Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ


Team Udayavani, Apr 28, 2024, 7:15 AM IST

16-summer-palace-1

ಬಿಸಿಲನಾಡು ಎಂಬ ಪ್ರತೀತಿ ನಮ್ಮ ನಾಡಿಗಿದೆ. ಬರಗಾಲದ ನಾಡು, ಬಯಲು ಸೀಮೆ ಇತರ ಹೆಸರುಗಳಂತೂ ವಿಜಯಪುರಕ್ಕೆ ಭೌಗೋಳಿಕವಾಗಿ ನೇಮಿಸಲ್ಪಟ್ಟಿವೆ. ಹಾಗೆ 1627ರಲ್ಲಿ  ವಿಜಯಪುರ ಬಿಸಿಲಿನ ತಾಪಮಾನವನ್ನು ಕಂಡು ಮಹಮ್ಮದ್‌ ಆದಿಲ್‌ ಷಾಹಿ ತಂಪಾದ ಒಂದು ಅರಮನೆಯ ಆವಶ್ಯಕತೆ ಇದೆ ಎಂದು ಅದರ ನಿರ್ಮಾಣಕ್ಕೆ ಅಡಿಪಾಯ ಹಾಕಿ 1656ರಲ್ಲಿ ಪೂರ್ಣಗೊಳಿಸಿದರು.

ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಿಂದ ಸಿಂದಗಿ ಮಾರ್ಗವಾಗಿ 17ಕೀ. ಮೀ. ದೂರದ ಕುಮಟಗಿಯ ಅನಂತರ ಎಡಭಾಗದ  ರಸ್ತೆಯ ಪಕ್ಕದಲ್ಲಿ ವಿಜಯಪುರದ ಬೇಸಗೆ ಅರಮನೆ ನಮಗೆ ದೊರಕುತ್ತದೆ. ಅರಮನೆ ಎಂದ ತತ್‌ಕ್ಷಣ ಎಲ್ಲರ ತಲೆಯಲ್ಲಿ ಭವ್ಯವಾದ ಹಾಗೂ ಗಾತ್ರದಲ್ಲಿ ದೊಡ್ಡದಾದ ಪರಿಭಾವನೆ ಬರುವುದು ಸಹಜ.

ಆದರೆ ಇಲ್ಲಿ ಇದಕ್ಕೆ ತದ್ವಿರುದ್ಧವಾಗಿ ಪುಟ್ಟದಾದ ಕೇವಲ ನಿವಾಸದ ಅರಮನೆ ಇದೆ. ಹೆಸರೇ ಸೂಚಿಸುವಂತೆ ಬೇಸಗೆ ಅರಮನೆ ಬೇಸಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಿದ ಚಿಕ್ಕದಾದ ಅರಮನೆ.   ಹಂಪಿಯ ಕಮಲ್‌ ಮಹಲ್‌ಗೆ ಇದನ್ನು  ಹೋಲಿಕೆ ಮಾಡಿಕೊಳ್ಳಬಹುದು. ಅಲ್ಲಿ ರಾಣಿಯರು ಬೇಸಗೆಯ ಬೇಗೆಯನ್ನು  ತಡೆದುಕೊಳ್ಳಲು ವಾಸಿಸುತ್ತಿದ್ದರು.

ಅದ್ದೂರಿ ಸಿನೆಮಾದ ಮುಸ್ಸಂಜೆ ವೇಳೆಯಲಿ ಎಂಬ ಹಾಡಿನ ಶೂಟಿಂಗ್‌ ಇಲ್ಲೆ ನಡೆದಿದ್ದು, ಹಾಡಿನ ಆರಂಭದ 30 ಸೆಕೆಂಡುಗಳ ಸಮಯದ ಹಾಡು ಈ ಸ್ಥಳದಲ್ಲೇ ಶೂಟ್‌ ಆಗಿದೆ. ಇದೇ ತರ ಅನೇಕ ಸಿನೆಮಾ ಶೂಟಿಂಗ್‌ ಆದ ಬಳಿಕ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಅರಮನೆಯ ವೈಶಿಷ್ಟ್ಯ

ಅರಮನೆಯಿಂದ ಹೊರಗಿನವರು ಅಥವಾ ದೂರದ ಶತ್ರುವರ್ಗವನ್ನು ನೋಡಲು ಒಂದು ದೊಡ್ಡಗಾತ್ರದ ವೀಕ್ಷಣಾಗೋಪುರವಿದ್ದು ಅರಮನೆಯನ್ನು ಕೇಂದ್ರವಾಗಿರಿಸಿಕೊಂಡು ಸುತ್ತಲೂ ಚೌಕಾಕಾರದ ನೀರಿನ ಕೊಳ ನಿರ್ಮಾಣ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಹಾಗೂ ಅರಮನೆಯನ್ನು ತಂಪಿಡುವ ಸಲುವಾಗಿ ಸುತ್ತುವರೆದ ಕಟ್ಟೆಯನ್ನು ಎರಡು ಅಡಿ ಆಳ ಹಾಗೂ 2 ಅಡಿ ಅಗಲವಾಗಿಸಲಾಗಿದೆ. ಕಟ್ಟೆಯ ನೀರನ್ನು ಹತ್ತಿರದ ಕುಮಟಗಿ ಕೆರೆಯಿಂದ ಸರಬರಾಜು ಮಾಡಲಾಗುತ್ತಿತ್ತು.

ಕೊಳದಲ್ಲಿರುವ ನೀರು ಅರಮನೆಯ ಮೇಲಿನ ಮಹಡಿಗೂ ತಲುಪಿಸುವ ಹಾಗೂ ತಲುಪಿದ ನೀರು ತಿರುಗಿ ತಂಪು ಹವೆಯಲ್ಲಿ ಕೋಣೆಯನ್ನು ಎಸಿ ಮಾದರಿಯಲ್ಲಿಡುವ  ತಂತ್ರಜ್ಞಾನದ ವ್ಯವಸ್ಥೆಯನ್ನು ಅಂದಿನ ಷಾಹಿ ಸುಲ್ತಾನರು ಅರಿತಿದ್ದರು. ಪೂರ್ಣ ಅರಮನೆಯನ್ನು ತಂಪಿಡುವ ಸಲುವಾಗಿ ಅರಮನೆಯ ಸುತ್ತೆಲ್ಲಾ ನೀರು ಚಿಲುಮೆಯ ರೀತಿಯಲ್ಲಿ ಬೀಳುತ್ತಿದ್ದವು ಎನ್ನುವುದಕ್ಕೆ ಇಂದಿಗೂ ಇಲ್ಲಿ ಕುರುಹುಗಳಿವೆ.

ಸುಮಾರು ಮುನ್ನೂರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಬೇಸಗೆ ಅರಮನೆ ಇಂದಿಗೂ ತನ್ನ ಛಾಪನ್ನು ಕಳೆದುಕೊಳ್ಳದೆ ಸಿಡಿಲು, ಮಳೆ ಚಳಿಯನ್ನು ತಡೆದುಕೊಂಡು ಗಟ್ಟಿಯಾಗಿ ನಿಂತುಕೊಂಡಿರುವುದು ಅಂದಿನ ಷಾಹಿ ಸುಲ್ತಾನರ ತಂತ್ರಜ್ಞಾನದ ಕೈಚಳಕಕ್ಕೆ ಸಾಕ್ಷಿ.

-ಮಲ್ಲಮ್ಮ

ವಿಜಯಪುರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.