ನೆನಪಿರಲಿ ಆಕೆಗೂ ಒಂದು ಮನಸ್ಸಿದೆ…


Team Udayavani, Jul 28, 2021, 9:00 AM IST

ನೆನಪಿರಲಿ ಆಕೆಗೂ ಒಂದು ಮನಸ್ಸಿದೆ…

ಮನೆಯಲ್ಲಿ ಹೆಣ್ಣು ಮಗು ಹುಟ್ಟಿತೆಂದರೆ ಹಬ್ಬದ ಸಂಭ್ರಮ. ಮನೆಗೆ ಲಕ್ಷ್ಮೀ ಬಂದಳು ಎಂಬ ಸಂತೋಷ. ಆ ಮಗುವಿನ ಬೆಳವಣಿಗೆಯ ಒಂದೊಂದು ಹಂತವನ್ನೂ ನೋಡುತ್ತಾ, ಅದರ ಚಟುವಟಿಕೆಯನ್ನು ಕಣ್ತುಂಬಿಕೊಳ್ಳುತ್ತಾರೆ ಮನೆಯವರು. ತುಂಟ ಮಗುವಿನ ಗೆಜ್ಜೆನಾದ, ತೊದಲು ನುಡಿಯಿಂದ ಮನೆಯಲ್ಲಿ ಪ್ರತಿದಿನವೂ ಸಂತಸ, ಸಂಭ್ರಮ.

ಕೆಲ ಹೆತ್ತವರು ಮಗಳು ಶಾಲೆಗೆ ಹೋಗಲಾರಂಭಿಸಿದಾಗಲೇ ಮದುವೆ ಮಾಡಿ ಕೊಟ್ಟರೇನೋ ಎಂಬಂತೆ ಅಳುತ್ತಾರೆ! ಮಗಳು ಪ್ರೌಢಾವಸ್ಥೆಗೆ ಬಂದ ಮೇಲಂತೂ ಮತ್ತಷ್ಟು ಜವಾಬ್ದಾರಿ, ಜತೆಗೆ ಸಂತೋಷ, ಕಾಳಜಿ. ಈ ಸಮಾಜ ಮಗಳನ್ನು ಯಾವ ರೀತಿ ನೋಡುತ್ತದೆಯೋ? ಏನು ತೊಂದರೆ ಮಾಡುತ್ತದೆಯೋ ಎಂಬ ಅಂಜಿಕೆ ಮನದೊಳಗೆ. ಆಗಲೇ ಮನಸ್ಸು ದೊಡ್ಡದೊಂದು ಅಗಲುವಿಕೆಗೆ ನಿಧಾನವಾಗಿ ಸಿದ್ಧವಾಗತೊಡಗುತ್ತದೆ.

ಈಗ ಹೆಣ್ಮಕ್ಕಳಿಗೂ ಸಮಾನ ಹಕ್ಕುಗಳಿವೆ. ಅವರೂ ಕಲಿತು, ದುಡಿದು ತಾವೇ ಅಪ್ಪ-ಅಮ್ಮನನ್ನು ಸಾಕುವ ನಿದರ್ಶನಗಳು ಸಾಕಷ್ಟಿವೆ. ತಂದೆ- ತಾಯಿಗೆ ಹೆಣ್ಮಕ್ಕಳೆಂದರೆ ವಿಶೇಷ ಪ್ರೀತಿ, ಬೇಕಾದ್ದನ್ನೆಲ್ಲ ತೆಗೆದುಕೊಡುತ್ತಾರೆ. ವಿಚಿತ್ರವೆಂದರೆ ಜೀವನವನ್ನೇ ನಿರ್ಧರಿಸುವ ಮದುವೆ ವಿಷಯದಲ್ಲಿ ಮಾತ್ರ ತಾವು ಹೇಳಿದ್ದೇ ಆಗಬೇಕೆಂದು ಬಯಸುತ್ತಾರೆ. ಏಕೆ ಹೀಗೆ?

ಹೆಣ್ಣು ಪ್ರೀತಿಸಿ ಮದುವೆಯಾಗಿ ಕಷ್ಟಪಟ್ಟರೆ ಸಮಾಜ ಅವಳನ್ನು ದೂಷಿಸಲು ತುದಿಗಾಲ ಮೇಲೆ ನಿಂತಿರುತ್ತದೆ. ಮನೆಯವರು ಮಾಡಿದ ಮದುವೆ ಫ‌ಲಕಾಣದೇ ಇದ್ದಾಗಲೂ ತಪ್ಪು ಆಕೆಯದ್ದೇ! ಸಮಾಜ ಅದು ಅವಳ “ಹಣೆಬರಹ’ ಎಂದುಬಿಡುತ್ತದೆ!

ಪ್ರತೀ ಹೆಣ್ಣು ತಿಂಗಳ 4 ದಿನ ನೋವು ತಿನ್ನುತ್ತಾಳೆ. ಮಗುವಿಗೆ ಜನ್ಮ ನೀಡುವ ಸಮಯವಂತೂ ಆಕೆಗೆ ಮರುಹುಟ್ಟಿದ್ದಂತೆ. ಆ ದೈಹಿಕ, ಮಾನಸಿಕ ನೋವನ್ನು ಹಂಚಿಕೊಳ್ಳಲು ಯಾರೂ ಬಾರರು. ಅದು ಆಕೆಯ ಕರ್ಮ ಎಂಬಂತೆ ಕಾಣುವ ಸಮಾಜಕ್ಕೆ ಏನನ್ನಬೇಕು. ಅಲ್ಲೂ ದುರಾದೃಷ್ಟವಶಾತ್‌ ಏನಾದರೂ ಸಂಭವಿಸಿದರೆ, ಸಮಾಜ ಮತ್ತೆ ದೂರುವುದು ಹೆಣ್ಣನ್ನೇ ಆಕೆಯ ನಿರ್ಲಕ್ಷ್ಯ ಎಂದೋ, ಅತಿಯಾದ ಆರೈಕೆ ಎಂದೋ ಅಂತೂ ಗುರಿ ಆಕೆಯೇ!

ಅವಳೂ ಮನುಷ್ಯಳು, ಅವಳಿಗೂ ಒಂದು ಮನಸ್ಸಿದೆ ಎಂಬುದನ್ನು ಒಪ್ಪಿಕೊಳ್ಳಿ, ಸ್ಪಂದಿಸಿ. ಅವಳ ಕನಿಷ್ಟ ಆಸೆ ಆಕಾಂಕ್ಷೆಯನ್ನು ಕೇಳಿ ಸಾಧ್ಯವಾದಷ್ಟು ನೆರವೇರಿಸಿ. ಕಣ್ಣೀರು ಹಾಕುವಂತೆ ಮಾಡಬೇಡಿ. ಆಕೆಗೆ ಗೌರವ ಕೊಡಲಾಗದಿದ್ದರೂ ದಯವಿಟ್ಟು ಕೀಳಾಗಿ ಕಾಣಬೇಡಿ. ಪ್ರೀತಿಯಿಂದ ನೋಡಿಕೊಂಡರೆ ಆಕೆಯೆಂದೂ ನಿಮ್ಮ ಕೈ ಬಿಡಳು, ಸದಾ ನಿಮ್ಮ ರಕ್ಷಣೆ ಮಾಡುತ್ತಾಳೆ. ಯಶಸ್ಸು ತಂದುಕೊಡುತ್ತಾಳೆ.

ನೆನಪಿರಲಿ, ಸ್ತ್ರೀ ಜನ್ಮವೇ ಶ್ರೇಷ್ಠ ಜನ್ಮ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ.

 

 ವೈಷ್ಣವಿ ಎಂ.

ವಿ.ವಿ ಕಾಲೇಜು ಮಂಗಳೂರು

ಟಾಪ್ ನ್ಯೂಸ್

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.