Rain: ಇಳೆ ತಂಪೆರೆವ ಮಳೆರಾಯ
Team Udayavani, Sep 17, 2024, 3:30 PM IST
ಕಿಟಕಿಯ ಸಮೀಪ ಕುಳಿತುಕೊಳ್ಳುವಾಗೆಲ್ಲಾ ಬೀಸುವ ತಾಜಾ ಗಾಳಿಯು ನನ್ನಲ್ಲಿ ಭಾವನೆಗಳನ್ನು ಸುರಿಸುತ್ತಲೇ ಇರುತ್ತದೆ. ಸಣ್ಣವರಾಗಿದ್ದಾಗ ಮಳೆಗಾಲದಲ್ಲಿ ಕೊಚ್ಚೆಗುಂಡಿಗಳಲ್ಲಿ ಜಿಗಿಯುತ್ತಾ ಆಟವಾಡುತ್ತಿದ್ದೆವು, ನೀರು ಇರುವಲ್ಲೆಲ್ಲಾ ಬಿಡಲು ಕಾಗದದ ದೋಣಿಗಳನ್ನು ತಯಾರಿಸುತ್ತಿದ್ದ ಬಾಲ್ಯದ ನೆನಪುಗಳು…ಎಲ್ಲವನ್ನೂ ನೆನಪಿಸುವಂತೆ ಮಾಡಿದೆ.
ಮಳೆಗಾಲದ ಮುಂಜಾನೆಯೇ ಬಹಳ ಚಂದ. ಮುಂಜಾನೆ ಚುಮುಚುಮು ಚಳಿಗೆ ಏಳಲು ಮನಸ್ಸಿಲ್ಲದೆ ಸೋಮಾರಿಗಳಾಗಿ ಹೊದಿಕೆಯೊಳಗೆ ಮುದುಡಿ ಮಲಗಿಕೊಳ್ಳುವುದೆಂದರೆ ಆನಂದವೋ ಆನಂದ. ಶಾಲೆಗೆ ರಜೆ ಸಿಕ್ಕರಂತೂ ಹೇಳುವುದೇ ಬೇಡ… ಕಾಟೂìನ್ಗಳನ್ನು ನೋಡಿಕೊಂಡು ಮನೆಯಲ್ಲಿಯೇ ಸಮಯವನ್ನು ಕಳೆಯುವುದರ ಮಜಾನೇ ಬೇರೆ.
ಬೇಸಗೆಯಲ್ಲಿ ಸೆಖೆಗೆ ಬಳಲಿ ಬೆಂಡಾಗಿ ಹೋಗಿರುವ ಜನರು ಮಳೆಯ ಆಗಮನದಿಂದ ಅತೀವವಾಗಿ ಸಂತಸಗೊಂಡು, ಮಳೆಯಲ್ಲಿ ಜಿಗಿಯುವುದರ ಮೂಲಕ ತಮ್ಮ ಹರುಷವನ್ನು ವ್ಯಕ್ತಪಡಿಸುತ್ತಾರೆ.
ಮಳೆಗಾಲದಲ್ಲಿ ಮನೆಯವರೆಲ್ಲರೂ ಒಟ್ಟಿಗೆ ಕುಳಿತುಕೊಂಡು ಚಹಾ ಮತ್ತು ಬಿಸಿಬಿಸಿಯಾದ ತಿಂಡಿಗಳನ್ನು ತಿನ್ನುತ್ತಾ ಮಳೆಯನ್ನು ಆಸ್ವಾದಿಸುವುದೆಂದರೆ ಒಂಥರಾ ಖುಷಿ. ಮನೆ ಮಂದಿಯೆಲ್ಲಾ ಒಟ್ಟಿಗೆ ಸೇರಿ ಹರಟೆ ಹೊಡೆಯಲು ಈ ಮಳೆ ಅವಕಾಶ ಕಲ್ಪಿಸುತ್ತಿತ್ತು…ಆ ದಿನಗಳ ನೆನಪುಗಳೇ ಸುಂದರ…ಸುಮಧುರ.
ಶಾಲೆಗೆ ಹೋಗುವ ಸಂದರ್ಭದಲ್ಲಿ ಮಳೆ ನೀರಿನಲ್ಲಿ ಆಟವಾಡುತ್ತಾ, ಅರ್ಧ ಒದ್ದೆಯಾಗಿ, ತಮ್ಮ ಕೊಡೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಂಡು ಹೋಗುತ್ತಿದ್ದ ನೆನಪಂತೂ ಅತಿ ಮಧುರ.
ಮಳೆಯು ನಮಗೆ ಇಷ್ಟೆಲ್ಲಾ ಸಂತೋಷದ ಕ್ಷಣಗಳನ್ನು ನೀಡಿದ್ದರೆ, ಸಮುದ್ರದ ಬಳಿ ವಾಸಿಸುವ ಜನರ ಅನುಭವವೇ ಬೇರೆ. ಮಳೆಯ ಅತಿ ಭಯಂಕರ ಮುಖವನ್ನು ಆ ಪ್ರದೇಶದ ಜನರು ನೋಡಿರುವ ಕಾರಣ ಮಳೆಯ ಕುರಿತಾಗಿ ಅವರ ಅನುಭವವೇ ಭಯಾನಕವಾಗಿರುತ್ತದೆ. ಮಳೆ ಅವರನ್ನು ಭಯಭೀತರನ್ನಾಗಿಸಿರುತ್ತದೆ.
ಆದರೆ ಕೊನೆಯದಾಗಿ ಇಂತಹ ಭಯಾನಕ ಕ್ಷಣಗಳು ಕರಗಿ ಹಿತವಾದ ವಾತಾವರಣವು ಆಗಮಿಸುತ್ತದೆ. ಸಂತೋಷದ ಕ್ಷಣಗಳು ಮರುಕಳಿಸುತ್ತವೆ. ನಾವು ಪ್ರಕೃತಿಯನ್ನು ಪ್ರೀತಿಸಿದರೆ ಪ್ರಕೃತಿ ನಮ್ಮನ್ನು ಪ್ರೀತಿಸುತ್ತದೆ.
–ಫಿಲಿಶ ಆಲಿನ್ ಕ್ರಾಸ್ತ
ಸಂತ ಅಲೋಶಿಯಸ್ ಪರಿಗಣಿತ ವಿವಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.