UV Fusion: ಹೊತ್ತು ಮಾಗುವ ಮುನ್ನ ನಿಮ್ಮನ್ನು ನೀವು ಅರಿಯಿರಿ!


Team Udayavani, Sep 17, 2024, 8:35 PM IST

21-uv-fusion

ಬೇರೊಬ್ಬರು ಪಡುವ ಕಷ್ಟ ನೋಡಿ ನಗುವಿನೊಂದಿಗೆ ಕಾಲ ಕಳೆದವರು ಮುಂದೊಂದು ದಿನ ಅಳುವ ಸಂದರ್ಭ ಖಂಡಿತವಾಗಿಯೂ ಬರುತ್ತದೆ. ಕರ್ಮಫ‌ಲ ಅನ್ನೋದು ಅದಕ್ಕೇ ಅಲ್ವಾ. ಈ ಮಾತನ್ನು ನಾನು ಯಾವತ್ತೂ ನಂಬುತ್ತೇನೆ.

ಬೇರೆಯವರ ಬಗ್ಗೆ ಕೊರತೆಗಳನ್ನು ಹೇಳುವ ಬದಲು ನಮ್ಮ ಬದುಕಿನ ಬಗ್ಗೆ ನಾವು ಕಾಳಜಿ ವಹಿಸೋಣ. ಜತೆಗೆ  ಇನ್ನೊಬ್ಬರ ಸಾಧನೆಯಲ್ಲಿ ಖುಷಿಪಡುವುದನ್ನು ಕಲಿಯೋಣ. ಕುಂದು-ಕೊರತೆಯನ್ನು ಹುಡುಕುತ್ತಾ ಕೂತಲ್ಲಿ ನಾವು ಅಲ್ಲೇ ಇರುತ್ತೇವೆ. ಸಾಧಿಸುವವರು ಮುಂದೆ ಸಾಗುತ್ತಿರುತ್ತಾರೆ. ನಷ್ಟ ಅನುಭವಿಸುವವರು ನಾವೇ ಆಗಿರುತ್ತೇವೆ.

ನಮ್ಮ ದೇಶದ ಆಸ್ತಿ ನಮ್ಮ ಯುವಜನಾಂಗ. ಯುವ ಜನತೆ  ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಸ್ವಾಮಿ ವಿವೇಕಾನಂದರ ಸಂದೇಶವನ್ನು ಮರೆಯುತ್ತಿದ್ದಾರೆ. ನಾವು ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಗೆಲ್ಲಲು ಪ್ರಯತ್ನಿಸಿ,  ಜೀವನವನ್ನು ಗುರಿಯತ್ತ ಮುನ್ನಡೆಸಿ, ಇತರರಿಗೆ ಮಾರ್ಗದರ್ಶನ ನೀಡಬೇಕು.

ನಮ್ಮ  ದೇಶದ ಒಳಿತಿಗಾಗಿ ಹೋರಾಡಬೇಕಿದ್ದ ಬಹಳಷ್ಟು ಯುವಜನತೆ ಇಂದು ಪ್ರೀತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ಧೂಮಪಾನ, ಮದ್ಯಪಾನ, ಕೆಲಸಕ್ಕೆ ಹೋಗದೆ ಮನೆಯಲ್ಲಿರುವುದು, ಧರ್ಮಕ್ಕಾಗಿ, ಆಸ್ತಿಗಾಗಿ ಕಚ್ಚಾಟ ಮಾಡುವುದು, ಇನ್ನೂ ಹತ್ತು ಹಲವಾರು ಕಾರಣದಿಂದ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ಅತೀ  ದೊಡ್ಡ ದುರ್ದೈವವೆಂದರೆ ತಪ್ಪಾಗಲಾರದು. ಮುಂದೊಂದು ದಿನ ತಾವು ಮಾಡಿದ ತಪ್ಪು ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ ಸಮಯ ಕಳೆದಿರುತ್ತದೆ.

ಬದುಕು ನದಿಯಂತಿರಬೇಕು. ಕಷ್ಟ ಬಂದಾಗ ಎದುರಿಸಿ ಮುಂದೆ ಸಾಗುತ್ತಾ ಧೈರ್ಯದಿಂದ ಎದುರಿಸಬೇಕು. ಅತಿಯಾದ ನಿರೀಕ್ಷೆ ಮನಸ್ಸಿನಲ್ಲಿಟ್ಟು ಮುಂದೊಂದು ದಿನ ಅದು ಕಾರ್ಯಗತವಾಗದಿದ್ದಲ್ಲಿ, ತಪ್ಪು ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡುವ ಜನರನ್ನು ನೋಡುವಾಗ ನಿಜಕ್ಕೂ ಬೇಸರವಾಗುತ್ತಿದೆ. ಪ್ರತಿಯೊಬ್ಬರಿಗೆ ಸಂಕಷ್ಟ ಇರುತ್ತದೆ, ಕಷ್ಟವಿಲ್ಲದ ಜೀವನವಿಲ್ಲ.

ಯಾವುದಾದರೂ ಒಂದು ಕಾರಣದಿಂದ ಮಾನಸಿಕವಾಗಿ ಕುಗ್ಗಿದರೆ ಸೂಕ್ತ ವೈದ್ಯರನ್ನು ಭೇಟಿ ಮಾಡಿ, ನಮ್ಮವರಲ್ಲಿ ಮಾತನಾಡಿ ಪರಿಹಾರವನ್ನು ಹುಡುಕಿಕೊಳ್ಳುವುದು ಮುಖ್ಯ.  ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದನ್ನು ಮೊದಲು ಬಿಟ್ಟು ಬಿಡಬೇಕು. ನೀವು ಅಂದುಕೊಂಡ ಹಾಗೆ ನಿಮ್ಮ ಬದುಕನ್ನು ರೂಪಿಸಲು ಸಾಧ್ಯವಿಲ್ಲ.

ಆದರೆ ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ. ಬದುಕಲ್ಲಿ ತಪ್ಪು ನಡೆದರೆ ಕೊರಗದೆ ನಮ್ಮ ಮುಂದಿನ ಬದುಕಿಗೆ ಮಾರ್ಗ ತಿಳಿದುಕೊಳ್ಳೋಣ. ಖುಷಿ ಘಟನೆ ಆದಲ್ಲಿ ಇನ್ನಷ್ಟು ಒಳಿತಾಗಲು ಪ್ರಯತ್ನಿಸೋಣ. ಕಷ್ಟ ಬಂದರೆ ಸರಿಪಡಿಸಲು ದಾರಿ ಹುಡುಕುವ ಪ್ರಯತ್ನ ಮಾಡೋಣ. ಇತರರ ಸಾಧನೆಯನ್ನು ಮಾರ್ಗದರ್ಶನದಂತೆ ಸ್ವೀಕರಿಸಿ, ನಮ್ಮವರಿಗಾಗಿ, ನಮಗಾಗಿ ಬದುಕೋಣ. ಯಾಕೆಂದರೆ ಜೀವನ ಜೀವಿಸಲು ಸಿಗುವುದು ಒಂದೇ ಬಾರಿ ಅಲ್ವಾ.  ಒಮ್ಮೆ ಯೋಚಿಸಿ ನೋಡಿ.

-ಶೃತಿ ಬೆಳ್ಳುಂಡಗಿ

ವಿಜಯಪುರ ಕನ್ನೂರ

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.