Stranger: ಅಪರಿಚಿತ


Team Udayavani, May 31, 2024, 1:45 PM IST

13-uv-fusion

ಅದೊಂದು ಸುಂದರವಾದ ಸಂಜೆ. ಒಂದು ಕಡೆ ಗಾಢ ಬಿಸಿಲು, ಇನ್ನೊಂದು ಕಡೆ ತಂಪಾದ ಗಾಳಿ, ತಿಳಿನೀಲಿ ಆಗಸವೂ ಕೂಡ ಸೂರ್ಯನಿಗೆ ನಾಚಿ ಕೆಂಪು ಬಣ್ಣದತ್ತ ಮೆಲ್ಲನೆ ಜಾರುತ್ತಿತ್ತು… ಬಸ್‌ನಿಲ್ದಾಣ ಜನರಿಂದ ತುಂಬಿ ತುಳುಕಾಡುತ್ತಿತ್ತು. ಎಲ್ಲಿ ನೋಡಿದರೂ ಜನವೇ ಜನ. ಅಷ್ಟು ಜನಗಳ ಮಧ್ಯೆ ನಮ್ಮೂರಿಗೆ ಹೋಗುವ ಬಸ್ಸನ್ನು ಹುಡುಕಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತುಕೊಂಡೆ.

ಅದೇನೋ ಗೊತ್ತಿಲ್ಲ…ನಮ್ಮಂತ ಕಾಲೇಜು ಹುಡುಗರಿಗೆ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಇಯರ್‌ ಪೋನ್‌ ಹಾಕಿ ನಮಗಿಷ್ಪವಾದ ಹಾಡನ್ನು ಕೇಳುತ್ತಾ ತಂಪಾದ ಗಾಳಿಗೆ ಮುಖವೂಡ್ಡಿದರೆ ಈ ಲೋಕದ ಪರಿವೇ ಇರುವುದಿಲ್ಲ. ಎನೇ ಹೇಳಿ… ಎಸಿ ಕಾರಿನಲ್ಲಿ ಪ್ರಯಾಣಿಸಿದರೂ ಕೂಡ ಈ ರೀತಿ ಖುಷಿ ಸಿಗುವುದು ಅನುಮಾನವೇ…..

ತಡಮಾಡದೆ ನಾನು ಕಿವಿಗೆ ಇಯರ್‌ ಪೋನ್‌ ಸಿಕ್ಕಿಸಿ ಸೀಟಿಗೆ ತಲೆದೂರಿ ಮಲಗಿಕೊಂಡಿದ್ದೆ. ಇನ್ನೇನು ಬಸ್‌ ಬಿಡುವ ಸಮಯ ಎನ್ನುವಷ್ಟರಲ್ಲಿ Excuse Me..! Can I Sit Here..? ಎಂಬ ಧ್ವನಿ ಕೇಳಿಸಿತು.

ಮಲಗಿಕೊಂಡಿದ್ದ ನನಗೆ ಒಮ್ಮೆಲ್ಲೇ ಎಚ್ಚರವಾಗಿ ನೋಡಿದರೆ ಒಬ್ಬ ಯುವಕ. ಸುಮಾರು 25 ರಿಂದ 26 ವಯಸ್ಸಾಗಿಬಹುದು. ತಿಳಿ ಗುಲಾಬಿ ಬಣ್ಣದ ಅಂಗಿಯನ್ನು ಧರಿಸಿದ್ದ. ಶರ್ಟಿನ ಕೈ ತೋಳನ್ನು ಮಡಚಿ, ಇನ್‌ ಶರ್ಟ್‌ ಮಾಡಿಕೊಂಡಿದ್ದ. ಕೀಸೆಯಲ್ಲೋಂದು ಪೆನ್ನು ಕೈಯಲ್ಲೊಂದು ಬ್ಯಾಗು. ಒಟ್ಟಿನಲ್ಲಿ ಹೇಳುವುದಾದರೆ ಉದ್ಯೋಗಸ್ಥನ ಹಾಗೆ ಕಾಣುತ್ತಿದ್ದ.

ಎನ್ರೀ… ನಿಮ್ಮ ಕಡೆ ತುಂಬಾ ಸೆಖೆ ಇದೆ ಅಲ್ವಾ…? ಎನ್ನುತ್ತಾ ಪಕ್ಕದ ಸೀಟಿನಲ್ಲಿ ಕುಳಿತು ಮಾತಿಗಿಳಿದ. ಹೌದು ತುಂಬಾ ಸೆಖೆ ಎಂದು ಹೇಳಿದೆ.

ಮತ್ತೆ….. ನೀವು ಎನ್‌ ಓದುತ್ತಿದ್ದಿರೀ..ಎಂದು ಕೇಳಿದ. ಯಾರೋ ಎನೋ ಸುಮ್ಮನೆ ಮಾತಿಗಿಳಿತಿದ್ದಾನೆ. ಇವನಿಗೆ ಯಾಕೆ ಬೇಕು ಅಂದುಕೊಳ್ಳುತ್ತಲೇ.. BA Degree Final Year ಅಂದೆ.

ನೀವು ಏನ್‌ ಮಾಡ್ತಿದ್ದಿರಾ.. ಎಂದು ಕೇಳಿದೆ. ನಾನು ಇಂಜಿನಿಯರ್‌ ಕಂಡ್ರಿ.. ನಮ್ಮೂರು ಹಾನಗಲ್‌. ಕೆಲಸ ಮಾಡ್ತಿರೋದು ಹೊನ್ನಾವರದಲ್ಲಿ ಎಂದು ಹೇಳಿದ. ಡಿಗ್ರಿ ನಂತರ ಏನ್‌ ಮಾಡ್ತೀರಾ… ಮರು ಪ್ರಶ್ನಿಸಿದ… ನೋಡ್ಬೇಕು ಮುಂದೆ ಕಲಿಬೇಕು ಅಂತ ಇದೆ ಎಂದು ಹೇಳಿದೆ. ಹೌದ ಚೆನ್ನಾಗಿ ಕಲಿರಿ. All The Best.

ನೀವು ನಿಮ್ಮ ಜೀವನದಲ್ಲಿ ಯಾವಾಗಲೂ ಯಶಸ್ಸನ್ನೆ ಕಾಣಿ. ಆದರೆ ಎಲ್ಲೇ ಹೋದರು ನಿಮ್ಮ ಅಪ್ಪ, ಅಮ್ಮನ ಮರಿಬೇಡಿ. ಅವರನ್ನು ಚೆನ್ನಾಗಿ ನೋಡ್ಕೊಳಿ. ದಿನದಲ್ಲಿ ಅವರಿಗೆ ಅಂತ ಸ್ವಲ್ಪ ಸಮಯವನ್ನು ಮೀಸಲಿಡಿ… ನನ್ನ ಕೆಲಸದಲ್ಲಿ ನಾನು ಯಾವಾಗಲೂ ಬ್ಯೂಸಿ ಇರ್ತಿದೆ. ಅವರಿಗೆ ಸ್ವಲ್ಪನೂ ಸಮಯ ಕೊಡ್ತಾನೆ ಇರ್ಲಿಲ್ಲ. ಆದರೆ ಅವರೂ ಈಗ ನನ್ನ ಜತೆ ಇಲ್ಲ ರೀ… ಈಗ ನನಗೆ ಅವರ ಬೆಲೆ ಗೊತ್ತಾಗಿದೆ ಎಂದು ಬೇಸರದಲ್ಲಿ ಹೇಳಿದ.

ಏನೂ ಹೇಳಬೇಕು ಅಂತನೂ ತಿಳಿಯದ ನಾನು ಮೂಕ ಸ್ತಬ್ದನಾದೆ. ಅವನನ್ನು ಸಮಾಧಾನ ಮಾಡುವಷ್ಟು ಡೊಡ್ಡವಳು ನಾನಲ್ಲ ಎಂದು ಸುಮ್ಮನೆ ಇದ್ದೆ.. ಅಷ್ಟರೊಳಗೆ ಬಸ್ ಕೂಡ ನಮ್ಮೂರನ್ನು ತಲುಪಿತ್ತು… ನಾನು ಬಸ್ ಇಳಿದು ಮನೆ ಕಡೆ ಹೋಗುತ್ತಿರುವಾಗ ಅವನ ಮಾತುಗಳೇ ನೆನಪಾಗುತ್ತಿತ್ತು. ಅವನ ಆ ನೋವಿನ ಮಾತು ಒಂದು ಕಡೆಯಾದರೆ, ನನ್ನ ಮುಂದಿನ ವಿದ್ಯಾಬ್ಯಾಸಕ್ಕೆ ಆಶೀರ್ವದಿಸಿದ ರೀತಿ ಎಲ್ಲವೂ ಮನಸ್ಸಿಗೆ ಹತ್ತಿರವೆನಿಸಿತು. ಇಷ್ಟೆಲ್ಲ ಮಾತನಾಡಿದ ನಾವು ಒಬ್ಬರಿಗೊಬ್ಬರೂ ಹೆಸರನ್ನೂ ಕೇಳಿಕೊಳ್ಳಲಿಲ್ಲ…ಕೊನೆಯಲ್ಲಿ ಒಂದು ಬಾಯ್‌ ಕೂಡ ಹೇಳಿದೆ ಆತ ಅಪರಿಚಿತನಾಗೆ ಉಳಿದುಕೊಂಡ…

ಕಾವ್ಯಾ ಹೆಗಡೆ

ಎಂಇಎಸ್‌ ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.