ಉಸಿರಿಗೆ ಹಸಿರಿರಬೇಕು, ಹಸಿದವರಿಗೆ ಆಹಾರ ಸಿಗಬೇಕು


Team Udayavani, Oct 16, 2020, 9:54 PM IST

World food day

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಾಲಚಕ್ರ ಉರುಳಿದಂತೆ ಪ್ರಪಂಚ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ.

ಆದರೆ ಕಡುಬಡತನದಿಂದ ಆಹಾರಕ್ಕಾಗಿ ಅಂಗಲಾಚುವರ ಪರಿಸ್ಥಿತಿ ಇಂದೂ ಶೋಚನೀಯವಾಗಿದೆ.

ಹಲವಾರು ಹಿಂದುಳಿದ ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಗರಪ್ರದೇಶಗಳಲ್ಲೂ ಕೆಲವರು ಆಹಾರ ಸಿಗದೆ ಪರದಾಡುತ್ತಿದ್ದಾರೆ! ಇದಕ್ಕೆ ಕಾರಣ ಅವರ ಆರ್ಥಿಕಸ್ಥಿತಿ, ಶಿಕ್ಷಣದ ಅರಿವಿಲ್ಲದಿರುವುದು, ಸಮಾಜದಲ್ಲಿ ಹಿಂದುಳಿದಿರುವುದು.

ಅಂತಾರಾಷ್ಟ್ರೀಯ ಕಾನೂನಿನ ಅನ್ವಯ ಆಹಾರ ಪಡೆದುಕೊಳ್ಳುವುದು ಮತ್ತು ಪ್ರತಿಯೊಬ್ಬರ ಹಕ್ಕು, ಆದರೆ ವಾಸ್ತವಾಂಶ ಇದು ಕೇವಲ ಮಾತಿಗಷ್ಟೇ, ನಗರೀಕರಣ, ಜಾಗತೀಕರಣ, ಬೆಳೆದಂತೆಲ್ಲ ಸಮಾಜದ ಪರಿಸ್ಥಿತಿಯೂ ಕೂಡ ಬದಲಾಗಬೇಕು. ಆದರೆ ಇಲ್ಲಿ ಬದಲಾಗುತ್ತಿಲ್ಲ.

ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ನಿರಾಶ್ರೀತರು ಹಸಿವು ಮತ್ತು ಬಡತನದಿಂದ ಕಣ್ಣೀರಿಡುತ್ತಿದ್ದಾರೆ. ಈಗಾಗಿ ಹಸಿವು ಮತ್ತು ಬಡತನ ಪರಿಸ್ಥಿತಿಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಬಹಳ ಮುಖ್ಯ.

ಈಗಾಗಿ ಯುನೈಟೆಡ್ ನೇಶನ್ಸ್ 1945ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ( ಎಫ್ ಎಒ ) ಅನ್ನು ಸ್ಥಾಪಿಸಿತು. ಇದರ ಸ್ಮರಣಾರ್ಥ ಪ್ರತಿವರ್ಷವೂ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸುತ್ತದೆ. ಆಚರಣೆಯ ಮುಖ್ಯಉದ್ದೇಶ ಪ್ರಪಂಚದಾದ್ಯಂತ ಹಸಿವು ಮತ್ತು ಬಡತನದ ನಿರ್ಮೂಲನೆಗಾಗಿ ಹೋರಾಡುವುದು, ಪ್ರತಿಯೊಬ್ಬರಿಗೂ ಪೌಷ್ಟಿಕಾಂಶಯುತ ಆಹಾರ ಸಿಗುವ ಹಾಗೆ ಶ್ರಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ.ಇದರ ಜತೆಗೆ ಎಲ್ಲ ದೇಶಗಳ ಭಾಗಹಿಸುವಿಕೆಯು ಕೂಡ ಅತ್ಯಮೂಲ್ಯವಾಗಿದೆ, ಪ್ರತಿಯೊಂದು ದೇಶದ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳ ಭಾಗವಹಿಸುವಿಕೆಯು ಅವಶ್ಶಕವಾಗಿದೆ.

ಪ್ರತಿವರ್ಷ ಸುಮಾರು ಪ್ರಪಂಚದಾದ್ಯಂತ 821 ಮಿಲಿಯನ್ ಜನರಿಗೆ ಸಕ್ರಿಯ ಆರೋಗ್ಯಕರ ಜೀವನವನ್ನು ನಡೆಸಲು ಬೇಕಾದಷ್ಟು ಆಹಾರವಿಲ್ಲ. ಇನ್ನೂ ಪ್ರತಿವರ್ಷ 3.1 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಾರೆ. ಹಸಿವು ಮತ್ತು ಬಡತನ, ಅಪೌಷ್ಟಿಕತೆ ಸಮಾಜದಲ್ಲಿ ತಾಂಡವವಾಡುತ್ತಿರುವ ಪಿಡುಗಾಗಿದೆ. ಹಸಿವೆಂಬುದು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹಾದುಹೋಗುವ ಅಪಾಯಕಾರಿ ಕಾಲಚಕ್ರವಾಗಿದೆ. ಹಾಗಾಗಿ ಹಸಿವು, ಬಡತನ ನಿವಾರಣೆಯಲ್ಲಿ ಪ್ರತಿಯೊಬ್ಬರ ಪಾತ್ರವು ಹಿರಿದಾಗಿದೆ. ಏಕೆಂದರೆ ಸರಕಾರದ ಜತೆಗೆ ನಾಗರಿಕ ಸಮಾಜವು ಕೈಜೋಡಿಸಬೇಕಾಗಿದೆ.

ಶಿಕ್ಷಣ ನೀಡುವುದರ ಮೂಲಕ ಜಾಗೃತಿ, ಅಭಿಯಾನ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲೂ ಮೂಡಿಸಬೇಕು. ಉತ್ತಮ ಆಹಾರದ ಸೇವನೆ ಇಲ್ಲದೆ ಕಡುಬಡತನದಿಂದ ಬಳಲುತ್ತಿರುವ ಪ್ರದೇಶಗಳನ್ನು ದತ್ತುಪಡೆದು ಹಸಿವಿನಿಂದ ಅಂಗಲಾಚುತ್ತಿರುವವರನ್ನು ಗುರುತಿಸಿ ಅವರಿಗೆ ಸಮರ್ಪಕವಾಗಿ ಅವರಿಗೆ ಅದರಿಂದ ಮುಕ್ತಿಕೊಡಿಸಬೇಕು. ಪೌಷ್ಟಿಕಾಂಶದಿಂದ ನರಳಾಡುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶಯುತ ಆಹಾರ ಪದಾರ್ಥವನ್ನು ಒದಗಿಸಬೇಕು.

ಹಸಿವು ಮತ್ತು ಬಡತನಕ್ಕೆ ಕೀಲಿಕೈ ಆಗಿರುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಅನುದಾನ ಬೆಂಬಲ ಬೆಲೆಯನ್ನು ನೀಡಬೇಕು. ಸರಕಾರದ ಜತೆಗೆ ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಆಹಾರ ಮತ್ತು ಪೌಷ್ಟಿಕತೆಯಿಂದ ಬಳಲುತ್ತಿರುವ ಜನರಿಗೆ ಸಹಕರಿಸಿ ಅಭಾರಿಯಾಗಬೇಕು. ಬಂಡವಾಳಶಾಹಿಗಳು ಬಂಡವಾಳವನ್ನು ಕೇಂದ್ರಿಕರಣದ ಜತೆ ತಿನ್ನಲನ್ನವಿಲ್ಲದೆ, ಪೌಷ್ಟಿಕಾಂಶಕೊರತೆಯಿಂದ ಕನ್ನೇರಿಡುತ್ತಿರುವ ಕಂದಮ್ಮಗಳ ನೆರವಿಗೆ ಧಾವಿಸಬೇಕು.

ಸಮಾಜದಲ್ಲಿ ತಾವು ಚೆನ್ನಾಗಿದ್ದು ಪರರ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಿ ಒಬ್ಬನೇ ತಿನ್ನುವುದರ ಜತೆಗೆ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರವನ್ನು ಹಂಚಬೇಕು. ಆಹಾರವನ್ನು ಬಿಸಾಡುವ ಬದಲು ಹಸಿದವರಿಗೆ ಕೊಡಬೇಕು ದೇಶದ ಪ್ರತಿಯೊಬ್ಬರು ಮನಸು ಮಾಡಿ ಒಬ್ಬೊಬ್ಬ ಹಸಿದವನಿಗೆ ಅನ್ನವನಿತ್ತರೆ ಈ ಸಮಸ್ಯೆಯೇ ಇರುವುದಿಲ್ಲ ಹಾಗಾಗಿ ದೇಶದ ಪ್ರತಿಯೊಬ್ಬರು ಸಹಕರಿಸಿ ಹಸಿವನ್ನು ದೂರಮಾಡಬೇಕು ಮತ್ತು ವಿಶ್ವಸಂಸ್ಥೆ ಆಹಾರ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿ ಪ್ರಪಂಚವನ್ನು ಹಸಿವು ಮುಕ್ತವನ್ನಾಗಿ ಮಾಡೋಣ.

 ಸಂಪತ್ ಶೈವ, ಹಾಸನ 

ಟಾಪ್ ನ್ಯೂಸ್

Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ

Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ

Yatnal-Team

BJP Rift: ವರಿಷ್ಠರ ರಂಗಪ್ರವೇಶ ಬೆನ್ನಲ್ಲೇ ಫೆ.20ಕ್ಕೆ ಬಿಜೆಪಿ ಭಿನ್ನರಿಂದ ಸಭೆ

KJ-Goerge

Pending: ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್‌ ಬಿಲ್‌ ಬಾಕಿ: ಸಚಿವ ಕೆ.ಜೆ.ಜಾರ್ಜ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

1-us

ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ

IND VS PAK

Champions Trophy; ಕರಾಚಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ

Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ

Yatnal-Team

BJP Rift: ವರಿಷ್ಠರ ರಂಗಪ್ರವೇಶ ಬೆನ್ನಲ್ಲೇ ಫೆ.20ಕ್ಕೆ ಬಿಜೆಪಿ ಭಿನ್ನರಿಂದ ಸಭೆ

KJ-Goerge

Pending: ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್‌ ಬಿಲ್‌ ಬಾಕಿ: ಸಚಿವ ಕೆ.ಜೆ.ಜಾರ್ಜ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.