UV Fusion: ರೊಟ್ಟಿ ಮುಟಗಿಯ ರುಚಿ ಸವಿದವನೇ ಬಲ್ಲ


Team Udayavani, Sep 18, 2024, 11:52 AM IST

5-uv-fusion

ನಾನು ಹೆಚ್ಚಾಗಿ ಎಂದೂ ಮನೆಯಿಂದ ದೂರ ಉಳಿದವನಲ್ಲ. ಸಂಬಂಧಿಕರು, ಅಜ್ಜಿ, ತಾತಾ ಮುಂತಾದವರ ಮನೆಗೆ ಹೋದವನು ಅಲ್ಲಾ, ಹೋದರು ಒಂದೊ ಎರಡೊ ದಿನ ಅಷ್ಟೇ. ಹಾಗಿದ್ದರೂ ಜೀವನದ ಕೆಲವು ಅನಿವಾರ್ಯ ಪರಿಸ್ಥಿತಿ ಎಲ್ಲವನ್ನು ಕಲಿಸಿ ಬಿಡುತ್ತದೆ ಎಂಬುದನ್ನು ಅರಿಯುವ ದಿನ ಕೂಡ ಸನ್ನಿಹಿತವಾಯಿತು ಎನ್ನಬಹುದು.

ಇದು ನಾನು ಮನೆ ಬಿಟ್ಟು ಬಂದ ಮೊದಲ ಸಲವಾಗಿತ್ತು. ವಾರ ಮತ್ತು ತಿಂಗಳು ಎಂದೂ ಮನೆಯಿಂದ ದೂರ ಉಳಿದವನೇ ಅಲ್ಲ ನಾನು. ನನಗೆ ಹಾಸ್ಟೆಲ್‌ ಅಲ್ಲಿ ನೀಡುವ ಊಟ ಅಷ್ಟೊಂದು ಸರಿ ಹೋಗುತ್ತಿರಲಿಲ್ಲ. ಸಂಜೆ ಆದರೆ ನಮ್ಮ ಅವ್ವ ಮಾಡಿ ಕೊಡುತ್ತಿದ್ದ ರೊಟ್ಟಿ ಮುಟಗಿ ನೆನಪಾಗುವುದು. ಅದೇನೋ ಊರಲ್ಲಿ ಇದ್ದಾಗ ಪ್ರತಿದಿನ ತಿನ್ನುತ್ತಿದ್ದೆ. ಆವಾಗ ನನಗೆ ಅದು ದೊಡ್ಡದು ಎಂದು ಅನಿಸಿರಲಿಲ್ಲ. ಆದರೆ ಅವ್ವ ಊಟಕ್ಕಾಗಿ ರೊಟ್ಟಿ ಮಾಡುವಾಗ ನಮಗೆ ಮುಟಗಿ ಮಾಡಿಕೊಡುತ್ತಾಳೆ ಎಂದು ನಾನು ತಿಳಿದಿದ್ದೆ. ಆದರೆ ಅದನ್ನೇ ರೊಟ್ಟಿ ಮಾಡಿ ಕೊಟ್ಟರೆ ನಾನು ತಿನ್ನುತಿರಲಿಲ್ಲ ಅದಕ್ಕೆ ಹೀಗೆ ರೊಟ್ಟಿ ಮುಟಗಿ ಮಾಡಿ ಕೊಡುತ್ತಾಳೆ ಎಂದು ನನಗೆ ತಿಳಿಯಲು ತುಂಬಾ ವರ್ಷಗಳೇ ಬೇಕಾದವು.

ಹೆಚ್ಚೇನು ಇಲ್ಲ ದಪ್ಪಗೆ ಮಾಡಿದ ರೊಟ್ಟಿ ಅದಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಬೆಳ್ಳುಳ್ಳಿ ಉಪ್ಪು ಖಾರ ಇಲ್ಲವೇ ಹಸಿ ಮೆಣಸು ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಕುಟ್ಟಿದರೆ ರೊಟ್ಟಿ ಮುಟಗಿ ತಯಾರಾಗಿ ಬಿಡುತ್ತಿತ್ತು. ಆದರೆ ಅದರ ಘಮ ಮತ್ತು ರುಚಿ ಎಂದು ನನ್ನ ಬಿಟ್ಟು ಹೋಗೆ ಇಲ್ಲ. ನಾನು ಇಂದಿಗೂ ಹಾಸ್ಟೆಲ್‌ನಲ್ಲಿ ಎಂ.ಎ. ಓದುವಾಗಲೂ ಊರಿಗೆ ಹೋದಾಗ ಅವ್ವ ರೊಟ್ಟಿ ಮಾಡುವ ಸಮಯಕ್ಕೆ ಮನೆಯಲ್ಲಿ ಹಾಜರಿರುತ್ತೇನೆ.

ಏಕೆಂದರೆ ಅದೇ ರೊಟ್ಟಿ ಮುಟಗಿ ಸವಿಯಲು. ಹಳ್ಳಿ ಜನರು ಅಷ್ಟೇ ಅಲ್ಲದೆ ಹಳ್ಳಿಯಿಂದ ಬಂದು ಪೇಟೆ ಜನ ಆದವರು ಇದನ್ನು ತಿಂದೆ ತಿಂದಿರುತ್ತಾರೆ. ರೊಟ್ಟಿ ಮುಟಗಿ ಎಂದಿಗೂ ನನಗೆ ಇದೊಂದು ಒಳ್ಳೆಯ ಉಪಾಹಾರ, ಲಘು ಉಪಾಹಾರ ಎಲ್ಲವೂ ಆಗಿದೆ. ಇದನ್ನು ದೂರದಿಂದ ನೋಡಿದರೆ ಹೆಚ್ಚು. ಹಾಗಿದ್ದರೂ ಮನದಲ್ಲಿ ಮೂಡುವ ಒಂದು ಸಾಲು ಎಂದರೆ ರೊಟ್ಟಿ ಮುಟಗಿ ರುಚಿ ಸವಿದವನೆ ಬಲ್ಲ.

-ಮಲ್ಲು ಹಳೆಮನಿ

ವಿವಿ ಧಾರವಾಡ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.