆ ಮಾರುವೇಷದಲ್ಲಿದ್ದ ಆ ಸನ್ಯಾಸಿ ಪ್ರಫ‌ುಲ್ಲರಾಗಿ ತನ್ನ ನಿಜ ರೂಪವನ್ನ ತೋರಿಸಿ ಅವಳಿಗೆ ವರ ಒಂದನ್ನು ಕೊಟ್ಟು ಆಶೀರ್ವಾದ ಮಾಡಿ ಹೊರಟು ಹೋದರಂತೆ. ಮರುದಿನ ಅದೇ ಜಾಗದಲ್ಲಿ ಮತ್ತೂಬ್ಬಳು ತರುಣಿ ಊಟಕ್ಕೆ ಕುಳಿತಿದ್ದಳಂತೆ. ಅದೇ ಸಮಯಕ್ಕೆ ಹಿಂದಿನ ದಿನ ಮಾರುವೇಷದಲ್ಲಿ ಬಂದಿದ್ದ ಆ ಸನ್ಯಾಸಿ ಅವಳ ಬಳಿಯೂ ಬಂದು ಹಸಿವು ಎಂದು ಕೈ ಒಡ್ಡಿದರಂತೆ. ಆದರೆ ದುರಹಂಕಾರಿಯಾದ ಆ ತರುಣಿ ತನ್ನ ಮುಂದೆ ಭಿಕ್ಷೆ ಬೇಡಿದ ಸನ್ಯಾಸಿಗೆ ಅವಾಚ್ಯ ಶಬ್ದಗಳಿಂದ ಬೈದಳಂತೆ. ಇದರಿಂದ ಕುಪಿತಗೊಂಡ ಆ ಸನ್ಯಾಸಿ ಅವಳಿಗೆ ಬಾಯಿಯೇ ಬಾರದ ಹಾಗೇ ಶಾಪವನ್ನಿತ್ತು ಅಲ್ಲಿಂದ ಹೊರಟು ಹೋದರಂತೆ. ಈ ಸಣ್ಣ ಕಥೆಯಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಷ್ಟೇ.ನಾವು ಇತರರಿಗೆ ಏನನ್ನು ನೀಡುತ್ತೇವೋ ಅದೇ  ನಮಗೆ ಹಿಂದಿರುಗಿ ಬರುತ್ತದೆ ಎಂದು. ನಾವು ಬೇರೆಯವರಿಗೆ ಒಳ್ಳೆಯದನ್ನ ಬಯಸಿದರೆ ಅದು ಯಾವುದಾದರೊಂದು ರೂಪದಲ್ಲಿ ನಮಗೆ ಹಿಂದಿರುಗಿ ಬರುತ್ತದೆ. ಅದೇ ನಾವು ಇತರರಿಗೆ ಕೆಟ್ಟದನ್ನ ಬಯಸಿದರೆ ಕೆಟ್ಟದ್ದೇ ನಮಗೆ ಆಗುತ್ತದೆ.

ಮಾವು ಬಿತ್ತಿದರೆ ಮಾವು. ಬೇವು ಬಿತ್ತಿದರೆ ಬೇವು.! ಬೇವಿನ ಬೀಜ ಬಿತ್ತಿ ಮಾವನ್ನ ಪಡೆಯಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇತರರಿಗೆ ಕೆಡುಕನ್ನ ಬಯಸಿ ದೇವರ ಮುಂದೆ ನಿಂತು ಭಕ್ತಿಯಿಂದ ಕೈ ಮುಗಿದು ಬೇಡಿಕೊಂಡರೆ ನಮಗೆ ಒಳಿತಾಗುವುದಿಲ್ಲ.

ಕರ್ಮ ಹಿಂದಿರುಗುತ್ತದೆ  ಎಂಬ ಮಾತಿದೆ. ಅದು ಇಂದಿಗೂ ಅಕ್ಷರಶಃ ನಿಜ. ನಮ್ಮನ್ನ ಯಾವುದು ಬಿಟ್ಟು ಹೋದರೂ ನಮ್ಮ ಕರ್ಮಫ‌ಲ ನಮ್ಮನ್ನ ಎಂದಿಗೂ ಬಿಟ್ಟು ಹೋಗುವುದಿಲ್ಲ. ಕೆಲವೊಂದು ಬಾರಿ ಸಿಟ್ಟು ಬಂದಾಗ  ಹಾಳಾಗಿ ಹೋಗಲಿ ಎಂದು ನಾವು ಶಪಿಸುವುದಿದೆ. ಆದರೆ ನಮ್ಮನ್ನು ಕೂಡ ನಮ್ಮ ಹಿಂದೆ ಬೇರೆ ಯಾರೋ ಅವರು ಹಾಳಾಗಿ ಹೋಗಲಿ ಎಂದು ಶಪಿಸುತ್ತಾರೆ ಎನ್ನುವುದನ್ನ ನಾವು ಯಾವತ್ತೂ ಮರೆಯುವ ಹಾಗಿಲ್ಲ.

ಜೀವನ ಮೂರುದಿನದ ಬಾಳ ಸಂತೆ. ಈ ಮೂರು ದಿನಗಳಲ್ಲಿ ನಾವು ಹೇಗೆ ಬದುಕಿದ್ವಿ ಅನ್ನುವುದಕ್ಕಿಂತ ನಾವು ಹೇಗೆ ಇತರರೊಂದಿಗೆ ಬದುಕು ನಡೆಸಿದ್ವಿ ಅನ್ನುವುದು  ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಬದುಕಿನ ಕೊನೆಯ ಘಟ್ಟದಲ್ಲಿ ನಮ್ಮ ಜತೆ ಹಣ, ಅಧಿಕಾರ, ಸಂಬಂಧ, ಜನ ಬೆಂಬಲ ಆಸ್ತಿ ಪಾಸ್ತಿ ಯಾವುದು ಬರುವುದಿಲ್ಲ. ಇದಾವುದನ್ನೂ ನಾವು ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ. ನಮ್ಮ ಜತೆ ಕೊನೆಯ ಕ್ಷಣದ ವರೆಗೂ ಬರುವುದು ಇತರರಿಗೆ ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ. ಅಂದರೆ ನಮ್ಮ ಪಾಪ ಪುಣ್ಯಗಳ ಲೆಕ್ಕಾಚಾರ. ಇದನ್ನ ಅರಿತು ಮಾನವ ಕುಲ ಬದುಕಿದರೆ ಎಲ್ಲವೂ ಸುಖಮಯ.

-ಸುಸ್ಮಿತಾ ಕೆ.ಎನ್‌.

ಅನಂತಾಡಿ ಬಂಟ್ವಾಳ

ಟಾಪ್ ನ್ಯೂಸ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.