Rain Water Harvesting: ಜೀವ ಜಲದ ಉಳಿವಿಗೊಂದು ಸಣ್ಣ ಪ್ರಯತ್ನ


Team Udayavani, Jun 26, 2024, 5:24 PM IST

13

ಇದೀಗ ಮಳೆಗಾಲ ಪ್ರಾರಂಭವಾಗಿದೆ. ಜೊತೆಗೆ ವರುಣ ದೇವನ ಕೃಪೆಯಿಂದ ರೈತನ ಮೊಗದಲ್ಲಿ ಸಂತಸ ಮನೆಮಾಡಿದೆ. ಬೇಸಿಗೆಯ ಬವಣೆಯನ್ನು ನೀಗಿಸಿಕೊಳ್ಳಲು ಮಳೆರಾಯ ನಮಗೊಂದು ಅವಕಾಶವನ್ನು ನೀಡಿದ್ದಾನೆ.

ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಹೇಗೆ ಈ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನೇರವೆರಿಸುವುದು ಎನ್ನುವ ವಿಚಾರಕ್ಕೆ ಬಂದಾಗ ತಟ್ಟನೇ ನೆನಪಾಗುವುದು ಮಳೆ ನೀರಿನ ಕೊಯ್ಲು. ಹೌದು ಈ ಮಳೆ ನೀರಿನ ಕೊಯ್ಲು ಮರು ವರ್ಷದ ಬೆಸಿಗೆಯಲ್ಲಿ ಉಂಟಾಗುವ ನೀರಿನ ಆಹಾಕಾರವನ್ನು ನೀಗಿಸುವಲ್ಲಿ ಕೊಂಚ ಮಟ್ಟಿಗೆ ಸಹಕಾರಿಯಾಗಲಿದೆ.

ಏನಿದು ಮಳೆ ನೀರಿನ ಕೊಯ್ಲು?

ಮಳೆಗಾಲದಲ್ಲಿ ಅಥವಾ ಮಳೆ ಬೀಳುವ ಸಮಯದಲ್ಲಿ ಭೂಮಿಗೆ ಬಿದ್ದ ನೀರನ್ನು ಶುದ್ಧಿಕರಿಸಿ ಸಂಗ್ರಹಣೆ ಮಾಡುವುದನ್ನು ಒಳಗೊಂಡಿದೆ. ಜೊತೆಗೆ ಭೂಮಿಯ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮಳೆ ರೂಪದಲ್ಲಿ ಭೂಮಿಗೆ ಬಿದ್ದ ನೀರನ್ನು ಭೂಮಿಯ ಒಡಲಾಳಕ್ಕೆ ಇಳಿಸುವ ವಿಧಾನವಾಗಿದೆ.

ಮಳೆ ನೀರನ್ನು ಸಂಗ್ರಹಿಸುವ ವಿಚಾರಕ್ಕೆ ಬಂದಾಗ ಕೃಷಿ ಹೊಂಡಗಳ ನಿರ್ಮಾಣ, ಮೇಲ್ಚಾವಣಿಯ ಮೇಲೆ ಬಿದ್ದ ಮಳೆ ನೀರಿನ ಸಂಗ್ರಹಣೆಗಳಂತಹ ಅಂಶಗಳು ಗಮನಾರ್ಹವಾಗಿವೆ.

ಮೇಲ್ಚಾವಣಿಯ ಮೇಲೆ ಬಿದ್ದ ಮಳೆ ನೀರಿನ ಸಂಗ್ರಹಣೆ

ಮನೆಯ ಮೇಲ್ಚಾವಣಿಯ ಮೇಲೆ ಮಳೆ ಬಂದಾಗ ಬಿದ್ದ ನೀರನ್ನು ಸಂಗ್ರಹಿಸಿ ದಿನ ನಿತ್ಯದ ಬಳಕೆಗೆ ಉಪಯೋಗಿಸುವುದು ಜೊತೆಗೆ ಹೆಚ್ಚುವರಿ ನೀರನ್ನು ಮಣ್ಣಿನೊಳಗೆ ಇಂಗುವಂತೆ ಮಾಡುವುದರ ಮೂಲಕ ಅಂತರ್ಜಲವನ್ನು ಹೆಚ್ಚಿಸುವುದು ಮಳೆ ನೀರಿನ ಕೊಯ್ಲಿನ ಒಂದು ವಿಧಾನವಾಗಿದೆ. ಹೀಗೆ ನೀರನ್ನು ಸಂಗ್ರಹಿಸುವಾಗ ನೀರನ್ನು ದಪ್ಪ ಕಲ್ಲು, ಜೆಲ್ಲಿ ಕಲ್ಲು, ಇದ್ದಿಲ್ಲು, ನೈಲಾನ…ಗಳನ್ನು ಬಳಸಿ ಶುದ್ಧಿಕರಿಸುವುದು ಉತ್ತಮ. ನುರಿತ ತಜ್ಞರ ಸಲಹೆಯ ಮೇರೆಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಒಳ್ಳಯದು.

ಅಂತರ್ಜಲ ವೃದ್ಧಿಸುವುದು ಮಳೆನೀರಿನ ಕೊಯ್ಲಿನ ಪ್ರಮುಖ ಅಂಶವೇಂದರೆ ತಪ್ಪಾಗಲಾರದು. ಇವುಗಳಲ್ಲಿ ಹಲವು ಬಗೆಗಳನ್ನು ನಾವು ಕಾಣಬಹುದಾಗಿದೆ.

  1. ಇಂಗು ಕೊಳಗಳ ನಿರ್ಮಾಣ

ಪ್ರಾಕೃತಿಕವಾಗಿ ಹರಿದು ಹೋಗುವ ನೀರಿನ ತೆರೆಗಳಿಗೆ ಅಡ್ಡಲಾಗಿ ಹೆಚ್ಚು ಆಳವಿಲ್ಲದಂತಹ ಗುಂಡಿಗಳನ್ನು ನಿರ್ಮಿಸಿ ಅಲ್ಲಿಯೇ ನೀರು ಇಂಗುವಂತೆ ಮಾಡುವುದನ್ನು ಇದು ಒಳಗೊಂಡಿದೆ.

  1. ಕೊಳವೆ ಬಾವಿಯ ಮರುಪೂರಣ

ಇದು ಕೊಡ ಒಂದು ರೀತಿಯ ಇಂಗು ಗುಂಡಿಯ ರೀತಿಯಲ್ಲಿಯೇ ಕಾರ್ಯವನ್ನು ನಿರ್ವಹಿಸುತ್ತದೆ. ಬಾವಿಗಳ ಅಥವಾ ಕೊಳವೆ ಬಾವಿಗಳ ಸುತ್ತಲು ಗುಂಡಿಗಳನ್ನು ನಿರ್ಮಿಸಿ ಈ ಮುಂಚೆ ತಿಳಿಸಿದಂತೆ ದಪ್ಪ ಕಲ್ಲು, ಜೆಲ್ಲಿ ಕಲ್ಲು, ಇದ್ದಿಲ್ಲು, ನೈಲಾನ…ಗಳನ್ನು ಅಗತ್ಯ ಕ್ರಮದಲ್ಲಿ ಬಳಸಿಕೊಳ್ಳುವ ಮೂಲಕ ಬಾವಿಯ ಮೂಲಕ ಬರುವ ಹೆಚ್ಚುವರಿ ನೀರು ಅಥವಾ ಮಳೆ ರೂಪದಲ್ಲಿ ಭೂಮಿಯನ್ನು ಸೇರುವ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವ ಮೂಲಕ ಕೊಳವೆ ಬಾವಿಗಳ ಮರುಪೂರಣ ಮಾಡಬಹುದು.

ಇವಷ್ಟೇ ಅಲ್ಲದೆ, ಉಸುಕಿನ ಚೀಲಗಳ ಅಣೆಗಳ ನಿರ್ಮಾಣ, ಸಣ್ಣಗೆ ಹರಿದು ಹೋಗುವ ನೀರಿನ ತೊರೆಗಳಿಗೆ ಸ್ಥಳೀಯವಾಗಿ ದೊರೆಯುವ ಕಾಡುಕಲ್ಲು ಹಾಗೂ ಕಬ್ಬಿಣದ ಜಾಲರಿ ಬಳಸಿ ನೀರಿನ ಹರಿಯುವಿಕೆಯನ್ನು ತಡೆಯುವುದು, ಒಣಕಲ್ಲಿನ ತಡೆ ಅಣೆಗಳ ನಿರ್ಮಾಣಗಳಂತಹ ಹಲವು ವಿಧಾನಗಳನ್ನು ಬಳಸಿಕೊಂಡು ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವ ಮೂಲಕ ಕಲಿಯುಗದ ಅಮೃತವಾದ ಜೀವಜಲದ ಸಬ್ದಳಕೆ ಮಾಡಬೇಕಿದೆ.

ಕೃಷಿ ಹೊಂಡಗಳ ನಿರ್ಮಾಣ

ಹೊಂಡಗಳನ್ನು ನಿರ್ಮಿಸಿ ಕೃಷಿ ಪ್ರದೇಶಗಳಲ್ಲಿ ಬೀಳುವ ನೀರು ಸರಾಗವಾಗಿ ಹರಿದು ಈ ಹೊಂಡಗಳನ್ನು ಸೇರುವಂತೆ ಒಳ ಹರಿವಿನ ಮಾರ್ಗವನ್ನು ಹಾಗೂ ಹೊಂಡ ತುಂಬಿ ಹೆಚ್ಚಾದ ನೀರಿನ ಹೊರ ಹರಿವಿಗಾಗಿ ಮಾರ್ಗವನ್ನು ನಿರ್ಮಿಸುವುದು ಉತ್ತಮ. ಈ ರೀತಿಯಾಗಿ ಸಂಗ್ರಹಿಸಿದ ನೀರನ್ನು ಅಲ್ಪಾವಧಿ ತರಕಾರಿ ಬೆಳೆ, ತೋಟಗಾರಿಕೆ ಬೆಳೆಗಳಿಗೂ ಕೊಡ ಬಳಕೆ ಮಾಡಬಹುದಾಗಿದೆ. ಜೊತೆಗೆ ಈ ನೀರನ್ನು ಆರು ತಿಂಗಳ ವರೆಗೆ ಸಂಗ್ರಹಿಸಬಹುದಾದಲ್ಲಿ ಮೀನು ಸಾಕಾಣಿಕೆಯನ್ನು ಸಹ ಕೈಗೊಳ್ಳಬಹುದು.

- ಲಕ್ಷ್ಮೀ ಶಿವಣ್ಣ

ಮಹಿಳಾ ವಿವಿ ವಿಜಯಪುರ

 

ಟಾಪ್ ನ್ಯೂಸ್

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

1-Pak

Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್

Byndoor; ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್

NEET Row: ಜಾರ್ಖಂಡ್‌ ನಲ್ಲಿ ಪತ್ರಕರ್ತನ ಬಂಧನ, ಗುಜರಾತ್‌ ನಲ್ಲಿ ಸಿಬಿಐ ಶೋಧ ಕಾರ್ಯ

NEET Row: ಜಾರ್ಖಂಡ್‌ ನಲ್ಲಿ ಪತ್ರಕರ್ತನ ಬಂಧನ, ಗುಜರಾತ್‌ ನಲ್ಲಿ ಸಿಬಿಐ ಶೋಧ ಕಾರ್ಯ

satish jarakiholi

CM ಬದಲಾವಣೆ ವಿಷಯ ಮುಗಿದು ಹೋದ ಅಧ್ಯಾಯ: ಸತೀಶ್ ಜಾರಕಿಹೊಳಿ

18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಮುರಿದ ಹಲ್ಲಿನಿಂದ ಪತ್ತೆ ಹಚ್ಚಿದ ತಂಗಿ

18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಪತ್ತೆ ಹಚ್ಚಲು ನೆರವಾಗಿದ್ದು ಆ ಮುರಿದ ಹಲ್ಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

ಬೆಳಗಾವಿ: ಪ್ರತಿಭಾ ಪಲಾಯನ ತಡೆಯಬೇಕಿದೆ: ನಿರಂಜನ

ಬೆಳಗಾವಿ: ಪ್ರತಿಭಾ ಪಲಾಯನ ತಡೆಯಬೇಕಿದೆ: ನಿರಂಜನ

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

1-Pak

Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

Kannada movie Taj releasing soon

Sandalwood; ಟ್ರೇಲರ್‌ನಲ್ಲಿ ‘ತಾಜ್‌’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.