Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ


Team Udayavani, Apr 24, 2024, 3:58 PM IST

11-mallige

ಎಲ್ಲ ಶುಭ ಸಮಾರಂಭಗಳಲ್ಲಿ ಮಲ್ಲಿಗೆ ಹೂವು ಅತ್ಯಂತ ಮಹತ್ವವನ್ನು ಪಡೆದಿದೆ. ಕೇವಲ ಶುಭ ಸಮಾರಂಭ ಮಾತ್ರವಲ್ಲ ದೇವರ ಪೂಜೆಗೂ ಮಲ್ಲಿಗೆ ಬಹಳ ವಿಶೇಷ.

ನಿಮಗೆ ಗೊತ್ತಾ ಈ ಮಲ್ಲಿಗೆಯ ನಡುವಲ್ಲಿ ದೇವರು ಮಲಗುತ್ತಾರೆ. ಆ ಸಮಯದಲ್ಲಿ ಮಲ್ಲಿಗೆಯ ಬೆಲೆ ಗಗನಕ್ಕೇರುತ್ತದೆ. ಜತೆಗೆ ಆ ಸಮಯದಲ್ಲಿ ದೇವಸ್ಥಾನದ ಒಳಗೆ ಹೋದರೆ ಮಲ್ಲಿಗೆಯ ಪರಿಮಳ ಒಂದು ರೀತಿಯ ಅಮೋಘ ಅನುಭವ ನೀಡುತ್ತದೆ ಎಂದು.

ಇಲ್ಲಿ ಯಾವುದರ ಬಗ್ಗೆ ಹೇಳುತ್ತಿದ್ದೇನೆಂದರೆ ಅದು ಬಪ್ಪನಾಡಿನಲ್ಲಿ ನಡೆಯುವ ಶಯನೋತ್ಸವದ ಕುರಿತು. ಶಯೋತ್ಸವ ಎಂದರೆ ಇಲ್ಲಿ ಭಕ್ತರು ಹರಕೆಯ ರೂಪದಲ್ಲಿ ತಂದ ಮಲ್ಲಿಗೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಂತಹ ಮಲ್ಲಿಗೆಯಲ್ಲಿ ದೇವರು ಮಲಗುವಂತಹ ಸನ್ನಿವೇಶ ಈ ಸುಂದರ ಕ್ಷಣವನ್ನು ನೋಡಲು ಎರಡು ಕಣ್ಣು ಸಾಲದು.

ಈ ಸುಂದರ ಕ್ಷಣ ನಡೆಯುವುದು ಬಪ್ಪನಾಡಿನ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ. ಶಿವರಾತ್ರಿಯಿಂದ ದೇವರಿಗೆ ಬಲಿ ಉತ್ಸವ ನಡೆದು ಕೊನೆಯ ಎಂಟು ದಿನದಲ್ಲಿ ಮೊದಲ ದಿನ ಸಸಿಹಿತ್ಲು ಭಗವತಿ ಭೇಟಿಯ ಅನಂತರ ಧ್ವಜಾರೋಹಣ ನಡೆದು ರಥೋತ್ಸವಕ್ಕಿಂತ ಮೊದಲ ಹಗಲು ರಥೋತ್ಸವದ ದಿನ ಶಯನೋತ್ಸವ ನಡೆಯುತ್ತದೆ. ಇಲ್ಲಿನ ವಿಶೇಷ ಏನೆಂದರೆ ರಥೋತ್ಸವದ ದಿನ ಸಸಿಹಿತ್ಲು ಭಗವತಿ ಭೇಟಿಯಾಗಿ ಅನಂತರ ದೇವಸ್ಥಾನವನ್ನು ನಿರ್ಮಿಸಿದ ಮುಸ್ಲಿಂ ವ್ಯಾಪಾರಿ ಬಬ್ಬ ಬ್ಯಾರಿ ಕುಟುಂಬಸ್ಥರಿಗೆ ನೀಡಿದ ಅನಂತರ ರಥೋತ್ಸವದ ನಡೆಯುತ್ತದೆ.

ಕರಾವಳಿಯ ಅನೇಕ ಕಡೆಗಳಿಂದ ಈ ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷಗಟ್ಟಲೆಯಲ್ಲಿ ಮಲ್ಲಿಗೆ ಸಲ್ಲಿಕೆಯಾಗುತ್ತದೆ. ಕಳೆದ ವರುಷ ನೋಡುವುದಾದರೆ ಸುಮಾರು ನಾಲ್ಕು ಲಕ್ಷ ಅಟ್ಟೆ ಮಲ್ಲಿಗೆ ಉಡುಪಿ, ಮಂಗಳೂರು ಭಾಗದಿಂದ ದೇವಿಗೆ ಸಮರ್ಪಿತವಾಗಿದೆ.

ಹರಕೆಯ ರೂಪದಲ್ಲಿ ಭಕ್ತರು ತಮ್ಮ ಇಚ್ಛೆಯಂತೆ ಒಂದು ಚೆಂಡು ಅಥವಾ ಒಂದು ಅಟ್ಟೆ ಮಲ್ಲಿಗೆಯನ್ನು ದೇವಿಗೆ ಸಮರ್ಪಿಸುತ್ತಾರೆ. ದುರ್ಗಾಪರಮೇಶ್ವರಿಗೆ ಶಯನದ ಅನಂತರ ಮರುದಿನ ಮುಂಜಾನೆ ಪೂಜೆ ನಡೆದು ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.

ಈ ಶಯನದ ಸಂದರ್ಭದಲ್ಲಿ ಎರಡು ದಿನಗಳ ಕಾಲ ದೇವಸ್ಥಾನ ಸಂಪೂರ್ಣ ಮಲ್ಲಿಗೆಯ ಸುವಾಸನೆಯಿಂದ ಕೂಡಿರುತ್ತದೆ. ಇಂತಹ ಸುಂದರ ಕ್ಷಣವನ್ನು ನೋಡಲು ಅನುಭವಿಸುವ ಒಂದು ರೀತಿ ಹಿತವಾಗಿರುತ್ತದೆ.

ಈ ವರುಷ ಮಾರ್ಚ್‌ 24ರಿಂದ 31ರ ವರೆಗೆ ಬಪ್ಪನಾಡಿನ ಜಾತ್ರಾ ಮಹೋತ್ಸವ ನಡೆದಿದ್ದು, ಮಾ. 30ರಂದು ಮಧ್ಯಾಹ್ನ ಹಗಲು ರಥೋತ್ಸವದ ಅನಂತರ ಸಂಜೆ ದೇವಿಗೆ ಶಯನೋತ್ಸವಕ್ಕೆ ಮಲ್ಲಿಗೆ ಸಮರ್ಪಿಸಲಾಗಿತ್ತು. ಇಂತಹ ಅಪರೂಪದ ಸುಂದರ ಕ್ಷಣವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು.

-ಕಾರ್ತಿಕ್‌ ಮೂಲ್ಕಿ

ಎಸ್‌ಡಿಎಂ ಕಾಲೇಜು ಉಜಿರೆ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.