Rainy Weather: ಮಳೆಯಲಿ…  ಮಲೆನಾಡಿನಲಿ…


Team Udayavani, Jul 15, 2024, 1:55 PM IST

8-malenadu

ಈ ಬೇಸಗೆಯ ಸೆಕೆಯ ಬೇಗೆಗೆ ಹೈರಾಣದ ನಾವುಗಳು ಅಂತು ಇಂತು ಮಾರ್ಚ್‌ ಏಪ್ರಿಲ್‌ ತಿಂಗಳ ತಾಪಮಾನ ಮುಗಿಸಿ, ಬಿಸಿಲು ನೆತ್ತಿಯ ಸುಡುವ ಕಾಲದಿಂದ ಹೊರ ಬಂದಿದ್ದಾಯ್ತು. ಇನ್ನೂ ಯತ್ತೆಚ್ಚವಾದ ನಿರೀಕ್ಷೆ ಹಾಗೂ ಸಂಭ್ರಮ ದೊಂದಿಗೆ ಮಳೆಗಾಲಕ್ಕೆ ಕಾಲಿಟ್ಟಿದ್ದು ಆಯ್ತು..

ಮಳೆಯೆಂದರೆ ತುಂತುರು, ಹನಿ, ಜಡಿಮಳೆ ಯೆಂದರೆ ಗುಡುಗು, ಸಿಡಿಲು, ಮಿಂಚು. ಮಳೆಯೆಂದರೆ ಗಾಳಿ ಬಿರುಗಾಳಿಗಳ ಮಿಲನ. ಮಳೆಗಾಲ ಬಂತೆಂದರೆ ನಮ್ಮೂರ ಹೊಳೆ, ಬಾವಿ, ಕೆರೆ, ಕಾಲುವೆ, ಸರೋವರಗಳು ತುಂಬಿ ಹರಿಯುವ ಮನೋಹರ ದೃಶ್ಯ ಹಾಗೂ ನಿರ್ಮಲ ವಾತಾವರಣ ಕಾಣುವುದು ಕಣ್ಣಿಗೆ ಹಬ್ಬವೇ ಸರಿ.

ಕೆಲವೊಮ್ಮೆ ನಿಜವಾದ ಮಳೆ ನೋಡಬೇಕೆಂದರೆ ಮಲೆನಾಡಿಗೇ ಹೋಗಬೇಕು. ಮಳೆಗಾಲದಲ್ಲಿ ಮಲೆನಾಡಿನ ಸೌಂದರ್ಯವನ್ನು ವರ್ಣಿಸಲಸದಳ. ನಿರ್ಮಲ ವಾತಾವರಣ, ಬೆರಳೆಣಿಕೆ ವಾಹನ, ಖಾಲಿ ರೋಡು, ಹಕ್ಕಿಗಳ ಕಲರವ, ಸ್ಕೂಲ್‌ ಬ್ಯಾಗ್‌ ಹಿಡಿದು ಸಾಗುವ ಪುಟ್ಟ ಮಕ್ಕಳು, ಜಡಿ ಮಳೆ, ಅಲ್ಲೊಂದೊಂದು ಟೀ ಅಂಗಡಿ, ಅತ್ತ ಇತ್ತ ಗಿಡ ಮರ ಬೆಟ್ಟ, ಗುಡ್ಡಗಳ ಸಾಲು. ಅಬ್ಟಾಬ ಈ ವಿಷ ಯದಲ್ಲಿ ಮಲೆನಾಡಿಗರು ಪುಣ್ಯವಂತರೆ ಹೌದು.

ಮಳೆ ಬೀಳುವ ಕಾಡನ್ನು ವರ್ಣಿಸೋಕೆ ಸಾಧ್ಯವಿಲ್ಲ. ಕಾಡಿನ ಸೊಗಸನ್ನು ನಾವೇ ಸ್ವತಃ ಅನುಭವಿಸಬೇಕು. ಪ್ರಕೃತಿಯ ರಮಣೀಯ ದೃಶ್ಯವು ಎಂತವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ.

ಮಲೆನಾಡಿನಲ್ಲಿ ಕೆಲಸಗಳು ಶುರುವಾಗುವುದೇ ಮಳೆಗಾಲದಲ್ಲಿ, ಎಷ್ಟೇ ಮಳೆ ಸುರಿಯುತ್ತಿದ್ದರೂ ಇಲ್ಲಿನ ರೈತರು ಕೆಲಸಕ್ಕೆ ರಜೆ ಹಾಕುವುದಿಲ್ಲ. ಮಳೆಗಾಲದಲ್ಲಿ ರೈತ ಹೊರ ಹೊರಟರೆ ಅದರ ಸಂಭ್ರಮವೇ ಬೇರೆ ಬಿಡಿ.

ಪ್ರವಾಸಿಗರಿಗೆ ಖುಷಿಯಾಗುವ ಮಂಜು ಮಿಶ್ರಿತ, ಚಳಿ ಮಿಶ್ರಿತ, ಪರಿಶುದ್ಧ ವಾತಾವರಣ ಈ  ಮಳೆಗಾಲ. ಮಳೆಯಿಂದಾಗಿ ನಮ್ಮ ದೈನಂದಿನ ಚಟುವಟಿಕೆಗಳಂತು ನಿಲ್ಲುವುದಿಲ್ಲ, ಎಂದಿನಂತೆ ಅದು ಮುಂದುವರೆಯಲೇಬೇಕು. ಮಳೆಗಾಲ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಅಚ್ಚು ಮೆಚ್ಚು. ಶಾಲಾ ಬಾಲಕರಂತೂ ಕೆಸರಿನಲ್ಲಿ ಆಡುತ್ತಾ ಒಳ್ಳೆ ಮಜ ಪಡೆದುಕೊಳ್ಳುತ್ತಾರೆ. ಬಟ್ಟೆ ಕೊಳಕುಮಾಡಿಕೊಳ್ಳುವ, ಬಿದ್ದು ಗಾಯ ಮಾಡಿಕೊಳ್ಳುವ ಪರಿವಿಲ್ಲದೆ ಆಡುವುದೇ ಇವರ ಕೆಲಸ. ಇತ್ತ ಹಿರಿಯರು ಅಥವಾ ಮಧ್ಯ ವಯಸ್ಸಿನ ಜನರು ತಮ್ಮ ಕೆಲಸ ಕಾರ್ಯವನ್ನು ಟಿವಿ ನೋಡಿಕೊಂಡೋ ಒಂದು ಮನಸ್ಸಿಗೆ ಮುದ ನೀಡುವ ಕಾಫಿಯೊಟ್ಟಿಗೆ, ಬೋಂಡ ಬಜ್ಜಿ ಇವೆÇÉಾವ ಸವಿಯುತ್ತ ಮಳೆಯನ್ನು ಸಂತಸದಿಂದ ಅನುಭವಿಸುತ್ತಾರೆ.

ಕಾಲ ಕಾಲಕ್ಕೆ ಎಲೆ ಉದುರಿಸುವ ಮರಗಳು ಮಳೆಗಾಲದಲ್ಲಿ ಹಸರು ಸೀರೆಯನ್ನು ಹೊದ್ದು ನಿಂತಂತೆ ಕಾಣುವುದು ಪ್ರಕೃತಿಯ ಒಂದು ವಿಸ್ಮಯವೇ ಸರಿ. ಒಂದು ಕ್ಷಣ ಮಲೆನಾಡಿನ ಗಿರಿ ಶಿಖರಗಳಲ್ಲಿ ನೀರಿನಂತೆ ಸುರಿಯುತ್ತಿರುವುದು, ಮಂಜೋ ಮಳೆಯೋ ತಿಳಿಯುವುದೇ ಇಲ್ಲ. ತೋಟದ ಹಾದಿ ಹಿಡಿದು ಹೊರಟರೆ ಸುತ್ತಲಿನ ಗಿಡ ಮರಗಳನ್ನು ನೋಡಿ ನಾವು ನಿಂತಿರುವ ತಾಣ ಕಾಡೋ ತೋಟವೋ ಅದು ಸಹ ತಿಳಿಯುವುದಿಲ್ಲ.

ಅಂತು ಇಂತು ಒಂದು ವರ್ಷದ ಹಿಂದೆ ಮೂಲೆ ಸೇರಿದ್ದ ರೈನ್‌ ಕೋಟ್‌ ಹಾಗು ಒಂಟಿ ಕಾಲಿನ ಸುಂದರಿ (ಛತ್ರಿ) ಹೊರ ಬರುವ ಸಮಯವಾಗಿದೆ. ಮಲೆನಾಡು ಅದ್ಭುತ ಮಳೆಗಾಲವಂತು ಅತ್ಯದ್ಭುತ. ಕಾಫಿಯನ್ನು ಕುಡಿಯುವುದಲ್ಲ, ಅದನ್ನ ಸವಿಯಬೇಕು. ಹಾಗೆಯೆ ಮಳೆಗಾಲವನ್ನು ನಿಂತು ನೋಡುವುದಲ್ಲ, ಅದನ್ನ ಅನುಭವಿಸಬೇಕು.

-ಸಹನ ಎಚ್‌. ವೈ.

ಶಿವಮೊಗ್ಗ

ಟಾಪ್ ನ್ಯೂಸ್

Kottihegara: ಸಿಡಿಲು ಬಡಿದು ಮನೆಗೆ ಹಾನಿ, ತಪ್ಪಿದ ದುರಂತ

Kottihegara: ಸಿಡಿಲು ಬಡಿದು ಮನೆಗೆ ಹಾನಿ, ತಪ್ಪಿದ ದುರಂತ

ಬಿಜೆಪಿ-ಪಿಡಿಪಿ ಮೈತ್ರಿ ಸೂತ್ರಧಾರ ರಾಮ್‌ಮಾಧವ್‌ಗೆ ಕಾಶ್ಮೀರ ಚುನಾವಣಾ ಉಸ್ತುವಾರಿ

BJP-PDP ಮೈತ್ರಿ ಸೂತ್ರಧಾರ ರಾಮ್‌ಮಾಧವ್‌ಗೆ ಕಾಶ್ಮೀರ ಚುನಾವಣಾ ಉಸ್ತುವಾರಿ

Poland

Modi Poland Visit: ಪೋಲೆಂಡ್‌ಗೆ ಆಗಮಿಸಿದ ಪ್ರಧಾನಿ ಮೋದಿ; ಗುಜರಾತಿ ನೃತ್ಯ ಸ್ವಾಗತ, ಜೈಕಾರ

Thirthahalli: ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ… ಶಿಕ್ಷಕನ ಬಂಧನ, ಫೋಕ್ಸೋ ಕೇಸ್ ದಾಖಲು

Thirthahalli: ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ… ಶಿಕ್ಷಕನ ಬಂಧನ, ಫೋಕ್ಸೋ ಕೇಸ್ ದಾಖಲು

MUDA Scam: ಸಿದ್ದರಾಮಯ್ಯ ಮಹಾಭಾರತದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆ: ಪ್ರಭು ಚವ್ಹಾಣ್

MUDA Scam: ಸಿದ್ದರಾಮಯ್ಯ ಮಹಾಭಾರತದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆ: ಪ್ರಭು ಚವ್ಹಾಣ್

Chamapi-jaharakand

Jharkhand Politics: ಮಾಜಿ ಸಿಎಂ ಚಂಪೈ ಸೊರೆನ್‌ರಿಂದ ಹೊಸ ಪಕ್ಷ ಸ್ಥಾಪನೆ?

Heavy Rain: ಆನಂದಪುರದಲ್ಲಿ ಭಾರಿ ಮಳೆ ಅಂಗಡಿಗಳಿಗೆ ನುಗ್ಗಿದ ನೀರು

Heavy Rain: ಆನಂದಪುರದಲ್ಲಿ ಭಾರಿ ಮಳೆ ಅಂಗಡಿಗಳಿಗೆ ನುಗ್ಗಿದ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv fusion

UV Fusion: ಸ್ವಾತಂತ್ರ್ಯೋತ್ಸವ ಸಂತಸದಿ ಸಂಭ್ರಮಿಸುವ…

16-uv-fusion

UV Fusion: ಸ್ವಾತಂತ್ರ್ಯ ದಿನದ ಆ ನೆನಪು

12-uv-fusion

Mobile Library: ಮಕ್ಕಳಲ್ಲಿ ಓದಿನ ಹವ್ಯಾಸ ಬೆಳೆಸುವ ಸಂಚಾರಿ ಗ್ರಂಥಾಲಯ

10-uv-fusion-1

UV Fusion: ಗತವೈಭವ ಸಾರುವ ಚೌಟರ ಅರಮನೆ

9-uv-fusion

Greenary: ತಲ್ಲಣದ ಮನಕ್ಕೆ ಮುದ ನೀಡುವ ಹಸುರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Kottihegara: ಸಿಡಿಲು ಬಡಿದು ಮನೆಗೆ ಹಾನಿ, ತಪ್ಪಿದ ದುರಂತ

Kottihegara: ಸಿಡಿಲು ಬಡಿದು ಮನೆಗೆ ಹಾನಿ, ತಪ್ಪಿದ ದುರಂತ

ಬಿಜೆಪಿ-ಪಿಡಿಪಿ ಮೈತ್ರಿ ಸೂತ್ರಧಾರ ರಾಮ್‌ಮಾಧವ್‌ಗೆ ಕಾಶ್ಮೀರ ಚುನಾವಣಾ ಉಸ್ತುವಾರಿ

BJP-PDP ಮೈತ್ರಿ ಸೂತ್ರಧಾರ ರಾಮ್‌ಮಾಧವ್‌ಗೆ ಕಾಶ್ಮೀರ ಚುನಾವಣಾ ಉಸ್ತುವಾರಿ

Poland

Modi Poland Visit: ಪೋಲೆಂಡ್‌ಗೆ ಆಗಮಿಸಿದ ಪ್ರಧಾನಿ ಮೋದಿ; ಗುಜರಾತಿ ನೃತ್ಯ ಸ್ವಾಗತ, ಜೈಕಾರ

3

Karkal: ಚಲಿಸುತಿದ್ದ ಬಸ್ಸಿನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು

1

Mangaluru: ವಿದ್ಯಾರ್ಥಿಗಳ ಅಪಹರಣ, ಹಲ್ಲೆ ಪ್ರಕರಣ; ಮೂವರು ವಿದ್ಯಾರ್ಥಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.