Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ


Team Udayavani, Apr 28, 2024, 7:15 AM IST

16-summer-palace-1

ಬಿಸಿಲನಾಡು ಎಂಬ ಪ್ರತೀತಿ ನಮ್ಮ ನಾಡಿಗಿದೆ. ಬರಗಾಲದ ನಾಡು, ಬಯಲು ಸೀಮೆ ಇತರ ಹೆಸರುಗಳಂತೂ ವಿಜಯಪುರಕ್ಕೆ ಭೌಗೋಳಿಕವಾಗಿ ನೇಮಿಸಲ್ಪಟ್ಟಿವೆ. ಹಾಗೆ 1627ರಲ್ಲಿ  ವಿಜಯಪುರ ಬಿಸಿಲಿನ ತಾಪಮಾನವನ್ನು ಕಂಡು ಮಹಮ್ಮದ್‌ ಆದಿಲ್‌ ಷಾಹಿ ತಂಪಾದ ಒಂದು ಅರಮನೆಯ ಆವಶ್ಯಕತೆ ಇದೆ ಎಂದು ಅದರ ನಿರ್ಮಾಣಕ್ಕೆ ಅಡಿಪಾಯ ಹಾಕಿ 1656ರಲ್ಲಿ ಪೂರ್ಣಗೊಳಿಸಿದರು.

ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಿಂದ ಸಿಂದಗಿ ಮಾರ್ಗವಾಗಿ 17ಕೀ. ಮೀ. ದೂರದ ಕುಮಟಗಿಯ ಅನಂತರ ಎಡಭಾಗದ  ರಸ್ತೆಯ ಪಕ್ಕದಲ್ಲಿ ವಿಜಯಪುರದ ಬೇಸಗೆ ಅರಮನೆ ನಮಗೆ ದೊರಕುತ್ತದೆ. ಅರಮನೆ ಎಂದ ತತ್‌ಕ್ಷಣ ಎಲ್ಲರ ತಲೆಯಲ್ಲಿ ಭವ್ಯವಾದ ಹಾಗೂ ಗಾತ್ರದಲ್ಲಿ ದೊಡ್ಡದಾದ ಪರಿಭಾವನೆ ಬರುವುದು ಸಹಜ.

ಆದರೆ ಇಲ್ಲಿ ಇದಕ್ಕೆ ತದ್ವಿರುದ್ಧವಾಗಿ ಪುಟ್ಟದಾದ ಕೇವಲ ನಿವಾಸದ ಅರಮನೆ ಇದೆ. ಹೆಸರೇ ಸೂಚಿಸುವಂತೆ ಬೇಸಗೆ ಅರಮನೆ ಬೇಸಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಿದ ಚಿಕ್ಕದಾದ ಅರಮನೆ.   ಹಂಪಿಯ ಕಮಲ್‌ ಮಹಲ್‌ಗೆ ಇದನ್ನು  ಹೋಲಿಕೆ ಮಾಡಿಕೊಳ್ಳಬಹುದು. ಅಲ್ಲಿ ರಾಣಿಯರು ಬೇಸಗೆಯ ಬೇಗೆಯನ್ನು  ತಡೆದುಕೊಳ್ಳಲು ವಾಸಿಸುತ್ತಿದ್ದರು.

ಅದ್ದೂರಿ ಸಿನೆಮಾದ ಮುಸ್ಸಂಜೆ ವೇಳೆಯಲಿ ಎಂಬ ಹಾಡಿನ ಶೂಟಿಂಗ್‌ ಇಲ್ಲೆ ನಡೆದಿದ್ದು, ಹಾಡಿನ ಆರಂಭದ 30 ಸೆಕೆಂಡುಗಳ ಸಮಯದ ಹಾಡು ಈ ಸ್ಥಳದಲ್ಲೇ ಶೂಟ್‌ ಆಗಿದೆ. ಇದೇ ತರ ಅನೇಕ ಸಿನೆಮಾ ಶೂಟಿಂಗ್‌ ಆದ ಬಳಿಕ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಅರಮನೆಯ ವೈಶಿಷ್ಟ್ಯ

ಅರಮನೆಯಿಂದ ಹೊರಗಿನವರು ಅಥವಾ ದೂರದ ಶತ್ರುವರ್ಗವನ್ನು ನೋಡಲು ಒಂದು ದೊಡ್ಡಗಾತ್ರದ ವೀಕ್ಷಣಾಗೋಪುರವಿದ್ದು ಅರಮನೆಯನ್ನು ಕೇಂದ್ರವಾಗಿರಿಸಿಕೊಂಡು ಸುತ್ತಲೂ ಚೌಕಾಕಾರದ ನೀರಿನ ಕೊಳ ನಿರ್ಮಾಣ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಹಾಗೂ ಅರಮನೆಯನ್ನು ತಂಪಿಡುವ ಸಲುವಾಗಿ ಸುತ್ತುವರೆದ ಕಟ್ಟೆಯನ್ನು ಎರಡು ಅಡಿ ಆಳ ಹಾಗೂ 2 ಅಡಿ ಅಗಲವಾಗಿಸಲಾಗಿದೆ. ಕಟ್ಟೆಯ ನೀರನ್ನು ಹತ್ತಿರದ ಕುಮಟಗಿ ಕೆರೆಯಿಂದ ಸರಬರಾಜು ಮಾಡಲಾಗುತ್ತಿತ್ತು.

ಕೊಳದಲ್ಲಿರುವ ನೀರು ಅರಮನೆಯ ಮೇಲಿನ ಮಹಡಿಗೂ ತಲುಪಿಸುವ ಹಾಗೂ ತಲುಪಿದ ನೀರು ತಿರುಗಿ ತಂಪು ಹವೆಯಲ್ಲಿ ಕೋಣೆಯನ್ನು ಎಸಿ ಮಾದರಿಯಲ್ಲಿಡುವ  ತಂತ್ರಜ್ಞಾನದ ವ್ಯವಸ್ಥೆಯನ್ನು ಅಂದಿನ ಷಾಹಿ ಸುಲ್ತಾನರು ಅರಿತಿದ್ದರು. ಪೂರ್ಣ ಅರಮನೆಯನ್ನು ತಂಪಿಡುವ ಸಲುವಾಗಿ ಅರಮನೆಯ ಸುತ್ತೆಲ್ಲಾ ನೀರು ಚಿಲುಮೆಯ ರೀತಿಯಲ್ಲಿ ಬೀಳುತ್ತಿದ್ದವು ಎನ್ನುವುದಕ್ಕೆ ಇಂದಿಗೂ ಇಲ್ಲಿ ಕುರುಹುಗಳಿವೆ.

ಸುಮಾರು ಮುನ್ನೂರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಬೇಸಗೆ ಅರಮನೆ ಇಂದಿಗೂ ತನ್ನ ಛಾಪನ್ನು ಕಳೆದುಕೊಳ್ಳದೆ ಸಿಡಿಲು, ಮಳೆ ಚಳಿಯನ್ನು ತಡೆದುಕೊಂಡು ಗಟ್ಟಿಯಾಗಿ ನಿಂತುಕೊಂಡಿರುವುದು ಅಂದಿನ ಷಾಹಿ ಸುಲ್ತಾನರ ತಂತ್ರಜ್ಞಾನದ ಕೈಚಳಕಕ್ಕೆ ಸಾಕ್ಷಿ.

-ಮಲ್ಲಮ್ಮ

ವಿಜಯಪುರ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

10-

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.