Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ


Team Udayavani, May 14, 2024, 6:29 PM IST

9-uv-fusion

ಬದಲಾವಣೆ ಜಗದ ನಿಯಮ ಎನ್ನುವ ಮಾತಿದೆ. ದಿನ ಸಾಗಿದಂತೆಲ್ಲಾ ಬದಲಾವಣೆಯಾಗುತ್ತ ಹೋಗುತ್ತದೆ. ಆದರೆ ಈ ಬದಲಾವಣೆ ಎಂಬುವುದು ಬಹಳ ಅಪಾಯಕಾರಿಯದುದು. ಅದು ಒಳ್ಳೆಯ ರೀತಿಯಲ್ಲಾಗಿದ್ದರೆ ತಪ್ಪೇನಿಲ್ಲ ಬಿಡಿ, ಆದರೆ ಮಾನಸಿಕವಾಗಿ ಕುಗ್ಗಿ ಹೋಗುವಂತಾಗುವುದು ತುಂಬಾನೇ ಅಪಾಯಕಾರಿ. ಅದರಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದನ್ನು ನಾವು ಗಮನಿಸಿರಬಹುದು.

ಆದರೆ ಅವರ ಖನ್ನತೆ ಗೆ ಇರುವ ಕಾರಣ ಕೇಳಿದಾಗ ಯಾವುದೋ ಒಂದು ಕ್ಷುಲ್ಲಕ ವಿಚಾರಕ್ಕಾಗಿರುತ್ತದೆ.ಆಕೆ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿ. ಫ‌ಸ್ಟ್ರಾಂಕ್‌ ಸ್ಟೂಡೆಂಟ್‌ ಅಲ್ಲದೆ ಇದ್ರೂ ಕೂಡ ತಕ್ಕಮಟ್ಟಿಗೆ ಜಾಣೆಯಾಗಿದ್ದಳು. ಆದ್ರೆ ಅವಳಲ್ಲಿದ್ದ ಒಂದೇ ಒಂದು ದೌರ್ಬಲ್ಯ ಅಂದ್ರೆ ಅವಳ ಸ್ನೇಹಿತರು. ಅಂದರೆ ಅವರೇ ತನ್ನ ಪುಟ್ಟಪ್ರಪಂಚ ಎಂದು ಭಾವಿಸಿದ್ದಳು. ಪ್ರತಿಯೊಂದಕ್ಕೂ ಅವರಿರಬೇಕು ಜೊತೆಯಲ್ಲಿ ಎಂದು ಕೂರುತ್ತಿದ್ದಳು.

ಆದರೆ ಅದ್ಯಾವುದೋ ಒಂದು ಸಂದರ್ಭ ದಲ್ಲಿ ಯಾರದೋ ಮಧ್ಯ ನಡೆದ ಯಾವುದೋ ಒಂದು ಕ್ಷುಲ್ಲಕ ವಿಷಯಕ್ಕೆ ಕಾರಣವೇ ಇಲ್ಲದೆ ಆ ನಿಷ್ಕಲ್ಮಶ ಸ್ನೇಹ ಬಲಿಯಾಯಿತು. ತನ್ನದಲ್ಲದ ತಪ್ಪಿಗೆ ತನ್ನನ್ನು ಹೊಣೆಯಾಗಿರಿಸಿಕೊಂಡು ಬಹಳ ದುಃಖತಪ್ತಳಾದಳು. ಅಷ್ಟು ದಿನದ ಒಡನಾಟ, ತುಂಟಾಟ, ಹುಸಿಮುನಿಸು ಆದರೂ ಕೊನೆಗೆ ಜೊತೆಗೆ ನಿಲ್ಲುತ್ತಿದ್ದ ಆ ಸ್ನೇಹ ಕಾರಣವೇ ಇಲ್ಲದೆ ಕಮರಿಬಿಟ್ಟಿತು. ಆದರೆ ಅದಕ್ಕೆ ಇಂದಿಗೂ ಉತ್ತರ ಮಾತ್ರ ಶೂನ್ಯ.

ಒಂದಷ್ಟು ದಿನ ಆ ಸುಂದರ ಸ್ನೇಹಕ್ಕಾಗಿ ಅತ್ತು ಹಂಬಲಿಸಿ ಬಿಟ್ಟಳು. ತನ್ನ ತಪ್ಪಿಲ್ಲ ಎಂದು ನಿರೂಪಿಸಲು ಹೋಗಿ ಸೋತು ಹೋದಳು. ಆದರೆ ಅವಳ ಹಿತವ ಬಯಸಿದ ಕೆಲವು ಮನಸ್ಸುಗಳಿಗೆ ಆಕೆಯ ಆ ಬದಲಾವಣೆ ಸಹಿಸಲಾಗಲಿಲ್ಲ. ಕೊನೆಗೂ ಅವರೆಲ್ಲರ ಮಾತು ಕೇಳಿ ತಾನು ಹೀಗಿರಬಾರದು ಬದಲಾಗಬೇಕು ಎಂದು ತೀರ್ಮಾನಿಸಿ, ಒಂದು ಕ್ಷಣ ತನ್ನ ಕನಸು,ಗುರಿ ಹಾಗೂ ಮೊದಲಿದ್ದ ರೀತಿ ಎಲ್ಲವನ್ನು ನೆನಪಿಸಿಕೊಂಡಾಗ ಇದು ತಾನಲ್ಲ. ಇನ್ನಾದರೂ ನಾನು ನನಗಿರಬೇಕೆಂದು ಆಕೆಗೆ ಅರಿವಾಗತೊಡಗಿತು.

ಅಂದಿನಿಂದ ಆಕೆಗೆ ಜೊತೆಯಾದದ್ದು ಆಕೆಯ ನೆಚ್ಚಿನ ಪುಸ್ತಕಗಳು.ಹಾಗೂ ತನ್ನ ಕನಸಿನ ಹಾದಿಗೆ ಹೆಜ್ಜೆಯಿಡಳು ಯಾವೆಲ್ಲಾ ಮಾರ್ಗಗಳು ಬೇಕೋ ಅದರಲ್ಲೇ ಹೆಚ್ಚು ಕಾಲ ಕಳೆಯಲಾರಂಭಿಸಿದಳು. ಮೊದಲಾದರೆ ಸಮಯ ಸಿಕ್ಕಾಗಲೆಲ್ಲ ಮಾತಿಗೆ ಕೂರಲು ಕಾಯುತ್ತಿದ್ದವಳು ಇಂದು ಸಮಯ ಸಿಕ್ಕಾಗ ಪುಸ್ತಕದ ಪುಟ ತಿರುವಿಕೊಂಡು ಕೂತಳು.

ಇಲ್ಲಿ ನಾವು ತಿಳಿಯಬೇಕಾದದ್ದು ಏನೆಂದರೆ ಸಮಸ್ಯೆಗಳು ಸಾವಿರ ಬರಬಹುದು. ಕೆಲವೊಂದು ನಾವು ಪಡೆದುಕೊಳ್ಳಬಹುದು ಅದೇ ರೀತಿ ಕೆಲವೊಂದು ಕಳೆದುಕೊಳ್ಳಬಹುದು.

ಆದರೆ ಎಲ್ಲವೂ ಕೂಡ ನಮಗೊಂದು ಪಾಠ ಕಳಿಸಿಯೇ ಕಲಿಸುತ್ತದೆ. ಕೆಲವೊಂದು ಅನುಭವ ಹಾಗೂ ಘಟನೆಗಳು ನಮ್ಮ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಆದರೆ ನಾವು ಯಾವುದನ್ನಾದರೂ ಋಣಾತ್ಮಕವಾಗಿ ತೆಗೆದುಕೊಳ್ಳುವುದರ ಬದಲಾಗಿ ಅದನ್ನು ಧನಾತ್ಮಕವಾಗಿ ತೆಗೆದುಕೊಂಡಾಗ ಖಂಡಿತ ನಾವು ನಮ್ಮ ವ್ಯಕ್ತಿತ್ವವನ್ನು ಇನ್ನೂ ಚೆನ್ನಾಗಿ ರೂಸಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಬದಲಾಗಬೇಕು ಆದರೆ ಅದು ಒಳ್ಳೆಯ ರೀತಿಯಲ್ಲಾಗಿರಬೇಕು. ನಮ್ಮವರು ನಮ್ಮನ್ನು ಕಂಡು ಹರ್ಷಗೊಳ್ಳುವಂತಿರಬೇಕು.

ಪ್ರಸಾದಿನಿ ಕೆ.

ತಿಂಗಳಾಡಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.