School Memories: ತರಗತಿಯಲ್ಲಿ ಉಪ್ಪುಖಾರ


Team Udayavani, Sep 25, 2024, 1:50 PM IST

8-uv-fusion

ತರಗತಿ ಕೊಠಡಿ ಬರೀ ಡೆಸ್ಕಾ, ಬೆಂಚು, ಬೋರ್ಡ್‌, ಕಿಟಕಿ ಬಾಗಿಲುಗಳಿರುವ ಜಾಗವಲ್ಲ. ಇದು ವಿದ್ಯಾರ್ಥಿ, ಶಿಕ್ಷಕರಲ್ಲಿ ಸಾವಿರಾರು ಸವಿಸವಿ ನೆನಪುಗಳನ್ನು ಸೃಷ್ಟಿಸುವ, ಹೊಸ ಹುರುಪನ್ನು ಬಿತ್ತುವ ಜಾಗ. ಕಲಿಕೆಗೆ ಜೀವ ತುಂಬುವ ಮಾಂತ್ರಿಕ ಸ್ಥಳವೇ ಈ ತರಗತಿ ಕೊಠಡಿಗಳು.

ವಿದ್ಯಾರ್ಥಿ ಜೀವನದಲ್ಲಿ ನನ್ನ ಅತ್ಯುತ್ತಮ ಭಾಗವೆಂದರೆ ಅದು ಪ್ರೌಢ ಶಿಕ್ಷಣದ ಸಮಯ. ಮುಂದಿನ ಬೆಂಚಿನಲ್ಲಿ ಕುಳಿತು ಶಿಕ್ಷಕರಿಗೆ ಸ್ಪಷ್ಟವಾಗಿ ಕಾಣಬಾರದೆಂದು ನಾನು ಹಾಗೂ ಸಹಪಾಠಿಗಳು ಅವರಿಂದ ಆದಷ್ಟು ದೂರವಿದ್ದು, ಗೋಡೆಯ ಹತ್ತಿರವಿರುವ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಇದು ನಮ್ಮ ರಹಸ್ಯ ಅಡುಗೆ ಸ್ಥಳವೂ ಆಗಿತ್ತು. ಹೌದು. ನಾನು ಹಾಗೂ ನನ್ನ ಸಹಪಾಠಿಗಳು ಇಲ್ಲಿ ಕುಳಿತು ಒಂದು ಚಿಕ್ಕ ಸ್ಟೋರ್‌ ರೂಮನ್ನೇ ತೆರೆದಿದ್ದೆವು. ಇಲ್ಲಿ ಉಪ್ಪು, ಮೆಣಸಿನ ಹುಡಿ, ಚಾಕು… ಹೀಗೆ ನಮ್ಮ ತರಗತಿಯಲ್ಲಿ ಯಾರಿಗೆ ಬೇಕಾದರೂ ನಮ್ಮಲ್ಲಿ ಲಭ್ಯವಿರುತ್ತಿತ್ತು.

ನಮ್ಮ ತರಗತಿಯ ಹುಡುಗರು ಊಟದ ವಿರಾಮದ ಬಳಿಕ ಶಾಲೆಯ ಬದಿಯಲ್ಲಿರುವ ಮಾವಿನ ಮರಕ್ಕೆ ಕಲ್ಲು ಬಿಸಾಡಿ ಸುಮಾರು 4ರಿಂದ 5 ಮಾವಿನ ಕಾಯಿಗಳನ್ನು ತಂದು ಕೊಡುತ್ತಿದ್ದರು. ಊಟದ ಅನಂತರದ ಮೊದಲ ತರಗತಿಯಲ್ಲಿ ನಮ್ಮದೇ ಕ್ಯಾಟರಿಂಗ್‌ ವ್ಯವಸ್ಥೆಯಂತೆ ಈ ಕಾಯಿಗಳನ್ನು ಸಮವಾಗಿ ಚಿಕ್ಕ ಚಿಕ್ಕ ತುಂಡುಗಳಂತೆ ಕತ್ತರಿಸಿ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸಮಪ್ರಮಾಣದಲ್ಲಿ ಸಿಂಪಡಿಸಿ ಇಡೀ ತರಗತಿಗೆ ಒಂದೊಂದು ತುಂಡುಗಳನ್ನು ಕೊಡುತ್ತಿದ್ದೆವು. ಇಂದು ಮಾವಿನ ಕಾಯಿಯಾದರೆ ಮರುದಿನ ಪೇರಳೆ, ಬಿಂಬುಳಿ, ಹುಣಸೇ ಹಣ್ಣು, ಹಣವಿದ್ದರೆ ಅನಾನಸು ಹೀಗೆ ಒಂದಲ್ಲಾ ಒಂದು ರೀತಿಯ ತಿಂಡಿ ತಿನಿಸುಗಳನ್ನು ಹಂಚಿ ತಿನ್ನುತ್ತಿದ್ದೆವು.

ಕೆಲವೊಮ್ಮೆ ಉಪ್ಪು – ಮೆಣಸಿನ ಹುಡಿ ಸಿಂಪಡಿಸುವಾಗ ಹೆಚ್ಚುಕಮ್ಮಿಯಾಗಿ ನಮ್ಮ ಬಾಯಲ್ಲಿ ಖಾರ ಸ್ಫೋಟವಾದ್ದೂ ಇದೆ. ಇವೆಲ್ಲಾ ನಮಗೆ ತರಗತಿಯ ಮಧ್ಯೆ ನಮ್ಮದೇ ರೀತಿಯ ಪಾರ್ಟಿಯಂತಿತ್ತು. ಕೆಲವೊಮ್ಮೆ ಶಿಕ್ಷಕರು ಇಲ್ಲಿ ಯಾರೋ ಉಪ್ಪು ಖಾರ ಹಾಕಿ ಏನೋ ತಿನ್ನುತ್ತಿತ್ತಾರೆ ಎಂದು ಹೇಳಿದ್ದೂ ಇದೆ. ನಾವು ನಮ್ಮ ತಪ್ಪನ್ನು ಮುಚ್ಚಿ ಹಾಕಲು, ಮೇಡಂ ಬಹುಶಃ ಅದು ಪಕ್ಕದ ತರಗತಿಯಲ್ಲಿರಬಹುದೋ ಏನೋ ಎಂದು ಇನ್ನೊಂದು ತರಗತಿಯವರನ್ನು ದೂರಿದ್ದೂ ಇದೆ.

ಹೀಗೆ ತರಗತಿಗಳು ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ವಿದ್ಯಾರ್ಥಿಗಳ ಸಾವಿರಾರು ಕೀಟಲೆ, ಮೋಜು ಮಸ್ತಿಯ ನೆನಪುಗಳಿವೆ. ಮೊದಲ ದಿನ ಅಪರಿಚಿತರಾಗಿದ್ದ ನಾವುಗಳು ದಿನ ಕಳೆದಂತೆ ಪರಿಚಿತರಾಗಿ ಅನಂತರ ಗೆಳೆಯರಾಗುತ್ತೇವೆ ಹಾಗೂ ಸ್ನೇಹ ಸಂಬಂಧಗಳು ಬೆಳೆಯುತ್ತದೆ. ಗುಂಪು ಚರ್ಚೆಗಳಿಂದ ಮೋಜಿನ ಚಟುವಟಿಕೆಗಳವರೆಗೆ ತರಗತಿಗಳು ಶೈಕ್ಷಣಿಕ ವಾತಾವರಣಕ್ಕೆ ಪರಿಪೂರ್ಣ ಸ್ಥಳವಾಗಿದೆ.

-ಸನ ಶೇಕ್‌ ಮುಬಿನ್‌

ಸಂತ ಅಲೋಶಿಯಸ್‌ಕಾಲೇಜು ಮಂಗಳೂರು

ಟಾಪ್ ನ್ಯೂಸ್

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

siddaramaiah

Siddaramaiah ಬೆಂಬಲಿಸಿ ಅಹಿಂದದಿಂದ ಹುಬ್ಬಳ್ಳಿ-ಬೆಂಗಳೂರು ಜಾಗೃತಿ ಜಾಥಾ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-uv-fusion

Trip: ಕೊನೆಗೂ ಈಡೇರಿತು ತ್ರಿಮೂರ್ತಿಗಳ ಪ್ರವಾಸ

5-uv-fusion

Taro: ಕೆಸುವೆಂದು ಕರುಬಬೇಡಿ

4-uv-fusion

UV Fusion: ಸಂಬಂಧಗಳ ಶಿಥಿಲೀಕರಣ!

3-uv-fusion

UV Fusion: ಇನ್ನಾದರೂ ಎಚ್ಚೆತ್ತುಕೋ ಮಾನವ

2-uv-fusion-1

Kota Shivarama Karanth: ಕಾರಂತರ ನೆನಪು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

12-thirthahalli

ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ; ಮೊಟ್ಟೆಗಾಗಿ ತಟ್ಟೆ ಹಿಡಿದು ಕುಳಿತ ವಿದ್ಯಾರ್ಥಿಗಳು!

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

5(1)

Surathkal: ಹೊಸ ಆಕರ್ಷಣೆಗಳಿಲ್ಲದೆ ಸೊರಗುತ್ತಿವೆ ಬೀಚುಗಳು!

eshwarappa

Siddaramaiah ಪತ್ನಿ ಮುಗ್ದ, ಸಾತ್ವಿಕ ಹೆಣ್ಣು ಮಗಳು; ಅನ್ಯಾಯವಾಗಬಾರದು: ಈಶ್ವರಪ್ಪ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.