UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ


Team Udayavani, Apr 19, 2024, 2:51 PM IST

16-fusion

ಅಪ್ಪ -ಅಮ್ಮ ಎಂದರೆ ಪ್ರೀತಿ, ವಾತ್ಸಲ್ಯದಿಂದ ಮಕ್ಕಳೊಂದಿಗೆ ಹೆಗಲಾಗಿ ನಿಲ್ಲುವವರಾಗಿರುತ್ತಾರೆ. ಅಮ್ಮಎಂದರೆ ನೆನಪಿಗೆ ಬರುವುದೇ ಮಮತೆ. ಆಕೆ ಪ್ರೀತಿ ಹಾಗೂ ಹಸಿವನ್ನು ತೀರಿಸುವ ಮಾತೆಯಾಗಿ ಕಂಡರೆ, ತಂದೆ ಮೌನವಾಗಿಯೇ ತನ್ನ ಮಗುವಿಗೆ ಪ್ರೀತಿ ತೋರಿಸಿ ಕೊಂಡು, ಮಗುವಿಗೆ ಬೇಕಾದನ್ನು ತೆಗೆದುಕೊಡುತ್ತಾರೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ತಂದೆ-ತಾಯಿ ತೋರಿಸುವ ಪ್ರೀತಿ ಯಾಂತ್ರಿಕವಾಗಿದೆ.

ತನ್ನ ವ್ಯಾವಹಾರಿಕ ಜೀವನದಿಂದಾಗಿ ಹಣವನ್ನು ಗಳಿಸುವುದೇ ಹೆತ್ತವರ ಗುರಿಯಾಗಿರುತ್ತದೆ. ಮಕ್ಕಳಿಗೆ ಸಮಯದೊಂದಿಗೆ ಪ್ರೀತಿಯನ್ನು ನೀಡುವ ಬದಲಿಗೆ ಮೊಬೈಲ್‌ ಅನ್ನು ಕೈಯಲ್ಲಿ ಇಟ್ಟುಬಿಡುತ್ತಾರೆ.

ಹಿಂದಿನ ಕಾಲದಲ್ಲಿ ಚಂದ್ರನನ್ನು ತೋರಿಸಿಕೊಂಡು ಊಟ ಮಾಡಿಸುತ್ತಿದ್ದರು, ಆದರೆ ಆ ಸನ್ನಿವೇಶ ಈ ಆಧುನಿಕ ಕಾಲದಲ್ಲಿ ಬದಲಾಗಿದೆ. ಚಂದ್ರನನ್ನು ತೋರಿಸುವ ಬದಲಿಗೆ, ಮೊಬೈಲ್‌ ತೋರಿಸಿಕೊಂಡು ಊಟ ಮಾಡಿಸುವ ಪರಿಸ್ಥಿತಿ ಬಂದಿದೆ.

ಮಕ್ಕಳು ಪ್ರೀತಿ, ವಾತ್ಸಲ್ಯದೊಂದಿಗೆ ಬೆಳೆಯುವ ಸಂದರ್ಭದಲ್ಲಿ ಪಾಲಕರು ಭವಿಷ್ಯದ ಲಾಭದ ಉದ್ದೇಶದಿಂದಾಗಿ ಮಕ್ಕಳಿಗೆ ಸಮಯ ನೀಡುವುದನ್ನೇ ಮರೆತುಬಿಟ್ಟಿದ್ದಾರೆ. ಮೊಬೈಲ್‌ ಎನ್ನುವುದು ಒಂದು ಬಾರಿಯ ಮನರಂಜನೆಯ ದೃಷ್ಟಿಯಿಂದ ಆಕರ್ಷಕವೆನಿಸಿದರೂ ಮಕ್ಕಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತದೆ. ತನ್ನ ತಂದೆ-ತಾಯಿ ತಮ್ಮ-ತಮ್ಮ ವ್ಯಾವಹಾರಿಕ ದೃಷ್ಟಿಯಿಂದ ದೂರವಿದ್ದಾರೆ ಎಂದಾಗ ಮಕ್ಕಳಿಗೆ ಮೊಬೈಲ್‌ ಎಂಬ ಮಾನವ ನಿರ್ಮಿತ ವಸ್ತು ಸ್ನೇಹಿತನಾಗಿ ಬಿಡುತ್ತದೆ. ಒಂದು ದೃಷ್ಟಿಯಿಂದ ನೋಡಿದರೆ ಹೆತ್ತವರೇ ಮಕ್ಕಳಿಗೆ ತನ್ನವರಿಗೆ ಸಮಯ ನೀಡುವ ಮೌಲ್ಯವನ್ನು ತಿಳಿಯದಂತೆ ಮಾಡಿಸುತ್ತಾರೆ.

ಈ ರೀತಿಯ ಹೆತ್ತವರ ವರ್ತನೆಯಿಂದಾಗಿ ವೃದ್ಧಾಶ್ರಮಗಳ ಸಂಖ್ಯೆ ವಿಸ್ತರಣೆಗೆ ದಾರಿ ಮಾಡಿ ಕೊಡುತ್ತದೆ. ಸಾಧ್ಯವಾದಷ್ಟು ತನ್ನ ಮಕ್ಕಳಿಗೆ ಹಾಗೂ ತನ್ನವರಿಗೆ ಸಮಯವನ್ನು ನೀಡಿ. ನಿಮ್ಮ ಮಕ್ಕಳ ಬಾಲ್ಯದ ಅವಿಸ್ಮರಣೀಯ ಕ್ಷಣ ಕಳೆದು ಹೋದರೆ ಮತ್ತೂಮ್ಮೆಮರುಕಳಿಸಲು ಸಾಧ್ಯವಿಲ್ಲ.

ಹಾಗಾಗಿ ಮನೆ ಮಕ್ಕಳೊಂದಿಗೆ ಸಾಧ್ಯವಾದಷ್ಟು ಪ್ರೀತಿ ವಾತ್ಸಲ್ಯದೊಂದಿಗೆ ಪಾಲಕರು ಸಮಯವನ್ನ ಕಳೆಯಿರಿ. ನೀವು ನೀಡುವ ಉತ್ತಮ ಸಂಸ್ಕಾರ, ಸಮಯ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುತ್ತದೆ.

-ತೃಪ್ತಿ ಗುಡಿಗಾರ್‌

ಎಂ.ಪಿ.ಎಂ., ಕಾಲೇಜು , ಕಾರ್ಕಳ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.