Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು


Team Udayavani, Apr 25, 2024, 12:10 PM IST

8-uv-fusion

ನೆನಪಿನ ಪಯಣ. ನೆನಪು ಎಂಬುದು ಮೂರಕ್ಷರವೇ ಆದರು ಅದರ ಒಳಾರ್ಥ ಸಾವಿರಾರು ಬಗೆಯಲ್ಲಿದೆ. ಒಂದೊಂದು ಕ್ಷಣದಲ್ಲಿ ಕಳೆದು ಹೋದಂತಹ ಕ್ಷಣಗಳನ್ನು ಮೆಲುಕು ಹಾಕುವುದೇ ಈ ನೆನಪು ಎಂಬುದು.

ಈ ನೆನಪಿನ ಕ್ಷಣಗಳನೆಲ್ಲಾ ನೆನೆಸಿಕೊಂಡಾಗ ಕಣ್ಣಂಚಿನಲ್ಲಿ ನೀರು ಬರುವುದು ಸಹಜವೇ. ಆದರೆ ಕಣ್ತುಂಬಿಕೊಂಡ ನೀರು ಸಂತೋಷದ ವಿಷಯಗಳಿಗೆ ಆಗಿರಬಹುದು ಅಥವಾ ದುಃಖದ ವಿಷಯಗಳಿಗೂ ಆಗಿರಬಹುದು.

ನಮ್ಮೆಲ್ಲರಲ್ಲೂ ನಮ್ಮ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಜೀವನದ ಹಲವು ನೆನಪುಗಳಿವೆ. ಅದು ಸಿಹಿ ನೆನಪೇ ಆಗಿರಬಹುದು ಅಥವಾ ಕಹಿ ನೆನಪುಗಳೇ ಇರಬಹುದು. ಆದರೆ ಕಹಿ ನೆನಪುಗಳಿಂದ ದೂರ ಸರಿದು ಸಿಹಿ ನೆನಪುಗಳನ್ನು ನಮ್ಮಲ್ಲಿರಿಸಿ ಮುಂದಿನ ಒಳ್ಳೆಯ ಕ್ಷಣಕ್ಕಾಗಿ ನಮ್ಮ ನೆನಪಿನ ಬುಟ್ಟಿಯನ್ನು ತುಂಬಿಕೊಳ್ಳುತ್ತಾ ಜೀವನ ಮುನ್ನಡೆಸುತ್ತಾ ಹೋಗಬೇಕು.

ನಮ್ಮಿಂದ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಬೇಸರದಿಂದ ಕುಳಿತಾಗ ಈ ಹಿಂದೆ ಸಾಗಿ ಬಂದ ಜೀವನದ ನೆನಪು ನಮ್ಮ ಕಣ್ಣೆದುರು ಬರಬಹುದು. ಏನೂ ಬೇಡ ಎಂದು ಸುಮ್ಮನಾಗಿದ್ದಾಗ ಈ ನೆನಪು ಎಂಬುದು ನಾವು ಧೈರ್ಯದಿಂದ ಸಾಗಿ ಬಂದ ಕ್ಷಣವನ್ನು ಕಣ್ಣೆದುರು ತಂದು ಬಿಡುತ್ತದೆ. ಸುಮ್ಮನಾಗಿದ್ದ ನಮ್ಮಲ್ಲಿ ಈ ನೆನಪು ಹೊಸ ಚೈತನ್ಯ ಮೂಡುವಂತೆ ಮಾಡುತ್ತದೆ. ಸಾಧಿಸುವ ಛಲವನ್ನು ನೆನಪಿಸಿ ನಮ್ಮಲ್ಲಿ ಹುರಿದುಂಬಿಸುತ್ತದೆ.

ಅದಲ್ಲದೆ ಜತೆ ಕಳೆದ ಕ್ಷಣದ ನೆನಪು, ಬೇಸರದಿಂದ ಕಳೆದ ಕ್ಷಣ, ಕಾರಣವಿಲ್ಲದೆ ಸ್ನೇಹಿತರಿಂದ ದೂರವಾದ ನೆನಪು, ಚೆನ್ನಾಗಿ ನಂಬಿಕೆಯಿಂದ ಕೂಡಿದ್ದ ಸ್ನೇಹ ಒಂದೇ ಕ್ಷಣಾರ್ಧದಲ್ಲಿ ಛಿದ್ರ-ಛಿದ್ರವಾಗಿ ದೂರವಾದ ನೆನಪು, ಏನು ತಪ್ಪು ಮಾಡದೆ ಶಿಕ್ಷೆ ಪಡೆದ ನೆನಪು, ಅದರ ಜತೆ ಸಿಕ್ಕ ಅವಕಾಶಗಳಿಂದ ವಂಚಿತರಾದ ನೆನಪು ಈ ರೀತಿಯ ಕಹಿ ನೆನಪುಗಳು ಜತೆಯಲ್ಲಿದ್ದರೆ ಸಾಧಿಸುವ ಛಲ ಎಂಬುದು ನಮ್ಮಲ್ಲಿ ಇರುತ್ತದೆ. ಇದು ಕಹಿ ನೆನಪುಗಳೇ ಆದರು ಜೀವನಕ್ಕೆ ಮಾರ್ಗ ತೋರಿಸುವಂತಹವು.

ಒಳ್ಳೊಳ್ಳೆ ಸ್ನೇಹಿತರ ಜತೆ ಕಳೆದ ಸುಂದರ ಕ್ಷಣ, ಅಪ್ಪ ಅಮ್ಮನ ಜತೆ ಪ್ರೀತಿಯಿಂದ ಕಳೆದ, ಅಕ್ಕ ತಂಗಿಯ ಜತೆ ಜಗಳವಾಡಿದ, ಶಿಕ್ಷಕರಿಂದ ಒಳ್ಳೆಯ ವಿದ್ಯಾರ್ಥಿ ಎಂದು ಎನಿಸಿಕೊಂಡ ಕ್ಷಣ ಇವೆಲ್ಲವೂ ಜೀವನದ ಸಿಹಿ ನೆನಪುಗಳು. ಈ ಸಿಹಿ ನೆನಪುಗಳೆಂಬುದು ಒಂದು ಸುಂದರವಾದ ಪ್ರಪಂಚದಲ್ಲಿ ನಾವು ಕಳೆದ ಈ ಕ್ಷಣದ ನೆನಪು ಎನ್ನಬಹುದು.

ಕಹಿ ನೆನಪು ಎಂಬುದು ಆವಾಗಾವಾಗ ಮರುಕಳಿಸುತ್ತಿರುತ್ತದೆ. ಏಕೆಂದರೆ ಇವೇ ನಮ್ಮ  ಜೀವನದ ಪಯಣದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಡಲು ಸಹಾಯ ಮಾಡುವಂತಹದ್ದು.

ಈ ಎಲ್ಲ ಕಾರಣದಿಂದ ನೆನಪುಗಳ ಸರಮಾಲೆ ಎಂಬುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ಈ ರೀತಿಯಿಂದಲೇ ಕ್ಷಣದೊಂದಿಗೆ ನೆನಪುಗಳ ಮರುಕಳಿಸುತ್ತಾ ಜೀವನದ ಪಯಣವನ್ನು ತುಂಬಾ ಸಂಭ್ರಮದಿಂದ ಕಳೆಯೋಣ.

 -ಪ್ರತೀಕ್ಷಾ ರಾವ್‌ ಶಿರ್ಲಾಲ್‌

ಸರಕಾರಿ ಪ್ರಥಮ ದರ್ಜೆ

ಕಾಲೇಜು ಕಾರ್ಕಳ

ಟಾಪ್ ನ್ಯೂಸ್

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಪ್ರಯತ್ನಂ ಸರ್ವತ್ರ ಸಾಧನಂ

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

1-sa-dsadsa

Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.