Nagara Panchami: ನಾಗಾರಾಧನೆ ನಮ್ಮ ನಂಬಿಕೆ


Team Udayavani, Sep 18, 2024, 3:42 PM IST

14-uv-fusion

ಪಡುವಣ ಅರಬ್ಬಿ ಕಡಲ ತಡಿಯಿಂದ, ಮೂಡಣದ ಸಹ್ಯಾದ್ರಿ ತಪ್ಪಲು, ಬಡಗಣ ಕಲ್ಯಾಣಪುರದಿಂದ, ತೆಂಕಣ ಕಾಸರಗೋಡಿನ ಚಂದ್ರಗಿರಿಯವರೆಗಿನ ಭೂಭಾಗವನ್ನು ತುಳುನಾಡು ಎಂದು ಹೆಸರಿಸುತ್ತಾರೆ. ಇದನ್ನು ನಾಗಲೋಕವೆಂದೂ ಕರೆಯಲಾಗುತ್ತಿತ್ತು ಎಂಬುದಕ್ಕೆ ಹರಿವಂಶ, ಸ್ಕಂದ ಪುರಾಣ, ಪ್ರಪಂಚದ ಹೃದಯ, ನಾಗನಂದ ಎಂಬ ಗ್ರಂಥಗಳು, ಐತಿಹ್ಯಗಳು ಇಂಬು ನೀಡುತ್ತದೆ. ಪರ್ವತದ ಸಾಲಿಂದ ಹುಟ್ಟಿಕೊಂಡ ನದಿಗಳು ಇನ್ನೊಂದು ಕಡೆಯ ಸಮುದ್ರಕ್ಕೆ ಸೇರುವ ದೃಶ್ಯ, ಮುಗಿಲೆತ್ತರಕ್ಕೆ ಬೆಳೆದು ನಿಂತ ದಟ್ಟ ಕಾಡು, ಈ ಕಾಡಿನಲ್ಲಿ ಸ್ವಚ್ಛೆಂದವಾಗಿ ಅಲೆದಾಡುವ ಪ್ರಾಣಿ-ಪಕ್ಷಿಗಳು, ನಿರ್ಭಯವಾಗಿ ಸಂಚರಿಪ ಸರೀಸೃಪಗಳು- ಹೀಗೆ ತುಳುನಾಡು ಹಿಂದೊಮ್ಮೆ ಹೀಗಿತ್ತೆಂದು ಹೇಳಲು ಈಗ ವಿಷಾದವಾಗುತ್ತದೆ.

ಆರಂಭದ ಕಾಲದಲ್ಲಿ ಮನುಷ್ಯನು ಅಲೆಮಾರಿಯಾಗಿದ್ದು, ಆಲೋಚನಾ ಶಕ್ತಿ ಅಷ್ಟೊಂದು ಬೆಳೆದಿರಲಿಲ್ಲ. ಹಾಗಾಗಿಯೇ ಹೆಚ್ಚಾಗಿ ಕಾಡುಗಳೇ ಈತನ ವಾಸಸ್ಥಾನವಾಗಿತ್ತು. ಈ ಸಂದರ್ಭದಲ್ಲಿ ಸರೀಸೃಪಗಳು ಅದರಲ್ಲೂ “ಸಂಕಪಾಲ’ (ಶಂಖಪಾಲ, ಸಂಕಮಾಲೆ ಎಂದರೆ ಶಂಖಾಕೃತಿಯ ಹೆಡೆ ಇರುವ ಸರ್ಪ ಎಂದರ್ಥ) ಹಾವಿನ ಕಡಿತದಿಂದ ಹೆಚ್ಚಾಗಿ ಜೀವಿಗಳು ಹಾಗೂ ತನ್ನ ಸಹಚರರು ಸಾಯುವುದನ್ನು ಕಂಡ ಈತನಿಗೆ ಹಾವು ಎಂದರೆ ಮೃತ್ಯು ಎಂಬ ಕಲ್ಪನೆ ಬೆಳೆದಿರಬೇಕು. ಮುಂದೆ ಇದುವೇ ಹಾವಿನ ಬಗ್ಗೆ ಭಯಭಕ್ತಿ ಮೂಡಲು ಮತ್ತು ಕಾಲ ಕ್ರಮೇಣವಾಗಿ ಸರ್ಪಗಳ ಬಗ್ಗೆ ಪುರಾಣ ಐತಿಹ್ಯಗಳು ಬೆಳೆಯಲು ಕಾರಣವಾಗಿರಬೇಕು.

ಶ್ರೀಮನ್ಮಹಾಭಾರತದಲ್ಲಿ ಕಶ್ಯಪರಿಗೆ ಕದ್ರು ಮತ್ತು ವಿನತೆ ಎಂಬ ಇಬ್ಬರು ಪತ್ನಿಯರಿದ್ದರು. ಇವರಲ್ಲಿ ಕದ್ರುವಿಗೆ ಸಾವಿರ ನಾಗಗಳು ಜನಿಸುತ್ತವೆ ಎಂಬ ಉಲ್ಲೇಖವಿದೆ. ಹೀಗೆ ನಾಗಗಳ ಮೇಲೆ ದೈವಿಕ ಹಾಗೂ ಅಂಧಶ್ರದ್ಧೆ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು. ಆದುದರಿಂದಲೇ ಜಗತ್ತಿನ ಬಹುತೇಕ ಭಾಗಗಳಲ್ಲಿ, ಪ್ರಾಚೀನ ನಾಗರೀಕತೆಗಳಲ್ಲೂ ಜನರು ನಾಗರ ಹಾವುಗಳನ್ನು ಮನುಷ್ಯನ ಹಿತೈಷಿಗಳು ಎಂದು ನಂಬಿ ಆರಾಧಿಸಿಕೊಂಡು ಬಂದಿರುವುದನ್ನು ಗಮನಿಸಬಹುದು.

ಭಾರತದಲ್ಲಿ ಮೊದಲಿಗೆ ನಾಗಾರಾಧನೆ ಆರಂಭಗೊಂಡದ್ದು ಪಂಜಾಬ್‌ ಮತ್ತು ಕಾಶ್ಮೀರದಲ್ಲಿ ಎಂಬುದು ಪ್ರತೀತಿ. ಪಂಜಾಬಿನಲ್ಲಿ ವರ್ಷದ ಸಪ್ಟಂಬರ್‌ ತಿಂಗಳಿನಲ್ಲಿ “ಮಿರಾಸನ್‌’ ಎಂಬ ಜಾತಿಯ ನಾಗಾರಾಧಕರು ಗೋಧಿ ಅಥವಾ ಜೋಳದ ಹಿಟ್ಟಿ ನಿಂದ ನಾಗನ ಮೂರ್ತಿ ಮಾಡಿ ವೈಭವದಿಂದ ನಾಗ ಪೂಜೆಯನ್ನು ಈಗಲೂ ಮಾಡುತ್ತಾರೆ.

ಕಾಶ್ಮೀರ, ಸರೋವರಗಳ ನಾಡು ಎಂದು ಕರೆಯಲ್ಪಟ್ಟಿದ್ದು, ಈ ಸರೋವರಗಳನ್ನು ನಾಗಗಳು ರಕ್ಷಣೆ ಮಾಡಿಕೊಂಡು ಬರುತ್ತಿವೆ ಎಂದು ನೀಲಮತ ಪುರಾಣದಲ್ಲಿ ಉಲ್ಲೇಖವಿದೆ.

ಬುದ್ಧನು ಹುಟ್ಟಿದಾಗ ಆತನನ್ನು ಸ್ತುತಿಸಲೆಂದು ನಂದ ಮತ್ತು ಉಪನಂದ ಎಂಬ ಹೆಸರಿನ ನಾಗರು ಬಂದರೆಂದು ಉಲ್ಲೇಖವಿದ್ದು, ಬುದ್ಧನ ಜಾತಕ ಕಥೆಗಳು ನಾಗನ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ಜೈನ ಧರ್ಮದಲ್ಲಿ ಕೂಡ ನಾಗಾರಾಧನೆಗೆ ಅವಕಾಶವಿದ್ದು, ಜೈನರ 24 ತೀರ್ಥಂಕರರ ಮೂರ್ತಿಗಳ ಪಕ್ಕದಲ್ಲಿ ಅವರನ್ನು ಗುರುತಿಸಲು ನಾಗಯಕ್ಷರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ಬಂಗಾಳದಲ್ಲಿ ಮಾನಸ (ಪಾರ್ವತಿ ದೇವಿಯ ಮಗಳು) ಎಂಬ ನಾಗದೇವತೆಯ ಆರಾಧನೆ ನಡೆಯುತ್ತದೆ. ಕೇರಳದಲ್ಲಿ ನಾಗಾರಾಧನ ಪದ್ಧತಿ ಬಹಳ ಪ್ರಾಚೀನ ಕಾಲದಿಂದಲೂ ಇದೆ. ತಮಿಳುನಾಡು, ಆಂಧ್ರಪ್ರದೇಶ ಹೀಗೆ ಭಾರತದ ಅನೇಕ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ನಾಗನ ಆರಾಧನೆ ನಡೆಯುತ್ತಾ ಬಂದಿದೆ.

ವಿದೇಶದಲ್ಲೂ ನಾಗಾರಾಧನೆಯ ಕುರುಹುಗಳಿದ್ದು, ಮೆಕ್ಸಿಕೋದ ಪುರಾಣದಲ್ಲಿ ಸಿಹೂಕೊಹಂಟೆ ಎಂಬ ನಾಗದೇವಿ ಒಂದು ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಮುಂದೆ ಇವರಿಂದಲೇ ಮನುಕುಲ ಸೃಷ್ಟಿಯಾಯಿತು ಎಂಬ ಕಥೆಯಿದೆ. ಪ್ರಾಚೀನ ಗ್ರೀಕರ ಶಿಲ್ಪಕಲೆಗಳಲ್ಲಿ, ಗ್ರೀಸ್‌ ವೀರರ ಚಿತ್ರದ ಜತೆ ನಾಗನ ಅಥವಾ ನಾಗನ ಹೆಡೆಯ ಚಿತ್ರಗಳು ಕಂಡು ಬರುತ್ತವೆ.

ಈಜಿಪ್ಟಿನ ಸೂರ್ಯದೇವ ಹೆಲಿಯಸನು ನಾಗದೇವಿ ಓಪ್ಸಳನ್ನು ಮದುವೆಯಾದ ಎಂಬುದಾಗಿ ಅಲ್ಲಿನ ಪುರಾಣ ತಿಳಿಸುತ್ತದೆ. ರೋಮ್‌ ದೇಶದಲ್ಲಿನ ಎಪಿರಿಯಸ್‌ ಎಂಬ ಗುಹಾ ದೇವಾಲಯದಲ್ಲಿ ಮಹಿಳೆಯರು ನಾಗ ಪೂಜೆ ನಡೆಸುತ್ತಿದ್ದುದ್ದರ ಬಗ್ಗೆ ಉÇÉೇಖವಿದೆ.

ತುಳುನಾಡಿನ ವಾತಾವರಣದಲ್ಲಿ ಆದ್ರìತೆ ಮತ್ತು ದಟ್ಟವಾದ ಕಾಡು ಇರುವುದರಿಂದ ಪ್ರಾಚೀನ ಕಾಲದಿಂದಲೂ ಈ ಪ್ರದೇಶ ಸರೀಸೃಪಗಳ ಆವಾಸಸ್ಥಾನವಾಗಿದೆ. ಹಾಗಾಗಿಯೇ ನಮ್ಮ ಪೂರ್ವಜರು ತಾವು ನಂಬುವ ನಾಗನಿಗೆ ಕಾಡಿನ ತಂಪು ಜಾಗದಲ್ಲಿ ಒಂದು ಕಲ್ಲನ್ನು ಹಾಕಿ ಆರಾಧಿಸಿಕೊಂಡು ಬಂದಿದ್ದಾರೆ. ಮುಂದೆ ಇಂತಹ ಸ್ಥಳಗಳು ಬನ, ವನ, ಹಾಡಿ, ನಾಗಬನ, ಕಾಪು, ದೇವರ ಕಾಡು/ಹಾಡಿಗಳೆಂದು ಕರೆಯಲ್ಪಟ್ಟವು.

ಹಿಂದಿನ ಕಾಲದಲ್ಲಿ ನಾಗಬನಗಳು ಹೆಚ್ಚಾಗಿ ನದಿ, ಹಳ್ಳಗಳ ದಂಡೆಗಳಲ್ಲಿ, ಗದ್ದೆಯ ಬದುಗಳಲ್ಲಿ ರುವುದರಿಂದ ನಾಗ-ವೃಕ್ಷ-ಜಲ ಇವುಗಳ ಸಂಬಂಧ ಬಹಳ ಪ್ರಾಚೀನ ವಾದುದು ಎಂಬು ದನ್ನು ಗಮನಿಸ ಬಹುದು. ಮುಂದೆ ಇಲ್ಲಿ ಇನ್ನಷ್ಟು ಜಾತಿಯ ಮರಗಳು, ಸಸ್ಯವರ್ಗ ಗಳು ಬೆಳೆ ಯುತ್ತಾ ಆ ಪ್ರದೇಶವು ಬನ ಎಂದೆನಿಸಿ ಕೊಳ್ಳುತ್ತದೆ. ಮುಂದೆ ವರ್ಷಕ್ಕೊಮ್ಮೆ ಒಂದು ನಿರ್ದಿಷ್ಟ ದಿನದಂದು ಇಂತಹ ಬನಗಳ ಒಳಗೆ ಪ್ರವೇ ಶಿಸಲು ತಡೆ ಯೊಡ್ಡುವ ಪೊದೆ ಗಂಟಿಗಳನ್ನು ಕಡಿದು ದಾರಿ ಮಾಡಿ ಇಲ್ಲಿನ ಪ್ರಾಕೃತಿಕ ನಾಗಬನದಲ್ಲಿ ಪೂಜೆ ನಡೆಯುತ್ತಿತ್ತು.

ರಾಜಮನೆತನದ ಅವಧಿಯಲ್ಲಿ ನಾಗ ಶಿಲ್ಪಗಳನ್ನು ಮಾಡುವುದರ ಮೂಲಕ ನಾಗನ ಆರಾಧನೆಯನ್ನು ಮೊದಲಿ ಗಿಂತಲೂ ಶಾಸ್ತ್ರೋ ಕ್ತವಾಗಿ ಮಾಡಲು ಆರಂಭಿಸಿ ದರು. ಇದಕ್ಕೆ ಸಂಬಂಧಿಸಿ ದಂತೆ ತುಳುನಾಡಿನ ಅನೇಕ ನೆಲೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪ್ರಾಚೀನ ನಾಗಶಿಲ್ಪ ಗಳು ಪತ್ತೆಯಾ ಗಿವೆ.

ಆದರೆ ಪ್ರಸ್ತುತ ನಾವು ಮಾಡುತ್ತಿರುವು ದಾದರೂ ಏನು? ಅಭಿವೃದ್ಧಿ, ನಗರೀಕರಣಗಳ ನೆಪವೊಡ್ಡಿ ಕಾಡುಗಳ ನಾಶ ಮಾಡಿ, ನಾಗಬನಗಳನ್ನು ಕಾಂಕ್ರೀಟಿಕರ ಣಗೊಳಿ ಸುವ ಮೂಲಕ, ಪೂರ್ವಜರ ಚಿಂತನೆ, ನಂಬಿಕೆಗಳನ್ನು ಮೌಡ್ಯ ಎಂದು ಬದಿಗೊತ್ತಿ, ಅಜ್ಞಾನವನ್ನು ಮೈಗಂಟಿ ಸಿಕೊಂಡು ನಮ್ಮದೇ ಆಡಂಭರದ ನಾಗರಾ ಧನೆಯನ್ನು ಮಾಡಿಕೊಳ್ಳುವ ಮೂಲಕ ಪರಿಸರವನ್ನು ಅವನತಿಯತ್ತ ತಳ್ಳುತ್ತಿದ್ದೇವೆ ಎಂದೆನಿಸುತ್ತಿಲ್ಲವೇ? ಇನ್ನು ಮುಂದಾದರೂ ಅಳಿದುಳಿದ ನಿಸರ್ಗದತ್ತ ಬನಗಳನ್ನು ಸಂರಕ್ಷಿಸುತ್ತ ಜೀವಸಂಕುಲ ಹಾಗೂ ನಮ್ಮದೇ ಮುಂದಿನ ಪೀಳಿಗೆಯ ಉಳಿವಿಗೆ ಆರೋಗ್ಯಪೂರ್ಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

ಶ್ರುತೇಶ್‌ ಆಚಾರ್ಯ

ಮೂಡುಬೆಳ್ಳೆ

ಟಾಪ್ ನ್ಯೂಸ್

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

By Election: Announcement of By-Election for the Dakshina Kannada Local Bodies Constituency

By Election: ದ. ಕನ್ನಡ ಸ್ಥಳೀಯ ಸಂಸ್ಥೆಗಳ ಪರಿಷತ್ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

1-wewqe

Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.