UV Fusion: ಕೋಟಿ ವರ್ಷಗಳು ಕಳೆದರು ಕೊನೆಯಿಲ್ಲ


Team Udayavani, Nov 6, 2023, 5:00 PM IST

11-uv-fusion

ಭೂಮಿಯ ಮೇಲೆ ಯಾವ ಜೀವಿಯಾದರೂ ಹೆತ್ತವರ ಋಣ ತೀರಿಸಲು ಸಾಧ್ಯವೇ ಇಲ್ಲ. ತಾಯಿಗೆ ಹೇಗೆ ಸಮಾನರಿಲ್ಲವೇ

ಹಾಗೇ ಹುಟ್ಟಿದಾಗಿನಿಂದ ಸಾಯುವವರೆಗೂ ನಮಗೆ ನೆಲೆ ಕೊಟ್ಟ ಈ ಕನ್ನಡಾಂಬೆ ಬೇರೆ ಹೋಲಿಕೆಯಿಲ್ಲ. ಜೀವ, ಜೀವನ ಎರಡನ್ನು ಸಲಹುತ್ತಿರುವ ಭುವನೇಶ್ವರಿಗೆ ಕೋಟಿ, ಕೋಟಿ ಕೃತಜ್ಞತೆ ಹೇಳಿದರೂ ಸಾಲದು. ನಮಗೆ ದೊರೆತ ಇಷ್ಟು ಒಳ್ಳೆಯ ನೆಲ, ಜಲ, ನಿಸರ್ಗ ಎಲ್ಲವೂ ಅವಳಿಂದ. ದೇಶ ವಿದೇಶದಲ್ಲೂ ಕನ್ನಡದ ಕೀರ್ತಿ ಅಜರಾಮರವಾಗಿರಲು ಕಾರಣ ಕನ್ನಡಾಂಬೆಯ ಕಂದಮ್ಮಗಳು.

ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರ ಕಣ ಕಣದಲ್ಲೂ ಇರುವುದು ಕನ್ನಡ. ಯಾರು ಎಷ್ಟೇ ಜ್ಞಾನವಂತರಾಗಿ ಹತ್ತಾರು ಭಾಷೆ ಕಲಿತರೂ ಮಾತೃ ಭಾಷೆ ಮರೆಯಲು ಸಾಧ್ಯವೆ. ಅದರಲ್ಲೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ಕನ್ನಡಕ್ಕೆ ಕೊನೆ ಎಂದು ಇಲ್ಲ. ಪರ ಭಾಷೆಗಳ ವ್ಯಾಮೋಹ ಎಷ್ಟೇ ಪ್ರಭಾವ ಬೀರಿದರೂ, ಕರುನಾಡ ಕಲಿಗಳು ಕನ್ನಡ ಭಾಷೆ, ನೆಲ, ಜಲಕ್ಕಾಗಿ ನಿರಂತರವಾಗಿ ಹೋರಾಡುತ್ತಾರೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಕಲಿಕೆ ಕಡಿಮೆಯಾಗುತ್ತಿರುವುದು ವಿಪರ್ಯಾಸ. ಪಾಶ್ಚಾತ್ಯ ಭಾಷಾ ವ್ಯಾಮೋಹ ಇದಕ್ಕೆ ಕಾರಣ. ನಮ್ಮ ಐಶಾರಾಮಿ ಜೀವನಕ್ಕಾಗಿ ನಾವು ಆಂಗ್ಲ ಮಾಧ್ಯಮದಲ್ಲಿ ಕಲಿತು, ವಿದೇಶಗಳನ್ನು ಸುತ್ತಬಹುದು. ಆದರೆ, ನಮ್ಮ ಅಂತ್ಯದ ದಿನಗಳಲ್ಲಿ ಆಸರೆಯಾಗುವುದು ಈ ನಮ್ಮ ಕನ್ನಡಾಂಬೆಯೇ ಎಂಬುದನ್ನು ಮರೆಯುವಂತಿಲ್ಲ. ಸುರಕ್ಷಿತ ಜೀವನ ನಡೆಸಲು ಕರ್ನಾಟಕದಲ್ಲಿ ಬೇಕಾದ ಎಲ್ಲವೂ ಇದೆ. ಅದಕ್ಕಾಗಿ ನಾವು ಪ್ರಪಂಚದ ಯಾವ ಮೂಲೆಗೆ ಹೋದರೂ ಕನ್ನಡವನ್ನು ಹೆಮ್ಮೆಯಿಂದ ಮಾತನಾಡಿದರೆ ಭೂತಾಯಿ ಭುವನೇಶ್ವರಿಗೆ ಗೌರವ ನೀಡಿದಂತೆ. ಅದು ನಮ್ಮ ಕರ್ತವ್ಯವೂ ಹೌದು. ಆಗ ಕನ್ನಡ ರಾಜ್ಯೋತ್ಸವದಂದು ಕೇಳಿಬರುವ ಕನ್ನಡ ಉಳಿಸಿ-ಬೆಳೆಸಿ-ಬಳಸಿ ಎಂಬ ಘೋಷ‌ ವಾಕ್ಯದ ಅಗತ್ಯವೇ ಇರುವುದಿಲ್ಲ.

-ಪೂಜಾ ಹಂದ್ರಾಳ

ಉಜಿರೆ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

12

Uv Fusion: ತ್ಯಾಗಜೀವಿಗಳಾಗೋಣ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.