ನೆರಳಿನಂತೆ ಹಿಂಬಾಲಿಸುವ ನೆನಪುಗಳು….


Team Udayavani, Jul 29, 2021, 10:00 AM IST

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಜೀವನ ಅನ್ನೋದು ಅತ್ಯಂತ ಅಮೂಲ್ಯವಾದುದು. ಹುಟ್ಟಿನಿಂದ ಸಾಯುವವರೆಗೂ ಅನುಭವಿಸುವ ಒಂದೊಂದು ಕ್ಷಣಗಳೂ ಆಗಾಗ ನೆನಪಿಗೆ ಬರುವಂಥವುಗಳು. ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ. ಎಷ್ಟೋ ನೆನಪುಗಳು ಸುಖ ತರಬಹುದು; ಇನ್ನು ಕೆಲವು ದುಃಖ ತರಬಲ್ಲವುಗಳು. ಆದರೆ ಎಲ್ಲವೂ ನೆನಪುಗಳೇ ತಾನೇ…!

ಸೂರ್ಯ ತನ್ನ ಕೆಲಸಕ್ಕೆ ವಿರಾಮ ಹೇಳುತ್ತಿದ್ದಾನೆ. ಮೋಡಗಳು ಕೆಂಪಾಗಿ ಕಂಗೊಳಿಸುತ್ತಿವೆ. ತಂಪಾದ ಗಾಳಿ ಸೋಕಿ ಮೈ ಜುಮ್‌ ಎನ್ನುತ್ತಿದೆ. ಹಕ್ಕಿಗಳ ಕಲರವ ಕಿವಿಗೊಡುತ್ತಿದೆ. ಇನ್ನೇನು ಮಳೆ ಜೋರಾಗಿ ಬರುತ್ತದೆ ಎನ್ನುವಷ್ಟರಲ್ಲಿ ನೆನಪುಗಳ ಬುತ್ತಿ ಒಂದೊಂದೇ ಬಿಚ್ಚಲಾರಂಭಿಸಿದವು.

ಅಂದು ಚಿಕ್ಕವನಿದ್ದಾಗ ಮಳೆ ಬರುವಾಗ ಮಳೆಯಲ್ಲಿ ನೆನೆದು ಅಮ್ಮನ ಹತ್ತಿರ ಪೆಟ್ಟು ತಿಂದದ್ದು, ಕೊಳಚೆ ನೀರಲ್ಲಿ ಆಡಿ ಮೈಯೆಲ್ಲಾ ಗಲೀಜು ಮಾಡಿಕೊಂಡಿದ್ದು, ಹಳ್ಳ-ಕೊಳ್ಳಗಳಲ್ಲಿ ಈಜಾಡಿದ್ದು, ಬೆಟ್ಟ-ಗುಡ್ಡಗಳ ಏರಿ ಹಣ್ಣುಗಳ ತಿಂದದ್ದು, ದಟ್ಟಡವಿಯ ಸುತ್ತಿ ಮನೆಗೆ ಬಂದು ಅಪ್ಪನ ಹತ್ತಿರ ಕೋಲಿನಿಂದ ಬಾಸುಂಡೆ ಬರುವ ಹಾಗೆ ಪೆಟ್ಟು ತಿಂದದ್ದು, ಶಾಲೆಗೆ ಚಕ್ಕರ್‌ ಹೊಡೆದು ಸಂತೆಯೆಲ್ಲ ಸುತ್ತಿದ್ದು, ಬಾಳೆಹಣ್ಣನ್ನು ಕದ್ದು ತಿಂದು ಜತೆಗೆ ಮಾಲಕನ ಹತ್ತಿರ ಪೆಟ್ಟು ತಿಂದದ್ದು, ಹೀಗೆ ಹತ್ತು ಹಲವು  ನೆನಪುಗಳನ್ನು ಒಮ್ಮೆ ನೆನಪಿಸಿಕೊಂಡು ಒಬ್ಬನೆ ಕಿಸಕ್ಕನೆ ನಕ್ಕುಬಿಟ್ಟೆ.

ಆ ಬಾಲ್ಯದ ನೆನಪುಗಳು ಶಾಶ್ವತವಾಗಿ ಮನಸ್ಸಿನಲ್ಲಿ ಅಚ್ಚಳಿದಿವೆ. ಅಂತಹ ಸುಂದರ ಬಾಲ್ಯವನ್ನು ನಾವು ದಾಟಬಾರದಿತ್ತು ಎಂದು ಈಗ ಎನಿಸುವುದು ಸಹಜ.   ಮಳೆ ಬಂದಾಗ ನಾವು ಮಳೆಯಲ್ಲಿ ಕಳೆದ ನೂರಾರು ನೆನಪುಗಳು ಬರುತ್ತವೆ.  ಆಗ ಹರೆಯದ ವಯಸ್ಸು ಮೀಸೆ ಚಿಗುರುವ, ತುಂಟತನ ಮಾಡುವ 18ರ ವಯಸ್ಸು ಅವಳ ಹಿಂದೆ ಬಿದ್ದು ಪ್ರೀತಿ ಪ್ರೀತಿ ಎಂದು ಸುತ್ತಾಡಿದರೂ ಆಕೆ ಸಿಗಲಿಲ್ಲ ಎಂಬ ನೆನಪು. ಮಳೆಯಲ್ಲಿ ಅಂದು ಇಬ್ಬರೂ ಒಂದೇ ಕೊಡೆಯ ಕೆಳಗೆ ನಡುಗುತ್ತಾ ನಡೆದ ನೆನಪು. ನೆನಪುಗಳು ಒಮ್ಮೆ ನೆನಪಾಗಿ ಬಿಟ್ಟರೆ ಮನಸ್ಸಿನ ನೋವು, ಚಿಂತೆಗಳನ್ನೆಲ್ಲ ದೂರ ಮಾಡಿಬಿಡುತ್ತವೆ.

 

ಸದಾಶಿವ ಬಿ.ಎನ್‌.

ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.